<p><strong>ಫತೇಹಾಬಾದ್</strong>: ರೈತರನ್ನು ಲೂಟಿ ಮಾಡಿದ ಶೆಹನ್ಶಾ (ಚಕ್ರವರ್ತಿ)ಯನ್ನೇ ಕೋರ್ಟ್ಗೆ ಎಳೆದ ನಂತರ ಅವರಿಗೆ ನಡುಕ ಹುಟ್ಟಿದೆ. ಅವರನ್ನು ಶೀಘ್ರದಲ್ಲಿಯೇ ಜೈಲಿಗಟ್ಟಲಾಗುವುದು ಎಂದು ಹೆಸರು ಉಲ್ಲೇಖಿಸದೆ ನರೇಂದ್ರ ಮೋದಿ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.</p>.<p>ರೈತರನ್ನು ಲೂಟಿ ಮಾಡಿದ ಶೆಹನ್ಶಾನನ್ನು ಈ ಚೌಕೀದಾರ್ ಕೋರ್ಟಿಗೆಳೆದಿದ್ದಾನೆ.ಜಾಮೀನು ಪಡೆಯುವುದಕ್ಕಾಗಿ ಆವರು ನಿರ್ದೇಶನಾಲಯ ಮತ್ತು ನ್ಯಾಯಾಲಯದ ಸುತ್ತ ಅಲೆಯುತ್ತಿದ್ದಾರೆ. ಅವರು ತನ್ನನ್ನು ತಾನು ಶೆಹೆನ್ಶಾ ಎಂದು ಅಂದುಕೊಂಡಿದ್ದರು. ಆದರೆ ಈಗ ಅವರಿಗೆ ನಡುಕ ಹುಟ್ಟಿದೆ. ನಾನು ಈಗಾಗಲೇ ಅವರನ್ನು ಜೈಲಿನ ಬಾಗಿಲುವರೆಗೆ ಕರೆದೊಯ್ದಿದ್ದೇನೆ.ಮುಂದಿನ 5 ವರ್ಷಗಳಲ್ಲಿ ಅವರನ್ನು ಜೈಲಿಗಟ್ಟಲು ನನಗೆ ಆಶೀರ್ವದಿಸಿ ಎಂದು ಹರ್ಯಾಣದ ಫತೇಹಾಬಾದ್ನಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ನರೇಂದ್ರ ಮೋದಿ ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.</p>.<p>ಭುಪಿಂದರ್ ಸಿಂಗ್ ಹೂಡಾ ಮುಖ್ಯಮಂತ್ರಿಯಾಗಿದ್ದಾಗ ಗುರುಗ್ರಾಮದಲ್ಲಿ ಭೂಹಗರಣ ಮಾಡಿದ್ದಾರೆ ಎಂಬ ಆರೋಪ ರಾಬರ್ಟ್ ವಾದ್ರಾ ಮೇಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಫತೇಹಾಬಾದ್</strong>: ರೈತರನ್ನು ಲೂಟಿ ಮಾಡಿದ ಶೆಹನ್ಶಾ (ಚಕ್ರವರ್ತಿ)ಯನ್ನೇ ಕೋರ್ಟ್ಗೆ ಎಳೆದ ನಂತರ ಅವರಿಗೆ ನಡುಕ ಹುಟ್ಟಿದೆ. ಅವರನ್ನು ಶೀಘ್ರದಲ್ಲಿಯೇ ಜೈಲಿಗಟ್ಟಲಾಗುವುದು ಎಂದು ಹೆಸರು ಉಲ್ಲೇಖಿಸದೆ ನರೇಂದ್ರ ಮೋದಿ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.</p>.<p>ರೈತರನ್ನು ಲೂಟಿ ಮಾಡಿದ ಶೆಹನ್ಶಾನನ್ನು ಈ ಚೌಕೀದಾರ್ ಕೋರ್ಟಿಗೆಳೆದಿದ್ದಾನೆ.ಜಾಮೀನು ಪಡೆಯುವುದಕ್ಕಾಗಿ ಆವರು ನಿರ್ದೇಶನಾಲಯ ಮತ್ತು ನ್ಯಾಯಾಲಯದ ಸುತ್ತ ಅಲೆಯುತ್ತಿದ್ದಾರೆ. ಅವರು ತನ್ನನ್ನು ತಾನು ಶೆಹೆನ್ಶಾ ಎಂದು ಅಂದುಕೊಂಡಿದ್ದರು. ಆದರೆ ಈಗ ಅವರಿಗೆ ನಡುಕ ಹುಟ್ಟಿದೆ. ನಾನು ಈಗಾಗಲೇ ಅವರನ್ನು ಜೈಲಿನ ಬಾಗಿಲುವರೆಗೆ ಕರೆದೊಯ್ದಿದ್ದೇನೆ.ಮುಂದಿನ 5 ವರ್ಷಗಳಲ್ಲಿ ಅವರನ್ನು ಜೈಲಿಗಟ್ಟಲು ನನಗೆ ಆಶೀರ್ವದಿಸಿ ಎಂದು ಹರ್ಯಾಣದ ಫತೇಹಾಬಾದ್ನಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ನರೇಂದ್ರ ಮೋದಿ ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.</p>.<p>ಭುಪಿಂದರ್ ಸಿಂಗ್ ಹೂಡಾ ಮುಖ್ಯಮಂತ್ರಿಯಾಗಿದ್ದಾಗ ಗುರುಗ್ರಾಮದಲ್ಲಿ ಭೂಹಗರಣ ಮಾಡಿದ್ದಾರೆ ಎಂಬ ಆರೋಪ ರಾಬರ್ಟ್ ವಾದ್ರಾ ಮೇಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>