<p><strong>ಕೊಚ್ಚಿ:</strong> ‘ಯಾವುದೇ ಹೋರಾಟದಲ್ಲಿ ಸೋಲು ಇದ್ದದ್ದೇ. ನಾನು ಗೆದ್ದಿರುವೆ ಎಂದು ನನ್ನಂತೆ ಹೇಳುವವರಿಗೂ ಸೋಲುಂಟಾಗುತ್ತದೆ. ಆದರೆ, ನಾನು ಹೋರಾಟವನ್ನು ನಿಲ್ಲಿಸುವುದಿಲ್ಲ’ ಎಂದು ಪ್ರೊ.ಟಿ.ಜೆ.ಜೋಸೆಫ್ ಬುಧವಾರ ಹೇಳಿದರು.</p>.<p>ಸದ್ಯ ನಿಷೇಧಿಸಲಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ)ಕ್ಕೆ ಸೇರಿದವರು ಎನ್ನಲಾದ ಕಾರ್ಯಕರ್ತರು 2010ರ ಜುಲೈ 4ರಂದು ಜೋಸೆಫ್ ಅವರ ಬಲ ಮುಂಗೈಯನ್ನು ಕತ್ತರಿಸಿದ್ದರು. ಆರೋಪಿಗಳ ಪೈಕಿ ಆರು ಜನರಿಗೆ ಇಲ್ಲಿನ ವಿಶೇಷ ಎನ್ಐಎ ನ್ಯಾಯಾಲಯ ಶಿಕ್ಷೆ ವಿಧಿಸಿದ ಹಿನ್ನೆಲೆಯಲ್ಲಿ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.</p>.<p>ಪ್ರಕರಣ ಕುರಿತು ಎರಡನೇ ಹಂತದ ವಿಚಾರಣೆ ನಡೆಸಿದ ನ್ಯಾಯಾಲಯ, ಇತರ ಐವರು ಆರೋಪಿಗಳನ್ನು ಖುಲಾಸೆ ಮಾಡಿದೆ.</p>.<p>ಪ್ರಕರಣ ಕುರಿತ ಮೊದಲ ಹಂತದ ವಿಚಾರಣೆ ಮುಗಿದ ನಂತರ 13 ಜನರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು. ಯುಎಪಿಎ, ಸ್ಫೋಟಕ ವಸ್ತುಗಳ ಕಾಯ್ದೆ ಮತ್ತು ಐಪಿಸಿಯ ವಿವಿಧ ಸೆಕ್ಷನ್ಗಳಡಿ ಶಿಕ್ಷೆ ವಿಧಿಸಲಾಗಿತ್ತು.</p>.<p>‘ನನ್ನ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ನನ್ನಲ್ಲಿ ಯಾವುದೇ ದ್ವೇಷ ಭಾವನೆ ಇಲ್ಲ. ಆದರೆ, ಅಂದಿನ ಘಟನೆಯಿಂದ ನನ್ನ ಜೀವನದಲ್ಲಿ ಬದಲಾವಣೆಯಾಗಿದೆ. ಹಾನಿಯೂ ಆಗಿದೆ’ ಎಂದು ಹೇಳಿದರು.</p>.<p>‘ಆರೋಪಿಗಳಿಗೆ ಶಿಕ್ಷೆ ವಿಧಿಸುವುದರಿಂದ ಸಂತ್ರಸ್ತನಿಗೆ ನ್ಯಾಯ ಒದಗಿಸಿದಂತಾಗುತ್ತದೆ ಎಂಬ ನಂಬಿಕೆ ನನಗಿಲ್ಲ. ಹೀಗಾಗಿ, ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿರುವ ಕಾರಣ ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ’ ಎಂದು ಪ್ರತಿಕ್ರಿಯಿಸಿದರು.</p>.<p>‘ಈ ಪ್ರಕರಣದಲ್ಲಿ ಸಿಕ್ಕಿ ಬಿದ್ದು, ಶಿಕ್ಷೆಗೆ ಗುರಿಯಾದವರು ಮತ್ತೊಬ್ಬರ ಕೈಯಲ್ಲಿರುವ ಅಸ್ತ್ರಗಳಿದ್ದಂತೆ. ನನ್ನ ಮೇಲೆ ದಾಳಿಯನ್ನು ಹೆಣೆದ ನಿಜವಾದ ದೋಷಿಗಳು ಇನ್ನೂ ಹೊರಗಡೆಯೇ ಇದ್ದಾರೆ. ಇಂಥವರ ವಿರುದ್ಧ ನನ್ನ ಹೋರಾಟ ಮುಂದುವರಿಯಲಿದೆ’ ಎಂದು ಜೋಸೆಫ್ ಹೇಳಿದರು.