ಒಲಿ ಹೇಳಿಕೆಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಸಿಂಘ್ವಿ, ‘ನೇಪಾಳ ಪ್ರಧಾನಿ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವಂತಿದೆ. ಹತಾಶ ಚೀನಾದ ಕೈಗೊಂಬೆಯಾಗಿರುವಂತಿದೆ ಅಥವಾ ಆ ದೇಶ ಹೇಳಿಕೊಟ್ಟದ್ದನ್ನು ಉಸುರುವ ಗಿಣಿಯಂತಾಗಿದ್ದಾರೆ. ಮೊದಲು ಅವರು ಹಿಂದೆಂದೂ ಚೀನಾ ಪ್ರತಿಪಾದಿಸಿರದ ಭೂಪ್ರದೇಶಗಳು ತಮ್ಮದೆಂದು ಹೇಳಿಕೊಂಡರು. ಈಗ ಅವರು ನೇಪಾಳದಿಂದ ನೂರಾರು ಮೈಲಿ ದೂರದಲ್ಲಿರುವ ಅಯೋಧ್ಯೆಯನ್ನು ಸ್ಥಳಾಂತರಿಸಿದ್ದಾರೆ. ರಾಮ ಸೀತೆಯನ್ನು ಬದಲಾಯಿಸ ಹೊರಟಿದ್ದಾರೆ’ಎಂದು ಉಲ್ಲೇಖಿಸಿದ್ದಾರೆ.