<p><strong>ಕೊರಬಾ</strong>: ಐಸ್ಕ್ರೀಮ್ ಕಾರ್ಖಾನೆಯಲ್ಲಿ ಕಳ್ಳತನ ಮಾಡಿದ್ದಾರೆಂಬ ಶಂಕೆಯ ಮೇರೆಗೆ ಇಬ್ಬರು ಕಾರ್ಮಿಕರಿಗೆ ವಿದ್ಯುತ್ ಶಾಕ್ ನೀಡಲಾಗಿದೆ. ಅಲ್ಲದೆ ಬೆರಳಿನ ಉಗುರುಗಳನ್ನು ಕಿತ್ತು, ಚಿತ್ರಹಿಂಸೆ ನೀಡಲಾಗಿದೆ.</p>.<p>ಛತ್ತೀಸಗಢದ ಕೊರಬಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. </p>.<p>ಈ ಬಗ್ಗೆ ಮಾತನಾಡಿದ ಪೊಲೀಸ್ ಅಧಿಕಾರಿಯೊಬ್ಬರು, ಚಿತ್ರಹಿಂಸೆಗೆ ಒಳಗಾದ ಇಬ್ಬರು ಕಾರ್ಮಿಕರು ತಪ್ಪಿಸಿಕೊಂಡು ಹುಟ್ಟೂರು ಭಿಲ್ವಾರಕ್ಕೆ ಹೋಗಿ, ಗುಲಾಬ್ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ‘ಶೂನ್ಯ’ ಎಫ್ಐಆರ್ (ತಮ್ಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯದ ಘಟನೆಯ ಕುರಿತು ಎಫ್ಐಆರ್ ದಾಖಲಿಸಿಕೊಳ್ಳುವುದು) ದಾಖಲಿಸಿಕೊಂಡ ರಾಜಸ್ಥಾನ ಪೊಲೀಸರು, ಪ್ರಕರಣವನ್ನು ಕೊರಬಾ ಪೊಲೀಸ್ ಠಾಣೆಗೆ ರವಾನಿಸಿದ್ದಾರೆ ಎಂದು ಮಾಹಿತಿ ನೀಡಿದರು. </p>.<p>ರಾಜಸ್ಥಾನದ ಭಿಲ್ವಾರ ಜಿಲ್ಲೆಯ ಅಭಿಷೇಕ್ ಭಾಂಬಿ ಮತ್ತು ವಿನೋದ್ ಭಾಂಬಿ ಅವರು ಛತ್ತೀಸಗಢದ ಖಾಪ್ರಭಟ್ಟಿ ಎಂಬಲ್ಲಿರುವ ಐಸ್ಕ್ರೀಮ್ ಕಾರ್ಖಾನೆಯಲ್ಲಿ ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಏಪ್ರಿಲ್ 14ರಂದು ಈ ಇಬ್ಬರೂ ಕಾರ್ಮಿಕರು ತಮ್ಮ ಕಾರ್ಖಾನೆಯಲ್ಲಿ ಕಳವು ಮಾಡಿದ್ದಾರೆ ಎಂದು ಕಾರ್ಖಾನೆ ಮಾಲೀಕ ಛೋಟು ಗುರ್ಜರ್ ಮತ್ತು ಆತನ ಸಹವರ್ತಿ ಮುಕೇಶ್ ಶರ್ಮಾ ಆರೋಪಿಸಿದ್ದರು. ಹೀಗಾಗಿ, ಇಬ್ಬರು ಕಾರ್ಮಿಕರ ಬಟ್ಟೆಗಳನ್ನು ಬಿಚ್ಚಿಸಿ, ಚಿತ್ರಹಿಂಸೆ ನೀಡಲಾಗಿದೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. </p>.<p>ಈ ಬಗ್ಗೆ ಪ್ರತಿಕ್ರಿಯಿಸಿದ ಅಭಿಷೇಕ್ ಭಾಂಬಿ, ‘ವಾಹನದ ಇಎಂಐ ಪಾವತಿಸಲು ಮಾಲೀಕರ ಬಳಿ ₹20,000 ಮುಂಗಡ ಹಣ ಕೇಳಿದ್ದೆ. ಅವರು ನಿರಾಕರಿಸಿದ ಕಾರಣ ಕೆಲಸ ಬಿಡಲು ಮುಂದಾಗಿದ್ದೆ. ಇದರಿಂದ ಆಕ್ರೋಶಗೊಂಡಿದ್ದ ಮಾಲೀಕರು ಈ ಈ ಕೃತ್ಯ ಎಸಗಿದ್ದಾರೆ’ ಎಂದು ಹೇಳಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊರಬಾ</strong>: ಐಸ್ಕ್ರೀಮ್ ಕಾರ್ಖಾನೆಯಲ್ಲಿ ಕಳ್ಳತನ ಮಾಡಿದ್ದಾರೆಂಬ ಶಂಕೆಯ ಮೇರೆಗೆ ಇಬ್ಬರು ಕಾರ್ಮಿಕರಿಗೆ ವಿದ್ಯುತ್ ಶಾಕ್ ನೀಡಲಾಗಿದೆ. ಅಲ್ಲದೆ ಬೆರಳಿನ ಉಗುರುಗಳನ್ನು ಕಿತ್ತು, ಚಿತ್ರಹಿಂಸೆ ನೀಡಲಾಗಿದೆ.