<p class="title"><strong>ಟಿಕಾಮ್ಗಢ, ಮಧ್ಯಪ್ರದೇಶ:</strong>ಟಿಕಾಮ್ಗಢ ಜಿಲ್ಲೆಯ ಚಂದ್ರಾಪುರ ಜಿಲ್ಲೆಯ ರಾಮ್ ಹರ್ಷನ್ ಗೋಶಾಲೆಯಲ್ಲಿ ಕೆಲವು ಅಪರಿಚಿತ ವ್ಯಕ್ತಿಗಳು ಸೋಮವಾರ ಸಾಯಂಕಾಲ ಮಧ್ಯ ಹಾಗೂ ಮಾಂಸ ಸೇವಿಸಿದ ಘಟನೆ ನಡೆದಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಬಲದೇವಘಡ ಜನಪದ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಭಾಶ್ ಘಂಘೋರಿಯಾ ಮಂಗಳವಾರ ತಿಳಿಸಿದ್ದಾರೆ.</p>.<p class="title">ಗೋಶಾಲೆಯಲ್ಲಿ ಸುಮಾರು 15 ಮಂದಿ ಸೇರಿಕೊಂಡು ಮದ್ಯ ಹಾಗೂ ಮಾಂಸದೊಡನೆ ಔತಣಕೂಟ ನಡೆಸುತ್ತಿರುವ ವಿಡಿಯೊ, ಸೋಮವಾರ ಸಾಯಂಕಾಲ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.</p>.<p class="title"><a href="https://www.prajavani.net/india-news/congress-leader-iyc-president-srinivas-bv-hair-pulled-delhi-cops-manhandle-him-during-protest-957758.html" itemprop="url">ದೆಹಲಿ: ಕಾಂಗ್ರೆಸ್ ಪ್ರತಿಭಟನೆ ವೇಳೆ ಶ್ರೀನಿವಾಸ್ರನ್ನು ಎಳೆದಾಡಿದ ಪೊಲೀಸರು </a></p>.<p class="title">‘ಅಹಿರ್ವಾರ್ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬ ಕೊಲೆ ಪ್ರಕರಣವೊಂದರಲ್ಲಿ ಬಂಧನಕ್ಕೊಳಗಾಗಿದ್ದಕ್ಕೆ ತನ್ನ ಜನರಿಂದ ಬಹಿಷ್ಕೃತನಾಗಿದ್ದ. ಈ ಶಿಕ್ಷೆಯು ಕೊನೆಗೊಳ್ಳಬೇಕಾದರೆ ಮದ್ಯ ಹಾಗೂ ಮಾಂಸದ ಔತಣಕೂಟ ಏರ್ಪಡಿಸುವಂತೆ ಆತನ ಸಮುದಾಯದ ಸದಸ್ಯರು ಹೇಳಿದ್ದರು’ ಎಂದುಘಂಘೋರಿಯಾ ಹೇಳಿದರು.</p>.<p class="title">‘ಈ ವಿಷಯ ತಿಳಿಯುತ್ತಿದ್ದಂತೆಯೇ ಬಜರಂಗ ದಳದ ಮೂವರು ಕಾರ್ಯಕರ್ತರು ಸ್ಥಳಕ್ಕೆ ಹೋಗುತ್ತಿದ್ದಂತೆಯೇ, ಔತಣಕೂಟ ನಡೆಸುತ್ತಿದ್ದವರು ಗೋಶಾಲೆಯ ಆವರಣದಿಂದ ಓಡಿ ಹೋಗಿದ್ದಾರೆ. ಘಟನೆಯ ಬಗ್ಗೆ ರಚಿಸಲಾಗಿರುವ ತ್ರಿಸದಸ್ಯ ಸಮಿತಿಯು ಬುಧವಾರ ತನ್ನ ವರದಿಯನ್ನು ಸಲ್ಲಿಸಲಿದೆ. ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು’ ಎಂದೂ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಟಿಕಾಮ್ಗಢ, ಮಧ್ಯಪ್ರದೇಶ:</strong>ಟಿಕಾಮ್ಗಢ ಜಿಲ್ಲೆಯ ಚಂದ್ರಾಪುರ ಜಿಲ್ಲೆಯ ರಾಮ್ ಹರ್ಷನ್ ಗೋಶಾಲೆಯಲ್ಲಿ ಕೆಲವು ಅಪರಿಚಿತ ವ್ಯಕ್ತಿಗಳು ಸೋಮವಾರ ಸಾಯಂಕಾಲ ಮಧ್ಯ ಹಾಗೂ ಮಾಂಸ ಸೇವಿಸಿದ ಘಟನೆ ನಡೆದಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಬಲದೇವಘಡ ಜನಪದ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಭಾಶ್ ಘಂಘೋರಿಯಾ ಮಂಗಳವಾರ ತಿಳಿಸಿದ್ದಾರೆ.</p>.<p class="title">ಗೋಶಾಲೆಯಲ್ಲಿ ಸುಮಾರು 15 ಮಂದಿ ಸೇರಿಕೊಂಡು ಮದ್ಯ ಹಾಗೂ ಮಾಂಸದೊಡನೆ ಔತಣಕೂಟ ನಡೆಸುತ್ತಿರುವ ವಿಡಿಯೊ, ಸೋಮವಾರ ಸಾಯಂಕಾಲ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.</p>.<p class="title"><a href="https://www.prajavani.net/india-news/congress-leader-iyc-president-srinivas-bv-hair-pulled-delhi-cops-manhandle-him-during-protest-957758.html" itemprop="url">ದೆಹಲಿ: ಕಾಂಗ್ರೆಸ್ ಪ್ರತಿಭಟನೆ ವೇಳೆ ಶ್ರೀನಿವಾಸ್ರನ್ನು ಎಳೆದಾಡಿದ ಪೊಲೀಸರು </a></p>.<p class="title">‘ಅಹಿರ್ವಾರ್ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬ ಕೊಲೆ ಪ್ರಕರಣವೊಂದರಲ್ಲಿ ಬಂಧನಕ್ಕೊಳಗಾಗಿದ್ದಕ್ಕೆ ತನ್ನ ಜನರಿಂದ ಬಹಿಷ್ಕೃತನಾಗಿದ್ದ. ಈ ಶಿಕ್ಷೆಯು ಕೊನೆಗೊಳ್ಳಬೇಕಾದರೆ ಮದ್ಯ ಹಾಗೂ ಮಾಂಸದ ಔತಣಕೂಟ ಏರ್ಪಡಿಸುವಂತೆ ಆತನ ಸಮುದಾಯದ ಸದಸ್ಯರು ಹೇಳಿದ್ದರು’ ಎಂದುಘಂಘೋರಿಯಾ ಹೇಳಿದರು.</p>.<p class="title">‘ಈ ವಿಷಯ ತಿಳಿಯುತ್ತಿದ್ದಂತೆಯೇ ಬಜರಂಗ ದಳದ ಮೂವರು ಕಾರ್ಯಕರ್ತರು ಸ್ಥಳಕ್ಕೆ ಹೋಗುತ್ತಿದ್ದಂತೆಯೇ, ಔತಣಕೂಟ ನಡೆಸುತ್ತಿದ್ದವರು ಗೋಶಾಲೆಯ ಆವರಣದಿಂದ ಓಡಿ ಹೋಗಿದ್ದಾರೆ. ಘಟನೆಯ ಬಗ್ಗೆ ರಚಿಸಲಾಗಿರುವ ತ್ರಿಸದಸ್ಯ ಸಮಿತಿಯು ಬುಧವಾರ ತನ್ನ ವರದಿಯನ್ನು ಸಲ್ಲಿಸಲಿದೆ. ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು’ ಎಂದೂ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>