<p><strong>ಶಿಮ್ಲಾ</strong>: ‘ರಾಜ್ಯದಲ್ಲಿ ಆಹಾರ, ತಿನಿಸು ಮಾರಾಟಗಾರರು ಅಂಗಡಿಗಳ ಎದುರು ಕಡ್ಡಾಯವಾಗಿ ಗುರುತು ವಿವರ ಪ್ರಕಟಿಸಬೇಕು ಎಂದು ತೀರ್ಮಾನಿಸಿಲ್ಲ’ ಎಂದು ಹಿಮಾಚಲ ಪ್ರದೇಶ ಸರ್ಕಾರ ಪ್ರಕಟಿಸಿದೆ.</p><p>ಲೋಕೋಪಯೋಗಿ ಸಚಿವ ವಿಕ್ರಮಾದಿತ್ಯ ಸಿಂಗ್ ಅವರು ಬುಧವಾರ ಈ ಬಗ್ಗೆ ಹೇಳಿಕೆ ನೀಡಿದ್ದರು. ಇದಕ್ಕೆ ವಿರೋಧಪಕ್ಷಗಳಿಂದ ತೀವ್ರ ಆಕ್ಷೇಪ ವ್ಯಕ್ತವಾದ ಹಿಂದೆಯೇ ಸರ್ಕಾರ ಈ ಸ್ಪಷ್ಟನೆ ನೀಡಿದೆ.</p><p>‘ಬೀದಿ ಬದಿಯ ಮಾರಾಟಗಾರರು ಮುಖ್ಯವಾಗಿ ಆಹಾರ, ತಿನಿಸುಗಳನ್ನು ಮಾರುವವರು ತಮ್ಮ ಗುರುತು, ವಿವರಗಳಿರುವ ಫಲಕವನ್ನು ಅಂಗಡಿ ಎದುರು ಪ್ರಕಟಿಸುವುದು ಕಡ್ಡಾಯ’ ಎಂದು ಸಿಂಗ್ ಹೇಳಿದ್ದರು.</p><p>ಉತ್ತರ ಪ್ರದೇಶದ ಸರ್ಕಾರವು ಕೈಗೊಂಡಿರುವ ನಿರ್ಧಾರದ ರೀತಿಯಲ್ಲಿಯೇ ರಾಜ್ಯದಲ್ಲಿಯೂ ಈ ನಿಯಮ ಜಾರಿಗೊಳಿಸಲು ತೀರ್ಮಾನಿಸಲಾಗಿದೆ ಎಂದು ಸಚಿವರು ಹೇಳಿದ್ದರು. </p><p>ಸಚಿವರು ತಮ್ಮ ನಿಲುವನ್ನು ಫೇಸ್ಬುಕ್ ಖಾತೆಯಲ್ಲಿ ಪ್ರಕಟಿಸಿದ್ದ ಬಳಿಕ ‘ಇಂಡಿಯಾ’ ಮೈತ್ರಿಕೂಟದ ಹಲವು ಮುಖಂಡರು ತೀವ್ರವಾಗಿ ವಿರೋಧಿಸಿದ್ದರು.</p><p>ಆದರೆ, ರಾಜ್ಯದ ವಿರೋಧಪಕ್ಷದ ನಾಯಕ, ಬಿಜೆಪಿ ಮುಖಂಡ ಜೈರಾಮ್ ಠಾಕೂರ್ ಅವರು, ‘ಸಚಿವ ಸಿಂಗ್ ಅವರು ತಮ್ಮ ನಿಲುವಿಗೆ ಬದ್ಧರಾಗಿರಬೇಕು’ ಎಂದು ಒತ್ತಾಯಿಸಿದ್ದರು.</p><p>ಬೀದಿ ಬದಿ ಮಾರಾಟಗಾರರಿಗೆ ಅನ್ವಯಿಸುವಂತೆ ನೀತಿ ರೂಪಿಸಲು ಕಳೆದ ವಾರ ವಿಧಾನಸಭೆ ಸ್ಪೀಕರ್ ಕುಲದೀಪ್ ಸಿಂಗ್ ಪಥಾನಿಯ ಅವರು, ಕೈಗಾರಿಕ ಸಚಿವರ ನೇತೃತ್ವದಲ್ಲಿ ಏಳು ಸದಸ್ಯರ ಸಮಿತಿ ರಚಿಸಿದ್ದರು.