<p><strong>ನವದೆಹಲಿ:</strong> ‘ಲೋಕಸಭೆ ಚುನಾವಣೆಯ ತೀರ್ಪು ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ, ರಾಜಕೀಯ ಮತ್ತು ನೈತಿಕ ಸೋಲನ್ನು ಸೂಚಿಸುತ್ತದೆ’ ಎಂದು ಕಾಂಗ್ರೆಸ್ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರತಿಪಾದಿಸಿದ್ದಾರೆ.</p>.<p>‘ತನ್ನನ್ನು ತಾನು ದೈವಿಕ ಶಕ್ತಿ ಎಂದು ಘೋಷಿಸಿಕೊಂಡ ಮೋದಿ ಅವರನ್ನು ಮತ್ತು ಅವರ ದ್ವೇಷದ ರಾಜಕಾರಣವನ್ನು ಈ ಚುನವಾಣಾ ಫಲಿತಾಂಶ ತಿರಸ್ಕರಿಸಿದೆ. ಆದರೆ ಅವರು ಏನೂ ಆಗಿಲ್ಲವೆಂಬಂತೆ ಮುಂದುವರಿದಿದ್ದಾರೆ’ ಎಂದು ಅವರು ಇಂಗ್ಲಿಷ್ ಪತ್ರಿಕೆಯೊಂದಕ್ಕೆ ಬರೆದಿರುವ ಲೇಖನದಲ್ಲಿ ಹೇಳಿದ್ದಾರೆ.</p>.<p>ಪ್ರಧಾನಿ ಅವರ ಪ್ರತಿನಿಧಿಗಳು ಸ್ಪೀಕರ್ ಸ್ಥಾನಕ್ಕೆ ಸರ್ವಾನುಮತದ ಬೆಂಬಲ ಕೋರಿದಾಗ, ‘ಇಂಡಿಯಾ’ ಒಕ್ಕೂಟ ಆರಂಭದಲ್ಲಿ ಸಮ್ಮತಿಸಿತ್ತು. ಆದರೆ ಸಂಪ್ರದಾಯದಂತೆ ವಿರೋಧ ಪಕ್ಷದವರಿಗೆ ಉಪ ಸ್ಪೀಕರ್ ಸ್ಥಾನ ನೀಡುವಂತೆ ಕೋರಿದಾಗ ಆ ಮನವಿಯನ್ನು ಅವರು ತಿರಸ್ಕರಿಸಿದರು ಎಂದು ಅವರು ಲೇಖನದಲ್ಲಿ ಪ್ರಸ್ತಾಪಿಸಿದ್ದಾರೆ.</p>.<p>ಇದರ ಬೆನ್ನಲ್ಲೇ ಸ್ಪೀಕರ್ ಮತ್ತು ಪ್ರಧಾನಿ ಅವರು ತುರ್ತುಪರಿಸ್ಥಿತಿಯನ್ನು ಪ್ರಸ್ತಾಪಿಸಿ, ಗಮನ ಬೇರೆಡೆಗೆ ಸೆಳೆಯಲು ತಂತ್ರ ರೂಪಿಸಿದರು. ತುರ್ತು ಪರಿಸ್ಥಿತಿಗೆ ಸಂಬಂಧಿಸಿದಂತೆ ದೇಶದ ಜನರು 1977ರಲ್ಲಿ ನೀಡಿದ್ದ ತೀರ್ಪುನ್ನು ನಾವು ಸ್ವೀಕರಿಸಿದ್ದೇವೆ’ ಎಂದು ಅವರು ಹೇಳಿದ್ದಾರೆ. </p>.<p>ಜುಲೈ 1ರಿಂದ ಜಾರಿಗೆ ಬರಲಿರುವ ಮೂರು ಅಪರಾಧ ಕಾನೂನುಗಳು ಸಂಸತ್ತಿನ ಸಂಪೂರ್ಣ ಪರಿಶೀಲನೆಗೆ ಒಳಪಡುವವರೆಗೆ ಹಿಂತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. 146 ಸಂಸತ್ ಸದಸ್ಯರನ್ನು ಅಮಾನತು ಮಾಡಿದ್ದ ಸಂದರ್ಭದಲ್ಲಿ ಈ ಕಾಯ್ದೆಗಳಿಗೆ ಸಂಬಂಧಿಸಿದ ಮಸೂದೆಗಳನ್ನು ಅಂಗೀಕರಿಸಲಾಗಿತ್ತು. ಹೀಗಾಗಿ ಅವುಗಳನ್ನು ಪೂರ್ಣವಾಗಿ ಪರಿಶೀಲಿಸುವ ಅಗತ್ಯವಿದೆ ಎಂದು ಅವರು ಒತ್ತಾಯಿಸಿದ್ದಾರೆ.