<p><strong>ತಿರುವನಂತಪುರ</strong>: ಕೇಂದ್ರದ ವಿವಿಧ ತೆರಿಗೆಗಳಲ್ಲಿ ರಾಜ್ಯಗಳಿಗೆ ಶೇ 50ರಷ್ಟು ಪಾಲು ನೀಡಬೇಕು ಎಂದು ಬಿಜೆಪಿಯೇತರ ಸರ್ಕಾರವಿರುವ ಐದು ರಾಜ್ಯಗಳು ಗುರುವಾರ ಪ್ರತಿಪಾದಿಸಿವೆ.</p>.<p>ಸೆಸ್ ಮತ್ತು ಸರ್ಚಾರ್ಜ್ಗಳಲ್ಲಿ ಹೆಚ್ಚಳ ಮಾಡುವ ಕೇಂದ್ರ ಸರ್ಕಾರದ ನಡೆಯನ್ನು ಕೂಡ ಬಲವಾಗಿ ವಿರೋಧಿಸಿವೆ. </p>.<p>ತೆರಿಗೆ ಪಾಲಿನಲ್ಲಿ ಆಗುತ್ತಿರುವ ತಾರತಮ್ಯ ವಿರೋಧಿಸಿ ಹಾಗೂ ರಾಜ್ಯಗಳ ಬೇಡಿಕೆಗಳ ಕುರಿತು 16ನೇ ಹಣಕಾಸು ಆಯೋಗದ ಮೇಲೆ ಒತ್ತಡ ಹೇರುವುದಕ್ಕಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಆಯೋಜಿಸಿದ್ದ ವಿಪಕ್ಷಗಳ ಆಡಳಿತವಿರುವ ರಾಜ್ಯಗಳ ಹಣಕಾಸು ಸಚಿವರ ಸಭೆಯಲ್ಲಿ ಈ ಕುರಿತು ಚರ್ಚಿಸಲಾಯಿತು.</p>.<p>ತೆರಿಗೆ ಪಾಲಿನಲ್ಲಿನ ತಾರತಮ್ಯ ವಿಚಾರವಾಗಿ ಹಣಕಾಸು ಆಯೋಗ ಮೇಲೆ ಒತ್ತಡ ಹೇರುವ ಉದ್ದೇಶಕ್ಕಾಗಿ ‘ಸಂಯುಕ್ತ ರಂಗ’ ರಚಿಸುವ ಅಗತ್ಯತೆಯನ್ನು ಸಭೆಯಲ್ಲಿ ಪಾಲ್ಗೊಂಡಿದ್ದ ಸಚಿವರು ಪ್ರತಿಪಾದಿಸಿದರು.</p>.<p>ಕರ್ನಾಟಕ, ಕೇರಳ, ಪಂಜಾಬ್, ತಮಿಳುನಾಡು ಹಾಗೂ ತೆಲಂಗಾಣ ರಾಜ್ಯಗಳ ವಿತ್ತ ಸಚಿವರು ಸಭೆಯಲ್ಲಿ ಪಾಲ್ಗೊಂಡಿದ್ದರು. </p>.<p>ತೆರಿಗೆಯಲ್ಲಿ ರಾಜ್ಯಗಳಿಗೆ ಬರಬೇಕಾದ ಪಾಲು ಸೇರಿದಂತೆ ವಿವಿಧ ವಿಷಯಗಳ ಕುರಿತ ಹಣಕಾಸು ಆಯೋಗಕ್ಕೆ ಸಲ್ಲಿಸಬೇಕಾದ ಜಂಟಿ ಹೇಳಿಕೆಯ ಕರಡುವನ್ನು ಸಿದ್ಧಪಡಿಸುವ ಕುರಿತು ಸಹ ಸಭೆಯಲ್ಲಿ ತೀರ್ಮಾನಿಸಲಾಯಿತು.</p>.<p>ಕರ್ನಾಟಕ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ‘ಕೇಂದ್ರ ವಿಧಿಸುವ ಸೆಸ್ಗಳು ಹಾಗೂ ಸರ್ಚಾರ್ಜ್ಗೆ ಸಂಬಂಧಿಸಿ ಶೇ 5ರಷ್ಟು ಮಿತಿ ಜಾರಿಗೊಳಿಸಬೇಕು’ ಎಂಬ ಸಲಹೆ ನೀಡಿದರು.</p>.<div><blockquote>ಕೇಂದ್ರ ಸರ್ಕಾರ ಸೆಸ್ ಮತ್ತು ಸರ್ಚಾರ್ಜ್ ಸಂಗ್ರಹಿಸಿದ್ದರಿಂದಾಗಿ ಕಳೆದ ವರ್ಷ ಕರ್ನಾಟಕ ಅಂದಾಜು ₹53 ಸಾವಿರ ಕೋಟಿ ಕಳೆದುಕೊಂಡಿತು.</blockquote><span class="attribution">ಕೃಷ್ಣ ಬೈರೇಗೌಡ, ಕಂದಾಯ ಸಚಿವ</span></div>.