<p><strong>ನವದೆಹಲಿ</strong>: ವ್ಯಕ್ತಿಯೊಬ್ಬರಿಗೆ ₹17 ಲಕ್ಷಕ್ಕೂ ಹೆಚ್ಚು ಹಣ ವಂಚನೆ ನಡೆಸಿದ ಆರೋಪದ ಮೇಲೆ ದೆಹಲಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ಹೇಳಿದ್ದಾರೆ.</p><p>ದೇಶದಾದ್ಯಂತ ಮನೆಯಲ್ಲೆ ಇದ್ದು ವೆಬ್ಸೈಟ್ಗಳನ್ನು ಪರಿಶೀಲಿಸುವ ಮೂಲಕ ಹಣ ಗಳಿಸಿ ಎಂದು ಆರೋಪಿಗಳು ಸಂತ್ರಸ್ತರಿಗೆ ಆಮಿಷವೊಡ್ಡಿ ವಂಚನೆ ಎಸಗುತ್ತಿದ್ದರು.</p><p>ಅಂಕುರ್ ಮಿಶ್ರಾ (22), ಕ್ರತಾರ್ಥ್ (21), ವಿಶ್ವಾಸ್ ಶರ್ಮಾ (32) ಮತ್ತು ಕೇತನ್ ಮಿಶ್ರಾ (18) ಬಂಧಿತರು. ಆರೋಪಿಗಳು ಸಂತ್ರಸ್ತರನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಸಂಪರ್ಕಿಸಿ ಅವರಿಗೆ ಆಕರ್ಷಕ ಆನ್ಲೈನ್ ಉದ್ಯೋಗದ ನೆಪದಲ್ಲಿ ಅವರನ್ನು ವಂಚಿಸುತ್ತಿದ್ದರು.</p><p>‘ಮೇ 27ರಂದು ಸಂತ್ರಸ್ತ ವ್ಯಕ್ತಿ ನೀಡಿದ ದೂರಿನ ಪ್ರಕಾರ, ವೆಬ್ಸೈಟ್ಗಳನ್ನು ವಿಮರ್ಶೆ ಮಾಡಿ ಎಂದು ಆರೋಪಿಗಳು ತನ್ನನ್ನು ಸಂಪರ್ಕಿಸಿದ್ದರು. ಆರಂಭದಲ್ಲಿ ವ್ಯಕ್ತಿಯು ಪ್ರತಿ ವಿಮರ್ಶೆಗೆ ₹50 ಪಡೆದಿದ್ದರು. ನಂತರ ಅವರನ್ನು ಕ್ರಿಪ್ಟೊ ಕರೆನ್ಸಿ ಕೊಳ್ಳುವಂತೆ ಮತ್ತು ಅದರಿಂದ ಹೆಚ್ಚಿನ ಲಾಭ ಸಿಗಲಿದೆ ಎಂದು ನಂಬಿಸಿ ಲಕ್ಷಾಂತರ ಹಣ ವಂಚಿಸಿದ್ದಾರೆ’ ಎಂದು ನೈರುತ್ಯ ಡಿಸಿಪಿ ಅಮಿತ್ ಗೋಯೆಲ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ವ್ಯಕ್ತಿಯೊಬ್ಬರಿಗೆ ₹17 ಲಕ್ಷಕ್ಕೂ ಹೆಚ್ಚು ಹಣ ವಂಚನೆ ನಡೆಸಿದ ಆರೋಪದ ಮೇಲೆ ದೆಹಲಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ಹೇಳಿದ್ದಾರೆ.</p><p>ದೇಶದಾದ್ಯಂತ ಮನೆಯಲ್ಲೆ ಇದ್ದು ವೆಬ್ಸೈಟ್ಗಳನ್ನು ಪರಿಶೀಲಿಸುವ ಮೂಲಕ ಹಣ ಗಳಿಸಿ ಎಂದು ಆರೋಪಿಗಳು ಸಂತ್ರಸ್ತರಿಗೆ ಆಮಿಷವೊಡ್ಡಿ ವಂಚನೆ ಎಸಗುತ್ತಿದ್ದರು.</p><p>ಅಂಕುರ್ ಮಿಶ್ರಾ (22), ಕ್ರತಾರ್ಥ್ (21), ವಿಶ್ವಾಸ್ ಶರ್ಮಾ (32) ಮತ್ತು ಕೇತನ್ ಮಿಶ್ರಾ (18) ಬಂಧಿತರು. ಆರೋಪಿಗಳು ಸಂತ್ರಸ್ತರನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಸಂಪರ್ಕಿಸಿ ಅವರಿಗೆ ಆಕರ್ಷಕ ಆನ್ಲೈನ್ ಉದ್ಯೋಗದ ನೆಪದಲ್ಲಿ ಅವರನ್ನು ವಂಚಿಸುತ್ತಿದ್ದರು.</p><p>‘ಮೇ 27ರಂದು ಸಂತ್ರಸ್ತ ವ್ಯಕ್ತಿ ನೀಡಿದ ದೂರಿನ ಪ್ರಕಾರ, ವೆಬ್ಸೈಟ್ಗಳನ್ನು ವಿಮರ್ಶೆ ಮಾಡಿ ಎಂದು ಆರೋಪಿಗಳು ತನ್ನನ್ನು ಸಂಪರ್ಕಿಸಿದ್ದರು. ಆರಂಭದಲ್ಲಿ ವ್ಯಕ್ತಿಯು ಪ್ರತಿ ವಿಮರ್ಶೆಗೆ ₹50 ಪಡೆದಿದ್ದರು. ನಂತರ ಅವರನ್ನು ಕ್ರಿಪ್ಟೊ ಕರೆನ್ಸಿ ಕೊಳ್ಳುವಂತೆ ಮತ್ತು ಅದರಿಂದ ಹೆಚ್ಚಿನ ಲಾಭ ಸಿಗಲಿದೆ ಎಂದು ನಂಬಿಸಿ ಲಕ್ಷಾಂತರ ಹಣ ವಂಚಿಸಿದ್ದಾರೆ’ ಎಂದು ನೈರುತ್ಯ ಡಿಸಿಪಿ ಅಮಿತ್ ಗೋಯೆಲ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>