<p><strong>ಭುವನೇಶ್ವರ:</strong> ಕಳೆದ 10 ವರ್ಷಗಳಲ್ಲಿ ಒಡಿಶಾದ 400ಕ್ಕೂ ಹೆಚ್ಚು ವಲಸೆ ಕಾರ್ಮಿಕರು ಹೊರ ರಾಜ್ಯಗಳಲ್ಲಿ ಮೃತಪಟ್ಟಿದ್ದಾರೆ ಎಂದು ಕಾರ್ಮಿಕ ಸಚಿವ ಗಣೇಶ್ ರಾಮ್ ಸಿಂಗ್ಖುಂಟಿಯಾ ಅವರು ವಿಧಾನಸಭೆಗೆ ಮಂಗಳವಾರ ತಿಳಿಸಿದ್ದಾರೆ.</p>.<p>ಬಿಜೆಪಿ ಶಾಸಕ ಟಂಕಧರ್ ತ್ರಿಪಾಠಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಗಣೇಶ್ ರಾಮ್ ಸಿಂಗ್ಖುಂಟಿಯಾ, 2015ರ ನವೆಂಬರ್ 27ರಿಂದ 2024ರ ನಡುವೆ ಒಡಿಶಾದ 403 ವಲಸೆ ಕಾರ್ಮಿಕರು ಇತರ ರಾಜ್ಯಗಳಲ್ಲಿ ಸಾವಿಗೀಡಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.</p>.<p>ಹೊರರಾಜ್ಯಗಳಲ್ಲಿ ಮೃತಪಟ್ಟವರಲ್ಲಿ ಗಂಜಾಂ ಜಿಲ್ಲೆಗೆ ಸೇರಿದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜಿಲ್ಲೆಯ ಸುಮಾರು 59 ಕಾರ್ಮಿಕರು ಮೃತಪಟ್ಟಿದ್ದಾರೆ. ಕಲಹಂಡಿಯಲ್ಲಿ–39, ಬೋಲಂಗೀರ್–35, ಕಂಧಮಾಲ್–32 ಮತ್ತು ರಾಯಗಡದಲ್ಲಿ –28 ಸಾವುಗಳು ವರದಿಯಾಗಿವೆ.</p>.<p>2014ರಲ್ಲಿ 26,397 ಕಾರ್ಮಿಕರ ವಲಸೆಗಾಗಿ ಒಡಿಶಾ ಸರ್ಕಾರವು ಅಂತರ-ರಾಜ್ಯ ವಲಸೆ ಕಾರ್ಮಿಕರ (ಉದ್ಯೋಗದ ನಿಯಂತ್ರಣ ಮತ್ತು ಸೇವಾ ಷರತ್ತುಗಳು) ಕಾಯ್ದೆ 1979ರ ನಿಬಂಧನೆಗಳ ಅಡಿಯಲ್ಲಿ 388 ಗುತ್ತಿಗೆದಾರರಿಗೆ ಪರವಾನಗಿಗಳನ್ನು ನೀಡಿದೆ.</p>.<p>ಅಲ್ಲದೇ 2024ರಲ್ಲಿ, 60,683 ಕಾರ್ಮಿಕರ ವಲಸೆಗಾಗಿ 883 ಮಂದಿ ಗುತ್ತಿಗೆದಾರರಿಗೆ ಪರವಾನಗಿಗಳನ್ನು ನೀಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.</p>.<p>ವಲಸೆ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಉಪ ಮುಖ್ಯಮಂತ್ರಿ ಕೆ.ವಿ. ಸಿಂಗ್ ಡಿಯೋ ನೇತೃತ್ವದಲ್ಲಿ ಉನ್ನತ ಮಟ್ಟದ ಕಾರ್ಯಪಡೆಯನ್ನು ಸ್ಥಾಪಿಸಿದೆ ಎಂದೂ ಅವರು ಹೇಳಿದ್ದಾರೆ.</p>.