<p><strong>ನವದೆಹಲಿ/ ನ್ಯೂಯಾರ್ಕ್:</strong> ಪಾಕಿಸ್ತಾನ ಸೇನೆಯ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಅವರು ಅಮೆರಿಕದ ನೆಲದಲ್ಲಿ ನಿಂತು, ಭಾರತದ ವಿರುದ್ಧ ಅಣ್ವಸ್ತ್ರ ಬಳಕೆಯ ಬೆದರಿಕೆಯೊಡಿದ್ದಾರೆ. ‘ಅಣ್ವಸ್ತ್ರ ಬ್ಲ್ಯಾಕ್ಮೇಲ್ಗೆ ಮಣಿಯುವುದಿಲ್ಲ’ ಎನ್ನುವ ಮೂಲಕ ಭಾರತ ಅದೇ ಧಾಟಿಯಲ್ಲಿ ತಿರುಗೇಟು ನೀಡಿದೆ.</p>.<p>ಫ್ಲಾರಿಡಾದ ಟ್ಯಾಂಪಾದಲ್ಲಿ ಪಾಕಿಸ್ತಾನಿ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದ ಮುನೀರ್, ಭಾರತದೊಂದಿಗಿನ ಭವಿಷ್ಯದ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಅಸ್ತಿತ್ವದ ಆತಂಕ ಎದುರಾದರೆ ಅಣ್ವಸ್ತ್ರ ಬಳಕೆಗೆ ಹಿಂಜರಿಯುವುದಿಲ್ಲ ಎಂದು ಹೇಳಿದ್ದಾಗಿ ವರದಿಯಾಗಿದೆ.</p>.<p>‘ಪಾಕಿಸ್ತಾನದಲ್ಲಿರುವ ಅಣ್ವಸ್ತ್ರಗಳು ಅಲ್ಲಿನ ಸರ್ಕಾರದ ನಿಯಂತ್ರಣದಲ್ಲಿಲ್ಲ ಎಂಬ ಅನುಮಾನಗಳನ್ನು ಮುನೀರ್ ಹೇಳಿಕೆ ಇನ್ನಷ್ಟು ಬಲಪಡಿಸಿದೆ. ಅಲ್ಲಿನ ಸೇನೆಯು ಭಯೋತ್ಪಾದಕ ಸಂಘಟನೆಗಳ ಜತೆ ಕೈಜೋಡಿಸಿದೆ’ ಎಂದು ಭಾರತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. </p>.<p>ನೆರೆಯ ದೇಶವು ‘ಬೇಜವಾಬ್ದಾರಿತನದ ಅಣ್ವಸ್ತ್ರ ರಾಷ್ಟ್ರ’ವಾಗಿದೆ ಮತ್ತು ಶಸ್ತ್ರಾಸ್ತ್ರಗಳು ಉಗ್ರರ ಕೈಗೆ ಸೇರುವ ಅಪಾಯವಿದೆ ಎಂಬುದನ್ನು ಈ ಬೆದರಿಕೆಯು ತೋರಿಸಿದೆ ಎಂದು ಹೇಳಿದೆ.</p>.<p>‘ಪಾಕಿಸ್ತಾನ ಸೇನಾ ಮುಖ್ಯಸ್ಥರ ಹೇಳಿಕೆ ಪಾಕಿಸ್ತಾನವು ಅನುಸರಿಸಿಕೊಂಡು ಬರುತ್ತಿರುವ ತಂತ್ರಗಾರಿಕೆಯ ಒಂದು ಭಾಗವಾಗಿದೆ. ಅಮೆರಿಕವು ಪಾಕಿಸ್ತಾನ ಸೇನೆಯನ್ನು ಬೆಂಬಲಿಸಿದಾಗಲೆಲ್ಲಾ ಅವರು ತಮ್ಮ ಆಕ್ರಮಣಶೀಲತೆಯ ನೈಜ ಬಣ್ಣವನ್ನು ಹೊರಹಾಕುತ್ತಾರೆ’ ಎಂದೂ ಭಾರತ ಪ್ರತಿಕ್ರಿಯಿಸಿದೆ. </p>.<p>ಭಾರತವು ಅಣ್ವಸ್ತ್ರ ಬೆದರಿಕೆಗೆ ಮಣಿಯುವುದಿಲ್ಲ ಮತ್ತು ರಾಷ್ಟ್ರೀಯ ಭದ್ರತೆಯನ್ನು ಕಾಪಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಹೇಳಿಕೆಯಲ್ಲಿ ತಿಳಿಸಿದೆ.