<p><strong>ಹೈದರಾಬಾದ್/ಕರೀಮ್ನಗರ</strong>: ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಕಾರ್ಯ ಕೈಗೊಳ್ಳುವ ಕುರಿತಂತೆ ಯಾವ ನಿರ್ಧಾರವನ್ನೂ ಮಾಡಿಲ್ಲ. ಈ ವಿಚಾರವಾಗಿ ಯಾವುದೇ ಮಾರ್ಗಸೂಚಿಗಳನ್ನೂ ರಚಿಸಲಾಗಿಲ್ಲ ಎಂದು ಕೇಂದ್ರ ಸಚಿವರಾದ ಜಿ.ಕಿಶನ್ ರೆಡ್ಡಿ ಹಾಗೂ ಬಂಡಿ ಸಂಜಯ ಕುಮಾರ್ ಶನಿವಾರ ಹೇಳಿದ್ದಾರೆ.</p>.<p>‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ದೇಶದ ಎಲ್ಲ ಭಾಷೆಗಳನ್ನೂ ಪ್ರೋತ್ಸಾಹಿಸುತ್ತಿದೆ. ಆದರೆ, ಈ ವಿಚಾರ ಮುಂದಿಟ್ಟುಕೊಂಡು ಜನರನ್ನು ಪ್ರಚೋದಿಸುವ ರಾಜಕೀಯ ಪ್ರೇರಿತ ಪ್ರಯತ್ನಗಳು ವಿಫಲವಾಗಲಿವೆ’ ಎಂದು ಉಭಯ ಸಚಿವರು ಪ್ರತಿಪಾದಿಸಿದ್ದಾರೆ.</p>.<p>ಸುದ್ದಿಗಾರರ ಜೊತೆ ಪ್ರತ್ಯೇಕವಾಗಿ ಮಾತನಾಡಿರುವ ಅವರು, ಕ್ಷೇತ್ರಗಳ ಮರುವಿಂಗಡಣೆ ಹಾಗೂ ಹಿಂದಿ ಹೇರಿಕೆ ವಿಚಾರವಾಗಿ ಕಂಡುಬಂದಿರುವ ಸಂಘರ್ಷ ಶಮನ ಮಾಡುವ ಪ್ರಯತ್ನಗಳನ್ನು ಮಾಡಿದ್ದಾರೆ.</p>.<p>ಹೈದರಾಬಾದ್ನಲ್ಲಿ ಮಾತನಾಡಿದ ಸಚಿವ ಕಿಶನ್ ರೆಡ್ಡಿ, ಹಿಂದಿ ಹೇರಿಕೆ ವಿಚಾರವಾಗಿ ತಮಿಳನಾಡಿನಲ್ಲಿ ವ್ಯಕ್ತವಾಗುತ್ತಿರುವ ವಿರೋಧ ಕುರಿತು ಪ್ರಸ್ತಾಪಿಸಿದರು.</p>.<p>‘ದಕ್ಷಿಣ ಭಾರತದ ಚಲನಚಿತ್ರಗಳು ರಾಷ್ಟ್ರ ಮಟ್ಟದಲ್ಲಿ ಯಶಸ್ಸು ಕಾಣುತ್ತಿವೆ. ಅದರಲ್ಲೂ, ತಮಿಳು ಹಾಗೂ ತೆಲುಗು ಚಿತ್ರಗಳು ಉತ್ತರ ಭಾರತದಲ್ಲಿ ಜನಪ್ರಿಯವಾಗಿವೆ. ಚಿತ್ರಗಳ ಹಿಂದಿ ಅವತರಣಿಕೆಗಳಿಂದ ಭಾರಿ ಆದಾಯವೂ ಲಭಿಸಿದೆ’ ಎಂದರು.</p>.<p>‘ತೆಲಂಗಾಣ ರಾಜ್ಯ ಬಹುಸಂಸ್ಕೃತಿಯ ನೆಲೆ. ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದ ಕಾರ್ಮಿಕರು ಇಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಇಲ್ಲಿನ ಪ್ರಗತಿಗೂ ಕೊಡುಗೆ ನೀಡುತ್ತಿದ್ದಾರೆ’ ಎಂದು ಹೇಳಿದರು.</p>.