<p><strong>ಚೆನ್ನೈ</strong>: ಮಿಚಾಂಗ್ ಚಂಡಮಾರುತದ ಅಬ್ಬರದಿಂದ ತತ್ತರಿಸಿರುವ ಚೆನ್ನೈ ನಗರದ ಜನರ ಸವಾಲಿನ ಸನ್ನಿವೇಶವನ್ನು ವಿವರಿಸಿರುವ ಭಾರತೀಯ ಕ್ರಿಕೆಟ್ ತಂಡದ ಆಟಗಾರ ರವಿಚಂದ್ರನ್ ಅಶ್ವಿನ್, ತಾವು ವಾಸವಿರುವ ಸ್ಥಳದಲ್ಲಿ 30 ಗಂಟೆಗಳವರೆಗೆ ವಿದ್ಯುತ್ ಕಡಿತದ ಬಗ್ಗೆ ಹೇಳಿಕೊಂಡಿದ್ದಾರೆ.</p><p>ಮಿಚಾಂಗ್ ಚಂಡಮಾರುತವು ತಮಿಳುನಾಡು ಮತ್ತು ನೆರೆಯ ರಾಜ್ಯಗಳಲ್ಲಿ ಭಾರಿ ಹಾನಿ ಸೃಷ್ಟಿಸಿದೆ. ಚೆನೈನಲ್ಲಿ ಮಂಗಳವಾರ ಮಳೆಯ ಆರ್ಭಟ ಕಡಿಮೆ ಆಯಿತಾದರೂ ಹಲವೆಡೆ ಜಲಾವೃತ, ವಿದ್ಯುತ್ ಕಡಿತ, ಮೊಬೈಲ್ ನೆಟ್ವರ್ಕ್ ಸಮಸ್ಯೆಗಳು ಇದ್ದವು.</p><p>‘ನಾನು ವಾಸವಿರುವ ಸ್ಥಳದಲ್ಲಿ 30 ಗಂಟೆಗಿಂತ ಹೆಚ್ಚಿನ ಸಮಯ ವಿದ್ಯುತ್ ಕಡಿತವಾಗಿತ್ತು. ಬೇರೆ ಪ್ರದೇಶಗಳ ಸ್ಥಿತಿ ಏನಾಗಿರಬಹುದು ಎಂದು ಊಹಿಸಿ. ಚೆನ್ನೈ ಪ್ರವಾಹದ ಸಮಸ್ಯೆಗೆ ಯಾವ ಆಯ್ಕೆಗಳಿವೆ ಎಂಬುದು ನನಗೆ ತಿಳಿಯುತ್ತಿಲ್ಲ’ಎಂದು ಅಶ್ವಿನ್ ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ.</p><p>ಚೆನ್ನೈ ನಿವಾಸಿಯಾಗಿರುವ ಅಶ್ವಿನ್ ಮಳೆಯಿಂದಾಗಿ ನಗರದಲ್ಲಿ ಪ್ರವಾಹ ಪರಿಸ್ಥಿತಿ ಕುರಿತಾದ ವಿಡಿಯೊಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ.</p><p> ಇದಕ್ಕೂ ಮುನ್ನ ಸೋಮವಾರ ಎಕ್ಸ್ನಲ್ಲಿ, ಇನ್ನೊಂದು ದಿನ ತಾಳ್ಮೆಯಿಂದ ಕಾಯಿರಿ. ಮಳೆ ನಿಂತರೂ ಪರಿಸ್ಥಿತಿ ಸುಧಾರಿಸಲು ಸಮಯ ಹಿಡಿಯುತ್ತದೆ ಎಂದು ಹೇಳಿದ್ದರು.</p> .ವಿಡಿಯೊ: ಮಿಚಾಂಗ್ ಚಂಡಮಾರುತ– ಮುಳುಗಿದ ಚೆನ್ನೈ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ</strong>: ಮಿಚಾಂಗ್ ಚಂಡಮಾರುತದ ಅಬ್ಬರದಿಂದ ತತ್ತರಿಸಿರುವ ಚೆನ್ನೈ ನಗರದ ಜನರ ಸವಾಲಿನ ಸನ್ನಿವೇಶವನ್ನು ವಿವರಿಸಿರುವ ಭಾರತೀಯ ಕ್ರಿಕೆಟ್ ತಂಡದ ಆಟಗಾರ ರವಿಚಂದ್ರನ್ ಅಶ್ವಿನ್, ತಾವು ವಾಸವಿರುವ ಸ್ಥಳದಲ್ಲಿ 30 ಗಂಟೆಗಳವರೆಗೆ ವಿದ್ಯುತ್ ಕಡಿತದ ಬಗ್ಗೆ ಹೇಳಿಕೊಂಡಿದ್ದಾರೆ.</p><p>ಮಿಚಾಂಗ್ ಚಂಡಮಾರುತವು ತಮಿಳುನಾಡು ಮತ್ತು ನೆರೆಯ ರಾಜ್ಯಗಳಲ್ಲಿ ಭಾರಿ ಹಾನಿ ಸೃಷ್ಟಿಸಿದೆ. ಚೆನೈನಲ್ಲಿ ಮಂಗಳವಾರ ಮಳೆಯ ಆರ್ಭಟ ಕಡಿಮೆ ಆಯಿತಾದರೂ ಹಲವೆಡೆ ಜಲಾವೃತ, ವಿದ್ಯುತ್ ಕಡಿತ, ಮೊಬೈಲ್ ನೆಟ್ವರ್ಕ್ ಸಮಸ್ಯೆಗಳು ಇದ್ದವು.</p><p>‘ನಾನು ವಾಸವಿರುವ ಸ್ಥಳದಲ್ಲಿ 30 ಗಂಟೆಗಿಂತ ಹೆಚ್ಚಿನ ಸಮಯ ವಿದ್ಯುತ್ ಕಡಿತವಾಗಿತ್ತು. ಬೇರೆ ಪ್ರದೇಶಗಳ ಸ್ಥಿತಿ ಏನಾಗಿರಬಹುದು ಎಂದು ಊಹಿಸಿ. ಚೆನ್ನೈ ಪ್ರವಾಹದ ಸಮಸ್ಯೆಗೆ ಯಾವ ಆಯ್ಕೆಗಳಿವೆ ಎಂಬುದು ನನಗೆ ತಿಳಿಯುತ್ತಿಲ್ಲ’ಎಂದು ಅಶ್ವಿನ್ ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ.</p><p>ಚೆನ್ನೈ ನಿವಾಸಿಯಾಗಿರುವ ಅಶ್ವಿನ್ ಮಳೆಯಿಂದಾಗಿ ನಗರದಲ್ಲಿ ಪ್ರವಾಹ ಪರಿಸ್ಥಿತಿ ಕುರಿತಾದ ವಿಡಿಯೊಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ.</p><p> ಇದಕ್ಕೂ ಮುನ್ನ ಸೋಮವಾರ ಎಕ್ಸ್ನಲ್ಲಿ, ಇನ್ನೊಂದು ದಿನ ತಾಳ್ಮೆಯಿಂದ ಕಾಯಿರಿ. ಮಳೆ ನಿಂತರೂ ಪರಿಸ್ಥಿತಿ ಸುಧಾರಿಸಲು ಸಮಯ ಹಿಡಿಯುತ್ತದೆ ಎಂದು ಹೇಳಿದ್ದರು.</p> .ವಿಡಿಯೊ: ಮಿಚಾಂಗ್ ಚಂಡಮಾರುತ– ಮುಳುಗಿದ ಚೆನ್ನೈ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>