<p><strong>ತಿರುವನಂತಪುರ</strong>: ವಯನಾಡ್ ಜಿಲ್ಲೆಯ ಮುಂಡಕ್ಕೈ, ಚೂರಲ್ಮಲದಲ್ಲಿ ಸಂಭವಿಸಿದ್ದ ಭೂಕುಸಿತದ ಸಂತ್ರಸ್ತರಿಗೆ ಕರ್ನಾಟಕ ಸರ್ಕಾರ ಸೇರಿದಂತೆ ವಿವಿಧ ರಾಜ್ಯ ಸರ್ಕಾರಗಳ ನೆರವಿನಲ್ಲಿ ಎರಡು ಉಪ ನಗರಗಳನ್ನು ಅಭಿವೃದ್ಧಿಪಡಿಸಲು ಕೇರಳ ಸರ್ಕಾರ ಚಿಂತನೆ ನಡೆಸಿದೆ.</p><p>ಸಂತ್ರಸ್ತರಿಗೆ 100ಕ್ಕೂ ಅಧಿಕ ವಸತಿ ನಿರ್ಮಿಸುವ ಭರವಸೆ ನೀಡಿರುವ 38 ಪ್ರಾಯೋಜಕರ ಪ್ರತಿನಿಧಿಗಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬುಧವಾರ ಈ ಕುರಿತು ಸಭೆ ನಡೆಸಿದರು.</p><p>100 ಮನೆ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿರುವ ಕರ್ನಾಟಕ ಸರ್ಕಾರ ಮತ್ತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಪ್ರತಿನಿಧಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. </p><p>ವಸತಿ ನಿರ್ಮಾಣದಲ್ಲಿ ಪಾರದರ್ಶಕತೆಗೆ ಒತ್ತು ನೀಡಲು ಮತ್ತು ಪ್ರಾಯೋಜಕರೂ ನಿರ್ಮಾಣ ಕಾರ್ಯ ಪರಿಶೀಲಿಸಲು ಆಗುವಂತೆ ಆನ್ಲೈನ್ ಟ್ರ್ಯಾಕಿಂಗ್ ವ್ಯವಸ್ಥೆ ರೂಪಿಸಲು ಸರ್ಕಾರ ತೀರ್ಮಾನಿಸಿದೆ.</p><p>ಕಲ್ಪೆಟ್ಟಾದ ಎಲ್ಸ್ಟೋನ್ ಎಸ್ಟೇಟ್ನ 58.50 ಹೆಕ್ಟೇರ್, ನೆಡುಂಬಲ ಎಸ್ಟೇಟ್ನ 48.96 ಹೆಕ್ಟೇರ್ನಲ್ಲಿ ಉಪನಗರಗಳು ಸ್ಥಾಪನೆ ಆಗಲಿವೆ. ಎಲ್ಸ್ಟೋನ್ನಲ್ಲಿ ತಲಾ 5 ಸೆಂಟ್ಸ್ ಭೂಮಿ ಹಾಗೂ ನೆಡುಂಬಲದಲ್ಲಿ 10 ಸೆಂಟ್ಸ್ ಭೂಮಿಯಲ್ಲಿ ಮನೆ ನಿರ್ಮಾಣ ಆಗಲಿದೆ. ಫಲಾನುಭವಿಗಳ ಪಟ್ಟಿಯನ್ನು ಜನವರಿ 25ರ ವೇಳೆಗೆ ಅಂತಿಮಗೊಳಿಸಲಾಗುವುದು ಎಂದೂ ಸರ್ಕಾರ ತಿಳಿಸಿದೆ. </p><p>ಕುಟುಂಬಕ್ಕೆ 1000 ಚದರ ಅಡಿ ಅಳತೆಯ ಮನೆ ಒದಗಿಸಲಿದ್ದು, ಉಪನಗರಗಳು ಎಲ್ಲ ಮೂಲಸೌಲಭ್ಯ ಹೊಂದಿರಲಿವೆ. ಕುಟುಂಬಗಳ ಆದ್ಯತೆ ಆಧರಿಸಿ ಜೀವನಾಧಾರ ಮಾರ್ಗವನ್ನೂ ಕಲ್ಪಿಸಲಾಗುವುದು. ಬಾಧಿತ ಕುಟುಂಬಗಳ ಸಮೀಕ್ಷೆ ನಡೆಸಿ, ಸಮಗ್ರ ಯೋಜನೆ ರೂಪಿಸಲಾಗಿದೆ ಎಂದಿದೆ. </p><p>‘ವಯನಾಡು ಭೂಕುಸಿತ ಅವಗಢವನ್ನು ಗಂಭೀರ ಪ್ರಕೃತಿ ವಿಕೋಪ ಎಂದು ಘೋಷಿಸಲು ಕೇಂದ್ರ ವಿಳಂಬ ಮಾಡುತ್ತಿರುವುದು ಮನೆ ನಿರ್ಮಾಣ ವಿಳಂಬವಾಗಲು ಕಾರಣವಾಗಿದೆ. ಅವಘಡದ ಎರಡು ತಿಂಗಳಲ್ಲಿ ಈ ಘೋಷಣೆ ಆಗಿದ್ದರೆ ವಿಶ್ವಸಂಸ್ಥೆ ಸೇರಿ ಇನ್ನು ಹಲವು ಸಂಸ್ಥೆಗಳಿಂದ ನೆರವು ಸಿಗುತ್ತಿತ್ತು. ಬಾಧಿತ ಕುಟುಂಬಗಳ ಸಾಲಮನ್ನಾ ಮಾಡಲೂ ಕೇಂದ್ರ ಸಿದ್ಧವಿಲ್ಲ’ ಎಂದು ಮುಖ್ಯಮಂತ್ರಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ</strong>: ವಯನಾಡ್ ಜಿಲ್ಲೆಯ ಮುಂಡಕ್ಕೈ, ಚೂರಲ್ಮಲದಲ್ಲಿ ಸಂಭವಿಸಿದ್ದ ಭೂಕುಸಿತದ ಸಂತ್ರಸ್ತರಿಗೆ ಕರ್ನಾಟಕ ಸರ್ಕಾರ ಸೇರಿದಂತೆ ವಿವಿಧ ರಾಜ್ಯ ಸರ್ಕಾರಗಳ ನೆರವಿನಲ್ಲಿ ಎರಡು ಉಪ ನಗರಗಳನ್ನು ಅಭಿವೃದ್ಧಿಪಡಿಸಲು ಕೇರಳ ಸರ್ಕಾರ ಚಿಂತನೆ ನಡೆಸಿದೆ.