<p><strong>ನವದೆಹಲಿ (ಪಿಟಿಐ)</strong>: ಎನ್ಐಎ ತನಿಖೆ ನಡೆಸುತ್ತಿರುವ ಪ್ರಕರಣಗಳ ವಿಚಾರಣೆಗಾಗಿಯೇ ನಿಯೋಜಿತ ಕೋರ್ಟ್ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಒತ್ತಿ ಹೇಳಿದೆ.</p>.<p>ಎನ್ಐಎ ತನಿಖೆ ನಡೆಸುತ್ತಿರುವ ಪ್ರಕರಣಗಳು ಗಂಭೀರವಾಗಿದ್ದು, ದೇಶದಾದ್ಯಂತ ವ್ಯಾಪ್ತಿ ಹೊಂದಿವೆ ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ಕೋಟೀಶ್ವರ ಸಿಂಗ್ ಅವರಿದ್ದ ಪೀಠ ಹೇಳಿದೆ. </p>.<p>ನಕ್ಸಲರ ಪರ ಅನುಕಂಪವುಳ್ಳ ಗಡಚಿರೋಲಿಯ ನಿವಾಸಿ ಕೈಲಾಶ್ ರಾಮ್ಚಂದಾನಿ ಅವರಿಗೆ ಜಾಮೀನು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ಪೀಠ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.</p>.<p>ನಿಯೋಜಿತ ಕೋರ್ಟ್ನ ಅವಶ್ಯಕತೆಯ ಬಗ್ಗೆ ಗಮನಹರಿಸಲು ಹೆಚ್ಚುವರಿ ಸಾಲಿಸಿಟರ್ ಜನರಲ್ ರಾಜಕುಮಾರ್ ಭಾಸ್ಕರ್ ಠಾಕ್ರೆ ಅವರಿಗೆ ನಾಲ್ಕು ವಾರ ಸಮಯ ನೀಡಿದ ಪೀಠ, ವಿಚಾರಣೆಯನ್ನು ಜುಲೈಗೆ ಮುಂದೂಡಿತು.</p>.<p class="title">‘ಎನ್ಐಎ ತನಿಖೆಯಲ್ಲಿರುವ ಪ್ರಕರಣಗಳಿಗೆ ನೂರಾರು ಸಾಕ್ಷಿಗಳಿರುತ್ತವೆ. ಹಾಲಿ ಕೋರ್ಟ್ನಲ್ಲಿ ವಿಚಾರಣೆ ನಡೆದರೆ, ನ್ಯಾಯಮೂರ್ತಿಗಳು ಇತರೆ ಪ್ರಕರಣಗಳನ್ನು ಗಮನಿಸಬೇಕಾದ ಕಾರಣ ನಿಗದಿತ ವೇಗದಲ್ಲಿ ಎನ್ಐಎ ಪ್ರಕರಣಗಳ ವಿಚಾರಣೆ ಸಾಧ್ಯವಾಗದು’ ಎಂದು ಪೀಠ ಕಾರಣ ನೀಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ)</strong>: ಎನ್ಐಎ ತನಿಖೆ ನಡೆಸುತ್ತಿರುವ ಪ್ರಕರಣಗಳ ವಿಚಾರಣೆಗಾಗಿಯೇ ನಿಯೋಜಿತ ಕೋರ್ಟ್ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಒತ್ತಿ ಹೇಳಿದೆ.</p>.<p>ಎನ್ಐಎ ತನಿಖೆ ನಡೆಸುತ್ತಿರುವ ಪ್ರಕರಣಗಳು ಗಂಭೀರವಾಗಿದ್ದು, ದೇಶದಾದ್ಯಂತ ವ್ಯಾಪ್ತಿ ಹೊಂದಿವೆ ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ಕೋಟೀಶ್ವರ ಸಿಂಗ್ ಅವರಿದ್ದ ಪೀಠ ಹೇಳಿದೆ. </p>.<p>ನಕ್ಸಲರ ಪರ ಅನುಕಂಪವುಳ್ಳ ಗಡಚಿರೋಲಿಯ ನಿವಾಸಿ ಕೈಲಾಶ್ ರಾಮ್ಚಂದಾನಿ ಅವರಿಗೆ ಜಾಮೀನು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ಪೀಠ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.</p>.<p>ನಿಯೋಜಿತ ಕೋರ್ಟ್ನ ಅವಶ್ಯಕತೆಯ ಬಗ್ಗೆ ಗಮನಹರಿಸಲು ಹೆಚ್ಚುವರಿ ಸಾಲಿಸಿಟರ್ ಜನರಲ್ ರಾಜಕುಮಾರ್ ಭಾಸ್ಕರ್ ಠಾಕ್ರೆ ಅವರಿಗೆ ನಾಲ್ಕು ವಾರ ಸಮಯ ನೀಡಿದ ಪೀಠ, ವಿಚಾರಣೆಯನ್ನು ಜುಲೈಗೆ ಮುಂದೂಡಿತು.</p>.<p class="title">‘ಎನ್ಐಎ ತನಿಖೆಯಲ್ಲಿರುವ ಪ್ರಕರಣಗಳಿಗೆ ನೂರಾರು ಸಾಕ್ಷಿಗಳಿರುತ್ತವೆ. ಹಾಲಿ ಕೋರ್ಟ್ನಲ್ಲಿ ವಿಚಾರಣೆ ನಡೆದರೆ, ನ್ಯಾಯಮೂರ್ತಿಗಳು ಇತರೆ ಪ್ರಕರಣಗಳನ್ನು ಗಮನಿಸಬೇಕಾದ ಕಾರಣ ನಿಗದಿತ ವೇಗದಲ್ಲಿ ಎನ್ಐಎ ಪ್ರಕರಣಗಳ ವಿಚಾರಣೆ ಸಾಧ್ಯವಾಗದು’ ಎಂದು ಪೀಠ ಕಾರಣ ನೀಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>