<p>ಪುಣೆ: ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣ ಸಂಬಂಧ ಎನ್ಸಿಪಿ ಶಾಸಕರ ಸಹೋದರ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ದೌಂಡ್ ತಾಲೂಕಿನ ಜಾನಪದ ಕಲಾ ಕೇಂದ್ರದಲ್ಲಿ ನಡೆದ ನೃತ್ಯ ಕಾರ್ಯಕ್ರಮದಲ್ಲಿ ಗುಂಡು ಹಾರಿಸಲಾಗಿತ್ತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. </p>.<p>ಸೋಮವಾರ ಸಂಜೆ ನಂತರ ಘಟನೆ ನಡೆದಿದ್ದು, ನೃತ್ಯ ನಡೆಯುತ್ತಿರುವಾಗ ಗುಂಡು ಹಾರಿಸಿದ ವ್ಯಕ್ತಿ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣದ ದಾಖಲಿಸಲಾಗಿತ್ತು.</p>.<p>ಕೈಲಾಸ್ ಅಲಿಯಾಸ್ ಬಾಲಾಸಾಹೇಬ್ ಮಾಂಡೆಕರ್, ಗಣಪತ್ ಜಗತಾಪ್, ಚಂದ್ರಕಾಂತ್ ಮಾರ್ನೆ ಮತ್ತು ರಘುನಾಥ್ ಅವದ್ ಆರೋಪಿಗಳು. ಇದರಲ್ಲಿ ಮಾಂಡೆಕರ್ ಅವರು ಆಡಳಿತರೂಢ ಎನ್ಸಿಪಿಯ ಶಾಸಕ ಶಂಕರ್ ಮಾಂಡೇಕರ್ ಅವರ ಸಹೋದರ.</p>.<p>ಕಲಾ ಕೇಂದ್ರದಲ್ಲಿ ನೃತ್ಯ ನಡೆಯುತ್ತಿರುವಾಗ ಅವರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ‘ಮೂವರು ಆರೋಪಿಗಳನ್ನು ಬಂಧಿಸುವುದರ ಜೊತೆಗೆ, ಬಂದೂಕು ಮತ್ತು ವಾಹನವೊಂದನ್ನು ಕೂಡಾ ವಶಕ್ಕೆ ಪಡೆದಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪುಣೆ: ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣ ಸಂಬಂಧ ಎನ್ಸಿಪಿ ಶಾಸಕರ ಸಹೋದರ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ದೌಂಡ್ ತಾಲೂಕಿನ ಜಾನಪದ ಕಲಾ ಕೇಂದ್ರದಲ್ಲಿ ನಡೆದ ನೃತ್ಯ ಕಾರ್ಯಕ್ರಮದಲ್ಲಿ ಗುಂಡು ಹಾರಿಸಲಾಗಿತ್ತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. </p>.<p>ಸೋಮವಾರ ಸಂಜೆ ನಂತರ ಘಟನೆ ನಡೆದಿದ್ದು, ನೃತ್ಯ ನಡೆಯುತ್ತಿರುವಾಗ ಗುಂಡು ಹಾರಿಸಿದ ವ್ಯಕ್ತಿ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣದ ದಾಖಲಿಸಲಾಗಿತ್ತು.</p>.<p>ಕೈಲಾಸ್ ಅಲಿಯಾಸ್ ಬಾಲಾಸಾಹೇಬ್ ಮಾಂಡೆಕರ್, ಗಣಪತ್ ಜಗತಾಪ್, ಚಂದ್ರಕಾಂತ್ ಮಾರ್ನೆ ಮತ್ತು ರಘುನಾಥ್ ಅವದ್ ಆರೋಪಿಗಳು. ಇದರಲ್ಲಿ ಮಾಂಡೆಕರ್ ಅವರು ಆಡಳಿತರೂಢ ಎನ್ಸಿಪಿಯ ಶಾಸಕ ಶಂಕರ್ ಮಾಂಡೇಕರ್ ಅವರ ಸಹೋದರ.</p>.<p>ಕಲಾ ಕೇಂದ್ರದಲ್ಲಿ ನೃತ್ಯ ನಡೆಯುತ್ತಿರುವಾಗ ಅವರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ‘ಮೂವರು ಆರೋಪಿಗಳನ್ನು ಬಂಧಿಸುವುದರ ಜೊತೆಗೆ, ಬಂದೂಕು ಮತ್ತು ವಾಹನವೊಂದನ್ನು ಕೂಡಾ ವಶಕ್ಕೆ ಪಡೆದಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>