ಯಶವಂತರಾವ್ ಚವಾಣ್ ಹೆಸರು ಭಾವಚಿತ್ರ ಬಳಸುತ್ತಿದ್ದೇವೆ –ಡಿಸಿಎಂ
ಭಾವಚಿತ್ರ ಬಳಕೆ ಕುರಿತು ಶರದ್ ಪವಾರ್ ಬಣದ ಆಕ್ಷೇಪದ ಬಳಿಕ ತಮ್ಮ ನೇತೃತ್ವದ ಎನ್ಸಿಪಿಯು ರಾಜ್ಯದ ಪ್ರಥಮ ಮುಖ್ಯಮಂತ್ರಿ ಯಶವಂತರಾವ್ ಚವಾಣ್ ಅವರ ಹೆಸರು ಭಾವಚಿತ್ರ ಬಳಸುತ್ತಿದೆ ಎಂದು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ತಿಳಿಸಿದ್ದಾರೆ. ‘ಪಕ್ಷ ಇಬ್ಭಾಗವಾದ ಆರಂಭದಲ್ಲಿ ಶರದ್ ಪವಾರ್ರ ಹೆಸರು ಚಿತ್ರ ಬಳಸಲಾಗುತ್ತಿತ್ತು. ಇದಕ್ಕೆ ಆಕ್ಷೇಪ ವ್ಯಕ್ತವಾದ ಬಳಿಕ ನಿಲ್ಲಿಸಿದ್ದು ಯಶವಂತರಾವ್ ಚವಾಣ್ ಅವರ ಹೆಸರು ಭಾವಚಿತ್ರ ಬಳಸುತ್ತಿದ್ದೇವೆ. ಇದನ್ನೇ ಮುಂದಿಟ್ಟು ಜನರ ಎದುರು ಹೋಗುತ್ತಿದ್ದೇವೆ’ ಎಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ತಿಳಿಸಿದರು.