<p><strong>ತಿರುವನಂತಪುರ:</strong> ಚಲಿಸುತ್ತಿದ್ದ ರೈಲಿಗೆ ಭಾನುವಾರ ರಾತ್ರಿ ಬೆಂಕಿ ಹಚ್ಚಿ ಪರಾರಿಯಾದ ಆಗಂತುಕ ನೋಯ್ಡಾ ನಿವಾಸಿ ಶಾರುಖ್ ಸೈಫ್ ಎಂದು ಪೊಲೀಸರು ಗುರುತಿಸಿರುವುದಾಗಿ ವರದಿಯಾಗಿದೆ. ಶಂಕಿತನ ಚಿತ್ರವನ್ನು ಕೇರಳ ಪೊಲೀಸರು ಸೋಮವಾರ ಬಿಡುಗಡೆ ಮಾಡಿದ್ದರು.</p>.<p>ರೈಲು ಹಳಿ ಬಳಿ ಬಿದ್ದಿದ್ದ ಸಿಮ್ ಕಾರ್ಡ್ ಇಲ್ಲದ ಮೊಬೈಲ್ ಅನ್ನು ವಶಕ್ಕೆ ಪಡೆದಿರುವ ಪೊಲೀಸರು, ಅದರಲ್ಲಿದ್ದ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ತನಿಖೆ ನಡೆಸಿ, ಈ ಮಹತ್ವದ ಮಾಹಿತಿ ಪತ್ತೆ ಹಚ್ಚಿದ್ದಾರೆ. ಮೊಬೈಲ್ ಅನ್ನು ಮಾರ್ಚ್ 30ರಂದು ಕೊನೆಯದಾಗಿ ಬಳಕೆ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.</p>.<p>ಕೃತ್ಯವೆಸಗಿದ ನಂತರ ರೈಲಿನಿಂದ ಜಿಗಿದು ಪರಾರಿಯಾಗಿರುವ ಸೈಫ್, ಕೋಯಿಕ್ಕೋಡ್ನಲ್ಲಿ ಕಾರ್ಮಿಕನಾಗಿದ್ದಿರಬಹುದು ಎನ್ನಲಾಗಿದೆ. ಪ್ರಕರಣ ಭೇದಿಸಲು ಹಾಗೂ ಆರೋಪಿಯನ್ನು ಸೆರೆ ಹಿಡಿಯಲು ಆತನ ಸಂಪರ್ಕಗಳ ಜಾಡು ಹಿಡಿಯಲಾಗಿದೆ.</p>.<p>ಸದ್ಯ ಬಿಡುಗಡೆ ಮಾಡಲಾಗಿರುವ ಚಿತ್ರವು, ಆಲಪ್ಪುಳ–ಕಣ್ಣೂರ್ ಎಕ್ಸಿಕ್ಯೂಟಿವ್ ಎಕ್ಸ್ಪ್ರೆಸ್ನಲ್ಲಿ ಘಟನೆ ನಡೆದ 2 ಗಂಟೆಗಳ ಬಳಿಕ ಅಂದರೆ, ಭಾನುವಾರ ರಾತ್ರಿ 11.30ರಲ್ಲಿ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿರುವುದಾಗಿದೆ. ಸಿಸಿಟಿವಿ ಮಾತ್ರವಲ್ಲದೆ, ಬೆಂಕಿ ನಂದಿಸಲು ನೆರವಾದ ಹಾಗೂ ಕಂಪಾರ್ಟ್ಮೆಂಟ್ನಲ್ಲಿ ಪ್ರಯಾಣಿಸುತ್ತಿದ್ದ ಪ್ರತ್ಯಕ್ಷದರ್ಶಿಗಳಿಂದಲೂ ಶಂಕಿತನ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ.</p>.<p>ರೈಲು, ರಾತ್ರಿ 9.30ರ ಸುಮಾರಿಗೆ ಕೋಯಿಕ್ಕೋಡ್ ಮತ್ತು ಕಣ್ಣೂರ್ ನಡುವೆ ಇರುವ ಕೊರಪುಳ ಬ್ರಿಡ್ಜ್ ದಾಟುತ್ತಿದ್ದಾಗ ಮಧ್ಯ ವಯಸ್ಕನೊಬ್ಬ ಪ್ರಯಾಣಿಕರ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದಾನೆ. ಬೆಂಕಿ ಹೊತ್ತಿಕೊಂಡಾಗ ರೈಲಿನಿಂದ ಜಿಗಿದ ಮೂವರು ಪ್ರಯಾಣಿಕರು ಮೃತಪಟ್ಟಿದ್ದಾರೆ. 9 ಮಂದಿಗೆ ಸುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ಕೋಯಿಕ್ಕೋಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ.</p>.