ಎರಡು ದಿನಗಳ ಹಿಂದೆ ಗಲ್ಹಾರ್ ಗ್ರಾಮದಲ್ಲಿ ಮೊಹಮದ್ ಯೂಸಫ್ ಎಂಬುವರ ಗೋವೊಂದು ಹಾವು ಕಡಿತದಿಂದ ಮೃತಪಟ್ಟಿತ್ತು. ಅದರ ಮೃತ ದೇಹವನ್ನು ಸಮೀಪದ ಮೈದಾನದಲ್ಲಿ ಇರಿಸಿದ್ದಾಗ ನಾಯಿಗಳು ದಾಳಿಯಿಟ್ಟಿವೆ. ಕೆಲ ಕಿಡಿಗೇಡಿಗಳು ಈ ವೇಳೆ ಫೋಟೊಗಳನ್ನು ತೆಗೆದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಈ ಪ್ರದೇಶದಲ್ಲಿ ಕೋಮು ಗಲಭೆಯನ್ನು ಪ್ರಚೋದಿಸುವ ಉದ್ದೇಶವನ್ನು ಹೊಂದಿರುವುದು ಸ್ಪಷ್ಟವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.