ಅಕ್ಟೋಬರ್ 12ರಂದು ಪ್ರಾರ್ಥನಾ ಸಭೆ ನಡೆಸುವಂತೆ ರೈತ ಸಂಘಟನೆಗಳಿಗೆ ಕರೆ ನೀಡಿದ್ದು, ಅಂದು ಸಂಜೆ ಮನೆಯ ಹೊರಗಡೆ ಮೇಣದಬತ್ತಿ ಹಚ್ಚುವಂತೆ ಕೋರಿದೆ. ಲಖಿಂಪುರ ಖೇರಿಯ ಟಿಕೋನಾದಲ್ಲಿ ಮುಖ್ಯ ಪ್ರಾರ್ಥನಾ ಸಭೆ ಜರುಗಲಿದೆ. ಘಟನೆಯಲ್ಲಿ ಮೃತರಾದ ನಾಲ್ವರು ರೈತರು ಹಾಗೂ ಒಬ್ಬ ಪತ್ರಕರ್ತರಿಗೆ ನಮನ ಸಲ್ಲಿಸಲಾಗುತ್ತದೆ.