<p>ಕೆಂಪು ಬಣ್ಣದ ಅಂಗಿ ಧರಿಸಿದ್ದ ಮತ್ತು ಗಡ್ಡ ಬಿಟ್ಟಿದ್ದ ಆಗಂತುಕ, ಡಿ2 ಕಂಪಾರ್ಟ್ಮೆಂಟ್ನಿಂದ ಡಿ1 ಕಂಪಾರ್ಟ್ಮೆಂಟ್ಗೆ ಬಂದು, ಈ ಕೃತ್ಯವೆಸಗಿದ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.</p>.<p><strong>ಇದನ್ನೂ ಓದಿ: </strong><a href="https://www.prajavani.net/india-news/two-year-old-among-three-dead-as-man-sets-co-passengers-ablaze-in-moving-train-in-kerala-1028609.html" itemprop="url" target="_blank">ಕೇರಳ | ರೈಲಿಗೆ ನುಗ್ಗಿ ಬೆಂಕಿ ಇಟ್ಟ ಆಗಂತುಕ: ಮೂವರು ಸಾವು, 9 ಮಂದಿಗೆ ಸುಟ್ಟ ಗಾಯ </a></p>.<p>ಘಟನೆ ನಡೆಯುತ್ತಿದ್ದಂತೆಯೇ, ಇತರ ಪ್ರಯಾಣಿಕರು ತುರ್ತು ನಿಲುಗಡೆ ಚೈನ್ ಎಳೆದು ರೈಲು ನಿಲ್ಲಿಸಿದ್ದಾರೆ. ದುಷ್ಕರ್ಮಿಯು, ತಕ್ಷಣವೇ ರೈಲಿನಿಂದ ಜಿಗಿದು ಕತ್ತಲಿನಲ್ಲಿ ನಾಪತ್ತೆಯಾಗಿದ್ದಾನೆ. ಆತ ರೈಲಿನಿಂದ ಜಿಗಿದ 50 ಮೀಟರ್ ದೂರದಲ್ಲಿ ಬೈಕ್ನಲ್ಲಿ ಪರಾರಿಯಾಗುತ್ತಿರುವುದು ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ.</p>.<p>ಬ್ಯಾಗ್ ಮತ್ತು ಸ್ವಿಚ್ ಆಫ್ ಆಗಿದ್ದ ಮೊಬೈಲ್ ಸ್ಥಳದಲ್ಲಿ ಸಿಕ್ಕಿವೆ. ಸಮೀಪದ ತಿರುವನಂತಪುರ ಹಾಗೂ ಕನ್ಯಾಕುಮಾರಿ ಕುರಿತು ಇಂಗ್ಲಿಷ್, ಹಿಂದಿಯಲ್ಲಿ ಬರೆಯಲಾಗಿರುವ ಕಾಗದ, ಒಂದು ಜೊತೆ ಬಟ್ಟೆ, ಕನ್ನಡಕ ಮತ್ತು ಪೆಟ್ರೋಲ್ ತುಂಬಿದ್ದ ಒಂದು ಬಾಟೆಲ್ ಬ್ಯಾಗ್ನಲ್ಲಿ ದೊರೆತಿವೆ.</p>.<p>ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಕೃತ್ಯವನ್ನು ಖಂಡಿಸಿದ್ದಾರೆ. ಪೊಲೀಸರು ಶಂಕಿತನನ್ನು ಬಂಧಿಸಲಿದ್ದಾರೆ ಎಂದಿರುವ ಅವರು, ಗಾಯಾಳುಗಳ ಚಿಕಿತ್ಸೆಯನ್ನು ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.</p>.<p>ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಅವರು, ಸಾರ್ವಜನಿಕ ವಾಹನಗಳಲ್ಲಿ ಸಂಚರಿಸುವವರಲ್ಲಿ ವಿಶ್ವಾಸ ಮೂಡಿಸಬೇಕಿದೆ. ಅದಕ್ಕಾಗಿ ಕೇಂದ್ರ ಮತ್ತು ರಾಜ್ಯದ ತನಿಖಾ ಸಂಸ್ಥೆಗಳು ಜಂಟಿಯಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.</p>.