<p><strong>ಇಂಫಾಲ್</strong>: ನಿಷೇಧಿತ ಸಂಘಟನೆ ನ್ಯಾಷನಲ್ ರೆವಲ್ಯೂಷನರಿ ಫ್ರಂಟ್ ಆಫ್ ಮಣಿಪುರ ( ಎನ್ಆರ್ಎಫ್ಎಂ) ಕರೆ ನೀಡಿದ್ದ 18 ತಾಸು ಬಂದ್, ಇಂಫಾಲ್ ಸೇರಿದಂತೆ ಕಣಿವೆಯ ಇತರ ಜಿಲ್ಲೆಗಳ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು.</p>.<p>ಐದು ಜಿಲ್ಲೆಗಳಲ್ಲಿ ಮಾರುಕಟ್ಟೆ, ವಾಣಿಜ್ಯ ಮಳಿಗೆಗಳು, ಬ್ಯಾಂಕ್ಗಳು ಬಾಗಿಲು ಮುಚ್ಚಿದ್ದವು. ಸಾರ್ವಜನಿಕ ಸಾರಿಗೆಗಳ ಸಂಚಾರ ಸ್ಥಗಿತಗೊಂಡು, ಖಾಸಗಿ ವಾಹನಗಳು ಮಾತ್ರ ಅಲ್ಲಲ್ಲಿ ಸಂಚರಿಸಿದವು. ಅಗತ್ಯ ಸೇವೆಗಳಿಗೆ ಬಂದ್ನಿಂದ ವಿನಾಯಿತಿ ನೀಡಲಾಗಿತ್ತು.</p>.<p>ಎನ್ಆರ್ಎಫ್ಎಂ ಸಂಘಟನೆಯು ಶನಿವಾರ ರಾತ್ರಿಯಿಂದ ಬಂದ್ಗೆ ಕರೆ ನೀಡಿತ್ತು.</p>.<p>ಕಣಿವೆ ರಾಜ್ಯದ ವಿಲೀನಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 21, 1949ರಂದು ಮಣಿಪುರದ ಮಹಾರಾಜ ಬೋಧಚಂದ್ರ ಮತ್ತು ಭಾರತ ಸರ್ಕಾರದ ನಡುವೆ ಒಪ್ಪಂದ ನಡೆದಿತ್ತು. ಒಪ್ಪಂದದ ನಂತರ ಮಣಿಪುರವು ಅಖಂಡ ಭಾರತ ಭಾಗವಾಗಿತ್ತು. ಈ ಒಪ್ಪಂದವನ್ನು ವಿರೋಧಿಸಿ ಎನ್ಆರ್ಎಫ್ಎಂ ಬಂದ್ಗೆ ಕರೆ ನೀಡಿತ್ತು.</p>.<p><strong>ಸ್ಫೋಟಕಗಳು, ಶೆಲ್ ವಶಕ್ಕೆ:</strong></p>.<p>ಮಣಿಪುರದ ಚುರಾಚಂದಪುರ ಜಿಲ್ಲೆಯಲ್ಲಿ ನಡೆದ ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ ಸ್ಫೋಟಕಗಳು ಮತ್ತು ರಾಕೆಟ್ ಶೆಲ್ ಪತ್ತೆಯಾಗಿವೆ ಎಂದು ಪೊಲೀಸ್ ಹೇಳಿಕೆಯಲ್ಲಿ ಶನಿವಾರ ತಿಳಿಸಲಾಗಿದೆ.</p>.<p>ಮೂರು ಸಣ್ಣ ಫಿರಂಗಿಗಳು, ಗ್ರನೇಡ್ ಮತ್ತಿತರ ವಸ್ತುಗಳು ಸಹ ಪತ್ತೆಯಾಗಿವೆ ಎಂದು ತಿಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಂಫಾಲ್</strong>: ನಿಷೇಧಿತ ಸಂಘಟನೆ ನ್ಯಾಷನಲ್ ರೆವಲ್ಯೂಷನರಿ ಫ್ರಂಟ್ ಆಫ್ ಮಣಿಪುರ ( ಎನ್ಆರ್ಎಫ್ಎಂ) ಕರೆ ನೀಡಿದ್ದ 18 ತಾಸು ಬಂದ್, ಇಂಫಾಲ್ ಸೇರಿದಂತೆ ಕಣಿವೆಯ ಇತರ ಜಿಲ್ಲೆಗಳ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು.</p>.<p>ಐದು ಜಿಲ್ಲೆಗಳಲ್ಲಿ ಮಾರುಕಟ್ಟೆ, ವಾಣಿಜ್ಯ ಮಳಿಗೆಗಳು, ಬ್ಯಾಂಕ್ಗಳು ಬಾಗಿಲು ಮುಚ್ಚಿದ್ದವು. ಸಾರ್ವಜನಿಕ ಸಾರಿಗೆಗಳ ಸಂಚಾರ ಸ್ಥಗಿತಗೊಂಡು, ಖಾಸಗಿ ವಾಹನಗಳು ಮಾತ್ರ ಅಲ್ಲಲ್ಲಿ ಸಂಚರಿಸಿದವು. ಅಗತ್ಯ ಸೇವೆಗಳಿಗೆ ಬಂದ್ನಿಂದ ವಿನಾಯಿತಿ ನೀಡಲಾಗಿತ್ತು.</p>.<p>ಎನ್ಆರ್ಎಫ್ಎಂ ಸಂಘಟನೆಯು ಶನಿವಾರ ರಾತ್ರಿಯಿಂದ ಬಂದ್ಗೆ ಕರೆ ನೀಡಿತ್ತು.</p>.<p>ಕಣಿವೆ ರಾಜ್ಯದ ವಿಲೀನಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 21, 1949ರಂದು ಮಣಿಪುರದ ಮಹಾರಾಜ ಬೋಧಚಂದ್ರ ಮತ್ತು ಭಾರತ ಸರ್ಕಾರದ ನಡುವೆ ಒಪ್ಪಂದ ನಡೆದಿತ್ತು. ಒಪ್ಪಂದದ ನಂತರ ಮಣಿಪುರವು ಅಖಂಡ ಭಾರತ ಭಾಗವಾಗಿತ್ತು. ಈ ಒಪ್ಪಂದವನ್ನು ವಿರೋಧಿಸಿ ಎನ್ಆರ್ಎಫ್ಎಂ ಬಂದ್ಗೆ ಕರೆ ನೀಡಿತ್ತು.</p>.<p><strong>ಸ್ಫೋಟಕಗಳು, ಶೆಲ್ ವಶಕ್ಕೆ:</strong></p>.<p>ಮಣಿಪುರದ ಚುರಾಚಂದಪುರ ಜಿಲ್ಲೆಯಲ್ಲಿ ನಡೆದ ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ ಸ್ಫೋಟಕಗಳು ಮತ್ತು ರಾಕೆಟ್ ಶೆಲ್ ಪತ್ತೆಯಾಗಿವೆ ಎಂದು ಪೊಲೀಸ್ ಹೇಳಿಕೆಯಲ್ಲಿ ಶನಿವಾರ ತಿಳಿಸಲಾಗಿದೆ.</p>.<p>ಮೂರು ಸಣ್ಣ ಫಿರಂಗಿಗಳು, ಗ್ರನೇಡ್ ಮತ್ತಿತರ ವಸ್ತುಗಳು ಸಹ ಪತ್ತೆಯಾಗಿವೆ ಎಂದು ತಿಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>