<p>ನವದೆಹಲಿ: ಭಾರತದ ಸೇನೆಯ ಮಾಜಿ ಮುಖ್ಯಸ್ಥ ಎಂ.ಎಂ.ನರವಣೆ ಅವರ ‘ಅಪ್ರಕಟಿತ ಆತ್ಮಚರಿತ್ರೆ’ ಪುಸ್ತಕದಲ್ಲಿನ ವಿಚಾರವನ್ನು ಉಲ್ಲೇಖಿಸಲು ಅನುಮತಿ ನೀಡಬೇಕು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬುಧವಾರವೂ ಲೋಕಸಭೆಯಲ್ಲಿ ಪಟ್ಟು ಹಿಡಿದರು. </p>.<p>ಇನ್ನೊಂದೆಡೆ, ನೆಹರೂ–ಗಾಂಧಿ ಕುಟುಂಬದ ಬಗೆಗಿನ ಮಾಹಿತಿಗಳನ್ನು ಬಹಿರಂಗಪಡಿಸಲು ಸರಣಿ ಪುಸ್ತಕಗಳನ್ನು ತಂದಿದ್ದು, ಅವುಗಳನ್ನು ಪ್ರಸ್ತಾಪಿಸಲು ಅವಕಾಶ ನೀಡಬೇಕು ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಒತ್ತಾಯಿಸಿದರು. </p>.<p>– ಇವುಗಳ ಪರಿಣಾಮ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ಬುಧವಾರವೂ ಮುಂದುವರಿದು, ಕಲಾಪ ಗದ್ದಲದ ಗೂಡಾಗಿ ಪರಿಣಮಿಸಿತು. ಪರಿಸ್ಥಿತಿಯನ್ನು ತಿಳಿಗೊಳಿಸಲು ಸ್ಪೀಕರ್ ಸದನವನ್ನು ಎರಡು–ಮೂರು ಬಾರಿ ಮುಂದೂಡಿದರು. </p>.<p>ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿ ಅವರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಸಂಜೆ 5 ಗಂಟೆಯ ಬಳಿಕ ಮಾತನಾಡಬೇಕಿತ್ತು. ಆದರೆ ಕಾಂಗ್ರೆಸ್ ಸದಸ್ಯರು ಸೇರಿದಂತೆ, ವಿವಿಧ ವಿರೋಧ ಪಕ್ಷಗಳ ಸದಸ್ಯರು ಬ್ಯಾನರ್ಗಳು, ಫಲಕಗಳನ್ನು ಪ್ರದರ್ಶಿಸುತ್ತಾ ಸ್ಪೀಕರ್ ಪೀಠದ ಮುಂಭಾಗ ಪ್ರತಿಭಟಿಸಿದರು. ವಿಪಕ್ಷಗಳ ಕೆಲ ಮಹಿಳಾ ಸದಸ್ಯರು ಪ್ರಧಾನಿ ಕುರ್ಚಿಯನ್ನು ಸುತ್ತುವರಿದು ಆಕ್ರೋಶ ವ್ಯಕ್ತಪಡಿಸಿದರು. </p>.<p>ಸದನದಲ್ಲಿ ಪದೇ ಪದೇ ಗದ್ದಲ ಮುಂದುವರಿದಿದ್ದರಿಂದ ಸ್ಪೀಕರ್ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಿದರು.</p>.<p><strong>ಕಿಡಿ ಹೊತ್ತಿಸಿದ ದುಬೆ ಮಾತು:</strong></p>.<p>‘ರಾಹುಲ್ ಅವರು ಅಪ್ರಕಟಿತ ಪುಸ್ತಕದ ಬಗ್ಗೆ ಮಾತನಾಡಲು ಬಯಸಿದರೆ, ನಾನು ಗಾಂಧಿ ಕುಟುಂಬದ ಬಗ್ಗೆ ಮಾತನಾಡಲು ಸರಣಿ ಪುಸ್ತಕಗಳೊಂದಿಗೆ ಬಂದಿದ್ದೇನೆ’ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ತಿಳಿಸಿದರು. ಇದು ಕಾಂಗ್ರೆಸ್ ಸದಸ್ಯರನ್ನು ಕೆರಳಿಸಿತು. ಅವರು ಆಕ್ರೋಶ ವ್ಯಕ್ತಪಡಿಸಿದರು.</p>.<p>ಗದ್ದಲದ ನಡುವೆಯೇ ದುಬೆ ಅವರು ತಾವು ತಂದಿದ್ದ ಪುಸ್ತಕಗಳು ಗಾಂಧಿ ಕುಟುಂಬದ ವಿವಿಧ ಸದಸ್ಯರ ಬಗ್ಗೆ ಏನು ಹೇಳುತ್ತವೆ ಎಂಬುದನ್ನು ಪಟ್ಟಿ ಮಾಡಲು ಆರಂಭಿಸಿದರು.</p>.<p>ಆಗ ಸ್ಪೀಕರ್ ಸ್ಥಾನದಲ್ಲಿದ್ದ ಕೃಷ್ಣ ಪ್ರಸಾದ್ ಟೆನೇಟಿ ಅವರು, ‘ಸ್ಪೀಕರ್ ಓಂ ಬಿರ್ಲಾ ಅವರು ಅಂಥ ಉಲ್ಲೇಖಗಳನ್ನು ಮಾಡದಿರಲು ಸೂಚಿಸಿ, ಅನುಮತಿಯನ್ನು ಈಗಾಗಲೇ ನಿರಾಕರಿಸಿದ್ದಾರೆ. ನಿಯಮ 349ರ ಅಡಿ ಅಂತಹ ಹೇಳಿಕೆಗಳನ್ನು ನೀಡಬಾರದು’ ಎಂದು ಹೇಳಿದರು.