</p>.<p>ಭಾರತದ ಗೆಳೆಯನಾಗಿರುವ ಮೂರನೇ ರಾಷ್ಟ್ರವೊಂದರ ನೆಲದಿಂದ ಇಂತಹ ಹೇಳಿಕೆ ನೀಡಲಾಗಿದೆ ಎಂಬುದು ವಿಷಾದಕರ ಸಂಗತಿ ಎಂದು ಅಮೆರಿಕಕ್ಕೆ ಸ್ಪಷ್ಟ ಸಂದೇಶದಲ್ಲಿ ತಿಳಿಸಿದೆ.</p>.<div><blockquote>ಮುನೀರ್ ಹೇಳಿಕೆಯನ್ನು ಕಾಂಗ್ರೆಸ್ ಖಂಡಿಸುತ್ತದೆ. ಅಮೆರಿಕವು ಅಂತಹ ವ್ಯಕ್ತಿಗೆ ವಿಶೇಷ ಆದರಾತಿಥ್ಯ ನೀಡುತ್ತಿರುವುದು ವಿಚಿತ್ರ ಎನಿಸುತ್ತದೆ.</blockquote><span class="attribution">ಜೈರಾಮ್ ರಮೇಶ್ ಕಾಂಗ್ರೆಸ್ ಮುಖಂಡ</span></div>.<div><blockquote>ಅಣ್ವಸ್ತ್ರ ಬಲ ತೋರಿಸಿ ಬೆದರಿಕೆಯೊಡ್ಡುವುದನ್ನೇ ಪಾಕಿಸ್ತಾನ ತನ್ನ ಕಾಯಕವನ್ನಾಗಿಸಿಕೊಂಡಿದೆ. ಇದು ಆ ದೇಶದ ಬೇಜವಾಬ್ದಾರಿತವನ್ನು ತೋರಿಸುತ್ತದೆ</blockquote><span class="attribution">ರಣಧೀರ್ ಜೈಸ್ವಾಲ್ ಎಂಇಎ ವಕ್ತಾರ</span></div>.<h2><strong>ಮುನೀರ್ ಹೇಳಿದ್ದೇನು?</strong> </h2><ul><li><p>ನಮ್ಮದು ಅಣ್ವಸ್ತ್ರ ಹೊಂದಿರುವ ರಾಷ್ಟ್ರ. ಒಂದು ವೇಳೆ ಯುದ್ಧ ನಡೆದು ನಾವು ನಾಶವಾಗುವುದು ಖಚಿತವಾದರೆ ನಮ್ಮೊಂದಿಗೆ ಅರ್ಧ ಜಗತ್ತನ್ನು ನಾಶಪಡಿಸುತ್ತೇವೆ </p></li><li><p>ಭಾರತವು ಅಣೆಕಟ್ಟು ನಿರ್ಮಿಸಿ ಪಾಕಿಸ್ತಾನಕ್ಕೆ ನೀರು ಹರಿಯುವುದನ್ನು ತಡೆದರೆ ಆ ಅಣೆಕಟ್ಟನ್ನು ಧ್ವಂಸಗೊಳಿಸುತ್ತೇವೆ </p></li><li><p>ಸಿಂಧೂ ನದಿ ಭಾರತದ ಸ್ವತ್ತಲ್ಲ. ನದಿ ನೀರು ಹರಿಯುವುದನ್ನು ನಿಲ್ಲಿಸುವ ಭಾರತೀಯ ಯೋಜನೆಗಳನ್ನು ವಿಫಲಗೊಳಿಸಲು ಬೇಕಾದಷ್ಟು ಸಂಪನ್ಮೂಲ ನಮ್ಮಲ್ಲಿದೆ</p></li></ul>.