<p>‘ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಐದು ವರ್ಷಗಳಲ್ಲಿ ತಾವು ಮಾಡಿರುವ ಸಾಧನೆಗಳನ್ನು ಹೇಳಲಿ’ ಎಂದು ಸವಾಲು ಹಾಕಿದ ಅವರು, ‘ತಮ್ಮ ವೈಫಲ್ಯಗಳನ್ನು ಮರೆಮಾಚುವುದಕ್ಕಾಗಿ ಅವರು ಕ್ಷೇತ್ರಗಳ ಮರುವಿಂಗಡಣೆ, ಭಾಷೆಯಂತ ವಿಚಾರಗಳನ್ನು ಪ್ರಸ್ತಾಪಿಸುತ್ತಿದ್ದಾರೆ’ ಎಂದರು.</p>.<p>ಕರೀಮ್ನಗರದಲ್ಲಿ ಮಾತನಾಡಿದ ಸಚಿವ ಬಂಡಿ ಸಂಜಯ ಕುಮಾರ್,‘ದಕ್ಷಿಣ ಭಾರತ ಕುರಿತು ಕೇಂದ್ರ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂಬ ಆರೋಪಗಳು ಆಧಾರರಹಿತ ಹಾಗೂ ಹಾಸ್ಯಾಸ್ಪದ’ ಎಂದರು.</p>.<p>‘ತಮಿಳುನಾಡು, ಕರ್ನಾಟಕ, ತೆಲಂಗಾಣ ರಾಜ್ಯ ಸರ್ಕಾರಗಳು ಎಲ್ಲ ರಂಗಗಳಲ್ಲಿ ವಿಫಲವಾಗಿದ್ದು, ಇಲ್ಲಿನ ಆಡಳಿತದಿಂದ ಜನರು ಬೇಸತ್ತಿದ್ದಾರೆ. ಈ ರಾಜ್ಯಗಳಲ್ಲಿನ ಆಡಳಿತಾರೂಢ ಪಕ್ಷಗಳು ವಿವಾದಗಳನ್ನು ಸೃಷ್ಟಿಸುವುದು ಹಾಗೂ ಕೇಂದ್ರ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನದಲ್ಲಿ ನಿರತವಾಗಿವೆ’ ಎಂದೂ ಟೀಕಿಸಿದರು.</p>.<p><strong>ತಮಿಳು ಹೊಗಳಿದ ವೈಷ್ಣವ್</strong></p><p><strong>ಚೆನ್ನೈ:</strong> ‘ತಮಿಳು ಸುಮಧುರವಾದ ಭಾಷೆ. ದೇಶದ ಮತ್ತು ವಿಶ್ವದ ಆಸ್ತಿಗಳಲ್ಲೊಂದು. ದೇಶದ ಪ್ರತಿಯೊಂದು ಭಾಷೆಯೂ ತನ್ನ ಗೌರವ ಸಿಗುವುದನ್ನು ಪ್ರಧಾನಿ ನರೇಂದ್ರ ಮೋದಿ ಖಾತ್ರಿಪಡಿಸಿದ್ದಾರೆ’ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶನಿವಾರ ಹೇಳಿದ್ದಾರೆ.</p><p>ಶ್ರೀಪೆರಂಬದೂರುವಿನಲ್ಲಿ ಜೆಟ್ವೆರ್ಕ್ ಎಲೆಕ್ಟ್ರಾನಿಕ್ಸ್ ಕಂಪನಿಯ ಉತ್ಪಾದನಾ ಘಟಕದ ಉದ್ಘಾಟನಾ <br>ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p><p>ಸಭಿಕರನ್ನು ಉದ್ದೇಶಿಸಿ ‘ವಣಕ್ಕಂ’ ಎಂದು ತಮಿಳಿನಲ್ಲಿ ಹೇಳುವ ಮೂಲಕ ಮಾತು ಆರಂಭಿಸಿದರು.