<p><strong>ಲಖನೌ:</strong> ಮುಸ್ಲಿಂ ಬಾಹುಳ್ಯದ ಪ್ರದೇಶಗಳು ಸೇರಿದಂತೆ ವಾರಾಣಸಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹಲವು ಸ್ಥಳಗಳ ಹೆಸರನ್ನು ಬದಲಾಯಿಸಲು ನಿರ್ಧರಿಸಲಾಗಿದೆ.</p> <p>ಮೊಘಲ್ ದೊರೆ ಔರಂಗಜೇಬ್ ಒಳಗೊಂಡಂತೆ ಮುಸ್ಲಿಮ್ ದೊರೆಗಳ ಹೆಸರಿನಲ್ಲಿರುವ ಪ್ರದೇಶಗಳಿಗೆ ಹಿಂದೂ ದೇವರುಗಳ ಮತ್ತು ಸಂತರ ಹೆಸರುಗಳನ್ನು ಇಡಲಾಗುವುದು. </p> <p>ಪಟ್ಟಣದ ಸುಮಾರು 50 ಸ್ಥಳಗಳ ಹೆಸರುಗಳನ್ನು ಬದಲಾಯಿಸಲು ನಿರ್ಧರಿಸಲಾಗಿದ್ದು, ಈ ಕುರಿತು ವಾರಾಣಸಿ ನಗರಸಭೆಗೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.</p> <p>ಮರುನಾಮಕರಣಗೊಳ್ಳಲಿರುವ ಪ್ರದೇಶಗಳಲ್ಲಿ ಔರಂಗಾಬಾದ್ (ಮೊಘಲ್ ದೊರೆ ಔರಂಗಜೇಬ್ನ ಹೆಸರು ಇಡಲಾಗಿದೆ) ಮತ್ತು ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಮದನಪುರ, ಖಾಲಿಸ್ಪುರ ಹಾಗೂ ಕಝಾಕ್ಪುರ ಪ್ರಮುಖವಾದವು.</p> <p>ಔರಂಗಾಬಾದ್ಗೆ ನಾರಾಯಣ ಧಾಮ ಎಂಬ ಹೆಸರಿಡಲು ನಿರ್ಧರಿಸಲಾಗಿದೆ. ಖಾಲಿಸ್ಪುರಕ್ಕೆ ಬ್ರಹ್ಮತೀರ್ಥ, ಕಝಾಕ್ಪುರಕ್ಕೆ ಅನರಕ್ ತೀರ್ಥ ಮತ್ತು ಮದನಪುರಕ್ಕೆ ಪುಷ್ಪದಂತೇಶ್ವರ ಎಂದು ಮರುನಾಮಕರಣ ಮಾಡುವ ಪ್ರಸ್ತಾವ ಸಲ್ಲಿಸಲಾಗಿದೆ.</p> <p>ವಾರಾಣಸಿ ಕ್ಷೇತ್ರದ ಈ ಪ್ರದೇಶಗಳ ಮರುನಾಮಕರಣದ ಪ್ರಸ್ತಾಪವನ್ನು ಹಿಂದೂಪರ ಸಂಘಟನೆಗಳು ಸ್ವಾಗತಿಸಿವೆ. ಆದರೆ ವಿರೋಧ ಪಕ್ಷಗಳು ಈ ನಿರ್ಧಾರವನ್ನು ಟೀಕಿಸಿದ್ದು, ‘ಇದು ರಾಜ್ಯದಲ್ಲಿ ತನ್ನ ಸರ್ಕಾರದ ವೈಫಲ್ಯಗಳಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಬಿಜೆಪಿ ಮಾಡಿದ ತಂತ್ರ’ ಎಂದು ಹೇಳಿವೆ. </p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ:</strong> ಮುಸ್ಲಿಂ ಬಾಹುಳ್ಯದ ಪ್ರದೇಶಗಳು ಸೇರಿದಂತೆ ವಾರಾಣಸಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹಲವು ಸ್ಥಳಗಳ ಹೆಸರನ್ನು ಬದಲಾಯಿಸಲು ನಿರ್ಧರಿಸಲಾಗಿದೆ.</p> <p>ಮೊಘಲ್ ದೊರೆ ಔರಂಗಜೇಬ್ ಒಳಗೊಂಡಂತೆ ಮುಸ್ಲಿಮ್ ದೊರೆಗಳ ಹೆಸರಿನಲ್ಲಿರುವ ಪ್ರದೇಶಗಳಿಗೆ ಹಿಂದೂ ದೇವರುಗಳ ಮತ್ತು ಸಂತರ ಹೆಸರುಗಳನ್ನು ಇಡಲಾಗುವುದು. </p> <p>ಪಟ್ಟಣದ ಸುಮಾರು 50 ಸ್ಥಳಗಳ ಹೆಸರುಗಳನ್ನು ಬದಲಾಯಿಸಲು ನಿರ್ಧರಿಸಲಾಗಿದ್ದು, ಈ ಕುರಿತು ವಾರಾಣಸಿ ನಗರಸಭೆಗೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.</p> <p>ಮರುನಾಮಕರಣಗೊಳ್ಳಲಿರುವ ಪ್ರದೇಶಗಳಲ್ಲಿ ಔರಂಗಾಬಾದ್ (ಮೊಘಲ್ ದೊರೆ ಔರಂಗಜೇಬ್ನ ಹೆಸರು ಇಡಲಾಗಿದೆ) ಮತ್ತು ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಮದನಪುರ, ಖಾಲಿಸ್ಪುರ ಹಾಗೂ ಕಝಾಕ್ಪುರ ಪ್ರಮುಖವಾದವು.</p> <p>ಔರಂಗಾಬಾದ್ಗೆ ನಾರಾಯಣ ಧಾಮ ಎಂಬ ಹೆಸರಿಡಲು ನಿರ್ಧರಿಸಲಾಗಿದೆ. ಖಾಲಿಸ್ಪುರಕ್ಕೆ ಬ್ರಹ್ಮತೀರ್ಥ, ಕಝಾಕ್ಪುರಕ್ಕೆ ಅನರಕ್ ತೀರ್ಥ ಮತ್ತು ಮದನಪುರಕ್ಕೆ ಪುಷ್ಪದಂತೇಶ್ವರ ಎಂದು ಮರುನಾಮಕರಣ ಮಾಡುವ ಪ್ರಸ್ತಾವ ಸಲ್ಲಿಸಲಾಗಿದೆ.</p> <p>ವಾರಾಣಸಿ ಕ್ಷೇತ್ರದ ಈ ಪ್ರದೇಶಗಳ ಮರುನಾಮಕರಣದ ಪ್ರಸ್ತಾಪವನ್ನು ಹಿಂದೂಪರ ಸಂಘಟನೆಗಳು ಸ್ವಾಗತಿಸಿವೆ. ಆದರೆ ವಿರೋಧ ಪಕ್ಷಗಳು ಈ ನಿರ್ಧಾರವನ್ನು ಟೀಕಿಸಿದ್ದು, ‘ಇದು ರಾಜ್ಯದಲ್ಲಿ ತನ್ನ ಸರ್ಕಾರದ ವೈಫಲ್ಯಗಳಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಬಿಜೆಪಿ ಮಾಡಿದ ತಂತ್ರ’ ಎಂದು ಹೇಳಿವೆ. </p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>