<p><strong>ತಿರುವನಂತಪುರ:</strong> ಕೇರಳದಲ್ಲಿ ಆಡಳಿತರೂಢ ಸಿಪಿಎಂ ನೇತೃತ್ವದ ಎಲ್ಡಿಎಫ್ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಚುನಾವಣೆಯಲ್ಲಿ ‘ಸ್ನೇಹಪರ ಪಂದ್ಯ’ ಆಡುತ್ತಿವೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ದೂರಿದರು.</p>.<p>ಕೇರಳದಲ್ಲಿ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ತೊಡಗಿರುವ ಅವರು, ‘ಕೇರಳದಲ್ಲಿ ಕಾಂಗ್ರೆಸ್ ಮತ್ತು ಎಡಪಂಥೀಯರು ಪರಸ್ಪರ ಹೋರಾಡುತ್ತಿದ್ದರೆ, 2000 ಕಿ.ಮೀ ದೂರದಲ್ಲಿರುವ ಪಶ್ಚಿಮ ಬಂಗಾಳದಲ್ಲಿ ಅವರು ಮಿತ್ರ ಪಕ್ಷಗಳಾಗಿವೆ’ ಎಂದು ಟೀಕಿಸಿದರು.</p>.<p>ಚುನಾವಣೆಯಲ್ಲಿ ಒಂದು ವೇಳೆ ಎಲ್ಡಿಎಫ್ ಅಥವಾ ಯುಡಿಎಫ್ ಗೆದ್ದರೆ, ಅದು ಕೇರಳದ ಜನರ ಸೋಲಾಗುತ್ತದೆ ಎಂದು ಅವರು ತಿಳಿಸಿದರು.</p>.<p>‘ಎಲ್ಡಿಎಫ್-ಯುಡಿಎಫ್ ಸಮಯ ಮುಗಿದಿದೆ. ಎರಡೂ ರಾಜಕೀಯ ಮೈತ್ರಿ ಕೂಟಗಳು ಕೇರಳದ ಜನರ ಹೊಸ ಆಕಾಂಕ್ಷೆಗಳನ್ನು ಅರ್ಥಮಾಡಿಕೊಂಡಿಲ್ಲ. ಜನರು ಬದಲಾವಣೆ ಬಯಸುತ್ತಿದ್ದಾರೆ’ ಎಂದ ರಾಜನಾಥ ಸಿಂಗ್, ಎರಡು ಮೈತ್ರಿ ಕೂಟಗಳು ಜನರಿಗೆ ‘ಸುಳ್ಳು ಭರವಸೆಗಳನ್ನು’ ನೀಡುತ್ತಿವೆ ಎಂದು ಆರೋಪಿಸಿದರು.</p>.<p>‘ಎಲ್ಡಿಎಫ್ ಜನರಿಗೆ ಭರವಸೆಗಳನ್ನು ನೀಡುವ ಬದಲು ಕ್ರಮ ಕೈಗೊಂಡ ವರದಿಯೊಂದಿಗೆ ಬರಬೇಕು’ ಎಂದ ಅವರು, ಎರಡೂ ಮೈತ್ರಿಗಳ ತುಷ್ಟೀಕರಣ ನೀತಿಗಳು ಕೇರಳವನ್ನು ಅಭಿವೃದ್ಧಿಯ ಹಾದಿಯಿಂದ ದೂರವಿಟ್ಟಿವೆ ಎಂದು ದೂರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ:</strong> ಕೇರಳದಲ್ಲಿ ಆಡಳಿತರೂಢ ಸಿಪಿಎಂ ನೇತೃತ್ವದ ಎಲ್ಡಿಎಫ್ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಚುನಾವಣೆಯಲ್ಲಿ ‘ಸ್ನೇಹಪರ ಪಂದ್ಯ’ ಆಡುತ್ತಿವೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ದೂರಿದರು.</p>.<p>ಕೇರಳದಲ್ಲಿ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ತೊಡಗಿರುವ ಅವರು, ‘ಕೇರಳದಲ್ಲಿ ಕಾಂಗ್ರೆಸ್ ಮತ್ತು ಎಡಪಂಥೀಯರು ಪರಸ್ಪರ ಹೋರಾಡುತ್ತಿದ್ದರೆ, 2000 ಕಿ.ಮೀ ದೂರದಲ್ಲಿರುವ ಪಶ್ಚಿಮ ಬಂಗಾಳದಲ್ಲಿ ಅವರು ಮಿತ್ರ ಪಕ್ಷಗಳಾಗಿವೆ’ ಎಂದು ಟೀಕಿಸಿದರು.</p>.<p>ಚುನಾವಣೆಯಲ್ಲಿ ಒಂದು ವೇಳೆ ಎಲ್ಡಿಎಫ್ ಅಥವಾ ಯುಡಿಎಫ್ ಗೆದ್ದರೆ, ಅದು ಕೇರಳದ ಜನರ ಸೋಲಾಗುತ್ತದೆ ಎಂದು ಅವರು ತಿಳಿಸಿದರು.</p>.<p>‘ಎಲ್ಡಿಎಫ್-ಯುಡಿಎಫ್ ಸಮಯ ಮುಗಿದಿದೆ. ಎರಡೂ ರಾಜಕೀಯ ಮೈತ್ರಿ ಕೂಟಗಳು ಕೇರಳದ ಜನರ ಹೊಸ ಆಕಾಂಕ್ಷೆಗಳನ್ನು ಅರ್ಥಮಾಡಿಕೊಂಡಿಲ್ಲ. ಜನರು ಬದಲಾವಣೆ ಬಯಸುತ್ತಿದ್ದಾರೆ’ ಎಂದ ರಾಜನಾಥ ಸಿಂಗ್, ಎರಡು ಮೈತ್ರಿ ಕೂಟಗಳು ಜನರಿಗೆ ‘ಸುಳ್ಳು ಭರವಸೆಗಳನ್ನು’ ನೀಡುತ್ತಿವೆ ಎಂದು ಆರೋಪಿಸಿದರು.</p>.<p>‘ಎಲ್ಡಿಎಫ್ ಜನರಿಗೆ ಭರವಸೆಗಳನ್ನು ನೀಡುವ ಬದಲು ಕ್ರಮ ಕೈಗೊಂಡ ವರದಿಯೊಂದಿಗೆ ಬರಬೇಕು’ ಎಂದ ಅವರು, ಎರಡೂ ಮೈತ್ರಿಗಳ ತುಷ್ಟೀಕರಣ ನೀತಿಗಳು ಕೇರಳವನ್ನು ಅಭಿವೃದ್ಧಿಯ ಹಾದಿಯಿಂದ ದೂರವಿಟ್ಟಿವೆ ಎಂದು ದೂರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>