</p>.<p>ಆದರೆ ದುಬೆ ಅವರೂ ಪಟ್ಟು ಬಿಡಲಿಲ್ಲ. ಇದಕ್ಕೆ ಕಾಂಗ್ರೆಸ್ ಸದಸ್ಯರು ತೀವ್ರ ಪ್ರತಿಭಟನೆ ನಡೆಸಿದರು. ಇದರ ಪರಿಣಾಮ ಕಲಾಪವನ್ನು ಟೆನೇಟಿ ಅವರು ಸಂಜೆ 5ಕ್ಕೆ ಮುಂದೂಡಿದರು. ಇದಕ್ಕೂ ಮುನ್ನ ಮಧ್ಯಾಹ್ನ 12 ಗಂಟೆ ಮತ್ತು 2 ಗಂಟೆಗೆ ಸದನ ಸೇರಿದ್ದಾಗಲೂ ಗದ್ದಲ ಮುಂದುವರಿದಿದ್ದರಿಂದ, ಕಲಾಪವನ್ನು ಮುಂದೂಡಲಾಗಿತ್ತು. </p>.<p>ಬಳಿಕ, ಸ್ಪೀಕರ್ ಅನುಮತಿಯ ಮೇರೆಗೆ ವಾಣಿಜ್ಯ ಸಚಿವ ಪೀಯೂಷ್ ಗೋಯಲ್ ಅವರು, ವಿರೋಧ ಪಕ್ಷಗಳ ಸದಸ್ಯರ ಗದ್ದಲದ ನಡುವೆಯೂ ಭಾರತ– ಅಮೆರಿಕ ವ್ಯಾಪಾರ ಒಪ್ಪಂದದ ಕುರಿತು ಹೇಳಿಕೆ ನೀಡಿದರು. </p>.<p>ಸದನದ ಘನತೆಯನ್ನು ಕಾಪಾಡಿಕೊಳ್ಳುವಂತೆ ಸ್ಪೀಕರ್ ಪದೇ ಪದೆ ಸದಸ್ಯರಿಗೆ ಸೂಚಿಸಿದರು. ಅಲ್ಲದೆ ಬ್ಯಾನರ್ ಮತ್ತು ಪೋಸ್ಟರ್ಗಳನ್ನು ಪ್ರದರ್ಶಿಸಿದ್ದಕ್ಕಾಗಿ ವಿರೋಧ ಪಕ್ಷದ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು.</p>.<p>ಪ್ರಶ್ನೋತ್ತರ ಅವಧಿಯಲ್ಲೂ ಗದ್ದಲ: ಪ್ರಶ್ನೋತ್ತರ ಅವಧಿಯಲ್ಲಿಯೂ ಸದನದಲ್ಲಿ ಪ್ರತಿಭಟನೆ ಮುಂದುವರಿಯಿತು. ಕೇವಲ ಐದು ನಿಷಮಿ ನಡೆದ ಪ್ರಶ್ನೋತ್ತರ ಅವಧಿಯಲ್ಲಿ ಒಂದು ಪ್ರಶ್ನೆ ಮತ್ತು ಅದರ ಪೂರಕ ಪ್ರಶ್ನೆಗಳನ್ನು ಕೈಗೆತ್ತಿಕೊಳ್ಳಲಾಯಿತು. </p>.<p>ರಾಹುಲ್ ಅವರಿಗೆ ಅವಕಾಶ ನಿರಾಕರಿಸಿದ ಬಳಿಕ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರಿಗೆ ಗಾಂಧಿ ಕುಟುಂದವರ ಉಲ್ಲೇಖಗಳಿರುವ ಪುಸ್ತಕಗಳನ್ನು ಪ್ರಸ್ತಾಪಿಸಲು ಅವಕಾಶ ನೀಡಿದ್ದಕ್ಕಾಗಿ ಕಾಂಗ್ರೆಸ್ ಸಂಸದರು ಸ್ಪೀಕರ್ ಓಂ ಬಿರ್ಲಾ ಅವರ ಕಚೇರಿಯಲ್ಲಿ ಪ್ರತಿಭಟನೆ ದಾಖಲಿಸಿದರು. </p>.<p><strong>ಪುಸ್ತಕ ಪ್ರದರ್ಶಿಸಿದ ರಾಹುಲ್</strong> </p><p>ರಾಹುಲ್ ಗಾಂಧಿ ಅವರು ನರವಣೆ ಅವರ ‘ಅಪ್ರಕಟಿತ ಪುಸ್ತಕ’ದ ಪ್ರತಿಯನ್ನು ಪ್ರದರ್ಶಿಸಿ ಮಾತನಾಡಲು ಅವಕಾಶ ನೀಡುವಂತೆ ಒತ್ತಾಯಿಸಿದರು. ಆದರೆ ಅವರಿಗೆ ಅವಕಾಶ ನಿರಾಕರಿಸಲಾಯಿತು. ‘ರಾಹುಲ್ ಅವರು ಪುಸ್ತಕದ ಪ್ರತಿಯನ್ನು ಕೈಯಲ್ಲಿ ಹಿಡಿದುಕೊಂಡು ಬಂದಿದ್ದರು. ಅದರಲ್ಲಿ ಒಂದನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡುವುದಾಗಿ ಹೇಳಿದ್ದರು. ಆದರೆ ಭಯಭೀತರಾಗಿರುವ ಮೋದಿ ಅವರು ಸದನಕ್ಕೆ ಬರಲಿಲ್ಲ’ ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಸುದ್ದಿಗಾರರಿಗೆ ತಿಳಿಸಿದರು. ‘ಅಮೆಜಾನ್ನಿಂದ ಖರೀದಿಸಲಾದ ಸಾರ್ವಜನಿಕವಾಗಿ ಪ್ರಕಟವಾದ ಪುಸ್ತಕವನ್ನು ಉಲ್ಲೇಖಿಸಲು ವಿರೋಧ ಪಕ್ಷದ ನಾಯಕರು ಅನುಮತಿ ಕೋರುತ್ತಿದ್ದಾರೆ. ಆದರೆ ಅದನ್ನು ನಿಯಮಗಳಿಗೆ ವಿರುದ್ಧವಾಗಿದೆ ಎಂದು ನೀವು ಹೇಳುತ್ತೀರಿ. ಇನ್ನೊಂದೆಡೆ ದುಬೆ ಅವರು ಗಾಂಧಿ ಕುಟುಂಬದ ವಿರುದ್ಧ ಪುಸ್ತಕಗಳಲ್ಲಿನ ಉಲ್ಲೇಖಗಳನ್ನು ಪ್ರಸ್ತಾಪಿಸುತ್ತಾರೆ. ಆಶ್ಚರ್ಯ ಎಂದರೆ ಅವರು ಮಾತನಾಡುವಾಗ ಮೈಕ್ರೋಫೋನ್ ಆನ್ ಆಗಿರುತ್ತದೆ’ ಎಂದು ಪ್ರಿಯಾಂಕಾ ಆಕ್ರೋಶ ವ್ಯಕ್ತಪಡಿಸಿದರು. ‘ಸಂಸತ್ತಿನಲ್ಲಿ ಸರ್ಕಾರದ ಆದೇಶ ಮಾತ್ರ ಚಾಲ್ತಿಯಲ್ಲಿದೆ ಎಂಬುದನ್ನು ಈ ಮೂಲಕ ತೋರಿಸಲಾಗಿದೆ. ಇದು ಸ್ಪೀಕರ್ ಸಂಸತ್ತು ಪ್ರಜಾಪ್ರಭುತ್ವ ಮತ್ತು ದೇಶದ ಜನರಿಗೆ ಮಾಡಿದ ಅಪಮಾನ’ ಎಂದು ಅವರು ಪ್ರತಿಕ್ರಿಯಿಸಿದರು. ––– </p>.<p><strong>ರಾಹುಲ್ಗೆ ಅವಕಾಶ ನೀಡಬೇಕಿತ್ತು:</strong></p><p>ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ನರವಣೆ ಅವರ ‘ಅಪ್ರಕಟಿತ ಪುಸ್ತಕ’ದ ಕುರಿತು ಉಲ್ಲೇಖಿಸಲು ಅವಕಾಶ ನೀಡಬೇಕಿತ್ತು ಎಂದು ಎನ್ಸಿಪಿ (ಎಸ್ಪಿ) ಮುಖ್ಯಸ್ಥ ಶರದ್ ಪವಾರ್ ಹೇಳಿದರು. ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಈ ಕುರಿತು ಮಾತನಾಡಲು ರಾಹುಲ್ ಅವರಿಗೆ ಅನುಮತಿ ನೀಡಬೇಕಿತ್ತು ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸೇನಾ ಮುಖ್ಯಸ್ಥರಾಗಿದ್ದವರು ಏನನ್ನು ಬರೆದಿದ್ದಾರೆ ಪ್ರತಿಪಕ್ಷದ ನಾಯಕ ಏನನ್ನು ಹೇಳಬಯಸಿದ್ದಾರೆ ಎಂಬುದು ಜನರಿಗೆ ಗೊತ್ತಾಗಬೇಕಿದೆ. ಈ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆದಿದ್ದರೆ ಜನರಿಗೆ ಸ್ಪಷ್ಟ ಚಿತ್ರಣ ಸಿಗುತ್ತಿತ್ತು ಎಂದು ಅವರು ಪ್ರತಿಕ್ರಿಯಿಸಿದರು. ಪುಸ್ತಕ ಪ್ರಕಟವಾಗಿಲ್ಲದಿದ್ದರೂ ರಾಹುಲ್ ಅವರು ಅದರ ಪ್ರತಿಯನ್ನು ದೃಢೀಕರಿಸಿ ಸ್ಪೀಕರ್ಗೆ ಪತ್ರ ಬರೆದಿದ್ದಾರೆ. ಹೀಗಿರುವಾಗ ವಿರೋಧ ಏಕೆ ಎಂದು ಅವರು ಪ್ರಶ್ನಿಸಿದರು. ––– </p>.<p><strong>ರಾಹುಲ್– ಬಿಟ್ಟೂ ವಾಕ್ಸಮರ</strong></p><p> ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ರೈಲ್ವೆ ಖಾತೆಯ ರಾಜ್ಯ ಸಚಿವ ರವನೀತ್ ಸಿಂಗ್ ಬಿಟ್ಟೂ ಅವರ ನಡುವೆ ಸಂಸತ್ತಿನ ಆವರಣದಲ್ಲಿ ಬುಧವಾರ ಬಿರುಸಿನ ಮಾತಿನ ಚಕಮಕಿ ನಡೆಯಿತು. ಇಬ್ಬರೂ ನಾಯಕರು ಪರಸ್ಪರರತ್ತ ಕೈ ತೋರಿಸಿ ಟೀಕಿಸಿದರು. ಸಚಿವ ಬಿಟ್ಟು ಅವರನ್ನು ರಾಹುಲ್ ‘ಮಿತ್ರ ದ್ರೋಹಿ’ ಎಂದು ಟೀಕಿಸಿದರೆ ಬಿಟ್ಟೂ ಅವರು ರಾಹುಲ್ ಅವರನ್ನು ‘ದೇಶದ ಶತ್ರು’ ಎಂದು ತರಾಟೆಗೆ ತೆಗೆದುಕೊಂಡರು. ಈ ಬೆಳವಣಿಗೆಯು ಸಿಖ್ಖರನ್ನು ಕೆರಳಿಸಿದೆ ಎಂದು ಆಡಳಿತಾರೂಢ ಬಿಜೆಪಿ ಟೀಕಿಸಿದೆ. ಬಿಟ್ಟೂ ಅವರು ಈ ಹಿಂದೆ ಕಾಂಗ್ರೆಸ್ನಲ್ಲಿದ್ದಾಗ ರಾಹುಲ್ ಅವರ ನಿಕಟವರ್ತಿಯಾಗಿದ್ದರು. ಸಂಸತ್ತಿನ ಮಕರ ದ್ವಾರದ ಮೆಟ್ಟಿಲುಗಳ ಬಳಿ ಬೆಳಿಗ್ಗೆ 11.30ಕ್ಕೆ ರಾಹುಲ್–ಬಿಟ್ಟೂ ನಡುವೆ ಮಾತಿನ ಚಕಮಕಿ ನಡೆಯಿತು. ಅದು ಹೊಸ ಸಂಸತ್ ಭವನಕ್ಕೆ ಸಂಸದರು ಪ್ರವೇಶಿಸುವ ದ್ವಾರ. ನಡೆದದ್ದೇನು?: ಕಲಾಪದಿಂದ ಅಮಾನತುಗೊಂಡಿರುವ ಎಂಟು ಸಂಸದರ ಜತೆ ರಾಹುಲ್ ಗಾಂಧಿ ಮಕರ ದ್ವಾರದ ಬಳಿ ಮಾತುಕತೆಯಲ್ಲಿ ತೊಡಗಿದ್ದರು. ಆ ಗುಂಪಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಂಜಾಬಿನ ಸಂಸದರೇ ಇದ್ದರು. ಈ ವೇಳೆ ಸಚಿವ ಬಿಟ್ಟೂ ಅವರು ಅಲ್ಲಿಯೇ ಹಾದು ಹೋಗುವ ಸಂದರ್ಭದಲ್ಲಿ ಈ ವಾಕ್ಸಮರ ನಡೆಯಿತು. ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಅಮಾನತುಗೊಂಡ ಕಾಂಗ್ರೆಸ್ ಸಂಸದರನ್ನು ಕಂಡ ಸಚಿವರು ‘ಯುದ್ಧದಲ್ಲಿ ಗೆದ್ದವರಂತೆ ಇಲ್ಲಿ ಕುಳಿತಿದ್ದೀರಲ್ಲ’ ಎಂದು ಮೊದಲಿಗೆ ಪ್ರಶ್ನಿಸಿದರು. </p><p>ಇದಕ್ಕೆ ಕೂಡಲೇ ಪ್ರತಿಕ್ರಿಯಿಸಿದ ರಾಹುಲ್ ‘ವಿಷಯವೇನಂದರೆ... ಇಲ್ಲಿ ಒಬ್ಬ ಮಿತ್ರದ್ರೋಹಿ ನಡೆದುಕೊಂಡು ಬರುತ್ತಿದ್ದಾರೆ. ಅವರ ಮುಖವನ್ನು ನೋಡಿ ಹೇಗೆ ಕಾಣುತ್ತಿದ್ದಾರೆ’ ಎಂದರು. ಬಳಿಕ ರಾಹುಲ್ ಅವರು ಸಚಿವರ ಕೈಕುಲುಕಲು ಮುಂದಾದರು. ಅದಕ್ಕೆ ಸಚಿವರು ನಿರಾಕರಿಸಿದರು. ಆಗ ನಮಸ್ಕರಿಸಿದ ರಾಹುಲ್ ‘ನಮಸ್ಕಾರ ಸಹೋದರ ನನ್ನ ಮಿತ್ರದ್ರೋಹಿ’ ಎಂದು ಕೆಣಕಿದರು. ಇದರಿಂದ ಕೆರಳಿದ ಸಚಿವ ಬಿಟ್ಟೂ ಅವರು ರಾಹುಲ್ ಕಡೆ ಕೈ ತೋರಿಸುತ್ತಾ ‘ನೀವು ದೇಶದ ಶತ್ರು’ ಎಂದರು. ಆಗ ‘ಚಿಂತಿಸಬೇಡಿ ನೀವು ನಮ್ಮಲ್ಲಿಗೇ (ಕಾಂಗ್ರೆಸ್ಗೆ) ಮರಳುವಿರಿ’ ಎಂದು ರಾಹುಲ್ ಹೇಳಿದರು. ಇದೇ ವೇಳೆ ಅಮಾನತುಗೊಂಡ ಸಂಸದರು ಒಟ್ಟಾಗಿ ಸಚಿವ ಬಿಟ್ಟೂ ಅವರನ್ನು ಅಪಹಾಸ್ಯ ಮಾಡಿದರು. ಆಗ ರಾಹುಲ್ ಮತ್ತು ಆ ಸಂಸದರತ್ತ ಕೈ ತೋರಿದ ಸಚಿವರು ‘ನೀವು ದೇಶದ ಶತ್ರು’ ಎಂದು ಪುನರುಚ್ಚರಿಸುತ್ತಾ ಮೆಟ್ಟಿಲುಗಳನ್ನು ಹತ್ತಿಕೊಂಡು ಸಾಗಿದರು. ಅಲ್ಲಿದ್ದ ಕಾಂಗ್ರೆಸ್ ಸಂಸದರು ‘ನೀವು ಶರಣಾಗಿದ್ದೀರಿ ಶರಣಾಗಿದ್ದೀರಿ’ ಎಂದು ಕೂಗಿದರು. ವಿಡಿಯೊ ಹಂಚಿಕೊಂಡ ಕಾಂಗ್ರೆಸ್: ಈ ಮಾತಿನ ಚಕಮಕಿ ಕುರಿತ ವಿಡಿಯೊ ತುಣುಕನ್ನು ಕಾಂಗ್ರೆಸ್ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದೆ. ಪಂಜಾಬ್ನ ದಿವಂಗತ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಅವರ ಮೊಮ್ಮಗ ಬಿಟ್ಟೂ ಅವರು ಮೊದಲು ಕಾಂಗ್ರೆಸ್ ಪಕ್ಷದಿಂದ ಸಂಸದರಾಗಿದ್ದರು. 2024ರಲ್ಲಿ ಅವರು ಬಿಜೆಪಿಗೆ ಸೇರಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ: ಭಾರತದ ಸೇನೆಯ ಮಾಜಿ ಮುಖ್ಯಸ್ಥ ಎಂ.