<p>‘ಶೇ 5ಕ್ಕಿಂತ ಹೆಚ್ಚು ಸೆಸ್ ಮತ್ತು ಸರ್ಚಾರ್ಜ್ ಸಂಗ್ರಹಗೊಂಡಲ್ಲಿ, ಹೆಚ್ಚುವರಿ ಕರವನ್ನು ರಾಜ್ಯಗಳಿಗೆ ಹಂಚಿಕೆ ಮಾಡುವ ಭಾಗವಾಗಿ ಪರಿಗಣಿಸಬೇಕು’ ಎಂಬ ಸಲಹೆಯನ್ನೂ ಮುಂದಿಟ್ಟರು.</p>.<p>ರಾಜ್ಯಗಳಿಗೆ ಅನುದಾನ ಹಂಚಿಕೆ ಮಾಡಲು, 2011ರಲ್ಲಿದ್ದ ಜನಸಂಖ್ಯೆಯನ್ನು ಆಧಾರವನ್ನಾಗಿ ಪರಿಗಣಿಸುವ ಹಣಕಾಸು ಆಯೋಗದ ಕ್ರಮವನ್ನು ದಕ್ಷಿಣದ ಎಲ್ಲ ರಾಜ್ಯಗಳು ವಿರೋಧಿಸಿದವು.</p>.<p>ಕೇಂದ್ರದ ಈ ಕ್ರಮವು, ಜನಸಂಖ್ಯೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಣ ಮಾಡಿದ ರಾಜ್ಯಗಳಿಗೆ ದಂಡ ವಿಧಿಸಿದಂತಿದೆ. ಈ ವಿಚಾರದಲ್ಲಿ ವಿಫಲವಾಗಿರುವ ರಾಜ್ಯಗಳಿಗೆ ಹೆಚ್ಚು ಅನುದಾನ ನೀಡಲು ಅವಕಾಶ ನೀಡಿದಂತಾಗಿದೆ ಎಂಬ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತವಾಯಿತು.</p>.<p>ತಮಿಳುನಾಡು ಹಣಕಾಸು ಸಚಿವ ತಂಗಂ ತೆನ್ನರಸು, ಕೇರಳದ ಕೆ.ಎನ್.ಬಾಲಗೋಪಾಲ, ಪಂಜಾಬ್ನ ಹರ್ಪಾಲ್ ಸಿಂಗ್ ಚೀಮಾ, ತೆಲಂಗಾಣ ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ</strong>: ಕೇಂದ್ರದ ವಿವಿಧ ತೆರಿಗೆಗಳಲ್ಲಿ ರಾಜ್ಯಗಳಿಗೆ ಶೇ 50ರಷ್ಟು ಪಾಲು ನೀಡಬೇಕು ಎಂದು ಬಿಜೆಪಿಯೇತರ ಸರ್ಕಾರವಿರುವ ಐದು ರಾಜ್ಯಗಳು ಗುರುವಾರ ಪ್ರತಿಪಾದಿಸಿವೆ.</p>.<p>ಸೆಸ್ ಮತ್ತು ಸರ್ಚಾರ್ಜ್ಗಳಲ್ಲಿ ಹೆಚ್ಚಳ ಮಾಡುವ ಕೇಂದ್ರ ಸರ್ಕಾರದ ನಡೆಯನ್ನು ಕೂಡ ಬಲವಾಗಿ ವಿರೋಧಿಸಿವೆ. </p>.<p>ತೆರಿಗೆ ಪಾಲಿನಲ್ಲಿ ಆಗುತ್ತಿರುವ ತಾರತಮ್ಯ ವಿರೋಧಿಸಿ ಹಾಗೂ ರಾಜ್ಯಗಳ ಬೇಡಿಕೆಗಳ ಕುರಿತು 16ನೇ ಹಣಕಾಸು ಆಯೋಗದ ಮೇಲೆ ಒತ್ತಡ ಹೇರುವುದಕ್ಕಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಆಯೋಜಿಸಿದ್ದ ವಿಪಕ್ಷಗಳ ಆಡಳಿತವಿರುವ ರಾಜ್ಯಗಳ ಹಣಕಾಸು ಸಚಿವರ ಸಭೆಯಲ್ಲಿ ಈ ಕುರಿತು ಚರ್ಚಿಸಲಾಯಿತು.</p>.<p>ತೆರಿಗೆ ಪಾಲಿನಲ್ಲಿನ ತಾರತಮ್ಯ ವಿಚಾರವಾಗಿ ಹಣಕಾಸು ಆಯೋಗ ಮೇಲೆ ಒತ್ತಡ ಹೇರುವ ಉದ್ದೇಶಕ್ಕಾಗಿ ‘ಸಂಯುಕ್ತ ರಂಗ’ ರಚಿಸುವ ಅಗತ್ಯತೆಯನ್ನು ಸಭೆಯಲ್ಲಿ ಪಾಲ್ಗೊಂಡಿದ್ದ ಸಚಿವರು ಪ್ರತಿಪಾದಿಸಿದರು.</p>.