ವಯನಾಡ್ ಭೂಕುಸಿತ: ಸಂಕಷ್ಟದಲ್ಲಿ ಬಂಗಾಳದ 242 ವಲಸೆ ಕಾರ್ಮಿಕರು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭುವನೇಶ್ವರ:</strong> ಕಳೆದ 10 ವರ್ಷಗಳಲ್ಲಿ ಒಡಿಶಾದ 400ಕ್ಕೂ ಹೆಚ್ಚು ವಲಸೆ ಕಾರ್ಮಿಕರು ಹೊರ ರಾಜ್ಯಗಳಲ್ಲಿ ಮೃತಪಟ್ಟಿದ್ದಾರೆ ಎಂದು ಕಾರ್ಮಿಕ ಸಚಿವ ಗಣೇಶ್ ರಾಮ್ ಸಿಂಗ್ಖುಂಟಿಯಾ ಅವರು ವಿಧಾನಸಭೆಗೆ ಮಂಗಳವಾರ ತಿಳಿಸಿದ್ದಾರೆ.</p>.<p>ಬಿಜೆಪಿ ಶಾಸಕ ಟಂಕಧರ್ ತ್ರಿಪಾಠಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಗಣೇಶ್ ರಾಮ್ ಸಿಂಗ್ಖುಂಟಿಯಾ, 2015ರ ನವೆಂಬರ್ 27ರಿಂದ 2024ರ ನಡುವೆ ಒಡಿಶಾದ 403 ವಲಸೆ ಕಾರ್ಮಿಕರು ಇತರ ರಾಜ್ಯಗಳಲ್ಲಿ ಸಾವಿಗೀಡಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.</p>.<p>ಹೊರರಾಜ್ಯಗಳಲ್ಲಿ ಮೃತಪಟ್ಟವರಲ್ಲಿ ಗಂಜಾಂ ಜಿಲ್ಲೆಗೆ ಸೇರಿದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜಿಲ್ಲೆಯ ಸುಮಾರು 59 ಕಾರ್ಮಿಕರು ಮೃತಪಟ್ಟಿದ್ದಾರೆ. ಕಲಹಂಡಿಯಲ್ಲಿ–39, ಬೋಲಂಗೀರ್–35, ಕಂಧಮಾಲ್–32 ಮತ್ತು ರಾಯಗಡದಲ್ಲಿ –28 ಸಾವುಗಳು ವರದಿಯಾಗಿವೆ.</p>.<p>2014ರಲ್ಲಿ 26,397 ಕಾರ್ಮಿಕರ ವಲಸೆಗಾಗಿ ಒಡಿಶಾ ಸರ್ಕಾರವು ಅಂತರ-ರಾಜ್ಯ ವಲಸೆ ಕಾರ್ಮಿಕರ (ಉದ್ಯೋಗದ ನಿಯಂತ್ರಣ ಮತ್ತು ಸೇವಾ ಷರತ್ತುಗಳು) ಕಾಯ್ದೆ 1979ರ ನಿಬಂಧನೆಗಳ ಅಡಿಯಲ್ಲಿ 388 ಗುತ್ತಿಗೆದಾರರಿಗೆ ಪರವಾನಗಿಗಳನ್ನು ನೀಡಿದೆ.</p>.<p>ಅಲ್ಲದೇ 2024ರಲ್ಲಿ, 60,683 ಕಾರ್ಮಿಕರ ವಲಸೆಗಾಗಿ 883 ಮಂದಿ ಗುತ್ತಿಗೆದಾರರಿಗೆ ಪರವಾನಗಿಗಳನ್ನು ನೀಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.</p>.<p>ವಲಸೆ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಉಪ ಮುಖ್ಯಮಂತ್ರಿ ಕೆ.ವಿ. ಸಿಂಗ್ ಡಿಯೋ ನೇತೃತ್ವದಲ್ಲಿ ಉನ್ನತ ಮಟ್ಟದ ಕಾರ್ಯಪಡೆಯನ್ನು ಸ್ಥಾಪಿಸಿದೆ ಎಂದೂ ಅವರು ಹೇಳಿದ್ದಾರೆ.</p>.ವಯನಾಡ್ ಭೂಕುಸಿತ: ಸಂಕಷ್ಟದಲ್ಲಿ ಬಂಗಾಳದ 242 ವಲಸೆ ಕಾರ್ಮಿಕರು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>