</p><p>‘ನಾನು ಐಐಟಿ–ಕಾನ್ಪುರದಲ್ಲಿ ಅಧ್ಯಯನ ಮಾಡುತ್ತಿದ್ದಾಗ, ನಮ್ಮ ಪ್ರಾಧ್ಯಾಪಕರಾಗಿದ್ದ ಸಡಗೋಪನ್ ತಮಿಳು ಭಾಷೆ ಕುರಿತು ನನಗೆ ತಿಳಿಸಿಕೊಟ್ಟರು’ ಎಂದರು. </p><p>‘ತಮಿಳು ಸುಮಧುರವಾದ ಭಾಷೆ. ವಣಕ್ಕಂ, ಎಪ್ಪಡಿ ಇರುಕ್ಕುಂಗಾ (ಹೇಗಿದ್ದೀರಿ) ಹಾಗೂ ನಂಡ್ರಿ(ಧನ್ಯವಾದ) ಎಂಬ ಮೂರು ಪದಗಳು ನನಗೆ ಗೊತ್ತು’ ಎಂದರು.</p>.<div><blockquote>ದಕ್ಷಿಣ ರಾಜ್ಯಗಳ ಕುರಿತು ಕೇಂದ್ರ ಸರ್ಕಾರ ಸಂವೇದನಾರಹಿತವಾಗಿದೆ. ಎಲ್ಲ ಭಾಷೆಗಳಿಗೂ ಸಮಾನ ಮಹತ್ವ ನೀಡಬೇಕು. </blockquote><span class="attribution">-ಪ್ರಕಾಶ ಕಾರಟ್, ಸಿಪಿಎಂ ನಾಯಕ</span></div>.<div><blockquote>ರಾಜಕೀಯ ಲಾಭ ಪಡೆಯುವುದಕ್ಕಾಗಿ ಡಿಎಂಕೆ ಪಕ್ಷ ಕ್ಷೇತ್ರ ಮರುವಿಂಗಡಣೆ ವಿರೋಧಿಸಿ ಸಭೆ ಕರೆದಿದೆ. </blockquote><span class="attribution">-ಇ.ಕೆ.ಪಳನಿಸ್ವಾಮಿ, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್/ಕರೀಮ್ನಗರ</strong>: ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಕಾರ್ಯ ಕೈಗೊಳ್ಳುವ ಕುರಿತಂತೆ ಯಾವ ನಿರ್ಧಾರವನ್ನೂ ಮಾಡಿಲ್ಲ. ಈ ವಿಚಾರವಾಗಿ ಯಾವುದೇ ಮಾರ್ಗಸೂಚಿಗಳನ್ನೂ ರಚಿಸಲಾಗಿಲ್ಲ ಎಂದು ಕೇಂದ್ರ ಸಚಿವರಾದ ಜಿ.ಕಿಶನ್ ರೆಡ್ಡಿ ಹಾಗೂ ಬಂಡಿ ಸಂಜಯ ಕುಮಾರ್ ಶನಿವಾರ ಹೇಳಿದ್ದಾರೆ.</p>.<p>‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ದೇಶದ ಎಲ್ಲ ಭಾಷೆಗಳನ್ನೂ ಪ್ರೋತ್ಸಾಹಿಸುತ್ತಿದೆ. ಆದರೆ, ಈ ವಿಚಾರ ಮುಂದಿಟ್ಟುಕೊಂಡು ಜನರನ್ನು ಪ್ರಚೋದಿಸುವ ರಾಜಕೀಯ ಪ್ರೇರಿತ ಪ್ರಯತ್ನಗಳು ವಿಫಲವಾಗಲಿವೆ’ ಎಂದು ಉಭಯ ಸಚಿವರು ಪ್ರತಿಪಾದಿಸಿದ್ದಾರೆ.</p>.<p>ಸುದ್ದಿಗಾರರ ಜೊತೆ ಪ್ರತ್ಯೇಕವಾಗಿ ಮಾತನಾಡಿರುವ ಅವರು, ಕ್ಷೇತ್ರಗಳ ಮರುವಿಂಗಡಣೆ ಹಾಗೂ ಹಿಂದಿ ಹೇರಿಕೆ ವಿಚಾರವಾಗಿ ಕಂಡುಬಂದಿರುವ ಸಂಘರ್ಷ ಶಮನ ಮಾಡುವ ಪ್ರಯತ್ನಗಳನ್ನು ಮಾಡಿದ್ದಾರೆ.