<p><strong>ಕಣ್ಣೂರು:</strong> ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಕಳೆದ ಐದು ದಶಕಗಳಿಂದ ಕೇವಲ ಎರಡು ರೂಪಾಯಿಗೆ ಚಿಕಿತ್ಸೆ ನೀಡುತ್ತಿದ್ದ ಡಾ. ಎ.ಕೆ. ರೈರು ಗೋಪಾಲ್, ವಯೋಸಹಜ ಕಾಯಿಲೆಗಳಿಂದ ಇಂದು (ಭಾನುವಾರ) ನಿಧನರಾದರು ಎಂದು ಕುಟುಂಬ ಮೂಲಗಳು ತಿಳಿಸಿವೆ.</p><p>ಗೋಪಾಲ್ ಅವರಿಗೆ 80 ವರ್ಷ ವಯಸ್ಸಾಗಿತ್ತು. ಪತ್ನಿ, ಮಗ ಮತ್ತು ಮಗಳನ್ನು ಅಗಲಿದ್ದಾರೆ. ಪಯ್ಯಂಬಲದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. </p><p>ಡಾ. ರೈರು ಗೋಪಾಲ್ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದ್ದಾರೆ. 'ಜನರ ಡಾಕ್ಟರ್ ಆಗಿರುವ ರೈರು ತಾವು ನೀಡುವ ಚಿಕಿತ್ಸಗೆಗಾಗಿ ರೋಗಿಗಳಿಂದ ಎರಡು ರೂಪಾಯಿ ಶುಲ್ಕ ಪಡೆಯುತ್ತಿದ್ದರು. ಜನರಿಗೆ ಸೇವೆ ಸಲ್ಲಿಸುವ ಅವರ ಇಚ್ಛಾಶಕ್ತಿಯು ರೋಗಿಗಳಿಗೆ ನೆರವಾಗಿತ್ತು' ಎಂದು ಉಲ್ಲೇಖಿಸಿದ್ದಾರೆ. </p><p><strong>ಎರಡು ರೂಪಾಯಿ ಡಾಕ್ಟ್ರು ಎಂದೇ ಜನಪ್ರಿಯ...</strong></p><p>ಪ್ರತಿದಿನ ಬೆಳಿಗ್ಗೆ 4ರಿಂದ ಸಂಜೆ 4ರವರೆಗೆ ತಮ್ಮ 'ಲಕ್ಷ್ಮಿ' ನಿವಾಸದಲ್ಲೇ ಡಾ.ರೈರು ರೋಗಿಗಳಿಗೆ ಚಿಕಿತ್ಸೆ ಕೊಡಿಸುತ್ತಿದ್ದರು. ದೈನಂದಿನ ಜಿಲ್ಲೆಯ ವಿವಿಧ ಭಾಗಗಳಿಂದ ಸೇರಿದಂತೆ ಹತ್ತಿರದ ಜಿಲ್ಲೆಗಳಿಂದಲೂ ನೂರಾರು ಮಂದಿ ಚಿಕಿತ್ಸೆಗಾಗಿ ಭೇಟಿ ಕೊಡುತ್ತಿದ್ದರು. </p><p>ಔಷಧಿಗಳನ್ನು ಖರೀದಿಸಲು ದುಡ್ಡಿಲ್ಲದ ರೋಗಿಗಳಿಗೆ ಉಚಿತವಾಗಿಯೇ ಔಷಧಿಗಳನ್ನು ಒದಗಿಸುತ್ತಿದ್ದರು. ಅವರು ಬಡವರ ಪಾಲಿನ 'ಎರಡು ರೂಪಾಯಿ ಡಾಕ್ಟ್ರು' ಎಂದೇ ಜನಪ್ರಿಯರಾಗಿದ್ದರು. </p><p>ವಯೋಸಹಜ ಆರೋಗ್ಯ ಕಾಯಿಲೆಯಿಂದಾಗಿ 2024ರ ಮೇ ತಿಂಗಳಲ್ಲಿ ಚಿಕಿತ್ಸಾಲಯವನ್ನು ಸ್ಥಗಿತಗೊಳಿಸಿದ್ದರು. </p> .ನಮ್ಮ 'ಕೈ' ಹೀಗೆ ಜೊತೆಯಾಗಿರಲಿದೆ: ಸಿದ್ದರಾಮಯ್ಯ ಜನ್ಮದಿನದಂದು ಡಿಕೆಶಿ ಹಾರೈಕೆ .