<p><strong>ಐಜ್ವಾಲ್:</strong> ಮಿಜೋರಾಂ ಲೆಂಗ್ಪುಯಿ ಬಳಿ ಮ್ಯಾನ್ಮಾರ್ನ ಸೇನಾ ವಿಮಾನ ಮಂಗಳವಾರ ಬೆಳಿಗ್ಗೆ ಪತನವಾಗಿದ್ದು ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p><p>ಬುಡಕಟ್ಟು ಸಮುದಾಯದ ಬಂಡುಕೋರರ ದಾಳಿಯಿಂದ ತಪ್ಪಿಸಿಕೊಳ್ಳಲು ಮಿಜೋರಾಂ ಗಡಿಯೊಳಗೆ ಬಂದಿದ್ದ ಮ್ಯಾನ್ಮಾರ್ನ ಯೋಧರನ್ನು ಸ್ವದೇಶಕ್ಕೆ ವಾಪಸ್ಸು ಕರೆದೊಯ್ಯಲು ಈ ವಿಮಾನ ಬಂದಿತ್ತು. ಲೆಂಗ್ಪುಯಿ ವಿಮಾನ ನಿಲ್ದಾಣದಲ್ಲಿ ನಿಲುಗಡೆ ಮಾಡುವ ವೇಳೆ ಮುಗ್ಗರಿಸಿದೆ.</p><p>ಇದು ಚಿಕ್ಕಗಾತ್ರದ ವಿಮಾನವಾಗಿದ್ದು, ಪೈಲಟ್ ಸೇರಿ 14 ಮಂದಿ ಇದರಲ್ಲಿ ಇದ್ದರು. ಗಾಯಗೊಂಡ 8 ಮಂದಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಅಧಿಕಾರಿಗಳು ತಿಳಿಸಿದರು. ಆದರೆ, ಘಟನೆ ಹೇಗೆ ನಡೆಯಿತು ಎಂಬ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಅವರು ನಿರಾಕರಿಸಿದರು.</p><p>ಅಧಿಕಾರಿಗಳು ಘಟನೆಯ ಚಿತ್ರಗಳನ್ನು ಬಿಡುಗಡೆ ಮಾಡಿದ್ದು, ವಿಮಾನವು ಕಾಡಿನಲ್ಲಿ ಬಿದ್ದಿರುವುದು ಮತ್ತು ಎರಡು ಭಾಗವಾಗಿರುವುದು ಕಂಡುಬರುತ್ತದೆ.</p><p><strong>ತನಿಖೆಗೆ ಆದೇಶ:</strong> ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ಘಟನೆ ಕುರಿತು ತನಿಖೆಗೆ ಅದೇಶಿಸಿದೆ. ಲೆಂಗ್ಪುಯಿ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇಲ್ಲಿ ನಿಲುಗಡೆ ಮಾಡಬೇಕಿದ್ದ ವಿಮಾನಗಳ ಮಾರ್ಗ ಬದಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.</p><p>ಬಂಡುಕೋರರ ಗುಂಪೊಂದು ಅಲ್ಲಿಯ ಸೇನೆಯ ಮೇಲೆ ಆಕ್ರಮಣ ನಡೆಸಿತ್ತು. ಹೀಗಾಗಿ ಒಟ್ಟು 276 ಯೋಧರು ಕಳೆದವಾರ ಮಿಜೋರಾಂ ಗಡಿ ಪ್ರವೇಶಿಸಿದ್ದರು. ಅವರಲ್ಲಿ 184 ಯೋಧರನ್ನು ಸೋಮವಾರ ವಾಪಸ್ಸು ಕಳಿಸಲಾಗಿತ್ತು. ಇನ್ನುಳಿದ 92 ಯೋಧರನ್ನು ಮಂಗಳವಾರ ವಾಪಸ್ಸು ಕಳಿಸಬೇಕಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಐಜ್ವಾಲ್:</strong> ಮಿಜೋರಾಂ ಲೆಂಗ್ಪುಯಿ ಬಳಿ ಮ್ಯಾನ್ಮಾರ್ನ ಸೇನಾ ವಿಮಾನ ಮಂಗಳವಾರ ಬೆಳಿಗ್ಗೆ ಪತನವಾಗಿದ್ದು ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p><p>ಬುಡಕಟ್ಟು ಸಮುದಾಯದ ಬಂಡುಕೋರರ ದಾಳಿಯಿಂದ ತಪ್ಪಿಸಿಕೊಳ್ಳಲು ಮಿಜೋರಾಂ ಗಡಿಯೊಳಗೆ ಬಂದಿದ್ದ ಮ್ಯಾನ್ಮಾರ್ನ ಯೋಧರನ್ನು ಸ್ವದೇಶಕ್ಕೆ ವಾಪಸ್ಸು ಕರೆದೊಯ್ಯಲು ಈ ವಿಮಾನ ಬಂದಿತ್ತು. ಲೆಂಗ್ಪುಯಿ ವಿಮಾನ ನಿಲ್ದಾಣದಲ್ಲಿ ನಿಲುಗಡೆ ಮಾಡುವ ವೇಳೆ ಮುಗ್ಗರಿಸಿದೆ.</p><p>ಇದು ಚಿಕ್ಕಗಾತ್ರದ ವಿಮಾನವಾಗಿದ್ದು, ಪೈಲಟ್ ಸೇರಿ 14 ಮಂದಿ ಇದರಲ್ಲಿ ಇದ್ದರು. ಗಾಯಗೊಂಡ 8 ಮಂದಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಅಧಿಕಾರಿಗಳು ತಿಳಿಸಿದರು. ಆದರೆ, ಘಟನೆ ಹೇಗೆ ನಡೆಯಿತು ಎಂಬ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಅವರು ನಿರಾಕರಿಸಿದರು.</p><p>ಅಧಿಕಾರಿಗಳು ಘಟನೆಯ ಚಿತ್ರಗಳನ್ನು ಬಿಡುಗಡೆ ಮಾಡಿದ್ದು, ವಿಮಾನವು ಕಾಡಿನಲ್ಲಿ ಬಿದ್ದಿರುವುದು ಮತ್ತು ಎರಡು ಭಾಗವಾಗಿರುವುದು ಕಂಡುಬರುತ್ತದೆ.</p><p><strong>ತನಿಖೆಗೆ ಆದೇಶ:</strong> ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ಘಟನೆ ಕುರಿತು ತನಿಖೆಗೆ ಅದೇಶಿಸಿದೆ. ಲೆಂಗ್ಪುಯಿ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇಲ್ಲಿ ನಿಲುಗಡೆ ಮಾಡಬೇಕಿದ್ದ ವಿಮಾನಗಳ ಮಾರ್ಗ ಬದಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.</p><p>ಬಂಡುಕೋರರ ಗುಂಪೊಂದು ಅಲ್ಲಿಯ ಸೇನೆಯ ಮೇಲೆ ಆಕ್ರಮಣ ನಡೆಸಿತ್ತು. ಹೀಗಾಗಿ ಒಟ್ಟು 276 ಯೋಧರು ಕಳೆದವಾರ ಮಿಜೋರಾಂ ಗಡಿ ಪ್ರವೇಶಿಸಿದ್ದರು. ಅವರಲ್ಲಿ 184 ಯೋಧರನ್ನು ಸೋಮವಾರ ವಾಪಸ್ಸು ಕಳಿಸಲಾಗಿತ್ತು. ಇನ್ನುಳಿದ 92 ಯೋಧರನ್ನು ಮಂಗಳವಾರ ವಾಪಸ್ಸು ಕಳಿಸಬೇಕಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>