ಎರಡು ತಿಂಗಳಲ್ಲಿ ಹಿಂಸಾಚಾರದಿಂದಾಗಿ 170 ಮಂದಿ ಮೃತಪಟ್ಟಿರುವ ಈಶಾನ್ಯ ರಾಜ್ಯದಲ್ಲಿ ಶಾಂತಿ ಸ್ಥಾಪನೆಗೆ ಅಲ್ಲಿನ ಮಣಿಪುರ ಸರ್ಕಾರಕ್ಕೆ ನೆರವಾಗುವಂತೆ ನಿವೃತ್ತ ಕರ್ನಲ್ ನೆಕ್ಟರ್ ಸಂಜೆನ್ಬಮ್ ಅವರನ್ನು ಹಿರಿಯ ವರಿಷ್ಠಾಧಿಕಾರಿಯನ್ನಾಗಿ ಐದು ವರ್ಷಗಳ ಅವಧಿಗೆ ನೇಮಕ ಮಾಡಿಕೊಳ್ಳಲಾಗಿದೆ. ಇವರು ಮಣಿಪುರ ಪೊಲೀಸ್ ಇಲಾಖೆ ಅಡಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.