ಈ ಅರ್ಜಿಯ ವಿಚಾರಣೆ ವೇಳೆ, ‘ಜಲ ಮೂಲವೊಂದು ಬತ್ತಿ ಹೋಗಿದೆ ಎಂಬ ಕಾರಣಕ್ಕೆ, ಆ ಜಾಗವನ್ನು ವಸತಿ ನಿವೇಶಗಳನ್ನಾಗಿ ಪರಿವರ್ತಿಸಲು ಸಾಧ್ಯವಿಲ್ಲ‘ ಎಂದು ಅಭಿಪ್ರಾಯಪಟ್ಟಿದೆ. ಇದೇ ವೇಳೆ, ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿದ ಎನ್ಜಿಟಿ, ‘ನೈಸರ್ಗಿಕ ಸಂಪನ್ಮೂಲಗಳ ಪರಿಸರ ಮೌಲ್ಯವನ್ನು ರಕ್ಷಿಸುವ ಹೊಣೆ ರಾಜ್ಯ ಸರ್ಕಾರದ್ದು‘ ಎಂದು ಹೇಳಿದೆ.