</p>.<p>‘ಈ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದವರು ತಮ್ಮ ನಂಬಿಕೆಗಳ ಸಂತ್ರಸ್ತರೇ ಆಗಿದ್ದಾರೆ. ಅವರ ನಂಬಿಕೆಯೇ ನನ್ನ ಮೇಲೆ ಆಕ್ರಮಣ ನಡೆಸಲು ಹಾಗೂ ನಂತರದ ಪರಿಣಾಮಗಳಿಗೆ ಕಾರಣವಾಗಿತ್ತು. ಹೀಗಾಗಿ, ಈ ರೀತಿಯ ನಂಬಿಕೆ ವ್ಯವಸ್ಥೆ ಬದಲಾಗದೇ ಹೋದರೆ ಭವಿಷ್ಯದಲ್ಲಿ ಕೂಡ ಇಂಥ ಘಟನೆಗಳು ಮತ್ತೆ ಸಂಭವಿಸಬಹುದು’ ಎಂದರು.</p>.<p>‘ನಿಮ್ಮ ಮುಂಗೈಯನ್ನು ಕತ್ತರಿಸಿದ್ದ, ಈ ಪ್ರಕರಣದ ಮುಖ್ಯ ಆರೋಪಿ ಸಾವದ್ ಇನ್ನೂ ತಲೆಮರೆಸಿಕೊಂಡಿರುವುದರಿಂದ ನಿಮಗೆ ಭಯವಾಗುವುದಿಲ್ಲವೇ’ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ‘ನನಗೆ ಯಾವುದೇ ಭಯ ಇಲ್ಲ. ನಾನು ನನ್ನ ನಂಬಿಕೆಗೆ ಅನುಸಾರ ಬದುಕಿರುವೆ, ಮುಂದೆಯೂ ಬದುಕುವೆ. ಆರೋಪಿಯನ್ನು ಇನ್ನೂ ಬಂಧಿಸಿಲ್ಲ ಅಂದರೆ, ಅದು ಈ ವ್ಯವಸ್ಥೆಯ ವೈಫಲ್ಯವನ್ನು ತೋರಿಸುತ್ತದೆ’ ಎಂದರು.</p>.<p>ಘಟನೆ: ಪ್ರೊ.ಜೋಸೆಫ್ ಅವರು ಇಡುಕ್ಕಿ ಜಿಲ್ಲೆಯ ತೋಡುಪುಳದಲ್ಲಿರುವ ನ್ಯೂಮನ್ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. 2010ರ ಜುಲೈ 4ರಂದು ಅವರು ಎರ್ನಾಕುಲಂ ಜಿಲ್ಲೆಯ ಮುವತ್ತುಪುಳದಲ್ಲಿರುವ ಚರ್ಚ್ನಲ್ಲಿ ಭಾನುವಾರದ ಸಾಮೂಹಿಕ ಪ್ರಾರ್ಥನೆಯಲ್ಲಿ ಕುಟುಂಬದೊಂದಿಗೆ ಪಾಲ್ಗೊಂಡಿದ್ದರು.</p>.<p>ಪ್ರಾರ್ಥನೆ ಮುಗಿಸಿ ಮನೆಗೆ ಮರಳುವಾಗ ಏಳು ಜನರಿದ್ದ ಗುಂಪು ಅವರ ಮೇಲೆ ಹಲ್ಲೆ ಮಾಡಿತ್ತು. ವಾಹನದಿಂದ ಅವರನ್ನು ಹೊರಗೆಳೆದಿದ್ದ ಗುಂಪು, ಅವರ ಬಲ ಮುಂಗೈಯನ್ನು ಕತ್ತರಿಸಿತ್ತು.</p>.<p>ನಂತರ ಅವರು ಉದ್ಯೋಗ ಕಳೆದುಕೊಂಡಿದ್ದರು. ಅವರ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರು.</p>.<p>‘ಜೋಸೆಫ್ ಅವರು ಸಿದ್ಧಪಡಿಸಿದ್ದ ಬಿ.ಕಾಂ ಸೆಮಿಸ್ಟರ್ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಅಂಶಗಳಿದ್ದವು ಎಂಬ ಕಾರಣಕ್ಕೆ ಆರೋಪಿಯು (ಸಾವದ್) ಅವರನ್ನು ಹತ್ಯೆ ಮಾಡಲು ಮುಂದಾಗಿದ್ದ’ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಚ್ಚಿ:</strong> ‘ಯಾವುದೇ ಹೋರಾಟದಲ್ಲಿ ಸೋಲು ಇದ್ದದ್ದೇ. ನಾನು ಗೆದ್ದಿರುವೆ ಎಂದು ನನ್ನಂತೆ ಹೇಳುವವರಿಗೂ ಸೋಲುಂಟಾಗುತ್ತದೆ. ಆದರೆ, ನಾನು ಹೋರಾಟವನ್ನು ನಿಲ್ಲಿಸುವುದಿಲ್ಲ’ ಎಂದು ಪ್ರೊ.