</p><p>ಸಂತ್ರಸ್ತರಿಗೆ 100ಕ್ಕೂ ಅಧಿಕ ವಸತಿ ನಿರ್ಮಿಸುವ ಭರವಸೆ ನೀಡಿರುವ 38 ಪ್ರಾಯೋಜಕರ ಪ್ರತಿನಿಧಿಗಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬುಧವಾರ ಈ ಕುರಿತು ಸಭೆ ನಡೆಸಿದರು.</p><p>100 ಮನೆ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿರುವ ಕರ್ನಾಟಕ ಸರ್ಕಾರ ಮತ್ತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಪ್ರತಿನಿಧಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. </p><p>ವಸತಿ ನಿರ್ಮಾಣದಲ್ಲಿ ಪಾರದರ್ಶಕತೆಗೆ ಒತ್ತು ನೀಡಲು ಮತ್ತು ಪ್ರಾಯೋಜಕರೂ ನಿರ್ಮಾಣ ಕಾರ್ಯ ಪರಿಶೀಲಿಸಲು ಆಗುವಂತೆ ಆನ್ಲೈನ್ ಟ್ರ್ಯಾಕಿಂಗ್ ವ್ಯವಸ್ಥೆ ರೂಪಿಸಲು ಸರ್ಕಾರ ತೀರ್ಮಾನಿಸಿದೆ.</p><p>ಕಲ್ಪೆಟ್ಟಾದ ಎಲ್ಸ್ಟೋನ್ ಎಸ್ಟೇಟ್ನ 58.50 ಹೆಕ್ಟೇರ್, ನೆಡುಂಬಲ ಎಸ್ಟೇಟ್ನ 48.96 ಹೆಕ್ಟೇರ್ನಲ್ಲಿ ಉಪನಗರಗಳು ಸ್ಥಾಪನೆ ಆಗಲಿವೆ. ಎಲ್ಸ್ಟೋನ್ನಲ್ಲಿ ತಲಾ 5 ಸೆಂಟ್ಸ್ ಭೂಮಿ ಹಾಗೂ ನೆಡುಂಬಲದಲ್ಲಿ 10 ಸೆಂಟ್ಸ್ ಭೂಮಿಯಲ್ಲಿ ಮನೆ ನಿರ್ಮಾಣ ಆಗಲಿದೆ. ಫಲಾನುಭವಿಗಳ ಪಟ್ಟಿಯನ್ನು ಜನವರಿ 25ರ ವೇಳೆಗೆ ಅಂತಿಮಗೊಳಿಸಲಾಗುವುದು ಎಂದೂ ಸರ್ಕಾರ ತಿಳಿಸಿದೆ. </p><p>ಕುಟುಂಬಕ್ಕೆ 1000 ಚದರ ಅಡಿ ಅಳತೆಯ ಮನೆ ಒದಗಿಸಲಿದ್ದು, ಉಪನಗರಗಳು ಎಲ್ಲ ಮೂಲಸೌಲಭ್ಯ ಹೊಂದಿರಲಿವೆ. ಕುಟುಂಬಗಳ ಆದ್ಯತೆ ಆಧರಿಸಿ ಜೀವನಾಧಾರ ಮಾರ್ಗವನ್ನೂ ಕಲ್ಪಿಸಲಾಗುವುದು. ಬಾಧಿತ ಕುಟುಂಬಗಳ ಸಮೀಕ್ಷೆ ನಡೆಸಿ, ಸಮಗ್ರ ಯೋಜನೆ ರೂಪಿಸಲಾಗಿದೆ ಎಂದಿದೆ. </p><p>‘ವಯನಾಡು ಭೂಕುಸಿತ ಅವಗಢವನ್ನು ಗಂಭೀರ ಪ್ರಕೃತಿ ವಿಕೋಪ ಎಂದು ಘೋಷಿಸಲು ಕೇಂದ್ರ ವಿಳಂಬ ಮಾಡುತ್ತಿರುವುದು ಮನೆ ನಿರ್ಮಾಣ ವಿಳಂಬವಾಗಲು ಕಾರಣವಾಗಿದೆ. ಅವಘಡದ ಎರಡು ತಿಂಗಳಲ್ಲಿ ಈ ಘೋಷಣೆ ಆಗಿದ್ದರೆ ವಿಶ್ವಸಂಸ್ಥೆ ಸೇರಿ ಇನ್ನು ಹಲವು ಸಂಸ್ಥೆಗಳಿಂದ ನೆರವು ಸಿಗುತ್ತಿತ್ತು. ಬಾಧಿತ ಕುಟುಂಬಗಳ ಸಾಲಮನ್ನಾ ಮಾಡಲೂ ಕೇಂದ್ರ ಸಿದ್ಧವಿಲ್ಲ’ ಎಂದು ಮುಖ್ಯಮಂತ್ರಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>