ಆದಾಗ್ಯೂ, ಕಪ್ಪೆಗಳ ಮದುವೆ ಬಗ್ಗೆ ಸಮರ್ಥನೆ ನೀಡಿದ ಲಲಿತಾ ಯಾದವ್, ಇದು ಮೂಢನಂಬಿಕೆಯಲ್ಲ.ಪಂಚಭೂತಗಳಿಂದ ಕೂಡಿರುವ ಪರಿಸರದಲ್ಲಿ ಸಮತೋಲನ ಕಾಪಾಡುವ ದೃಷ್ಟಿಯಿಂದ ಈ ಕಾರ್ಯ ಮಾಡಲಾಗಿದೆ.ಪರಿಸರ ನಾಶದಿಂದ ಬರ ಬಂದಿದೆ.ಹಾಗಾಗಿ ವಾತಾವರಣವನ್ನು ಸಮತೋಲದಲ್ಲಿರಿಸಲು ನಾವು ದೇವರ ಮೊರೆ ಹೋಗಿದ್ದೇವೆ. ಹಿಂದಿನ ಕಾಲದಲ್ಲಿ ನಮ್ಮ ಪೂರ್ವಿಕರು ದೇವರನ್ನು ಮೆಚ್ಚಿಸಲು ದೇವಾಲಯಗಳಲ್ಲಿ ಧಾರ್ಮಿಕ ಕಾರ್ಯಗಳನ್ನು ಆಯೋಜಿಸುತ್ತಿದ್ದರು ಎಂದಿದ್ದಾರೆ.