ಟಿ.ಜೆ.ಜೋಸೆಫ್ ಬುಧವಾರ ಹೇಳಿದರು.</p>.<p>ಸದ್ಯ ನಿಷೇಧಿಸಲಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ)ಕ್ಕೆ ಸೇರಿದವರು ಎನ್ನಲಾದ ಕಾರ್ಯಕರ್ತರು 2010ರ ಜುಲೈ 4ರಂದು ಜೋಸೆಫ್ ಅವರ ಬಲ ಮುಂಗೈಯನ್ನು ಕತ್ತರಿಸಿದ್ದರು. ಆರೋಪಿಗಳ ಪೈಕಿ ಆರು ಜನರಿಗೆ ಇಲ್ಲಿನ ವಿಶೇಷ ಎನ್ಐಎ ನ್ಯಾಯಾಲಯ ಶಿಕ್ಷೆ ವಿಧಿಸಿದ ಹಿನ್ನೆಲೆಯಲ್ಲಿ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.</p>.<p>ಪ್ರಕರಣ ಕುರಿತು ಎರಡನೇ ಹಂತದ ವಿಚಾರಣೆ ನಡೆಸಿದ ನ್ಯಾಯಾಲಯ, ಇತರ ಐವರು ಆರೋಪಿಗಳನ್ನು ಖುಲಾಸೆ ಮಾಡಿದೆ.</p>.<p>ಪ್ರಕರಣ ಕುರಿತ ಮೊದಲ ಹಂತದ ವಿಚಾರಣೆ ಮುಗಿದ ನಂತರ 13 ಜನರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು. ಯುಎಪಿಎ, ಸ್ಫೋಟಕ ವಸ್ತುಗಳ ಕಾಯ್ದೆ ಮತ್ತು ಐಪಿಸಿಯ ವಿವಿಧ ಸೆಕ್ಷನ್ಗಳಡಿ ಶಿಕ್ಷೆ ವಿಧಿಸಲಾಗಿತ್ತು.</p>.<p>‘ನನ್ನ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ನನ್ನಲ್ಲಿ ಯಾವುದೇ ದ್ವೇಷ ಭಾವನೆ ಇಲ್ಲ. ಆದರೆ, ಅಂದಿನ ಘಟನೆಯಿಂದ ನನ್ನ ಜೀವನದಲ್ಲಿ ಬದಲಾವಣೆಯಾಗಿದೆ. ಹಾನಿಯೂ ಆಗಿದೆ’ ಎಂದು ಹೇಳಿದರು.</p>.<p>‘ಆರೋಪಿಗಳಿಗೆ ಶಿಕ್ಷೆ ವಿಧಿಸುವುದರಿಂದ ಸಂತ್ರಸ್ತನಿಗೆ ನ್ಯಾಯ ಒದಗಿಸಿದಂತಾಗುತ್ತದೆ ಎಂಬ ನಂಬಿಕೆ ನನಗಿಲ್ಲ. ಹೀಗಾಗಿ, ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿರುವ ಕಾರಣ ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ’ ಎಂದು ಪ್ರತಿಕ್ರಿಯಿಸಿದರು.</p>.<p>‘ಈ ಪ್ರಕರಣದಲ್ಲಿ ಸಿಕ್ಕಿ ಬಿದ್ದು, ಶಿಕ್ಷೆಗೆ ಗುರಿಯಾದವರು ಮತ್ತೊಬ್ಬರ ಕೈಯಲ್ಲಿರುವ ಅಸ್ತ್ರಗಳಿದ್ದಂತೆ. ನನ್ನ ಮೇಲೆ ದಾಳಿಯನ್ನು ಹೆಣೆದ ನಿಜವಾದ ದೋಷಿಗಳು ಇನ್ನೂ ಹೊರಗಡೆಯೇ ಇದ್ದಾರೆ. ಇಂಥವರ ವಿರುದ್ಧ ನನ್ನ ಹೋರಾಟ ಮುಂದುವರಿಯಲಿದೆ’ ಎಂದು ಜೋಸೆಫ್ ಹೇಳಿದರು.