ಎಂ.ನರವಣೆ ಅವರ ‘ಅಪ್ರಕಟಿತ ಆತ್ಮಚರಿತ್ರೆ’ ಪುಸ್ತಕದಲ್ಲಿನ ವಿಚಾರವನ್ನು ಉಲ್ಲೇಖಿಸಲು ಅನುಮತಿ ನೀಡಬೇಕು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬುಧವಾರವೂ ಲೋಕಸಭೆಯಲ್ಲಿ ಪಟ್ಟು ಹಿಡಿದರು. </p>.<p>ಇನ್ನೊಂದೆಡೆ, ನೆಹರೂ–ಗಾಂಧಿ ಕುಟುಂಬದ ಬಗೆಗಿನ ಮಾಹಿತಿಗಳನ್ನು ಬಹಿರಂಗಪಡಿಸಲು ಸರಣಿ ಪುಸ್ತಕಗಳನ್ನು ತಂದಿದ್ದು, ಅವುಗಳನ್ನು ಪ್ರಸ್ತಾಪಿಸಲು ಅವಕಾಶ ನೀಡಬೇಕು ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಒತ್ತಾಯಿಸಿದರು. </p>.<p>– ಇವುಗಳ ಪರಿಣಾಮ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ಬುಧವಾರವೂ ಮುಂದುವರಿದು, ಕಲಾಪ ಗದ್ದಲದ ಗೂಡಾಗಿ ಪರಿಣಮಿಸಿತು. ಪರಿಸ್ಥಿತಿಯನ್ನು ತಿಳಿಗೊಳಿಸಲು ಸ್ಪೀಕರ್ ಸದನವನ್ನು ಎರಡು–ಮೂರು ಬಾರಿ ಮುಂದೂಡಿದರು. </p>.<p>ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿ ಅವರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಸಂಜೆ 5 ಗಂಟೆಯ ಬಳಿಕ ಮಾತನಾಡಬೇಕಿತ್ತು. ಆದರೆ ಕಾಂಗ್ರೆಸ್ ಸದಸ್ಯರು ಸೇರಿದಂತೆ, ವಿವಿಧ ವಿರೋಧ ಪಕ್ಷಗಳ ಸದಸ್ಯರು ಬ್ಯಾನರ್ಗಳು, ಫಲಕಗಳನ್ನು ಪ್ರದರ್ಶಿಸುತ್ತಾ ಸ್ಪೀಕರ್ ಪೀಠದ ಮುಂಭಾಗ ಪ್ರತಿಭಟಿಸಿದರು. ವಿಪಕ್ಷಗಳ ಕೆಲ ಮಹಿಳಾ ಸದಸ್ಯರು ಪ್ರಧಾನಿ ಕುರ್ಚಿಯನ್ನು ಸುತ್ತುವರಿದು ಆಕ್ರೋಶ ವ್ಯಕ್ತಪಡಿಸಿದರು. </p>.<p>ಸದನದಲ್ಲಿ ಪದೇ ಪದೇ ಗದ್ದಲ ಮುಂದುವರಿದಿದ್ದರಿಂದ ಸ್ಪೀಕರ್ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಿದರು.</p>.<p><strong>ಕಿಡಿ ಹೊತ್ತಿಸಿದ ದುಬೆ ಮಾತು:</strong></p>.<p>‘ರಾಹುಲ್ ಅವರು ಅಪ್ರಕಟಿತ ಪುಸ್ತಕದ ಬಗ್ಗೆ ಮಾತನಾಡಲು ಬಯಸಿದರೆ, ನಾನು ಗಾಂಧಿ ಕುಟುಂಬದ ಬಗ್ಗೆ ಮಾತನಾಡಲು ಸರಣಿ ಪುಸ್ತಕಗಳೊಂದಿಗೆ ಬಂದಿದ್ದೇನೆ’ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ತಿಳಿಸಿದರು. ಇದು ಕಾಂಗ್ರೆಸ್ ಸದಸ್ಯರನ್ನು ಕೆರಳಿಸಿತು. ಅವರು ಆಕ್ರೋಶ ವ್ಯಕ್ತಪಡಿಸಿದರು.</p>.<p>ಗದ್ದಲದ ನಡುವೆಯೇ ದುಬೆ ಅವರು ತಾವು ತಂದಿದ್ದ ಪುಸ್ತಕಗಳು ಗಾಂಧಿ ಕುಟುಂಬದ ವಿವಿಧ ಸದಸ್ಯರ ಬಗ್ಗೆ ಏನು ಹೇಳುತ್ತವೆ ಎಂಬುದನ್ನು ಪಟ್ಟಿ ಮಾಡಲು ಆರಂಭಿಸಿದರು.</p>.<p>ಆಗ ಸ್ಪೀಕರ್ ಸ್ಥಾನದಲ್ಲಿದ್ದ ಕೃಷ್ಣ ಪ್ರಸಾದ್ ಟೆನೇಟಿ ಅವರು, ‘ಸ್ಪೀಕರ್ ಓಂ ಬಿರ್ಲಾ ಅವರು ಅಂಥ ಉಲ್ಲೇಖಗಳನ್ನು ಮಾಡದಿರಲು ಸೂಚಿಸಿ, ಅನುಮತಿಯನ್ನು ಈಗಾಗಲೇ ನಿರಾಕರಿಸಿದ್ದಾರೆ. ನಿಯಮ 349ರ ಅಡಿ ಅಂತಹ ಹೇಳಿಕೆಗಳನ್ನು ನೀಡಬಾರದು’ ಎಂದು ಹೇಳಿದರು.