<p><strong>ಮುಂಬೈ</strong>: ಬಾಳಾಸಾಹೇಬರಿಗೆ ದ್ರೋಹ ಬಗೆದವರು ಮುಗಿದು ಹೋಗಿದ್ದಾರೆ ಎಂದು ಸಂಜಯ್ ರಾವುತ್ ಭಾನುವಾರ ವಾಗ್ದಾಳಿ ನಡೆಸಿದ್ದಾರೆ.</p>.<p>ಶಿವಸೇನಾ ಬಂಡಾಯ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅವರು, ‘ಇನ್ನು ಮುಂದೆ ಯಾರನ್ನು ನಂಬಬೇಕೆಂದು ನಾವು ನಿರ್ಧರಿಸಬೇಕಿದೆ’ ಎಂದು ತಿಳಿಸಿದ್ದಾರೆ.</p>.<p>‘ಬಂಡಾಯ ಶಾಸಕರು ತಂಗಿರುವ ಸ್ಥಳದ ಫೋಟೋಗಳನ್ನು ನೋಡಿದಾಗ, ಅದು ಹೋಟೆಲ್ನಂತೆ ಕಾಣಿಸುತ್ತಿಲ್ಲ. ಅದು ಬಿಗ್ಬಾಸ್ ಮನೆಯಂತೆ ಗೋಚರಿಸುತ್ತಿದೆ. ಅಲ್ಲಿರುವವರು ಕುಡಿಯುತ್ತಿದ್ದಾರೆ. ತಿನ್ನುತ್ತಿದ್ದಾರೆ. ಆಟವಾಡುತ್ತಿದ್ದಾರೆ’ ಎಂದು ಹರಿಹಾಯ್ದಿದ್ದಾರೆ.</p>.<p>‘ಹೋಟೆಲ್ನಲ್ಲಿ ಉಳಿದುಕೊಂಡಿರುವ ಅರ್ಧದಷ್ಟು ಶಾಸಕರನ್ನು ಹೊರಹಾಕಲಾಗುತ್ತದೆ. ನೀವು(ಬಂಡಾಯ ಶಾಸಕರು) ಎಲ್ಲಿಯವರೆಗೆ ಗುವಾಹಟಿಯಲ್ಲಿ ಅಡಗಿಕೊಳ್ಳುತ್ತೀರಿ? ನೀವು ಚೌಪಾಟಿಗೆ ಹಿಂತಿರುಗಲೇಬೇಕು,’ ಎಂದು ಹೇಳಿಕೆ ನೀಡಿದ್ದಾರೆ.</p>.<p>‘ಅವರ(ಬಂಡಾಯ ಶಾಸಕರ) ದೇಹಗಳು ಮಾತ್ರ ಇಲ್ಲಿಗೆ ಬರುತ್ತವೆ. ಆತ್ಮವು ಸತ್ತಿರುತ್ತದೆ. ಆ 40 ಜನರು ಇಲ್ಲಿಗೆ(ಮುಂಬೈ) ಕಾಲಿಟ್ಟಾಗ, ಅವರು ಯಾರ ಹೃದಯದಲ್ಲಿಯೂ ಜೀವಂತವಾಗಿರುವುದಿಲ್ಲ. ಇಲ್ಲಿ ಹೊತ್ತಿಕೊಂಡಿರುವ ಬೆಂಕಿಯ ಎದುರು ತಾವು ಏನಾಗಬಹುದು ಎಂಬುದು ಅವರಿಗೆ ತಿಳಿದಿದೆ’ ಎಂದು ರಾವುತ್ ಹೇಳಿದ್ದಾರೆ.</p>.<p>‘ಇದು ಶಿವಸೇನೆ. ಇದಕ್ಕೆ ಒಬ್ಬನೇ ತಂದೆ. ನೀವು ತಂದೆಯನ್ನು ಕದಿಯಲು ಸಾಧ್ಯವಿಲ್ಲ. ಬಾಳಾಸಾಹೇಬರಿಗೆ ದ್ರೋಹ ಬಗೆದವರು ನಾಶವಾಗಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ಬಾಳಾಸಾಹೇಬರಿಗೆ ದ್ರೋಹ ಬಗೆದವರು ಮುಗಿದು ಹೋಗಿದ್ದಾರೆ ಎಂದು ಸಂಜಯ್ ರಾವುತ್ ಭಾನುವಾರ ವಾಗ್ದಾಳಿ ನಡೆಸಿದ್ದಾರೆ.