</p>.<p>‘ಈ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದವರು ತಮ್ಮ ನಂಬಿಕೆಗಳ ಸಂತ್ರಸ್ತರೇ ಆಗಿದ್ದಾರೆ. ಅವರ ನಂಬಿಕೆಯೇ ನನ್ನ ಮೇಲೆ ಆಕ್ರಮಣ ನಡೆಸಲು ಹಾಗೂ ನಂತರದ ಪರಿಣಾಮಗಳಿಗೆ ಕಾರಣವಾಗಿತ್ತು. ಹೀಗಾಗಿ, ಈ ರೀತಿಯ ನಂಬಿಕೆ ವ್ಯವಸ್ಥೆ ಬದಲಾಗದೇ ಹೋದರೆ ಭವಿಷ್ಯದಲ್ಲಿ ಕೂಡ ಇಂಥ ಘಟನೆಗಳು ಮತ್ತೆ ಸಂಭವಿಸಬಹುದು’ ಎಂದರು.</p>.<p>‘ನಿಮ್ಮ ಮುಂಗೈಯನ್ನು ಕತ್ತರಿಸಿದ್ದ, ಈ ಪ್ರಕರಣದ ಮುಖ್ಯ ಆರೋಪಿ ಸಾವದ್ ಇನ್ನೂ ತಲೆಮರೆಸಿಕೊಂಡಿರುವುದರಿಂದ ನಿಮಗೆ ಭಯವಾಗುವುದಿಲ್ಲವೇ’ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ‘ನನಗೆ ಯಾವುದೇ ಭಯ ಇಲ್ಲ. ನಾನು ನನ್ನ ನಂಬಿಕೆಗೆ ಅನುಸಾರ ಬದುಕಿರುವೆ, ಮುಂದೆಯೂ ಬದುಕುವೆ. ಆರೋಪಿಯನ್ನು ಇನ್ನೂ ಬಂಧಿಸಿಲ್ಲ ಅಂದರೆ, ಅದು ಈ ವ್ಯವಸ್ಥೆಯ ವೈಫಲ್ಯವನ್ನು ತೋರಿಸುತ್ತದೆ’ ಎಂದರು.</p>.<p>ಘಟನೆ: ಪ್ರೊ.ಜೋಸೆಫ್ ಅವರು ಇಡುಕ್ಕಿ ಜಿಲ್ಲೆಯ ತೋಡುಪುಳದಲ್ಲಿರುವ ನ್ಯೂಮನ್ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. 2010ರ ಜುಲೈ 4ರಂದು ಅವರು ಎರ್ನಾಕುಲಂ ಜಿಲ್ಲೆಯ ಮುವತ್ತುಪುಳದಲ್ಲಿರುವ ಚರ್ಚ್ನಲ್ಲಿ ಭಾನುವಾರದ ಸಾಮೂಹಿಕ ಪ್ರಾರ್ಥನೆಯಲ್ಲಿ ಕುಟುಂಬದೊಂದಿಗೆ ಪಾಲ್ಗೊಂಡಿದ್ದರು.</p>.<p>ಪ್ರಾರ್ಥನೆ ಮುಗಿಸಿ ಮನೆಗೆ ಮರಳುವಾಗ ಏಳು ಜನರಿದ್ದ ಗುಂಪು ಅವರ ಮೇಲೆ ಹಲ್ಲೆ ಮಾಡಿತ್ತು. ವಾಹನದಿಂದ ಅವರನ್ನು ಹೊರಗೆಳೆದಿದ್ದ ಗುಂಪು, ಅವರ ಬಲ ಮುಂಗೈಯನ್ನು ಕತ್ತರಿಸಿತ್ತು.</p>.<p>ನಂತರ ಅವರು ಉದ್ಯೋಗ ಕಳೆದುಕೊಂಡಿದ್ದರು. ಅವರ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರು.</p>.<p>‘ಜೋಸೆಫ್ ಅವರು ಸಿದ್ಧಪಡಿಸಿದ್ದ ಬಿ.ಕಾಂ ಸೆಮಿಸ್ಟರ್ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಅಂಶಗಳಿದ್ದವು ಎಂಬ ಕಾರಣಕ್ಕೆ ಆರೋಪಿಯು (ಸಾವದ್) ಅವರನ್ನು ಹತ್ಯೆ ಮಾಡಲು ಮುಂದಾಗಿದ್ದ’ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>