<p><strong>ತಿರುವನಂತಪುರ:</strong> ಮುತ್ತೂಟ್ ಫೈನಾನ್ಸ್ನ ವ್ಯವಸ್ಥಾಪಕ ನಿರ್ದೇಶಕ ಜಾರ್ಜ್ ಅಲೆಕ್ಸಾಂಡರ್ ಕಾರಿನ ಮೇಲೆ ಕಲ್ಲು ತೂರಾಟ ನಡೆದಿದ್ದು, ಅವರ ತಲೆಗೆ ಗಾಯಗಳಾಗಿವೆ. ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದ್ದು ಆರೋಗ್ಯ ಸ್ಥಿರವಾಗಿದೆ.</p>.<p>ಜಾರ್ಜ್ ಅವರು ಮುಖ್ಯ ಕಚೇರಿಯೊಳಗೆ ಪೊಲೀಸರ ಕಾವಲಿನಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ಒಬ್ಬರು ಜಾರ್ಜ್ ಕಾರಿನ ಮೇಲೆ ಕಲ್ಲು ತೂರಿದ್ದಾರೆ. ಅಹಿತಕರ ಘಟನೆ ನಡೆಯ<br />ಬಹುದು ಎಂಬ ಮುನ್ನೆಚ್ಚರಿಕೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.</p>.<p>ಸಿಐಟಿಯು ಕಾರ್ಮಿಕ ಸಂಘಟನೆಯ ಗೂಂಡಾಗಳು ಈ ಕೃತ್ಯ ಎಸಗಿದ್ದಾರೆ ಎಂದು ಸಂಸ್ಥೆಯ ಆಡಳಿತ ಮಂಡಳಿ ಆರೋಪಿಸಿದೆ. ಆದರೆ, ಸಿಐಟಿಯು ಕಾರ್ಮಿಕ ಸಂಘಟನೆ ಈ ಆರೋಪವನ್ನು ತಳ್ಳಿಹಾಕಿದೆ.</p>.<p class="Subhead">ನೌಕರರ ಮುಷ್ಕರ: ಸಂಸ್ಥೆಯ ಹಲವು ನೌಕರರಿಗೆ ಕೆಲಸದಿಂದ ವಜಾ ಮಾಡುವ ನೋಟಿಸ್ ನೀಡಲಾಗಿತ್ತು. ಈ ಕುರಿತು ಕಳೆದ ಒಂದು ವಾರದಿಂದ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಈ ಮುಷ್ಕರಕ್ಕೆ ಸಿಐಟಿಯು ಕಾರ್ಮಿಕ ಸಂಘಟನೆ ಬೆಂಬಲ ನೀಡಿದೆ.</p>.<p>ಕಳೆದ ಅಕ್ಟೊಬರ್ನಲ್ಲೂ ಸಂಸ್ಥೆಯ ನೌಕರರು 52 ದಿನಗಳ ಮುಷ್ಕರ ಹೂಡಿ<br />ದ್ದರು. ಆಗ ಸರ್ಕಾರದ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನೌಕರರಿಗೆ ಹಲವು ಭರವಸೆಗಳನ್ನು ಸಂಸ್ಥೆ ನೀಡಿತ್ತು.</p>.<p>***</p>.<p>ಆಡಳಿತ ಮಂಡಳಿಯು ನೌಕರರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದೆ. ನೌಕರರ ಜೆತೆ ಮಾತುಕತೆ ನಡೆಸುವ ಯೋಚನೆಯನ್ನೂ ಸಂಸ್ಥೆ ಮಾಡುತ್ತಿಲ್ಲ<br /><strong>–ಟಿ.ಪಿ. ರಾಮಕೃಷ್ಣನ್, ಕೇರಳದ ಕಾರ್ಮಿಕ ಸಚಿವ </strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ:</strong> ಮುತ್ತೂಟ್ ಫೈನಾನ್ಸ್ನ ವ್ಯವಸ್ಥಾಪಕ ನಿರ್ದೇಶಕ ಜಾರ್ಜ್ ಅಲೆಕ್ಸಾಂಡರ್ ಕಾರಿನ ಮೇಲೆ ಕಲ್ಲು ತೂರಾಟ ನಡೆದಿದ್ದು, ಅವರ ತಲೆಗೆ ಗಾಯಗಳಾಗಿವೆ. ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದ್ದು ಆರೋಗ್ಯ ಸ್ಥಿರವಾಗಿದೆ.</p>.<p>ಜಾರ್ಜ್ ಅವರು ಮುಖ್ಯ ಕಚೇರಿಯೊಳಗೆ ಪೊಲೀಸರ ಕಾವಲಿನಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ಒಬ್ಬರು ಜಾರ್ಜ್ ಕಾರಿನ ಮೇಲೆ ಕಲ್ಲು ತೂರಿದ್ದಾರೆ. ಅಹಿತಕರ ಘಟನೆ ನಡೆಯ<br />ಬಹುದು ಎಂಬ ಮುನ್ನೆಚ್ಚರಿಕೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.</p>.<p>ಸಿಐಟಿಯು ಕಾರ್ಮಿಕ ಸಂಘಟನೆಯ ಗೂಂಡಾಗಳು ಈ ಕೃತ್ಯ ಎಸಗಿದ್ದಾರೆ ಎಂದು ಸಂಸ್ಥೆಯ ಆಡಳಿತ ಮಂಡಳಿ ಆರೋಪಿಸಿದೆ. ಆದರೆ, ಸಿಐಟಿಯು ಕಾರ್ಮಿಕ ಸಂಘಟನೆ ಈ ಆರೋಪವನ್ನು ತಳ್ಳಿಹಾಕಿದೆ.</p>.<p class="Subhead">ನೌಕರರ ಮುಷ್ಕರ: ಸಂಸ್ಥೆಯ ಹಲವು ನೌಕರರಿಗೆ ಕೆಲಸದಿಂದ ವಜಾ ಮಾಡುವ ನೋಟಿಸ್ ನೀಡಲಾಗಿತ್ತು. ಈ ಕುರಿತು ಕಳೆದ ಒಂದು ವಾರದಿಂದ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಈ ಮುಷ್ಕರಕ್ಕೆ ಸಿಐಟಿಯು ಕಾರ್ಮಿಕ ಸಂಘಟನೆ ಬೆಂಬಲ ನೀಡಿದೆ.</p>.<p>ಕಳೆದ ಅಕ್ಟೊಬರ್ನಲ್ಲೂ ಸಂಸ್ಥೆಯ ನೌಕರರು 52 ದಿನಗಳ ಮುಷ್ಕರ ಹೂಡಿ<br />ದ್ದರು. ಆಗ ಸರ್ಕಾರದ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನೌಕರರಿಗೆ ಹಲವು ಭರವಸೆಗಳನ್ನು ಸಂಸ್ಥೆ ನೀಡಿತ್ತು.</p>.<p>***</p>.<p>ಆಡಳಿತ ಮಂಡಳಿಯು ನೌಕರರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದೆ. ನೌಕರರ ಜೆತೆ ಮಾತುಕತೆ ನಡೆಸುವ ಯೋಚನೆಯನ್ನೂ ಸಂಸ್ಥೆ ಮಾಡುತ್ತಿಲ್ಲ<br /><strong>–ಟಿ.ಪಿ. ರಾಮಕೃಷ್ಣನ್, ಕೇರಳದ ಕಾರ್ಮಿಕ ಸಚಿವ </strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>