</p>.<p>ಛತ್ತೀಸಗಢದ ಕೊರಬಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. </p>.<p>ಈ ಬಗ್ಗೆ ಮಾತನಾಡಿದ ಪೊಲೀಸ್ ಅಧಿಕಾರಿಯೊಬ್ಬರು, ಚಿತ್ರಹಿಂಸೆಗೆ ಒಳಗಾದ ಇಬ್ಬರು ಕಾರ್ಮಿಕರು ತಪ್ಪಿಸಿಕೊಂಡು ಹುಟ್ಟೂರು ಭಿಲ್ವಾರಕ್ಕೆ ಹೋಗಿ, ಗುಲಾಬ್ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ‘ಶೂನ್ಯ’ ಎಫ್ಐಆರ್ (ತಮ್ಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯದ ಘಟನೆಯ ಕುರಿತು ಎಫ್ಐಆರ್ ದಾಖಲಿಸಿಕೊಳ್ಳುವುದು) ದಾಖಲಿಸಿಕೊಂಡ ರಾಜಸ್ಥಾನ ಪೊಲೀಸರು, ಪ್ರಕರಣವನ್ನು ಕೊರಬಾ ಪೊಲೀಸ್ ಠಾಣೆಗೆ ರವಾನಿಸಿದ್ದಾರೆ ಎಂದು ಮಾಹಿತಿ ನೀಡಿದರು. </p>.<p>ರಾಜಸ್ಥಾನದ ಭಿಲ್ವಾರ ಜಿಲ್ಲೆಯ ಅಭಿಷೇಕ್ ಭಾಂಬಿ ಮತ್ತು ವಿನೋದ್ ಭಾಂಬಿ ಅವರು ಛತ್ತೀಸಗಢದ ಖಾಪ್ರಭಟ್ಟಿ ಎಂಬಲ್ಲಿರುವ ಐಸ್ಕ್ರೀಮ್ ಕಾರ್ಖಾನೆಯಲ್ಲಿ ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಏಪ್ರಿಲ್ 14ರಂದು ಈ ಇಬ್ಬರೂ ಕಾರ್ಮಿಕರು ತಮ್ಮ ಕಾರ್ಖಾನೆಯಲ್ಲಿ ಕಳವು ಮಾಡಿದ್ದಾರೆ ಎಂದು ಕಾರ್ಖಾನೆ ಮಾಲೀಕ ಛೋಟು ಗುರ್ಜರ್ ಮತ್ತು ಆತನ ಸಹವರ್ತಿ ಮುಕೇಶ್ ಶರ್ಮಾ ಆರೋಪಿಸಿದ್ದರು. ಹೀಗಾಗಿ, ಇಬ್ಬರು ಕಾರ್ಮಿಕರ ಬಟ್ಟೆಗಳನ್ನು ಬಿಚ್ಚಿಸಿ, ಚಿತ್ರಹಿಂಸೆ ನೀಡಲಾಗಿದೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. </p>.<p>ಈ ಬಗ್ಗೆ ಪ್ರತಿಕ್ರಿಯಿಸಿದ ಅಭಿಷೇಕ್ ಭಾಂಬಿ, ‘ವಾಹನದ ಇಎಂಐ ಪಾವತಿಸಲು ಮಾಲೀಕರ ಬಳಿ ₹20,000 ಮುಂಗಡ ಹಣ ಕೇಳಿದ್ದೆ. ಅವರು ನಿರಾಕರಿಸಿದ ಕಾರಣ ಕೆಲಸ ಬಿಡಲು ಮುಂದಾಗಿದ್ದೆ. ಇದರಿಂದ ಆಕ್ರೋಶಗೊಂಡಿದ್ದ ಮಾಲೀಕರು ಈ ಈ ಕೃತ್ಯ ಎಸಗಿದ್ದಾರೆ’ ಎಂದು ಹೇಳಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>