<p><strong>ಇಂಫಾಲ್</strong>: ಭಾರತ– ಮ್ಯಾನ್ಮಾರ್ ಗಡಿಯಲ್ಲಿ ಅಳವಡಿಸುತ್ತಿರುವ ತಂತಿ ಬೇಲಿಗೆ 16 ಹಳ್ಳಿಗಳ ಕುಕಿ ಸಮುದಾಯದ ಮುಖಂಡರು ವಿರೋಧ ವ್ಯಕ್ತಪಡಿಸಿದ್ದು, ಸೂಕ್ತ ಸ್ಪಂದನ ಸಿಗುವವರೆಗೂ ‘ಅಸಹಕಾರ’ ನಿಲುವು ತಳೆಯುವುದಾಗಿ ಘೋಷಿಸಿದ್ದಾರೆ.</p>.<p>ಕುಕಿ–ಜೋ ಜನರ ರಾಜಕೀಯ ಬೇಡಿಕೆ ಈಡೇರಿಸುವ ತನಕ ಸಕಲ ಚಟುವಟಿಕೆ ಸ್ಥಗಿತಗೊಳಿಸಬೇಕು ಎಂದು ಗಡಿ ಗ್ರಾಮಗಳ ಕುಕಿ ಮುಖಂಡರು ಆಗ್ರಹಿಸಿದ್ದಾರೆ.</p>.<p>ಗಡಿಯ 16 ಕಿ.ಮೀ. ವ್ಯಾಪ್ತಿಯಲ್ಲಿ ನೆಲಸಿರುವ ಜನರು ಪರಸ್ಪರರ ಭೂಪ್ರದೇಶದೊಳಗೆ ಯಾವುದೇ ದಾಖಲೆಗಳಿಲ್ಲದೆ ಮುಕ್ತವಾಗಿ ಸಂಚರಿಸುವುದನ್ನು (ಎಫ್ಎಂಆರ್) ರದ್ದುಗೊಳಿಸುವ ಪ್ರಸ್ತಾವ ವಿರೋಧಿಸಿ ರ್ಯಾಲಿ ನಡೆಸಲಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳಿಗೂ ಮನವಿ ನೀಡಲಾಗಿದೆ ಎಂದು ಮುಖ್ಯಸ್ಥರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.</p>.<p>‘ಕುಕಿ ಜೋ ಜನರ ಹಿತದೃಷ್ಟಿಯಿಂದ ನಮ್ಮ ರಾಜಕೀಯ ಬೇಡಿಕೆ ಈಡೇರುವವರೆಗೆ ಮತ್ತು ರಾಜ್ಯವು ಸಹಜ ಸ್ಥಿತಿಗೆ ಮರಳುವ ತನಕ ಭೂಪರಿಹಾರ ಪಡೆಯಲ್ಲ. ಸರ್ಕಾರದೊಂದಿಗೆ ಮಾತುಕತೆ ನಡೆಸದೆ ಅಸಹಕಾರ ತೋರುತ್ತೇವೆ’ ಎಂದಿದೆ.</p>.<p>ಕುಕಿ ಸಂಘಟನೆಗಳು ಸಮುದಾಯಕ್ಕೆ ಪ್ರತ್ಯೇಕ ಆಡಳಿತಕ್ಕೆ ಒತ್ತಾಯಿಸುತ್ತಿವೆ. ಮೈತೇಯಿ ಸಮುದಾಯವು ಇದನ್ನು ತೀವ್ರವಾಗಿ ವಿರೋಧಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಂಫಾಲ್</strong>: ಭಾರತ– ಮ್ಯಾನ್ಮಾರ್ ಗಡಿಯಲ್ಲಿ ಅಳವಡಿಸುತ್ತಿರುವ ತಂತಿ ಬೇಲಿಗೆ 16 ಹಳ್ಳಿಗಳ ಕುಕಿ ಸಮುದಾಯದ ಮುಖಂಡರು ವಿರೋಧ ವ್ಯಕ್ತಪಡಿಸಿದ್ದು, ಸೂಕ್ತ ಸ್ಪಂದನ ಸಿಗುವವರೆಗೂ ‘ಅಸಹಕಾರ’ ನಿಲುವು ತಳೆಯುವುದಾಗಿ ಘೋಷಿಸಿದ್ದಾರೆ.</p>.<p>ಕುಕಿ–ಜೋ ಜನರ ರಾಜಕೀಯ ಬೇಡಿಕೆ ಈಡೇರಿಸುವ ತನಕ ಸಕಲ ಚಟುವಟಿಕೆ ಸ್ಥಗಿತಗೊಳಿಸಬೇಕು ಎಂದು ಗಡಿ ಗ್ರಾಮಗಳ ಕುಕಿ ಮುಖಂಡರು ಆಗ್ರಹಿಸಿದ್ದಾರೆ.</p>.<p>ಗಡಿಯ 16 ಕಿ.ಮೀ. ವ್ಯಾಪ್ತಿಯಲ್ಲಿ ನೆಲಸಿರುವ ಜನರು ಪರಸ್ಪರರ ಭೂಪ್ರದೇಶದೊಳಗೆ ಯಾವುದೇ ದಾಖಲೆಗಳಿಲ್ಲದೆ ಮುಕ್ತವಾಗಿ ಸಂಚರಿಸುವುದನ್ನು (ಎಫ್ಎಂಆರ್) ರದ್ದುಗೊಳಿಸುವ ಪ್ರಸ್ತಾವ ವಿರೋಧಿಸಿ ರ್ಯಾಲಿ ನಡೆಸಲಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳಿಗೂ ಮನವಿ ನೀಡಲಾಗಿದೆ ಎಂದು ಮುಖ್ಯಸ್ಥರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.</p>.<p>‘ಕುಕಿ ಜೋ ಜನರ ಹಿತದೃಷ್ಟಿಯಿಂದ ನಮ್ಮ ರಾಜಕೀಯ ಬೇಡಿಕೆ ಈಡೇರುವವರೆಗೆ ಮತ್ತು ರಾಜ್ಯವು ಸಹಜ ಸ್ಥಿತಿಗೆ ಮರಳುವ ತನಕ ಭೂಪರಿಹಾರ ಪಡೆಯಲ್ಲ. ಸರ್ಕಾರದೊಂದಿಗೆ ಮಾತುಕತೆ ನಡೆಸದೆ ಅಸಹಕಾರ ತೋರುತ್ತೇವೆ’ ಎಂದಿದೆ.</p>.<p>ಕುಕಿ ಸಂಘಟನೆಗಳು ಸಮುದಾಯಕ್ಕೆ ಪ್ರತ್ಯೇಕ ಆಡಳಿತಕ್ಕೆ ಒತ್ತಾಯಿಸುತ್ತಿವೆ. ಮೈತೇಯಿ ಸಮುದಾಯವು ಇದನ್ನು ತೀವ್ರವಾಗಿ ವಿರೋಧಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>