ಉಪ್ಪಿನಂಗಡಿ: ಶತಾಯುಷಿ ‘ಮಾಳಿಗೆ ಡಾಕ್ಟರ್’ ಖ್ಯಾತಿಯ ಮುದ್ರಜೆ ರಾಮಚಂದ್ರ ಭಟ್ ನಿಧನ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಣ್ಣೂರು:</strong> ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಕಳೆದ ಐದು ದಶಕಗಳಿಂದ ಕೇವಲ ಎರಡು ರೂಪಾಯಿಗೆ ಚಿಕಿತ್ಸೆ ನೀಡುತ್ತಿದ್ದ ಡಾ. ಎ.ಕೆ. ರೈರು ಗೋಪಾಲ್, ವಯೋಸಹಜ ಕಾಯಿಲೆಗಳಿಂದ ಇಂದು (ಭಾನುವಾರ) ನಿಧನರಾದರು ಎಂದು ಕುಟುಂಬ ಮೂಲಗಳು ತಿಳಿಸಿವೆ.</p><p>ಗೋಪಾಲ್ ಅವರಿಗೆ 80 ವರ್ಷ ವಯಸ್ಸಾಗಿತ್ತು. ಪತ್ನಿ, ಮಗ ಮತ್ತು ಮಗಳನ್ನು ಅಗಲಿದ್ದಾರೆ. ಪಯ್ಯಂಬಲದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. </p><p>ಡಾ. ರೈರು ಗೋಪಾಲ್ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದ್ದಾರೆ. 'ಜನರ ಡಾಕ್ಟರ್ ಆಗಿರುವ ರೈರು ತಾವು ನೀಡುವ ಚಿಕಿತ್ಸಗೆಗಾಗಿ ರೋಗಿಗಳಿಂದ ಎರಡು ರೂಪಾಯಿ ಶುಲ್ಕ ಪಡೆಯುತ್ತಿದ್ದರು. ಜನರಿಗೆ ಸೇವೆ ಸಲ್ಲಿಸುವ ಅವರ ಇಚ್ಛಾಶಕ್ತಿಯು ರೋಗಿಗಳಿಗೆ ನೆರವಾಗಿತ್ತು' ಎಂದು ಉಲ್ಲೇಖಿಸಿದ್ದಾರೆ. </p><p><strong>ಎರಡು ರೂಪಾಯಿ ಡಾಕ್ಟ್ರು ಎಂದೇ ಜನಪ್ರಿಯ...</strong></p><p>ಪ್ರತಿದಿನ ಬೆಳಿಗ್ಗೆ 4ರಿಂದ ಸಂಜೆ 4ರವರೆಗೆ ತಮ್ಮ 'ಲಕ್ಷ್ಮಿ' ನಿವಾಸದಲ್ಲೇ ಡಾ.ರೈರು ರೋಗಿಗಳಿಗೆ ಚಿಕಿತ್ಸೆ ಕೊಡಿಸುತ್ತಿದ್ದರು. ದೈನಂದಿನ ಜಿಲ್ಲೆಯ ವಿವಿಧ ಭಾಗಗಳಿಂದ ಸೇರಿದಂತೆ ಹತ್ತಿರದ ಜಿಲ್ಲೆಗಳಿಂದಲೂ ನೂರಾರು ಮಂದಿ ಚಿಕಿತ್ಸೆಗಾಗಿ ಭೇಟಿ ಕೊಡುತ್ತಿದ್ದರು. </p><p>ಔಷಧಿಗಳನ್ನು ಖರೀದಿಸಲು ದುಡ್ಡಿಲ್ಲದ ರೋಗಿಗಳಿಗೆ ಉಚಿತವಾಗಿಯೇ ಔಷಧಿಗಳನ್ನು ಒದಗಿಸುತ್ತಿದ್ದರು. ಅವರು ಬಡವರ ಪಾಲಿನ 'ಎರಡು ರೂಪಾಯಿ ಡಾಕ್ಟ್ರು' ಎಂದೇ ಜನಪ್ರಿಯರಾಗಿದ್ದರು. </p><p>ವಯೋಸಹಜ ಆರೋಗ್ಯ ಕಾಯಿಲೆಯಿಂದಾಗಿ 2024ರ ಮೇ ತಿಂಗಳಲ್ಲಿ ಚಿಕಿತ್ಸಾಲಯವನ್ನು ಸ್ಥಗಿತಗೊಳಿಸಿದ್ದರು. </p> .ನಮ್ಮ 'ಕೈ' ಹೀಗೆ ಜೊತೆಯಾಗಿರಲಿದೆ: ಸಿದ್ದರಾಮಯ್ಯ ಜನ್ಮದಿನದಂದು ಡಿಕೆಶಿ ಹಾರೈಕೆ .ಉಪ್ಪಿನಂಗಡಿ: ಶತಾಯುಷಿ ‘ಮಾಳಿಗೆ ಡಾಕ್ಟರ್’ ಖ್ಯಾತಿಯ ಮುದ್ರಜೆ ರಾಮಚಂದ್ರ ಭಟ್ ನಿಧನ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>