<p><strong>ತಿರುಪತಿ</strong>: ‘ವ್ಯಕ್ತಿಯೊಬ್ಬ ಸರಪಂಚ, ಪುರಸಭಾ ಸದಸ್ಯ ಅಥವಾ ಮೇಯರ್ ಆಗಲು ಎರಡು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರಬೇಕು. ಜನಸಂಖ್ಯೆ ಹೆಚ್ಚಳ ಮಾಡುವ ಉದ್ದೇಶದಿಂದ ಇಂತಹ ಕಾಯ್ದೆಯನ್ನು ರಾಜ್ಯದಲ್ಲಿ ತರಲಿದ್ದೇನೆ’ ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದರು. </p><p>‘ಒಂದು ಕಾಲದಲ್ಲಿ ಹೆಚ್ಚು ಮಕ್ಕಳಿದ್ದವರಿಗೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಇರಲಿಲ್ಲ. ಈಗ ನಾನು ಇದಕ್ಕೆ ತದ್ವಿರುದ್ಧವಾದ ವಿಷಯವನ್ನು ಹೇಳುತ್ತಿದ್ದೇನೆ’ ಎಂದು ನಾರಾವಾರಿಪಲ್ಲೆಯಲ್ಲಿ ಈಚೆಗೆ ಸುದ್ದಿಗಾರರಿಗೆ ತಿಳಿಸಿದರು. </p><p><strong>ಜನಸಂಖ್ಯೆ ಹೆಚ್ಚಿಸಬೇಕೆಂಬ ತಮ್ಮ ಪ್ರತಿಪಾದನೆಗೆ ನಾಯ್ಡು ಅವರು ನೀಡಿದ ಸಮರ್ಥನೆಗಳಿವು:</strong></p><ul><li><p>ಹಿಂದೆಲ್ಲ ನಾಲ್ಕೈದು ಮಕ್ಕಳನ್ನು ತಂದೆ–ತಾಯಿ ಪಡೆಯುತ್ತಿದ್ದರು. ಈಗಿನವರು ಒಂದಕ್ಕೆ ಸಾಕೆನ್ನುತ್ತಾರೆ. ಇನ್ನು ಕೆಲವರು ತಮ್ಮಷ್ಟಕ್ಕೆ ಖುಷಿಯಾಗಿ ಇರಲೆಂದು ಮಕ್ಕಳೇ ಬೇಡವೆನ್ನುತ್ತಿದ್ದಾರೆ. ಇದು ಸರಿಯಲ್ಲ.</p></li><li><p>ಒಂದೇ ಮಗು ಸಾಕು ಎಂದರೆ 2047ರ ಹೊತ್ತಿಗೆ ವೃದ್ಧರ ಸಂಖ್ಯೆಯೇ ಹೆಚ್ಚಾಗಿ ಯುವಕರ ಸಂಖ್ಯೆ ಕಡಿಮೆಯಾಗುತ್ತದೆ.</p></li><li><p>ದಕ್ಪಿಣ ಕೊರಿಯಾ, ಜಪಾನ್ ಕೂಡ ಮಕ್ಕಳು ಬೇಡ ಎಂದು ತೀರ್ಮಾನ ತೆಗೆದುಕೊಂಡು, ಸಂಪತ್ತಿನ ಕ್ರೋಡೀಕರಣಕ್ಕೆ ಮುಂದಾಗಿದ್ದವು. ಈಗ ಅಲ್ಲಿ ಜನಸಂಖ್ಯೆ ಇಲ್ಲದಿರುವುದೇ ಸಮಸ್ಯೆಯಾಗಿದೆ. ಮಾನವ ಸಂಪನ್ಮೂಲವನ್ನು ಅಲ್ಲಿಗೆ ನಾವು ಕಳುಹಿಸಬೇಕಾಗಿದೆ. ಯುರೋಪ್ನ ಕೆಲವೆಡೆಯೂ ಇದೇ ಸಮಸ್ಯೆ ಇದೆ.