<p><strong>ತಿರುವನಂತಪುರಂ:</strong> ಪ್ರಗತಿ ಸಾಧಿಸಲು ಬಯಸುವ ಸಮಾಜಕ್ಕೆ ಹೆಚ್ಚಿನ ಲಾಭವನ್ನು ನೀಡುವ ಅತ್ಯಂತ ಭರವಸೆಯ ಹೂಡಿಕೆ ಎಂದರೆ ಶಿಕ್ಷಣ ಎಂದು ನೊಬೆಲ್ ಪ್ರಶಸ್ತಿ ವಿಜೇತ ಮಾರ್ಟೆನ್ ಪಿ ಮೆಲ್ಡಾಲ್ ಹೇಳಿದ್ದಾರೆ.</p><p>ಮುನ್ನಾರ್ನಲ್ಲಿ ಬಯೋಟೆಕ್ನಾಲಜಿ ರಿಸರ್ಚ್ ಅಂಡ್ ಇನ್ನೋವೇಶನ್ ಕೌನ್ಸಿಲ್ ಆಯೋಜಿಸಿದ್ದ ಆರ್ಜಿಸಿಬಿ ಸಂಶೋಧನಾ ಸಮ್ಮೇಳನದಲ್ಲಿ ಮಾರ್ಟೆನ್ ಪಿ ಮೆಲ್ಡಾಲ್ ಅವರು ಶಿಕ್ಷಣದ ಮಹತ್ವ ತಿಳಿಸಿದರು.</p><p>ವಿಯೆಟ್ನಾಂ, ಪೋಲೆಂಡ್, ಫಿನ್ಲ್ಯಾಂಡ್, ಡೆನ್ಮಾರ್ಕ್ನಂತಹ ದೇಶಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತವೆ. </p>.ಉತ್ತರ ಕನ್ನಡ | ಸಂಶೋಧನೆ ಆಧಾರಿತ ಉದ್ಯಮ ಇಂದಿನ ಅಗತ್ಯ: ವಿಜ್ಞಾನಿ ಡಾ.ಅಶೋಕ ಪ್ರಭು.<p>ಶಿಕ್ಷಣದಿಂದ 10–20 ವರ್ಷಗಳಲ್ಲಿ ಯಶಸ್ಸನ್ನು ಸಾಧಿಸುತ್ತಿವೆ ಎಂದು ರಸಾಯನವಿಜ್ಞಾನ ನೊಬೆಲ್ ಪ್ರಶಸ್ತಿ ವಿಜೇತ ಪ್ರೊಫೆಸರ್ ಮಾರ್ಟೆನ್ ಪಿ ಮೆಲ್ಡಾಲ್ ತಿಳಿಸಿದರು.</p><p>ಆರಂಭಿಕ ತರಗತಿಗಳಿಂದಲೇ ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಉತ್ಸಾಹ, ಕುತೂಹಲ ಮತ್ತು ಆಸಕ್ತಿಯನ್ನು ಹುಟ್ಟುಹಾಕಬೇಕು ಎಂದು ಹೇಳಿದರು.</p><p>ಶಿಕ್ಷಣಕ್ಕೆ ಸಂಬಂಧಿಸಿದಂತೆ ಆಸಕ್ತಿದಾಯಕ ವಿಷಯಗಳಾದ, ಪರಿಸರ ಮಾಲಿನ್ಯ– ರಕ್ಷಣೆ, ಜಾಗತಿಕ ತಾಪಮಾನ ಏರಿಕೆ, ಯುದ್ಧಗಳ ಪರಿಣಾಮಗಳು, ರಾಜಕೀಯ ಪರಿಕಲ್ಪನೆಗಳು, ಶಾಂತಿಯ ಮಹತ್ವದ ಬಗ್ಗೆ ಕಿರು ವಿಡಿಯೊಗಳ ಮೂಲಕ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು ಎಂದರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರಂ:</strong> ಪ್ರಗತಿ ಸಾಧಿಸಲು ಬಯಸುವ ಸಮಾಜಕ್ಕೆ ಹೆಚ್ಚಿನ ಲಾಭವನ್ನು ನೀಡುವ ಅತ್ಯಂತ ಭರವಸೆಯ ಹೂಡಿಕೆ ಎಂದರೆ ಶಿಕ್ಷಣ ಎಂದು ನೊಬೆಲ್ ಪ್ರಶಸ್ತಿ ವಿಜೇತ ಮಾರ್ಟೆನ್ ಪಿ ಮೆಲ್ಡಾಲ್ ಹೇಳಿದ್ದಾರೆ.</p><p>ಮುನ್ನಾರ್ನಲ್ಲಿ ಬಯೋಟೆಕ್ನಾಲಜಿ ರಿಸರ್ಚ್ ಅಂಡ್ ಇನ್ನೋವೇಶನ್ ಕೌನ್ಸಿಲ್ ಆಯೋಜಿಸಿದ್ದ ಆರ್ಜಿಸಿಬಿ ಸಂಶೋಧನಾ ಸಮ್ಮೇಳನದಲ್ಲಿ ಮಾರ್ಟೆನ್ ಪಿ ಮೆಲ್ಡಾಲ್ ಅವರು ಶಿಕ್ಷಣದ ಮಹತ್ವ ತಿಳಿಸಿದರು.</p><p>ವಿಯೆಟ್ನಾಂ, ಪೋಲೆಂಡ್, ಫಿನ್ಲ್ಯಾಂಡ್, ಡೆನ್ಮಾರ್ಕ್ನಂತಹ ದೇಶಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತವೆ. </p>.ಉತ್ತರ ಕನ್ನಡ | ಸಂಶೋಧನೆ ಆಧಾರಿತ ಉದ್ಯಮ ಇಂದಿನ ಅಗತ್ಯ: ವಿಜ್ಞಾನಿ ಡಾ.ಅಶೋಕ ಪ್ರಭು.<p>ಶಿಕ್ಷಣದಿಂದ 10–20 ವರ್ಷಗಳಲ್ಲಿ ಯಶಸ್ಸನ್ನು ಸಾಧಿಸುತ್ತಿವೆ ಎಂದು ರಸಾಯನವಿಜ್ಞಾನ ನೊಬೆಲ್ ಪ್ರಶಸ್ತಿ ವಿಜೇತ ಪ್ರೊಫೆಸರ್ ಮಾರ್ಟೆನ್ ಪಿ ಮೆಲ್ಡಾಲ್ ತಿಳಿಸಿದರು.</p><p>ಆರಂಭಿಕ ತರಗತಿಗಳಿಂದಲೇ ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಉತ್ಸಾಹ, ಕುತೂಹಲ ಮತ್ತು ಆಸಕ್ತಿಯನ್ನು ಹುಟ್ಟುಹಾಕಬೇಕು ಎಂದು ಹೇಳಿದರು.</p><p>ಶಿಕ್ಷಣಕ್ಕೆ ಸಂಬಂಧಿಸಿದಂತೆ ಆಸಕ್ತಿದಾಯಕ ವಿಷಯಗಳಾದ, ಪರಿಸರ ಮಾಲಿನ್ಯ– ರಕ್ಷಣೆ, ಜಾಗತಿಕ ತಾಪಮಾನ ಏರಿಕೆ, ಯುದ್ಧಗಳ ಪರಿಣಾಮಗಳು, ರಾಜಕೀಯ ಪರಿಕಲ್ಪನೆಗಳು, ಶಾಂತಿಯ ಮಹತ್ವದ ಬಗ್ಗೆ ಕಿರು ವಿಡಿಯೊಗಳ ಮೂಲಕ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು ಎಂದರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>