</p>.<p>ಆದರೆ ದುಬೆ ಅವರೂ ಪಟ್ಟು ಬಿಡಲಿಲ್ಲ. ಇದಕ್ಕೆ ಕಾಂಗ್ರೆಸ್ ಸದಸ್ಯರು ತೀವ್ರ ಪ್ರತಿಭಟನೆ ನಡೆಸಿದರು. ಇದರ ಪರಿಣಾಮ ಕಲಾಪವನ್ನು ಟೆನೇಟಿ ಅವರು ಸಂಜೆ 5ಕ್ಕೆ ಮುಂದೂಡಿದರು. ಇದಕ್ಕೂ ಮುನ್ನ ಮಧ್ಯಾಹ್ನ 12 ಗಂಟೆ ಮತ್ತು 2 ಗಂಟೆಗೆ ಸದನ ಸೇರಿದ್ದಾಗಲೂ ಗದ್ದಲ ಮುಂದುವರಿದಿದ್ದರಿಂದ, ಕಲಾಪವನ್ನು ಮುಂದೂಡಲಾಗಿತ್ತು. </p>.<p>ಬಳಿಕ, ಸ್ಪೀಕರ್ ಅನುಮತಿಯ ಮೇರೆಗೆ ವಾಣಿಜ್ಯ ಸಚಿವ ಪೀಯೂಷ್ ಗೋಯಲ್ ಅವರು, ವಿರೋಧ ಪಕ್ಷಗಳ ಸದಸ್ಯರ ಗದ್ದಲದ ನಡುವೆಯೂ ಭಾರತ– ಅಮೆರಿಕ ವ್ಯಾಪಾರ ಒಪ್ಪಂದದ ಕುರಿತು ಹೇಳಿಕೆ ನೀಡಿದರು. </p>.<p>ಸದನದ ಘನತೆಯನ್ನು ಕಾಪಾಡಿಕೊಳ್ಳುವಂತೆ ಸ್ಪೀಕರ್ ಪದೇ ಪದೆ ಸದಸ್ಯರಿಗೆ ಸೂಚಿಸಿದರು. ಅಲ್ಲದೆ ಬ್ಯಾನರ್ ಮತ್ತು ಪೋಸ್ಟರ್ಗಳನ್ನು ಪ್ರದರ್ಶಿಸಿದ್ದಕ್ಕಾಗಿ ವಿರೋಧ ಪಕ್ಷದ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು.</p>.<p>ಪ್ರಶ್ನೋತ್ತರ ಅವಧಿಯಲ್ಲೂ ಗದ್ದಲ: ಪ್ರಶ್ನೋತ್ತರ ಅವಧಿಯಲ್ಲಿಯೂ ಸದನದಲ್ಲಿ ಪ್ರತಿಭಟನೆ ಮುಂದುವರಿಯಿತು. ಕೇವಲ ಐದು ನಿಷಮಿ ನಡೆದ ಪ್ರಶ್ನೋತ್ತರ ಅವಧಿಯಲ್ಲಿ ಒಂದು ಪ್ರಶ್ನೆ ಮತ್ತು ಅದರ ಪೂರಕ ಪ್ರಶ್ನೆಗಳನ್ನು ಕೈಗೆತ್ತಿಕೊಳ್ಳಲಾಯಿತು. </p>.<p>ರಾಹುಲ್ ಅವರಿಗೆ ಅವಕಾಶ ನಿರಾಕರಿಸಿದ ಬಳಿಕ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರಿಗೆ ಗಾಂಧಿ ಕುಟುಂದವರ ಉಲ್ಲೇಖಗಳಿರುವ ಪುಸ್ತಕಗಳನ್ನು ಪ್ರಸ್ತಾಪಿಸಲು ಅವಕಾಶ ನೀಡಿದ್ದಕ್ಕಾಗಿ ಕಾಂಗ್ರೆಸ್ ಸಂಸದರು ಸ್ಪೀಕರ್ ಓಂ ಬಿರ್ಲಾ ಅವರ ಕಚೇರಿಯಲ್ಲಿ ಪ್ರತಿಭಟನೆ ದಾಖಲಿಸಿದರು. </p>.<p><strong>ಪುಸ್ತಕ ಪ್ರದರ್ಶಿಸಿದ ರಾಹುಲ್</strong> </p><p>ರಾಹುಲ್ ಗಾಂಧಿ ಅವರು ನರವಣೆ ಅವರ ‘ಅಪ್ರಕಟಿತ ಪುಸ್ತಕ’ದ ಪ್ರತಿಯನ್ನು ಪ್ರದರ್ಶಿಸಿ ಮಾತನಾಡಲು ಅವಕಾಶ ನೀಡುವಂತೆ ಒತ್ತಾಯಿಸಿದರು. ಆದರೆ ಅವರಿಗೆ ಅವಕಾಶ ನಿರಾಕರಿಸಲಾಯಿತು. ‘ರಾಹುಲ್ ಅವರು ಪುಸ್ತಕದ ಪ್ರತಿಯನ್ನು ಕೈಯಲ್ಲಿ ಹಿಡಿದುಕೊಂಡು ಬಂದಿದ್ದರು. ಅದರಲ್ಲಿ ಒಂದನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡುವುದಾಗಿ ಹೇಳಿದ್ದರು. ಆದರೆ ಭಯಭೀತರಾಗಿರುವ ಮೋದಿ ಅವರು ಸದನಕ್ಕೆ ಬರಲಿಲ್ಲ’ ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಸುದ್ದಿಗಾರರಿಗೆ ತಿಳಿಸಿದರು. ‘ಅಮೆಜಾನ್ನಿಂದ ಖರೀದಿಸಲಾದ ಸಾರ್ವಜನಿಕವಾಗಿ ಪ್ರಕಟವಾದ ಪುಸ್ತಕವನ್ನು ಉಲ್ಲೇಖಿಸಲು ವಿರೋಧ ಪಕ್ಷದ ನಾಯಕರು ಅನುಮತಿ ಕೋರುತ್ತಿದ್ದಾರೆ. ಆದರೆ ಅದನ್ನು ನಿಯಮಗಳಿಗೆ ವಿರುದ್ಧವಾಗಿದೆ ಎಂದು ನೀವು ಹೇಳುತ್ತೀರಿ. ಇನ್ನೊಂದೆಡೆ ದುಬೆ ಅವರು ಗಾಂಧಿ ಕುಟುಂಬದ ವಿರುದ್ಧ ಪುಸ್ತಕಗಳಲ್ಲಿನ ಉಲ್ಲೇಖಗಳನ್ನು ಪ್ರಸ್ತಾಪಿಸುತ್ತಾರೆ. ಆಶ್ಚರ್ಯ ಎಂದರೆ ಅವರು ಮಾತನಾಡುವಾಗ ಮೈಕ್ರೋಫೋನ್ ಆನ್ ಆಗಿರುತ್ತದೆ’ ಎಂದು ಪ್ರಿಯಾಂಕಾ ಆಕ್ರೋಶ ವ್ಯಕ್ತಪಡಿಸಿದರು. ‘ಸಂಸತ್ತಿನಲ್ಲಿ ಸರ್ಕಾರದ ಆದೇಶ ಮಾತ್ರ ಚಾಲ್ತಿಯಲ್ಲಿದೆ ಎಂಬುದನ್ನು ಈ ಮೂಲಕ ತೋರಿಸಲಾಗಿದೆ. ಇದು ಸ್ಪೀಕರ್ ಸಂಸತ್ತು ಪ್ರಜಾಪ್ರಭುತ್ವ ಮತ್ತು ದೇಶದ ಜನರಿಗೆ ಮಾಡಿದ ಅಪಮಾನ’ ಎಂದು ಅವರು ಪ್ರತಿಕ್ರಿಯಿಸಿದರು. ––– </p>.<p><strong>ರಾಹುಲ್ಗೆ ಅವಕಾಶ ನೀಡಬೇಕಿತ್ತು:</strong></p><p>ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ನರವಣೆ ಅವರ ‘ಅಪ್ರಕಟಿತ ಪುಸ್ತಕ’ದ ಕುರಿತು ಉಲ್ಲೇಖಿಸಲು ಅವಕಾಶ ನೀಡಬೇಕಿತ್ತು ಎಂದು ಎನ್ಸಿಪಿ (ಎಸ್ಪಿ) ಮುಖ್ಯಸ್ಥ ಶರದ್ ಪವಾರ್ ಹೇಳಿದರು. ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಈ ಕುರಿತು ಮಾತನಾಡಲು ರಾಹುಲ್ ಅವರಿಗೆ ಅನುಮತಿ ನೀಡಬೇಕಿತ್ತು ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸೇನಾ ಮುಖ್ಯಸ್ಥರಾಗಿದ್ದವರು ಏನನ್ನು ಬರೆದಿದ್ದಾರೆ ಪ್ರತಿಪಕ್ಷದ ನಾಯಕ ಏನನ್ನು ಹೇಳಬಯಸಿದ್ದಾರೆ ಎಂಬುದು ಜನರಿಗೆ ಗೊತ್ತಾಗಬೇಕಿದೆ. ಈ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆದಿದ್ದರೆ ಜನರಿಗೆ ಸ್ಪಷ್ಟ ಚಿತ್ರಣ ಸಿಗುತ್ತಿತ್ತು ಎಂದು ಅವರು ಪ್ರತಿಕ್ರಿಯಿಸಿದರು. ಪುಸ್ತಕ ಪ್ರಕಟವಾಗಿಲ್ಲದಿದ್ದರೂ ರಾಹುಲ್ ಅವರು ಅದರ ಪ್ರತಿಯನ್ನು ದೃಢೀಕರಿಸಿ ಸ್ಪೀಕರ್ಗೆ ಪತ್ರ ಬರೆದಿದ್ದಾರೆ. ಹೀಗಿರುವಾಗ ವಿರೋಧ ಏಕೆ ಎಂದು ಅವರು ಪ್ರಶ್ನಿಸಿದರು. ––– </p>.<p><strong>ರಾಹುಲ್– ಬಿಟ್ಟೂ ವಾಕ್ಸಮರ</strong></p><p> ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ರೈಲ್ವೆ ಖಾತೆಯ ರಾಜ್ಯ ಸಚಿವ ರವನೀತ್ ಸಿಂಗ್ ಬಿಟ್ಟೂ ಅವರ ನಡುವೆ ಸಂಸತ್ತಿನ ಆವರಣದಲ್ಲಿ ಬುಧವಾರ ಬಿರುಸಿನ ಮಾತಿನ ಚಕಮಕಿ ನಡೆಯಿತು. ಇಬ್ಬರೂ ನಾಯಕರು ಪರಸ್ಪರರತ್ತ ಕೈ ತೋರಿಸಿ ಟೀಕಿಸಿದರು. ಸಚಿವ ಬಿಟ್ಟು ಅವರನ್ನು ರಾಹುಲ್ ‘ಮಿತ್ರ ದ್ರೋಹಿ’ ಎಂದು ಟೀಕಿಸಿದರೆ ಬಿಟ್ಟೂ ಅವರು ರಾಹುಲ್ ಅವರನ್ನು ‘ದೇಶದ ಶತ್ರು’ ಎಂದು ತರಾಟೆಗೆ ತೆಗೆದುಕೊಂಡರು. ಈ ಬೆಳವಣಿಗೆಯು ಸಿಖ್ಖರನ್ನು ಕೆರಳಿಸಿದೆ ಎಂದು ಆಡಳಿತಾರೂಢ ಬಿಜೆಪಿ ಟೀಕಿಸಿದೆ. ಬಿಟ್ಟೂ ಅವರು ಈ ಹಿಂದೆ ಕಾಂಗ್ರೆಸ್ನಲ್ಲಿದ್ದಾಗ ರಾಹುಲ್ ಅವರ ನಿಕಟವರ್ತಿಯಾಗಿದ್ದರು. ಸಂಸತ್ತಿನ ಮಕರ ದ್ವಾರದ ಮೆಟ್ಟಿಲುಗಳ ಬಳಿ ಬೆಳಿಗ್ಗೆ 11.30ಕ್ಕೆ ರಾಹುಲ್–ಬಿಟ್ಟೂ ನಡುವೆ ಮಾತಿನ ಚಕಮಕಿ ನಡೆಯಿತು. ಅದು ಹೊಸ ಸಂಸತ್ ಭವನಕ್ಕೆ ಸಂಸದರು ಪ್ರವೇಶಿಸುವ ದ್ವಾರ. ನಡೆದದ್ದೇನು?: ಕಲಾಪದಿಂದ ಅಮಾನತುಗೊಂಡಿರುವ ಎಂಟು ಸಂಸದರ ಜತೆ ರಾಹುಲ್ ಗಾಂಧಿ ಮಕರ ದ್ವಾರದ ಬಳಿ ಮಾತುಕತೆಯಲ್ಲಿ ತೊಡಗಿದ್ದರು. ಆ ಗುಂಪಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಂಜಾಬಿನ ಸಂಸದರೇ ಇದ್ದರು. ಈ ವೇಳೆ ಸಚಿವ ಬಿಟ್ಟೂ ಅವರು ಅಲ್ಲಿಯೇ ಹಾದು ಹೋಗುವ ಸಂದರ್ಭದಲ್ಲಿ ಈ ವಾಕ್ಸಮರ ನಡೆಯಿತು. ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಅಮಾನತುಗೊಂಡ ಕಾಂಗ್ರೆಸ್ ಸಂಸದರನ್ನು ಕಂಡ ಸಚಿವರು ‘ಯುದ್ಧದಲ್ಲಿ ಗೆದ್ದವರಂತೆ ಇಲ್ಲಿ ಕುಳಿತಿದ್ದೀರಲ್ಲ’ ಎಂದು ಮೊದಲಿಗೆ ಪ್ರಶ್ನಿಸಿದರು. </p><p>ಇದಕ್ಕೆ ಕೂಡಲೇ ಪ್ರತಿಕ್ರಿಯಿಸಿದ ರಾಹುಲ್ ‘ವಿಷಯವೇನಂದರೆ... ಇಲ್ಲಿ ಒಬ್ಬ ಮಿತ್ರದ್ರೋಹಿ ನಡೆದುಕೊಂಡು ಬರುತ್ತಿದ್ದಾರೆ. ಅವರ ಮುಖವನ್ನು ನೋಡಿ ಹೇಗೆ ಕಾಣುತ್ತಿದ್ದಾರೆ’ ಎಂದರು. ಬಳಿಕ ರಾಹುಲ್ ಅವರು ಸಚಿವರ ಕೈಕುಲುಕಲು ಮುಂದಾದರು. ಅದಕ್ಕೆ ಸಚಿವರು ನಿರಾಕರಿಸಿದರು. ಆಗ ನಮಸ್ಕರಿಸಿದ ರಾಹುಲ್ ‘ನಮಸ್ಕಾರ ಸಹೋದರ ನನ್ನ ಮಿತ್ರದ್ರೋಹಿ’ ಎಂದು ಕೆಣಕಿದರು. ಇದರಿಂದ ಕೆರಳಿದ ಸಚಿವ ಬಿಟ್ಟೂ ಅವರು ರಾಹುಲ್ ಕಡೆ ಕೈ ತೋರಿಸುತ್ತಾ ‘ನೀವು ದೇಶದ ಶತ್ರು’ ಎಂದರು. ಆಗ ‘ಚಿಂತಿಸಬೇಡಿ ನೀವು ನಮ್ಮಲ್ಲಿಗೇ (ಕಾಂಗ್ರೆಸ್ಗೆ) ಮರಳುವಿರಿ’ ಎಂದು ರಾಹುಲ್ ಹೇಳಿದರು. ಇದೇ ವೇಳೆ ಅಮಾನತುಗೊಂಡ ಸಂಸದರು ಒಟ್ಟಾಗಿ ಸಚಿವ ಬಿಟ್ಟೂ ಅವರನ್ನು ಅಪಹಾಸ್ಯ ಮಾಡಿದರು. ಆಗ ರಾಹುಲ್ ಮತ್ತು ಆ ಸಂಸದರತ್ತ ಕೈ ತೋರಿದ ಸಚಿವರು ‘ನೀವು ದೇಶದ ಶತ್ರು’ ಎಂದು ಪುನರುಚ್ಚರಿಸುತ್ತಾ ಮೆಟ್ಟಿಲುಗಳನ್ನು ಹತ್ತಿಕೊಂಡು ಸಾಗಿದರು. ಅಲ್ಲಿದ್ದ ಕಾಂಗ್ರೆಸ್ ಸಂಸದರು ‘ನೀವು ಶರಣಾಗಿದ್ದೀರಿ ಶರಣಾಗಿದ್ದೀರಿ’ ಎಂದು ಕೂಗಿದರು. ವಿಡಿಯೊ ಹಂಚಿಕೊಂಡ ಕಾಂಗ್ರೆಸ್: ಈ ಮಾತಿನ ಚಕಮಕಿ ಕುರಿತ ವಿಡಿಯೊ ತುಣುಕನ್ನು ಕಾಂಗ್ರೆಸ್ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದೆ. ಪಂಜಾಬ್ನ ದಿವಂಗತ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಅವರ ಮೊಮ್ಮಗ ಬಿಟ್ಟೂ ಅವರು ಮೊದಲು ಕಾಂಗ್ರೆಸ್ ಪಕ್ಷದಿಂದ ಸಂಸದರಾಗಿದ್ದರು. 2024ರಲ್ಲಿ ಅವರು ಬಿಜೆಪಿಗೆ ಸೇರಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>