</p>.<p>ಶಿವಸೇನಾ ಬಂಡಾಯ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅವರು, ‘ಇನ್ನು ಮುಂದೆ ಯಾರನ್ನು ನಂಬಬೇಕೆಂದು ನಾವು ನಿರ್ಧರಿಸಬೇಕಿದೆ’ ಎಂದು ತಿಳಿಸಿದ್ದಾರೆ.</p>.<p>‘ಬಂಡಾಯ ಶಾಸಕರು ತಂಗಿರುವ ಸ್ಥಳದ ಫೋಟೋಗಳನ್ನು ನೋಡಿದಾಗ, ಅದು ಹೋಟೆಲ್ನಂತೆ ಕಾಣಿಸುತ್ತಿಲ್ಲ. ಅದು ಬಿಗ್ಬಾಸ್ ಮನೆಯಂತೆ ಗೋಚರಿಸುತ್ತಿದೆ. ಅಲ್ಲಿರುವವರು ಕುಡಿಯುತ್ತಿದ್ದಾರೆ. ತಿನ್ನುತ್ತಿದ್ದಾರೆ. ಆಟವಾಡುತ್ತಿದ್ದಾರೆ’ ಎಂದು ಹರಿಹಾಯ್ದಿದ್ದಾರೆ.</p>.<p>‘ಹೋಟೆಲ್ನಲ್ಲಿ ಉಳಿದುಕೊಂಡಿರುವ ಅರ್ಧದಷ್ಟು ಶಾಸಕರನ್ನು ಹೊರಹಾಕಲಾಗುತ್ತದೆ. ನೀವು(ಬಂಡಾಯ ಶಾಸಕರು) ಎಲ್ಲಿಯವರೆಗೆ ಗುವಾಹಟಿಯಲ್ಲಿ ಅಡಗಿಕೊಳ್ಳುತ್ತೀರಿ? ನೀವು ಚೌಪಾಟಿಗೆ ಹಿಂತಿರುಗಲೇಬೇಕು,’ ಎಂದು ಹೇಳಿಕೆ ನೀಡಿದ್ದಾರೆ.</p>.<p>‘ಅವರ(ಬಂಡಾಯ ಶಾಸಕರ) ದೇಹಗಳು ಮಾತ್ರ ಇಲ್ಲಿಗೆ ಬರುತ್ತವೆ. ಆತ್ಮವು ಸತ್ತಿರುತ್ತದೆ. ಆ 40 ಜನರು ಇಲ್ಲಿಗೆ(ಮುಂಬೈ) ಕಾಲಿಟ್ಟಾಗ, ಅವರು ಯಾರ ಹೃದಯದಲ್ಲಿಯೂ ಜೀವಂತವಾಗಿರುವುದಿಲ್ಲ. ಇಲ್ಲಿ ಹೊತ್ತಿಕೊಂಡಿರುವ ಬೆಂಕಿಯ ಎದುರು ತಾವು ಏನಾಗಬಹುದು ಎಂಬುದು ಅವರಿಗೆ ತಿಳಿದಿದೆ’ ಎಂದು ರಾವುತ್ ಹೇಳಿದ್ದಾರೆ.</p>.<p>‘ಇದು ಶಿವಸೇನೆ. ಇದಕ್ಕೆ ಒಬ್ಬನೇ ತಂದೆ. ನೀವು ತಂದೆಯನ್ನು ಕದಿಯಲು ಸಾಧ್ಯವಿಲ್ಲ. ಬಾಳಾಸಾಹೇಬರಿಗೆ ದ್ರೋಹ ಬಗೆದವರು ನಾಶವಾಗಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>