<p><strong>ಮುಂಬೈ</strong>: ‘ದೇಶದ ಎಲ್ಲ ಭಾಗೀದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ರೂಪಿಸಬೇಕು. ಹಾಗೆಯೇ, ಯುಸಿಸಿ ಜನರಲ್ಲಿ ಒಡಕು ಮೂಡಿಸುವಂತಿರಬಾರದು’ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಪ್ರತಿಪಾದಿಸಿದರು.</p>.<p>ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್ಎಸ್ಎಸ್) ಶತಮಾನೋತ್ಸವದ ಅಂಗವಾಗಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಉತ್ತರಾಖಂಡದಲ್ಲಿ ಯುಸಿಸಿ ಕುರಿತಂತೆ ಮೂರು ಲಕ್ಷ ಸಲಹೆ–ಸೂಚನೆಗಳು ಬಂದಿದ್ದವು. ಅವುಗಳ ಕೂಲಂಕಷ ಪರಿಶೀಲನೆ ನಂತರ, ಯುಸಿಸಿ ರೂಪಿಸಿ, ಜಾರಿಗೊಳಿಸಲಾಗಿದೆ’ ಎಂದರು.</p>.<p>‘ಸಂಘದ ನೇತೃತ್ವ ವಹಿಸುವ ವ್ಯಕ್ತಿಯು ಯಾವುದೇ ಜಾತಿಗೆ ಸೇರಿರಲಿ, ಆತ ಯಾವಾಗಲೂ ಹಿಂದೂ ಆಗಿರುತ್ತಾನೆ. ಸಂಘದ ಈ ಅತ್ಯುನ್ನತ ಹುದ್ದೆಗೆ ಅರ್ಹರನ್ನೇ ಆಯ್ಕೆ ಮಾಡಲಾಗುತ್ತದೆಯಷ್ಟೆ’ ಎಂದು ಹೇಳಿದರು. </p>.<p>‘ಸಂಘದ ಮುಖ್ಯಸ್ಥರನ್ನಾಗಿ ಎಸ್ಸಿ, ಎಸ್ಟಿ ಸಮುದಾಯಕ್ಕೆ ಸೇರಿದವರನ್ನು ನೇಮಕ ಮಾಡಲಾಗುತ್ತದೆಯೇ’ ಎಂಬ ಪ್ರಶ್ನೆಗೆ ನೇರವಾಗಿ ಉತ್ತರ ನೀಡದ ಭಾಗವತ್, ‘ವಿಭಾಗೀಯ ಮತ್ತು ಪ್ರಾದೇಶಿಕ ಮುಖಂಡರು ಚರ್ಚಿಸಿ, ಮುಖ್ಯಸ್ಥರನ್ನು ಆಯ್ಕೆ ಮಾಡುತ್ತಾರೆ’ ಎಂದು ಪ್ರತಿಕ್ರಿಯಿಸಿದರು.</p>.<p>ಚಿತ್ರ ನಟಿಯರಾದ ರವೀನಾ ಟಂಡನ್, ಅನನ್ಯಾ ಪಾಂಡೆ, ನಟ ವಿಕಿ ಕೌಶಲ್, ನಿರ್ದೇಶಕರಾದ ಕರಣ್ ಜೋಹರ್, ಮಧುರ್ ಭಂಡಾರ್ಕರ್, ರಮೇಶ್ ತೌರಾನಿ, ಸಂಗೀತಗಾರ ಪಂಡಿತ ಹೃದಯನಾಥ ಮಂಗೇಶ್ಕರ್ ಹಾಗೂ ಇತರರು ಪಾಲ್ಗೊಂಡಿದ್ದರು.</p>.<div><blockquote>ನನಗೆ ವಯಸ್ಸಾಗಿದ್ದರೂ ಸಂಘದ ಸೂಚನೆಯಂತೆ ಸಂಘಟನೆಯನ್ನು ಮುನ್ನಡೆಸುತ್ತಿರುವೆ. ಒಂದು ವೇಳೆ ಸಂಘವು ಸೂಚಿಸಿದಲ್ಲಿ ನಾನು ಈ ಹುದ್ದೆ ತ್ಯಜಿಸಲು ಸಿದ್ಧ </blockquote><span class="attribution">ಮೋಹನ್ ಭಾಗವತ್, ಆರ್ಎಸ್ಎಸ್ ಮುಖ್ಯಸ್ಥ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ‘ದೇಶದ ಎಲ್ಲ ಭಾಗೀದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ರೂಪಿಸಬೇಕು. ಹಾಗೆಯೇ, ಯುಸಿಸಿ ಜನರಲ್ಲಿ ಒಡಕು ಮೂಡಿಸುವಂತಿರಬಾರದು’ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಪ್ರತಿಪಾದಿಸಿದರು.</p>.<p>ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್ಎಸ್ಎಸ್) ಶತಮಾನೋತ್ಸವದ ಅಂಗವಾಗಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಉತ್ತರಾಖಂಡದಲ್ಲಿ ಯುಸಿಸಿ ಕುರಿತಂತೆ ಮೂರು ಲಕ್ಷ ಸಲಹೆ–ಸೂಚನೆಗಳು ಬಂದಿದ್ದವು. ಅವುಗಳ ಕೂಲಂಕಷ ಪರಿಶೀಲನೆ ನಂತರ, ಯುಸಿಸಿ ರೂಪಿಸಿ, ಜಾರಿಗೊಳಿಸಲಾಗಿದೆ’ ಎಂದರು.</p>.<p>‘ಸಂಘದ ನೇತೃತ್ವ ವಹಿಸುವ ವ್ಯಕ್ತಿಯು ಯಾವುದೇ ಜಾತಿಗೆ ಸೇರಿರಲಿ, ಆತ ಯಾವಾಗಲೂ ಹಿಂದೂ ಆಗಿರುತ್ತಾನೆ. ಸಂಘದ ಈ ಅತ್ಯುನ್ನತ ಹುದ್ದೆಗೆ ಅರ್ಹರನ್ನೇ ಆಯ್ಕೆ ಮಾಡಲಾಗುತ್ತದೆಯಷ್ಟೆ’ ಎಂದು ಹೇಳಿದರು. </p>.<p>‘ಸಂಘದ ಮುಖ್ಯಸ್ಥರನ್ನಾಗಿ ಎಸ್ಸಿ, ಎಸ್ಟಿ ಸಮುದಾಯಕ್ಕೆ ಸೇರಿದವರನ್ನು ನೇಮಕ ಮಾಡಲಾಗುತ್ತದೆಯೇ’ ಎಂಬ ಪ್ರಶ್ನೆಗೆ ನೇರವಾಗಿ ಉತ್ತರ ನೀಡದ ಭಾಗವತ್, ‘ವಿಭಾಗೀಯ ಮತ್ತು ಪ್ರಾದೇಶಿಕ ಮುಖಂಡರು ಚರ್ಚಿಸಿ, ಮುಖ್ಯಸ್ಥರನ್ನು ಆಯ್ಕೆ ಮಾಡುತ್ತಾರೆ’ ಎಂದು ಪ್ರತಿಕ್ರಿಯಿಸಿದರು.</p>.<p>ಚಿತ್ರ ನಟಿಯರಾದ ರವೀನಾ ಟಂಡನ್, ಅನನ್ಯಾ ಪಾಂಡೆ, ನಟ ವಿಕಿ ಕೌಶಲ್, ನಿರ್ದೇಶಕರಾದ ಕರಣ್ ಜೋಹರ್, ಮಧುರ್ ಭಂಡಾರ್ಕರ್, ರಮೇಶ್ ತೌರಾನಿ, ಸಂಗೀತಗಾರ ಪಂಡಿತ ಹೃದಯನಾಥ ಮಂಗೇಶ್ಕರ್ ಹಾಗೂ ಇತರರು ಪಾಲ್ಗೊಂಡಿದ್ದರು.</p>.<div><blockquote>ನನಗೆ ವಯಸ್ಸಾಗಿದ್ದರೂ ಸಂಘದ ಸೂಚನೆಯಂತೆ ಸಂಘಟನೆಯನ್ನು ಮುನ್ನಡೆಸುತ್ತಿರುವೆ. ಒಂದು ವೇಳೆ ಸಂಘವು ಸೂಚಿಸಿದಲ್ಲಿ ನಾನು ಈ ಹುದ್ದೆ ತ್ಯಜಿಸಲು ಸಿದ್ಧ </blockquote><span class="attribution">ಮೋಹನ್ ಭಾಗವತ್, ಆರ್ಎಸ್ಎಸ್ ಮುಖ್ಯಸ್ಥ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>