</p>.<p>ಹೈದರಾಬಾದ್ನಲ್ಲಿ ಮಾತನಾಡಿದ ಸಚಿವ ಕಿಶನ್ ರೆಡ್ಡಿ, ಹಿಂದಿ ಹೇರಿಕೆ ವಿಚಾರವಾಗಿ ತಮಿಳನಾಡಿನಲ್ಲಿ ವ್ಯಕ್ತವಾಗುತ್ತಿರುವ ವಿರೋಧ ಕುರಿತು ಪ್ರಸ್ತಾಪಿಸಿದರು.</p>.<p>‘ದಕ್ಷಿಣ ಭಾರತದ ಚಲನಚಿತ್ರಗಳು ರಾಷ್ಟ್ರ ಮಟ್ಟದಲ್ಲಿ ಯಶಸ್ಸು ಕಾಣುತ್ತಿವೆ. ಅದರಲ್ಲೂ, ತಮಿಳು ಹಾಗೂ ತೆಲುಗು ಚಿತ್ರಗಳು ಉತ್ತರ ಭಾರತದಲ್ಲಿ ಜನಪ್ರಿಯವಾಗಿವೆ. ಚಿತ್ರಗಳ ಹಿಂದಿ ಅವತರಣಿಕೆಗಳಿಂದ ಭಾರಿ ಆದಾಯವೂ ಲಭಿಸಿದೆ’ ಎಂದರು.</p>.<p>‘ತೆಲಂಗಾಣ ರಾಜ್ಯ ಬಹುಸಂಸ್ಕೃತಿಯ ನೆಲೆ. ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದ ಕಾರ್ಮಿಕರು ಇಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಇಲ್ಲಿನ ಪ್ರಗತಿಗೂ ಕೊಡುಗೆ ನೀಡುತ್ತಿದ್ದಾರೆ’ ಎಂದು ಹೇಳಿದರು.</p>.<p>‘ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಐದು ವರ್ಷಗಳಲ್ಲಿ ತಾವು ಮಾಡಿರುವ ಸಾಧನೆಗಳನ್ನು ಹೇಳಲಿ’ ಎಂದು ಸವಾಲು ಹಾಕಿದ ಅವರು, ‘ತಮ್ಮ ವೈಫಲ್ಯಗಳನ್ನು ಮರೆಮಾಚುವುದಕ್ಕಾಗಿ ಅವರು ಕ್ಷೇತ್ರಗಳ ಮರುವಿಂಗಡಣೆ, ಭಾಷೆಯಂತ ವಿಚಾರಗಳನ್ನು ಪ್ರಸ್ತಾಪಿಸುತ್ತಿದ್ದಾರೆ’ ಎಂದರು.</p>.<p>ಕರೀಮ್ನಗರದಲ್ಲಿ ಮಾತನಾಡಿದ ಸಚಿವ ಬಂಡಿ ಸಂಜಯ ಕುಮಾರ್,‘ದಕ್ಷಿಣ ಭಾರತ ಕುರಿತು ಕೇಂದ್ರ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂಬ ಆರೋಪಗಳು ಆಧಾರರಹಿತ ಹಾಗೂ ಹಾಸ್ಯಾಸ್ಪದ’ ಎಂದರು.</p>.<p>‘ತಮಿಳುನಾಡು, ಕರ್ನಾಟಕ, ತೆಲಂಗಾಣ ರಾಜ್ಯ ಸರ್ಕಾರಗಳು ಎಲ್ಲ ರಂಗಗಳಲ್ಲಿ ವಿಫಲವಾಗಿದ್ದು, ಇಲ್ಲಿನ ಆಡಳಿತದಿಂದ ಜನರು ಬೇಸತ್ತಿದ್ದಾರೆ. ಈ ರಾಜ್ಯಗಳಲ್ಲಿನ ಆಡಳಿತಾರೂಢ ಪಕ್ಷಗಳು ವಿವಾದಗಳನ್ನು ಸೃಷ್ಟಿಸುವುದು ಹಾಗೂ ಕೇಂದ್ರ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನದಲ್ಲಿ ನಿರತವಾಗಿವೆ’ ಎಂದೂ ಟೀಕಿಸಿದರು.