</p><p>ಕಳೆದ ವಾರ ಮಸೀದಿಯೊಂದರ ಅನಧಿಕೃತ ನಿರ್ಮಾಣದ ಭಾಗದ ನೆಲಸಮ ಕಾರ್ಯಾಚರಣೆ ವೇಳೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಆಗ, ಹೊರಗಿನ ಕಾರ್ಮಿಕರ ವಿವರ ನೋಂದಣಿಗೆ ತೀರ್ಮಾನಿಸಲಾಗಿತ್ತು.</p><p>ಉತ್ತರ ಪ್ರದೇಶದಲ್ಲಿ ಆಹಾರಗಳಿಗೆ ಉಗುಳುವ, ಮೂತ್ರ ಮಿಶ್ರಣ ಮಾಡಿದ್ದ ಕೆಲ ನಿದರ್ಶನಗಳನ್ನು ಉಲ್ಲೇಖಿಸಿ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ‘ಆಹಾರ ತಿನಿಸುಗಳ ಮಾರಾಟಗಾರರು, ಮಾಲೀಕರು, ವ್ಯವಸ್ಥಾಪಕರು ಅಂಗಡಿ ಎದುರು ಕಡ್ಡಾಯವಾಗಿ ತಮ್ಮ ವಿವರ ಪ್ರಕಟಿಸಬೇಕು’ ಎಂದು ಆದೇಶಿಸಿದ್ದರು.</p>.ಉತ್ತರ ಪ್ರದೇಶ: ರೆಸ್ಟೊರೆಂಟ್ ಮಾಲೀಕರ, ವ್ಯವಸ್ಥಾಪಕ ಹೆಸರು ಪ್ರದರ್ಶನ ಕಡ್ಡಾಯ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಮ್ಲಾ</strong>: ‘ರಾಜ್ಯದಲ್ಲಿ ಆಹಾರ, ತಿನಿಸು ಮಾರಾಟಗಾರರು ಅಂಗಡಿಗಳ ಎದುರು ಕಡ್ಡಾಯವಾಗಿ ಗುರುತು ವಿವರ ಪ್ರಕಟಿಸಬೇಕು ಎಂದು ತೀರ್ಮಾನಿಸಿಲ್ಲ’ ಎಂದು ಹಿಮಾಚಲ ಪ್ರದೇಶ ಸರ್ಕಾರ ಪ್ರಕಟಿಸಿದೆ.</p><p>ಲೋಕೋಪಯೋಗಿ ಸಚಿವ ವಿಕ್ರಮಾದಿತ್ಯ ಸಿಂಗ್ ಅವರು ಬುಧವಾರ ಈ ಬಗ್ಗೆ ಹೇಳಿಕೆ ನೀಡಿದ್ದರು. ಇದಕ್ಕೆ ವಿರೋಧಪಕ್ಷಗಳಿಂದ ತೀವ್ರ ಆಕ್ಷೇಪ ವ್ಯಕ್ತವಾದ ಹಿಂದೆಯೇ ಸರ್ಕಾರ ಈ ಸ್ಪಷ್ಟನೆ ನೀಡಿದೆ.</p><p>‘ಬೀದಿ ಬದಿಯ ಮಾರಾಟಗಾರರು ಮುಖ್ಯವಾಗಿ ಆಹಾರ, ತಿನಿಸುಗಳನ್ನು ಮಾರುವವರು ತಮ್ಮ ಗುರುತು, ವಿವರಗಳಿರುವ ಫಲಕವನ್ನು ಅಂಗಡಿ ಎದುರು ಪ್ರಕಟಿಸುವುದು ಕಡ್ಡಾಯ’ ಎಂದು ಸಿಂಗ್ ಹೇಳಿದ್ದರು.