<p>ಕರ್ನಾಟಕ, ಕೇರಳ, ಪಂಜಾಬ್, ತಮಿಳುನಾಡು ಹಾಗೂ ತೆಲಂಗಾಣ ರಾಜ್ಯಗಳ ವಿತ್ತ ಸಚಿವರು ಸಭೆಯಲ್ಲಿ ಪಾಲ್ಗೊಂಡಿದ್ದರು. </p>.<p>ತೆರಿಗೆಯಲ್ಲಿ ರಾಜ್ಯಗಳಿಗೆ ಬರಬೇಕಾದ ಪಾಲು ಸೇರಿದಂತೆ ವಿವಿಧ ವಿಷಯಗಳ ಕುರಿತ ಹಣಕಾಸು ಆಯೋಗಕ್ಕೆ ಸಲ್ಲಿಸಬೇಕಾದ ಜಂಟಿ ಹೇಳಿಕೆಯ ಕರಡುವನ್ನು ಸಿದ್ಧಪಡಿಸುವ ಕುರಿತು ಸಹ ಸಭೆಯಲ್ಲಿ ತೀರ್ಮಾನಿಸಲಾಯಿತು.</p>.<p>ಕರ್ನಾಟಕ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ‘ಕೇಂದ್ರ ವಿಧಿಸುವ ಸೆಸ್ಗಳು ಹಾಗೂ ಸರ್ಚಾರ್ಜ್ಗೆ ಸಂಬಂಧಿಸಿ ಶೇ 5ರಷ್ಟು ಮಿತಿ ಜಾರಿಗೊಳಿಸಬೇಕು’ ಎಂಬ ಸಲಹೆ ನೀಡಿದರು.</p>.<div><blockquote>ಕೇಂದ್ರ ಸರ್ಕಾರ ಸೆಸ್ ಮತ್ತು ಸರ್ಚಾರ್ಜ್ ಸಂಗ್ರಹಿಸಿದ್ದರಿಂದಾಗಿ ಕಳೆದ ವರ್ಷ ಕರ್ನಾಟಕ ಅಂದಾಜು ₹53 ಸಾವಿರ ಕೋಟಿ ಕಳೆದುಕೊಂಡಿತು.</blockquote><span class="attribution">ಕೃಷ್ಣ ಬೈರೇಗೌಡ, ಕಂದಾಯ ಸಚಿವ</span></div>.<p>‘ಶೇ 5ಕ್ಕಿಂತ ಹೆಚ್ಚು ಸೆಸ್ ಮತ್ತು ಸರ್ಚಾರ್ಜ್ ಸಂಗ್ರಹಗೊಂಡಲ್ಲಿ, ಹೆಚ್ಚುವರಿ ಕರವನ್ನು ರಾಜ್ಯಗಳಿಗೆ ಹಂಚಿಕೆ ಮಾಡುವ ಭಾಗವಾಗಿ ಪರಿಗಣಿಸಬೇಕು’ ಎಂಬ ಸಲಹೆಯನ್ನೂ ಮುಂದಿಟ್ಟರು.</p>.<p>ರಾಜ್ಯಗಳಿಗೆ ಅನುದಾನ ಹಂಚಿಕೆ ಮಾಡಲು, 2011ರಲ್ಲಿದ್ದ ಜನಸಂಖ್ಯೆಯನ್ನು ಆಧಾರವನ್ನಾಗಿ ಪರಿಗಣಿಸುವ ಹಣಕಾಸು ಆಯೋಗದ ಕ್ರಮವನ್ನು ದಕ್ಷಿಣದ ಎಲ್ಲ ರಾಜ್ಯಗಳು ವಿರೋಧಿಸಿದವು.</p>.<p>ಕೇಂದ್ರದ ಈ ಕ್ರಮವು, ಜನಸಂಖ್ಯೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಣ ಮಾಡಿದ ರಾಜ್ಯಗಳಿಗೆ ದಂಡ ವಿಧಿಸಿದಂತಿದೆ. ಈ ವಿಚಾರದಲ್ಲಿ ವಿಫಲವಾಗಿರುವ ರಾಜ್ಯಗಳಿಗೆ ಹೆಚ್ಚು ಅನುದಾನ ನೀಡಲು ಅವಕಾಶ ನೀಡಿದಂತಾಗಿದೆ ಎಂಬ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತವಾಯಿತು.</p>.<p>ತಮಿಳುನಾಡು ಹಣಕಾಸು ಸಚಿವ ತಂಗಂ ತೆನ್ನರಸು, ಕೇರಳದ ಕೆ.ಎನ್.ಬಾಲಗೋಪಾಲ, ಪಂಜಾಬ್ನ ಹರ್ಪಾಲ್ ಸಿಂಗ್ ಚೀಮಾ, ತೆಲಂಗಾಣ ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>