</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುಪತಿ</strong>: ‘ವ್ಯಕ್ತಿಯೊಬ್ಬ ಸರಪಂಚ, ಪುರಸಭಾ ಸದಸ್ಯ ಅಥವಾ ಮೇಯರ್ ಆಗಲು ಎರಡು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರಬೇಕು. ಜನಸಂಖ್ಯೆ ಹೆಚ್ಚಳ ಮಾಡುವ ಉದ್ದೇಶದಿಂದ ಇಂತಹ ಕಾಯ್ದೆಯನ್ನು ರಾಜ್ಯದಲ್ಲಿ ತರಲಿದ್ದೇನೆ’ ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದರು. </p><p>‘ಒಂದು ಕಾಲದಲ್ಲಿ ಹೆಚ್ಚು ಮಕ್ಕಳಿದ್ದವರಿಗೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಇರಲಿಲ್ಲ. ಈಗ ನಾನು ಇದಕ್ಕೆ ತದ್ವಿರುದ್ಧವಾದ ವಿಷಯವನ್ನು ಹೇಳುತ್ತಿದ್ದೇನೆ’ ಎಂದು ನಾರಾವಾರಿಪಲ್ಲೆಯಲ್ಲಿ ಈಚೆಗೆ ಸುದ್ದಿಗಾರರಿಗೆ ತಿಳಿಸಿದರು. </p><p><strong>ಜನಸಂಖ್ಯೆ ಹೆಚ್ಚಿಸಬೇಕೆಂಬ ತಮ್ಮ ಪ್ರತಿಪಾದನೆಗೆ ನಾಯ್ಡು ಅವರು ನೀಡಿದ ಸಮರ್ಥನೆಗಳಿವು:</strong></p><ul><li><p>ಹಿಂದೆಲ್ಲ ನಾಲ್ಕೈದು ಮಕ್ಕಳನ್ನು ತಂದೆ–ತಾಯಿ ಪಡೆಯುತ್ತಿದ್ದರು. ಈಗಿನವರು ಒಂದಕ್ಕೆ ಸಾಕೆನ್ನುತ್ತಾರೆ. ಇನ್ನು ಕೆಲವರು ತಮ್ಮಷ್ಟಕ್ಕೆ ಖುಷಿಯಾಗಿ ಇರಲೆಂದು ಮಕ್ಕಳೇ ಬೇಡವೆನ್ನುತ್ತಿದ್ದಾರೆ. ಇದು ಸರಿಯಲ್ಲ.</p></li><li><p>ಒಂದೇ ಮಗು ಸಾಕು ಎಂದರೆ 2047ರ ಹೊತ್ತಿಗೆ ವೃದ್ಧರ ಸಂಖ್ಯೆಯೇ ಹೆಚ್ಚಾಗಿ ಯುವಕರ ಸಂಖ್ಯೆ ಕಡಿಮೆಯಾಗುತ್ತದೆ.</p></li><li><p>ದಕ್ಪಿಣ ಕೊರಿಯಾ, ಜಪಾನ್ ಕೂಡ ಮಕ್ಕಳು ಬೇಡ ಎಂದು ತೀರ್ಮಾನ ತೆಗೆದುಕೊಂಡು, ಸಂಪತ್ತಿನ ಕ್ರೋಡೀಕರಣಕ್ಕೆ ಮುಂದಾಗಿದ್ದವು. ಈಗ ಅಲ್ಲಿ ಜನಸಂಖ್ಯೆ ಇಲ್ಲದಿರುವುದೇ ಸಮಸ್ಯೆಯಾಗಿದೆ. ಮಾನವ ಸಂಪನ್ಮೂಲವನ್ನು ಅಲ್ಲಿಗೆ ನಾವು ಕಳುಹಿಸಬೇಕಾಗಿದೆ. ಯುರೋಪ್ನ ಕೆಲವೆಡೆಯೂ ಇದೇ ಸಮಸ್ಯೆ ಇದೆ.</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>