<h2>‘ಕಾಶ್ಮೀರವು ಪಾಕ್ನ ಕಂಠನಾಳ’</h2><p>‘ಪಾಕಿಸ್ತಾನದ ಪಾಲಿಗೆ ಕಾಶ್ಮೀರವು ಕಂಠನಾಳವಿದ್ದಂತೆ (ತಲೆಯಿಂದ ಹೃದಯಕ್ಕೆ ರಕ್ತ ಒಯ್ಯುವ ನಾಳ). ಕಾಶ್ಮೀರ ಪಾಕಿಸ್ತಾನಕ್ಕೇ ಸೇರಿದ್ದು’ ಎಂಬ ಹೇಳಿಕೆಯನ್ನು ಆಸಿಮ್ ಮುನೀರ್ ಪುನರುಚ್ಚರಿಸಿದ್ದಾರೆ. ‘ಕಾಶ್ಮೀರವು ಭಾರತದ ಆಂತರಿಕ ವಿಚಾರ ಅಲ್ಲ. ಅದು ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸುವ ವಿಷಯ’ ಎಂದೂ ಹೇಳಿದ್ದಾರೆ.</p><p>ಪಹಲ್ಗಾಮ್ ದಾಳಿಗೆ ಕೆಲವು ವಾರಗಳ ಮುನ್ನ ಮುನೀರ್ ಅವರು, ‘ಪಾಕಿಸ್ತಾನವು ಕಾಶ್ಮೀರ ವಿವಾದವನ್ನು ಮರೆಯಲು ಸಾಧ್ಯವಿಲ್ಲ. ಅದು ಪಾಕ್ ಪಾಲಿಗೆ ಕಂಠನಾಳವಿದ್ದಂತೆ’ ಎಂದಿದ್ದರು. ಅವರ ಹೇಳಿಕೆಗೆ ಭಾರತ ತಿರುಗೇಟು ನೀಡಿತ್ತು.</p>.<p>‘ವಿದೇಶದಲ್ಲಿರುವ ಜಾಗವೊಂದು ಕಂಠನಾಳವಾಗಲು ಹೇಗೆ ಸಾಧ್ಯ? ಕಾಶ್ಮೀರವು ಭಾರತದ ಕೇಂದ್ರಾಡಳಿತ ಪ್ರದೇಶ. ಪಾಕಿಸ್ತಾನದೊಂದಿಗಿನ ಅದರ ಏಕೈಕ ಸಂಬಂಧವೆಂದರೆ ಆ ದೇಶವು ಅಕ್ರಮವಾಗಿ ವಶದಲ್ಲಿರಿಸಿಕೊಂಡಿರುವ ಪ್ರದೇಶಗಳನ್ನು ಬಿಟ್ಟುಕೊಡುವುದು’ ಎಂದು ಎಂಇಎ ಆ ಸಂದರ್ಭದಲ್ಲಿ ಪ್ರತಿಕ್ರಿಯಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ/ ನ್ಯೂಯಾರ್ಕ್:</strong> ಪಾಕಿಸ್ತಾನ ಸೇನೆಯ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಅವರು ಅಮೆರಿಕದ ನೆಲದಲ್ಲಿ ನಿಂತು, ಭಾರತದ ವಿರುದ್ಧ ಅಣ್ವಸ್ತ್ರ ಬಳಕೆಯ ಬೆದರಿಕೆಯೊಡಿದ್ದಾರೆ. ‘ಅಣ್ವಸ್ತ್ರ ಬ್ಲ್ಯಾಕ್ಮೇಲ್ಗೆ ಮಣಿಯುವುದಿಲ್ಲ’ ಎನ್ನುವ ಮೂಲಕ ಭಾರತ ಅದೇ ಧಾಟಿಯಲ್ಲಿ ತಿರುಗೇಟು ನೀಡಿದೆ.</p>.<p>ಫ್ಲಾರಿಡಾದ ಟ್ಯಾಂಪಾದಲ್ಲಿ ಪಾಕಿಸ್ತಾನಿ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದ ಮುನೀರ್, ಭಾರತದೊಂದಿಗಿನ ಭವಿಷ್ಯದ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಅಸ್ತಿತ್ವದ ಆತಂಕ ಎದುರಾದರೆ ಅಣ್ವಸ್ತ್ರ ಬಳಕೆಗೆ ಹಿಂಜರಿಯುವುದಿಲ್ಲ ಎಂದು ಹೇಳಿದ್ದಾಗಿ ವರದಿಯಾಗಿದೆ.</p>.