ಚಂದ್ರಕಾಂತ್ ಪಾಟೀಲ್ ಅವರ ಹೇಳಿಕೆಯಿಂದಾಗಿಯೇ ಬಾರಾಮತಿಯಲ್ಲಿ ತಮ್ಮ ಪತ್ನಿ ಸುನೇತ್ರಾ ಪವಾರ್ ಅವರು ಸುಪ್ರಿಯಾ ಸುಳೆ ಅವರ ವಿರುದ್ಧ 1.5 ಲಕ್ಷ ಮತಗಳ ಅಂತರದಿಂದ ಸೋಲು ಅನುಭವಿಸಿದರು. ಚಂದ್ರಕಾಂತ್ ಅವರು ಶರದ್ ಪವಾರ್ ಅವರ ಬಗ್ಗೆ ಮಾತನಾಡಬಾರದಿತ್ತು ಎಂದು ಹೇಳಿದ್ದಾರೆ.
‘ಶರದ್ ಪವರ್ ಅವರನ್ನು ಅವರ ಭದ್ರಕೋಟೆಯಲ್ಲೇ ಸೋಲಿಸಬೇಕು. 2019ರಲ್ಲಿ ಸಂಖ್ಯಾಬಲ ಇದ್ದರೂ, ಬಿಜೆಪಿ–ಶಿವಸೇನೆ ಮೈತ್ರಿಯನ್ನು ಮುರಿದಿದ್ದರು. ಬಾರಾಮತಿಯಲ್ಲಿ ಶರದ್ ಪವಾರ್ ಅವರನ್ನು ಸೋಲಿಸಲು ನಾನು ಹಾಗೂ ನನ್ನ ಕಾರ್ಯಕರ್ತರು ನಿರ್ಧಾರ ಮಾಡಿದ್ದೇವೆ. ನಮಗೆ ಅದು ಸಾಕು ಎಂದು ಚುನಾವಣೆ ಪ್ರಚಾರದ ವೇಳೆಯಲ್ಲಿ ಚಂದ್ರಕಾಂತ್ ಹೇಳಿದ್ದರು.