<p>ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್ ಅವರು, ಇದು ದೇಶ ವಿರೋಧಿ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ:</strong> ಚಲಿಸುತ್ತಿದ್ದ ರೈಲಿಗೆ ಭಾನುವಾರ ರಾತ್ರಿ ಬೆಂಕಿ ಹಚ್ಚಿ ಪರಾರಿಯಾದ ಆಗಂತುಕ ನೋಯ್ಡಾ ನಿವಾಸಿ ಶಾರುಖ್ ಸೈಫ್ ಎಂದು ಪೊಲೀಸರು ಗುರುತಿಸಿರುವುದಾಗಿ ವರದಿಯಾಗಿದೆ. ಶಂಕಿತನ ಚಿತ್ರವನ್ನು ಕೇರಳ ಪೊಲೀಸರು ಸೋಮವಾರ ಬಿಡುಗಡೆ ಮಾಡಿದ್ದರು.</p>.<p>ರೈಲು ಹಳಿ ಬಳಿ ಬಿದ್ದಿದ್ದ ಸಿಮ್ ಕಾರ್ಡ್ ಇಲ್ಲದ ಮೊಬೈಲ್ ಅನ್ನು ವಶಕ್ಕೆ ಪಡೆದಿರುವ ಪೊಲೀಸರು, ಅದರಲ್ಲಿದ್ದ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ತನಿಖೆ ನಡೆಸಿ, ಈ ಮಹತ್ವದ ಮಾಹಿತಿ ಪತ್ತೆ ಹಚ್ಚಿದ್ದಾರೆ. ಮೊಬೈಲ್ ಅನ್ನು ಮಾರ್ಚ್ 30ರಂದು ಕೊನೆಯದಾಗಿ ಬಳಕೆ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.</p>.<p>ಕೃತ್ಯವೆಸಗಿದ ನಂತರ ರೈಲಿನಿಂದ ಜಿಗಿದು ಪರಾರಿಯಾಗಿರುವ ಸೈಫ್, ಕೋಯಿಕ್ಕೋಡ್ನಲ್ಲಿ ಕಾರ್ಮಿಕನಾಗಿದ್ದಿರಬಹುದು ಎನ್ನಲಾಗಿದೆ. ಪ್ರಕರಣ ಭೇದಿಸಲು ಹಾಗೂ ಆರೋಪಿಯನ್ನು ಸೆರೆ ಹಿಡಿಯಲು ಆತನ ಸಂಪರ್ಕಗಳ ಜಾಡು ಹಿಡಿಯಲಾಗಿದೆ.</p>.<p>ಸದ್ಯ ಬಿಡುಗಡೆ ಮಾಡಲಾಗಿರುವ ಚಿತ್ರವು, ಆಲಪ್ಪುಳ–ಕಣ್ಣೂರ್ ಎಕ್ಸಿಕ್ಯೂಟಿವ್ ಎಕ್ಸ್ಪ್ರೆಸ್ನಲ್ಲಿ ಘಟನೆ ನಡೆದ 2 ಗಂಟೆಗಳ ಬಳಿಕ ಅಂದರೆ, ಭಾನುವಾರ ರಾತ್ರಿ 11.30ರಲ್ಲಿ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿರುವುದಾಗಿದೆ. ಸಿಸಿಟಿವಿ ಮಾತ್ರವಲ್ಲದೆ, ಬೆಂಕಿ ನಂದಿಸಲು ನೆರವಾದ ಹಾಗೂ ಕಂಪಾರ್ಟ್ಮೆಂಟ್ನಲ್ಲಿ ಪ್ರಯಾಣಿಸುತ್ತಿದ್ದ ಪ್ರತ್ಯಕ್ಷದರ್ಶಿಗಳಿಂದಲೂ ಶಂಕಿತನ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ.</p>.<p>ರೈಲು, ರಾತ್ರಿ 9.30ರ ಸುಮಾರಿಗೆ ಕೋಯಿಕ್ಕೋಡ್ ಮತ್ತು ಕಣ್ಣೂರ್ ನಡುವೆ ಇರುವ ಕೊರಪುಳ ಬ್ರಿಡ್ಜ್ ದಾಟುತ್ತಿದ್ದಾಗ ಮಧ್ಯ ವಯಸ್ಕನೊಬ್ಬ ಪ್ರಯಾಣಿಕರ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದಾನೆ. ಬೆಂಕಿ ಹೊತ್ತಿಕೊಂಡಾಗ ರೈಲಿನಿಂದ ಜಿಗಿದ ಮೂವರು ಪ್ರಯಾಣಿಕರು ಮೃತಪಟ್ಟಿದ್ದಾರೆ. 9 ಮಂದಿಗೆ ಸುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ಕೋಯಿಕ್ಕೋಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ.</p>.