<p>‘ಪಾಕಿಸ್ತಾನದಲ್ಲಿರುವ ಅಣ್ವಸ್ತ್ರಗಳು ಅಲ್ಲಿನ ಸರ್ಕಾರದ ನಿಯಂತ್ರಣದಲ್ಲಿಲ್ಲ ಎಂಬ ಅನುಮಾನಗಳನ್ನು ಮುನೀರ್ ಹೇಳಿಕೆ ಇನ್ನಷ್ಟು ಬಲಪಡಿಸಿದೆ. ಅಲ್ಲಿನ ಸೇನೆಯು ಭಯೋತ್ಪಾದಕ ಸಂಘಟನೆಗಳ ಜತೆ ಕೈಜೋಡಿಸಿದೆ’ ಎಂದು ಭಾರತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. </p>.<p>ನೆರೆಯ ದೇಶವು ‘ಬೇಜವಾಬ್ದಾರಿತನದ ಅಣ್ವಸ್ತ್ರ ರಾಷ್ಟ್ರ’ವಾಗಿದೆ ಮತ್ತು ಶಸ್ತ್ರಾಸ್ತ್ರಗಳು ಉಗ್ರರ ಕೈಗೆ ಸೇರುವ ಅಪಾಯವಿದೆ ಎಂಬುದನ್ನು ಈ ಬೆದರಿಕೆಯು ತೋರಿಸಿದೆ ಎಂದು ಹೇಳಿದೆ.</p>.<p>‘ಪಾಕಿಸ್ತಾನ ಸೇನಾ ಮುಖ್ಯಸ್ಥರ ಹೇಳಿಕೆ ಪಾಕಿಸ್ತಾನವು ಅನುಸರಿಸಿಕೊಂಡು ಬರುತ್ತಿರುವ ತಂತ್ರಗಾರಿಕೆಯ ಒಂದು ಭಾಗವಾಗಿದೆ. ಅಮೆರಿಕವು ಪಾಕಿಸ್ತಾನ ಸೇನೆಯನ್ನು ಬೆಂಬಲಿಸಿದಾಗಲೆಲ್ಲಾ ಅವರು ತಮ್ಮ ಆಕ್ರಮಣಶೀಲತೆಯ ನೈಜ ಬಣ್ಣವನ್ನು ಹೊರಹಾಕುತ್ತಾರೆ’ ಎಂದೂ ಭಾರತ ಪ್ರತಿಕ್ರಿಯಿಸಿದೆ. </p>.<p>ಭಾರತವು ಅಣ್ವಸ್ತ್ರ ಬೆದರಿಕೆಗೆ ಮಣಿಯುವುದಿಲ್ಲ ಮತ್ತು ರಾಷ್ಟ್ರೀಯ ಭದ್ರತೆಯನ್ನು ಕಾಪಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಹೇಳಿಕೆಯಲ್ಲಿ ತಿಳಿಸಿದೆ.</p>.<p>ಭಾರತದ ಗೆಳೆಯನಾಗಿರುವ ಮೂರನೇ ರಾಷ್ಟ್ರವೊಂದರ ನೆಲದಿಂದ ಇಂತಹ ಹೇಳಿಕೆ ನೀಡಲಾಗಿದೆ ಎಂಬುದು ವಿಷಾದಕರ ಸಂಗತಿ ಎಂದು ಅಮೆರಿಕಕ್ಕೆ ಸ್ಪಷ್ಟ ಸಂದೇಶದಲ್ಲಿ ತಿಳಿಸಿದೆ.</p>.<div><blockquote>ಮುನೀರ್ ಹೇಳಿಕೆಯನ್ನು ಕಾಂಗ್ರೆಸ್ ಖಂಡಿಸುತ್ತದೆ. ಅಮೆರಿಕವು ಅಂತಹ ವ್ಯಕ್ತಿಗೆ ವಿಶೇಷ ಆದರಾತಿಥ್ಯ ನೀಡುತ್ತಿರುವುದು ವಿಚಿತ್ರ ಎನಿಸುತ್ತದೆ.</blockquote><span class="attribution">ಜೈರಾಮ್ ರಮೇಶ್ ಕಾಂಗ್ರೆಸ್ ಮುಖಂಡ</span></div>.<div><blockquote>ಅಣ್ವಸ್ತ್ರ ಬಲ ತೋರಿಸಿ ಬೆದರಿಕೆಯೊಡ್ಡುವುದನ್ನೇ ಪಾಕಿಸ್ತಾನ ತನ್ನ ಕಾಯಕವನ್ನಾಗಿಸಿಕೊಂಡಿದೆ. ಇದು ಆ ದೇಶದ ಬೇಜವಾಬ್ದಾರಿತವನ್ನು ತೋರಿಸುತ್ತದೆ</blockquote><span class="attribution">ರಣಧೀರ್ ಜೈಸ್ವಾಲ್ ಎಂಇಎ ವಕ್ತಾರ</span></div>.