</p><p>ಉತ್ತರ ಪ್ರದೇಶದ ಸರ್ಕಾರವು ಕೈಗೊಂಡಿರುವ ನಿರ್ಧಾರದ ರೀತಿಯಲ್ಲಿಯೇ ರಾಜ್ಯದಲ್ಲಿಯೂ ಈ ನಿಯಮ ಜಾರಿಗೊಳಿಸಲು ತೀರ್ಮಾನಿಸಲಾಗಿದೆ ಎಂದು ಸಚಿವರು ಹೇಳಿದ್ದರು. </p><p>ಸಚಿವರು ತಮ್ಮ ನಿಲುವನ್ನು ಫೇಸ್ಬುಕ್ ಖಾತೆಯಲ್ಲಿ ಪ್ರಕಟಿಸಿದ್ದ ಬಳಿಕ ‘ಇಂಡಿಯಾ’ ಮೈತ್ರಿಕೂಟದ ಹಲವು ಮುಖಂಡರು ತೀವ್ರವಾಗಿ ವಿರೋಧಿಸಿದ್ದರು.</p><p>ಆದರೆ, ರಾಜ್ಯದ ವಿರೋಧಪಕ್ಷದ ನಾಯಕ, ಬಿಜೆಪಿ ಮುಖಂಡ ಜೈರಾಮ್ ಠಾಕೂರ್ ಅವರು, ‘ಸಚಿವ ಸಿಂಗ್ ಅವರು ತಮ್ಮ ನಿಲುವಿಗೆ ಬದ್ಧರಾಗಿರಬೇಕು’ ಎಂದು ಒತ್ತಾಯಿಸಿದ್ದರು.</p><p>ಬೀದಿ ಬದಿ ಮಾರಾಟಗಾರರಿಗೆ ಅನ್ವಯಿಸುವಂತೆ ನೀತಿ ರೂಪಿಸಲು ಕಳೆದ ವಾರ ವಿಧಾನಸಭೆ ಸ್ಪೀಕರ್ ಕುಲದೀಪ್ ಸಿಂಗ್ ಪಥಾನಿಯ ಅವರು, ಕೈಗಾರಿಕ ಸಚಿವರ ನೇತೃತ್ವದಲ್ಲಿ ಏಳು ಸದಸ್ಯರ ಸಮಿತಿ ರಚಿಸಿದ್ದರು.</p><p>ಕಳೆದ ವಾರ ಮಸೀದಿಯೊಂದರ ಅನಧಿಕೃತ ನಿರ್ಮಾಣದ ಭಾಗದ ನೆಲಸಮ ಕಾರ್ಯಾಚರಣೆ ವೇಳೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಆಗ, ಹೊರಗಿನ ಕಾರ್ಮಿಕರ ವಿವರ ನೋಂದಣಿಗೆ ತೀರ್ಮಾನಿಸಲಾಗಿತ್ತು.</p><p>ಉತ್ತರ ಪ್ರದೇಶದಲ್ಲಿ ಆಹಾರಗಳಿಗೆ ಉಗುಳುವ, ಮೂತ್ರ ಮಿಶ್ರಣ ಮಾಡಿದ್ದ ಕೆಲ ನಿದರ್ಶನಗಳನ್ನು ಉಲ್ಲೇಖಿಸಿ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ‘ಆಹಾರ ತಿನಿಸುಗಳ ಮಾರಾಟಗಾರರು, ಮಾಲೀಕರು, ವ್ಯವಸ್ಥಾಪಕರು ಅಂಗಡಿ ಎದುರು ಕಡ್ಡಾಯವಾಗಿ ತಮ್ಮ ವಿವರ ಪ್ರಕಟಿಸಬೇಕು’ ಎಂದು ಆದೇಶಿಸಿದ್ದರು.</p>.ಉತ್ತರ ಪ್ರದೇಶ: ರೆಸ್ಟೊರೆಂಟ್ ಮಾಲೀಕರ, ವ್ಯವಸ್ಥಾಪಕ ಹೆಸರು ಪ್ರದರ್ಶನ ಕಡ್ಡಾಯ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>