</p>.<p><strong>ತಮಿಳು ಹೊಗಳಿದ ವೈಷ್ಣವ್</strong></p><p><strong>ಚೆನ್ನೈ:</strong> ‘ತಮಿಳು ಸುಮಧುರವಾದ ಭಾಷೆ. ದೇಶದ ಮತ್ತು ವಿಶ್ವದ ಆಸ್ತಿಗಳಲ್ಲೊಂದು. ದೇಶದ ಪ್ರತಿಯೊಂದು ಭಾಷೆಯೂ ತನ್ನ ಗೌರವ ಸಿಗುವುದನ್ನು ಪ್ರಧಾನಿ ನರೇಂದ್ರ ಮೋದಿ ಖಾತ್ರಿಪಡಿಸಿದ್ದಾರೆ’ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶನಿವಾರ ಹೇಳಿದ್ದಾರೆ.</p><p>ಶ್ರೀಪೆರಂಬದೂರುವಿನಲ್ಲಿ ಜೆಟ್ವೆರ್ಕ್ ಎಲೆಕ್ಟ್ರಾನಿಕ್ಸ್ ಕಂಪನಿಯ ಉತ್ಪಾದನಾ ಘಟಕದ ಉದ್ಘಾಟನಾ <br>ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p><p>ಸಭಿಕರನ್ನು ಉದ್ದೇಶಿಸಿ ‘ವಣಕ್ಕಂ’ ಎಂದು ತಮಿಳಿನಲ್ಲಿ ಹೇಳುವ ಮೂಲಕ ಮಾತು ಆರಂಭಿಸಿದರು.</p><p>‘ನಾನು ಐಐಟಿ–ಕಾನ್ಪುರದಲ್ಲಿ ಅಧ್ಯಯನ ಮಾಡುತ್ತಿದ್ದಾಗ, ನಮ್ಮ ಪ್ರಾಧ್ಯಾಪಕರಾಗಿದ್ದ ಸಡಗೋಪನ್ ತಮಿಳು ಭಾಷೆ ಕುರಿತು ನನಗೆ ತಿಳಿಸಿಕೊಟ್ಟರು’ ಎಂದರು. </p><p>‘ತಮಿಳು ಸುಮಧುರವಾದ ಭಾಷೆ. ವಣಕ್ಕಂ, ಎಪ್ಪಡಿ ಇರುಕ್ಕುಂಗಾ (ಹೇಗಿದ್ದೀರಿ) ಹಾಗೂ ನಂಡ್ರಿ(ಧನ್ಯವಾದ) ಎಂಬ ಮೂರು ಪದಗಳು ನನಗೆ ಗೊತ್ತು’ ಎಂದರು.</p>.<div><blockquote>ದಕ್ಷಿಣ ರಾಜ್ಯಗಳ ಕುರಿತು ಕೇಂದ್ರ ಸರ್ಕಾರ ಸಂವೇದನಾರಹಿತವಾಗಿದೆ. ಎಲ್ಲ ಭಾಷೆಗಳಿಗೂ ಸಮಾನ ಮಹತ್ವ ನೀಡಬೇಕು. </blockquote><span class="attribution">-ಪ್ರಕಾಶ ಕಾರಟ್, ಸಿಪಿಎಂ ನಾಯಕ</span></div>.<div><blockquote>ರಾಜಕೀಯ ಲಾಭ ಪಡೆಯುವುದಕ್ಕಾಗಿ ಡಿಎಂಕೆ ಪಕ್ಷ ಕ್ಷೇತ್ರ ಮರುವಿಂಗಡಣೆ ವಿರೋಧಿಸಿ ಸಭೆ ಕರೆದಿದೆ. </blockquote><span class="attribution">-ಇ.ಕೆ.ಪಳನಿಸ್ವಾಮಿ, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>