<h2><strong>ಮುನೀರ್ ಹೇಳಿದ್ದೇನು?</strong> </h2><ul><li><p>ನಮ್ಮದು ಅಣ್ವಸ್ತ್ರ ಹೊಂದಿರುವ ರಾಷ್ಟ್ರ. ಒಂದು ವೇಳೆ ಯುದ್ಧ ನಡೆದು ನಾವು ನಾಶವಾಗುವುದು ಖಚಿತವಾದರೆ ನಮ್ಮೊಂದಿಗೆ ಅರ್ಧ ಜಗತ್ತನ್ನು ನಾಶಪಡಿಸುತ್ತೇವೆ </p></li><li><p>ಭಾರತವು ಅಣೆಕಟ್ಟು ನಿರ್ಮಿಸಿ ಪಾಕಿಸ್ತಾನಕ್ಕೆ ನೀರು ಹರಿಯುವುದನ್ನು ತಡೆದರೆ ಆ ಅಣೆಕಟ್ಟನ್ನು ಧ್ವಂಸಗೊಳಿಸುತ್ತೇವೆ </p></li><li><p>ಸಿಂಧೂ ನದಿ ಭಾರತದ ಸ್ವತ್ತಲ್ಲ. ನದಿ ನೀರು ಹರಿಯುವುದನ್ನು ನಿಲ್ಲಿಸುವ ಭಾರತೀಯ ಯೋಜನೆಗಳನ್ನು ವಿಫಲಗೊಳಿಸಲು ಬೇಕಾದಷ್ಟು ಸಂಪನ್ಮೂಲ ನಮ್ಮಲ್ಲಿದೆ</p></li></ul>.<h2>‘ಕಾಶ್ಮೀರವು ಪಾಕ್ನ ಕಂಠನಾಳ’</h2><p>‘ಪಾಕಿಸ್ತಾನದ ಪಾಲಿಗೆ ಕಾಶ್ಮೀರವು ಕಂಠನಾಳವಿದ್ದಂತೆ (ತಲೆಯಿಂದ ಹೃದಯಕ್ಕೆ ರಕ್ತ ಒಯ್ಯುವ ನಾಳ). ಕಾಶ್ಮೀರ ಪಾಕಿಸ್ತಾನಕ್ಕೇ ಸೇರಿದ್ದು’ ಎಂಬ ಹೇಳಿಕೆಯನ್ನು ಆಸಿಮ್ ಮುನೀರ್ ಪುನರುಚ್ಚರಿಸಿದ್ದಾರೆ. ‘ಕಾಶ್ಮೀರವು ಭಾರತದ ಆಂತರಿಕ ವಿಚಾರ ಅಲ್ಲ. ಅದು ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸುವ ವಿಷಯ’ ಎಂದೂ ಹೇಳಿದ್ದಾರೆ.</p><p>ಪಹಲ್ಗಾಮ್ ದಾಳಿಗೆ ಕೆಲವು ವಾರಗಳ ಮುನ್ನ ಮುನೀರ್ ಅವರು, ‘ಪಾಕಿಸ್ತಾನವು ಕಾಶ್ಮೀರ ವಿವಾದವನ್ನು ಮರೆಯಲು ಸಾಧ್ಯವಿಲ್ಲ. ಅದು ಪಾಕ್ ಪಾಲಿಗೆ ಕಂಠನಾಳವಿದ್ದಂತೆ’ ಎಂದಿದ್ದರು. ಅವರ ಹೇಳಿಕೆಗೆ ಭಾರತ ತಿರುಗೇಟು ನೀಡಿತ್ತು.</p>.<p>‘ವಿದೇಶದಲ್ಲಿರುವ ಜಾಗವೊಂದು ಕಂಠನಾಳವಾಗಲು ಹೇಗೆ ಸಾಧ್ಯ? ಕಾಶ್ಮೀರವು ಭಾರತದ ಕೇಂದ್ರಾಡಳಿತ ಪ್ರದೇಶ. ಪಾಕಿಸ್ತಾನದೊಂದಿಗಿನ ಅದರ ಏಕೈಕ ಸಂಬಂಧವೆಂದರೆ ಆ ದೇಶವು ಅಕ್ರಮವಾಗಿ ವಶದಲ್ಲಿರಿಸಿಕೊಂಡಿರುವ ಪ್ರದೇಶಗಳನ್ನು ಬಿಟ್ಟುಕೊಡುವುದು’ ಎಂದು ಎಂಇಎ ಆ ಸಂದರ್ಭದಲ್ಲಿ ಪ್ರತಿಕ್ರಿಯಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>