<p><strong>ಮುಂಬೈ:</strong> ಯೋಜನೆಯೊಂದರಲ್ಲಿ ತನಗೆ ಮಂಜೂರಾದ ಭೂಮಿಯ ದಾಖಲೆ ಪತ್ರಗಳು ತನ್ನ ಹೆಸರಿಗೆ ಆಗುವುದರಲ್ಲಿ ವಿಳಂಬ ಆಗುತ್ತಿರುವುದಕ್ಕೆ ರೈತರೊಬ್ಬರು ಅರೆ ಸಮಾಧಿಯಾಗಿ ಪ್ರತಿಭಟನೆ ನಡೆಸಿದ ವಿಕ್ಷಿಪ್ತ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.</p>.<p>ಜಲ್ನಾ ಜಿಲ್ಲೆಯ ಸುನಿಲ್ ಜಾಧವ್ ಎನ್ನುವವರೇ ಹೀಗೆ ವಿಶಿಷ್ಟವಾಗಿ ಪ್ರತಿಭಟನೆ ಮಾಡಿದ ರೈತ.</p>.<p>ಸುನಿಲ್ ಅವರಿಗೆ, ಕರ್ಮವೀರ್ ದಾದಾಸಾಹೇಬ್ ಗಾಯಕ್ವಾಡ್ ಸಬಲೀಕರಣ್ ಸ್ವಾಭಿಮಾನ್ ಯೋಜನೆಯಡಿ 2 ಎಕರೆ ಭೂಮಿ 2019ರಲ್ಲಿ ಮಂಜೂರಾಗಿತ್ತು. ಆದರೆ ಅದರ ದಾಖಲೆ ಪತ್ರಗಳು ಇನ್ನೂ ಅವರ ಕೈಗೆ ಸಿಕ್ಕಿಲ್ಲ. ಹೀಗಾಗಿ ಅರೆ ಸಮಾಧಿಯಾಗಿ ಪ್ರತಿಭಟನೆ ಮಾಡಿದ್ದಾರೆ.</p>.<p>ಅಲ್ಲದೇ ತನ್ನ ಕೆಲಸ ಆಗುವವರೆಗೆ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ ಎಂದು ರೈತ ಪಟ್ಟು ಹಿಡಿದಿದ್ದಾರೆ.</p>.<p>ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿಭಿನ್ನ ಪ್ರತಿಕ್ರಿಯೆ ವ್ಯಕ್ತವಾಗಿದೆ. ಖಾಲಿ ಜಾಗವೊಂದರಲ್ಲಿ ವ್ಯಕ್ತಿ ಕತ್ತಿನವರೆಗೆ ತನ್ನನ್ನು ತಾನು ಸಮಾಧಿ ಮಾಡಿಕೊಂಡಿದ್ದು, ಅವರ ಪಕ್ಕದಲ್ಲೇ ಒಂದು ಮಗು ಹಾಗೂ ಮಹಿಳೆ ಇರುವುದು ವಿಡಿಯೋದಲ್ಲಿ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ಯೋಜನೆಯೊಂದರಲ್ಲಿ ತನಗೆ ಮಂಜೂರಾದ ಭೂಮಿಯ ದಾಖಲೆ ಪತ್ರಗಳು ತನ್ನ ಹೆಸರಿಗೆ ಆಗುವುದರಲ್ಲಿ ವಿಳಂಬ ಆಗುತ್ತಿರುವುದಕ್ಕೆ ರೈತರೊಬ್ಬರು ಅರೆ ಸಮಾಧಿಯಾಗಿ ಪ್ರತಿಭಟನೆ ನಡೆಸಿದ ವಿಕ್ಷಿಪ್ತ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.</p>.<p>ಜಲ್ನಾ ಜಿಲ್ಲೆಯ ಸುನಿಲ್ ಜಾಧವ್ ಎನ್ನುವವರೇ ಹೀಗೆ ವಿಶಿಷ್ಟವಾಗಿ ಪ್ರತಿಭಟನೆ ಮಾಡಿದ ರೈತ.</p>.<p>ಸುನಿಲ್ ಅವರಿಗೆ, ಕರ್ಮವೀರ್ ದಾದಾಸಾಹೇಬ್ ಗಾಯಕ್ವಾಡ್ ಸಬಲೀಕರಣ್ ಸ್ವಾಭಿಮಾನ್ ಯೋಜನೆಯಡಿ 2 ಎಕರೆ ಭೂಮಿ 2019ರಲ್ಲಿ ಮಂಜೂರಾಗಿತ್ತು. ಆದರೆ ಅದರ ದಾಖಲೆ ಪತ್ರಗಳು ಇನ್ನೂ ಅವರ ಕೈಗೆ ಸಿಕ್ಕಿಲ್ಲ. ಹೀಗಾಗಿ ಅರೆ ಸಮಾಧಿಯಾಗಿ ಪ್ರತಿಭಟನೆ ಮಾಡಿದ್ದಾರೆ.</p>.<p>ಅಲ್ಲದೇ ತನ್ನ ಕೆಲಸ ಆಗುವವರೆಗೆ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ ಎಂದು ರೈತ ಪಟ್ಟು ಹಿಡಿದಿದ್ದಾರೆ.</p>.<p>ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿಭಿನ್ನ ಪ್ರತಿಕ್ರಿಯೆ ವ್ಯಕ್ತವಾಗಿದೆ. ಖಾಲಿ ಜಾಗವೊಂದರಲ್ಲಿ ವ್ಯಕ್ತಿ ಕತ್ತಿನವರೆಗೆ ತನ್ನನ್ನು ತಾನು ಸಮಾಧಿ ಮಾಡಿಕೊಂಡಿದ್ದು, ಅವರ ಪಕ್ಕದಲ್ಲೇ ಒಂದು ಮಗು ಹಾಗೂ ಮಹಿಳೆ ಇರುವುದು ವಿಡಿಯೋದಲ್ಲಿ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>