<p><strong>ಹೈದರಾಬಾದ್</strong>: ₹5ಕ್ಕೆ ಉಪಾಹಾರ ನೀಡುವ ನೂತನ ಆಧುನೀಕೃತ ‘ಇಂದಿರಮ್ಮ ಕ್ಯಾಂಟೀನ್’ ಅನ್ನು ಸಾರಿಗೆ ಮತ್ತು ಹೈದರಾಬಾದ್ ಉಸ್ತುವಾರಿ ಸಚಿವ ಪೊನ್ನಂ ಪ್ರಭಾಕರ್ ಮತ್ತು ಮೇಯರ್ ಗದ್ವಾಲ್ ವಿಜಯಲಕ್ಷ್ಮಿ ಅವರು ಸೋಮವಾರ ಇಲ್ಲಿ ಉದ್ಘಾಟಿಸಿದರು.</p>.<p>ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಎಲ್ಲರಿಗೂ ಕೈಗೆಟಕುವ ದರದಲ್ಲಿ ತಿಂಡಿ–ಊಟ ನೀಡುವ ಉದ್ದೇಶದಿಂದ ‘ಇಂದಿರಮ್ಮ ಕ್ಯಾಂಟೀನ್’ ಪ್ರಾರಂಭಿಸಲಾಗಿದೆ ಎಂದು ಸಚಿವ ಪ್ರಭಾಕರ್ ಹೇಳಿದರು.</p>.<p>ಈ ಕ್ಯಾಂಟೀನ್ಗಳು ಗ್ರಾಹಕರಿಗೆ ₹5ಕ್ಕೆ ಉಪಾಹಾರ ಮತ್ತು ಊಟವನ್ನು ನೀಡಲಿವೆ ಎಂದು ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್ಎಂಸಿ) ಹೇಳಿದೆ. ಪ್ರತಿ ಉಪಾಹಾರಕ್ಕೆ ₹14 ಮತ್ತು ಊಟಕ್ಕೆ ₹24.83 ಸಬ್ಸಿಡಿಯನ್ನು ಜಿಎಚ್ಎಂಸಿ ನೀಡುತ್ತಿದ್ದು, ಇದರಿಂದಾಗಿ ಫಲಾನುಭವಿಗಳು ಪ್ರತಿ ತಿಂಗಳು ₹3,000 ಉಳಿಸಬಹುದು ಎಂದು ಅದು ಹೇಳಿದೆ.</p>.<p>₹5ಕ್ಕೆ ಊಟ ನೀಡುವ ಅನ್ನಪೂರ್ಣ ಕೇಂದ್ರಕ್ಕೆ ‘ಇಂದಿರಮ್ಮ ಕ್ಯಾಂಟೀನ್’ ಎಂದು ಇತ್ತೀಚೆಗೆ ಮರುನಾಮಕರಣ ಮಾಡಲಾಗಿತ್ತು. ಪ್ರಸ್ತುತ ನಗರದಾದ್ಯಂತ ಈ ರೀತಿಯ 150 ಕ್ಯಾಂಟೀನ್ಗಳಿದ್ದು, ಸುಮಾರು 30,000 ಫಲಾನುಭವಿಗಳಿಗೆ ಸೇವೆ ನೀಡುತ್ತಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್</strong>: ₹5ಕ್ಕೆ ಉಪಾಹಾರ ನೀಡುವ ನೂತನ ಆಧುನೀಕೃತ ‘ಇಂದಿರಮ್ಮ ಕ್ಯಾಂಟೀನ್’ ಅನ್ನು ಸಾರಿಗೆ ಮತ್ತು ಹೈದರಾಬಾದ್ ಉಸ್ತುವಾರಿ ಸಚಿವ ಪೊನ್ನಂ ಪ್ರಭಾಕರ್ ಮತ್ತು ಮೇಯರ್ ಗದ್ವಾಲ್ ವಿಜಯಲಕ್ಷ್ಮಿ ಅವರು ಸೋಮವಾರ ಇಲ್ಲಿ ಉದ್ಘಾಟಿಸಿದರು.</p>.<p>ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಎಲ್ಲರಿಗೂ ಕೈಗೆಟಕುವ ದರದಲ್ಲಿ ತಿಂಡಿ–ಊಟ ನೀಡುವ ಉದ್ದೇಶದಿಂದ ‘ಇಂದಿರಮ್ಮ ಕ್ಯಾಂಟೀನ್’ ಪ್ರಾರಂಭಿಸಲಾಗಿದೆ ಎಂದು ಸಚಿವ ಪ್ರಭಾಕರ್ ಹೇಳಿದರು.</p>.<p>ಈ ಕ್ಯಾಂಟೀನ್ಗಳು ಗ್ರಾಹಕರಿಗೆ ₹5ಕ್ಕೆ ಉಪಾಹಾರ ಮತ್ತು ಊಟವನ್ನು ನೀಡಲಿವೆ ಎಂದು ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್ಎಂಸಿ) ಹೇಳಿದೆ. ಪ್ರತಿ ಉಪಾಹಾರಕ್ಕೆ ₹14 ಮತ್ತು ಊಟಕ್ಕೆ ₹24.83 ಸಬ್ಸಿಡಿಯನ್ನು ಜಿಎಚ್ಎಂಸಿ ನೀಡುತ್ತಿದ್ದು, ಇದರಿಂದಾಗಿ ಫಲಾನುಭವಿಗಳು ಪ್ರತಿ ತಿಂಗಳು ₹3,000 ಉಳಿಸಬಹುದು ಎಂದು ಅದು ಹೇಳಿದೆ.</p>.<p>₹5ಕ್ಕೆ ಊಟ ನೀಡುವ ಅನ್ನಪೂರ್ಣ ಕೇಂದ್ರಕ್ಕೆ ‘ಇಂದಿರಮ್ಮ ಕ್ಯಾಂಟೀನ್’ ಎಂದು ಇತ್ತೀಚೆಗೆ ಮರುನಾಮಕರಣ ಮಾಡಲಾಗಿತ್ತು. ಪ್ರಸ್ತುತ ನಗರದಾದ್ಯಂತ ಈ ರೀತಿಯ 150 ಕ್ಯಾಂಟೀನ್ಗಳಿದ್ದು, ಸುಮಾರು 30,000 ಫಲಾನುಭವಿಗಳಿಗೆ ಸೇವೆ ನೀಡುತ್ತಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>