ಮಹಾರಾಷ್ಟ್ರ ವಿಧಾಸನಭೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಶಿವಸೇನೆ ವಿಧಾನಸಭೆ ಒಟ್ಟು ಸ್ಥಾನಗಳ ಪೈಕಿ ಶೇ. 50ರಷ್ಟನ್ನು ಪಡೆಯಲು ಈ ಬಾರಿ ನಿರ್ಧರಿಸಿತ್ತು. 50:50 ಸೂತ್ರದ ಅನ್ವಯ ಸೀಟು ಹಂಚಿಕೆ ನಡೆಯಬೇಕು ಎಂದು ಶಿವಸೇನೆಯ ಹಲವು ನಾಯಕರು ಹೇಳಿಕೊಂಡಿದ್ದರು. ಇದು ಸಾಧ್ಯವಾಗದೇ ಹೋದರೆ, ಮೈತ್ರಿ ಮುರಿದುಕೊಳ್ಳುವುದಾಗಿಯೂ ಹೇಳಿಕೆ ನೀಡಿದ್ದರು. ಆದರೆ, ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ಮುತುವರ್ಜಿಯಿಂದಾಗಿ ಮೈತ್ರಿ ಗಟ್ಟಿಗೊಂಡಿದೆ.