<p>ಕೆಂಪು ಬಣ್ಣದ ಅಂಗಿ ಧರಿಸಿದ್ದ ಮತ್ತು ಗಡ್ಡ ಬಿಟ್ಟಿದ್ದ ಆಗಂತುಕ, ಡಿ2 ಕಂಪಾರ್ಟ್ಮೆಂಟ್ನಿಂದ ಡಿ1 ಕಂಪಾರ್ಟ್ಮೆಂಟ್ಗೆ ಬಂದು, ಈ ಕೃತ್ಯವೆಸಗಿದ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.</p>.<p><strong>ಇದನ್ನೂ ಓದಿ: </strong><a href="https://www.prajavani.net/india-news/two-year-old-among-three-dead-as-man-sets-co-passengers-ablaze-in-moving-train-in-kerala-1028609.html" itemprop="url" target="_blank">ಕೇರಳ | ರೈಲಿಗೆ ನುಗ್ಗಿ ಬೆಂಕಿ ಇಟ್ಟ ಆಗಂತುಕ: ಮೂವರು ಸಾವು, 9 ಮಂದಿಗೆ ಸುಟ್ಟ ಗಾಯ </a></p>.<p>ಘಟನೆ ನಡೆಯುತ್ತಿದ್ದಂತೆಯೇ, ಇತರ ಪ್ರಯಾಣಿಕರು ತುರ್ತು ನಿಲುಗಡೆ ಚೈನ್ ಎಳೆದು ರೈಲು ನಿಲ್ಲಿಸಿದ್ದಾರೆ. ದುಷ್ಕರ್ಮಿಯು, ತಕ್ಷಣವೇ ರೈಲಿನಿಂದ ಜಿಗಿದು ಕತ್ತಲಿನಲ್ಲಿ ನಾಪತ್ತೆಯಾಗಿದ್ದಾನೆ. ಆತ ರೈಲಿನಿಂದ ಜಿಗಿದ 50 ಮೀಟರ್ ದೂರದಲ್ಲಿ ಬೈಕ್ನಲ್ಲಿ ಪರಾರಿಯಾಗುತ್ತಿರುವುದು ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ.</p>.<p>ಬ್ಯಾಗ್ ಮತ್ತು ಸ್ವಿಚ್ ಆಫ್ ಆಗಿದ್ದ ಮೊಬೈಲ್ ಸ್ಥಳದಲ್ಲಿ ಸಿಕ್ಕಿವೆ. ಸಮೀಪದ ತಿರುವನಂತಪುರ ಹಾಗೂ ಕನ್ಯಾಕುಮಾರಿ ಕುರಿತು ಇಂಗ್ಲಿಷ್, ಹಿಂದಿಯಲ್ಲಿ ಬರೆಯಲಾಗಿರುವ ಕಾಗದ, ಒಂದು ಜೊತೆ ಬಟ್ಟೆ, ಕನ್ನಡಕ ಮತ್ತು ಪೆಟ್ರೋಲ್ ತುಂಬಿದ್ದ ಒಂದು ಬಾಟೆಲ್ ಬ್ಯಾಗ್ನಲ್ಲಿ ದೊರೆತಿವೆ.</p>.<p>ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಕೃತ್ಯವನ್ನು ಖಂಡಿಸಿದ್ದಾರೆ. ಪೊಲೀಸರು ಶಂಕಿತನನ್ನು ಬಂಧಿಸಲಿದ್ದಾರೆ ಎಂದಿರುವ ಅವರು, ಗಾಯಾಳುಗಳ ಚಿಕಿತ್ಸೆಯನ್ನು ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.</p>.<p>ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಅವರು, ಸಾರ್ವಜನಿಕ ವಾಹನಗಳಲ್ಲಿ ಸಂಚರಿಸುವವರಲ್ಲಿ ವಿಶ್ವಾಸ ಮೂಡಿಸಬೇಕಿದೆ. ಅದಕ್ಕಾಗಿ ಕೇಂದ್ರ ಮತ್ತು ರಾಜ್ಯದ ತನಿಖಾ ಸಂಸ್ಥೆಗಳು ಜಂಟಿಯಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.</p>.<p>ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್ ಅವರು, ಇದು ದೇಶ ವಿರೋಧಿ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>