</p>.<p>ವೈದ್ಯಕೀಯ ಪ್ರವೇಶ ಪರೀಕ್ಷೆ ‘ನೀಟ್’ ಕುರಿತು ಪ್ರಸ್ತಾಪಿಸಿರುವ ಅವರು, ‘ಪರೀಕ್ಷಾ ಪೇ ಚರ್ಚಾ’ ಮಾಡುವ ಪ್ರಧಾನಿ ಅವರು ‘ನೀಟ್’ ಅಕ್ರಮಗಳ ಬಗ್ಗೆ ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ‘ಲೋಕಸಭೆ ಚುನಾವಣೆಯ ತೀರ್ಪು ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ, ರಾಜಕೀಯ ಮತ್ತು ನೈತಿಕ ಸೋಲನ್ನು ಸೂಚಿಸುತ್ತದೆ’ ಎಂದು ಕಾಂಗ್ರೆಸ್ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರತಿಪಾದಿಸಿದ್ದಾರೆ.</p>.<p>‘ತನ್ನನ್ನು ತಾನು ದೈವಿಕ ಶಕ್ತಿ ಎಂದು ಘೋಷಿಸಿಕೊಂಡ ಮೋದಿ ಅವರನ್ನು ಮತ್ತು ಅವರ ದ್ವೇಷದ ರಾಜಕಾರಣವನ್ನು ಈ ಚುನವಾಣಾ ಫಲಿತಾಂಶ ತಿರಸ್ಕರಿಸಿದೆ. ಆದರೆ ಅವರು ಏನೂ ಆಗಿಲ್ಲವೆಂಬಂತೆ ಮುಂದುವರಿದಿದ್ದಾರೆ’ ಎಂದು ಅವರು ಇಂಗ್ಲಿಷ್ ಪತ್ರಿಕೆಯೊಂದಕ್ಕೆ ಬರೆದಿರುವ ಲೇಖನದಲ್ಲಿ ಹೇಳಿದ್ದಾರೆ.</p>.<p>ಪ್ರಧಾನಿ ಅವರ ಪ್ರತಿನಿಧಿಗಳು ಸ್ಪೀಕರ್ ಸ್ಥಾನಕ್ಕೆ ಸರ್ವಾನುಮತದ ಬೆಂಬಲ ಕೋರಿದಾಗ, ‘ಇಂಡಿಯಾ’ ಒಕ್ಕೂಟ ಆರಂಭದಲ್ಲಿ ಸಮ್ಮತಿಸಿತ್ತು. ಆದರೆ ಸಂಪ್ರದಾಯದಂತೆ ವಿರೋಧ ಪಕ್ಷದವರಿಗೆ ಉಪ ಸ್ಪೀಕರ್ ಸ್ಥಾನ ನೀಡುವಂತೆ ಕೋರಿದಾಗ ಆ ಮನವಿಯನ್ನು ಅವರು ತಿರಸ್ಕರಿಸಿದರು ಎಂದು ಅವರು ಲೇಖನದಲ್ಲಿ ಪ್ರಸ್ತಾಪಿಸಿದ್ದಾರೆ.</p>.<p>ಇದರ ಬೆನ್ನಲ್ಲೇ ಸ್ಪೀಕರ್ ಮತ್ತು ಪ್ರಧಾನಿ ಅವರು ತುರ್ತುಪರಿಸ್ಥಿತಿಯನ್ನು ಪ್ರಸ್ತಾಪಿಸಿ, ಗಮನ ಬೇರೆಡೆಗೆ ಸೆಳೆಯಲು ತಂತ್ರ ರೂಪಿಸಿದರು. ತುರ್ತು ಪರಿಸ್ಥಿತಿಗೆ ಸಂಬಂಧಿಸಿದಂತೆ ದೇಶದ ಜನರು 1977ರಲ್ಲಿ ನೀಡಿದ್ದ ತೀರ್ಪುನ್ನು ನಾವು ಸ್ವೀಕರಿಸಿದ್ದೇವೆ’ ಎಂದು ಅವರು ಹೇಳಿದ್ದಾರೆ. </p>.<p>ಜುಲೈ 1ರಿಂದ ಜಾರಿಗೆ ಬರಲಿರುವ ಮೂರು ಅಪರಾಧ ಕಾನೂನುಗಳು ಸಂಸತ್ತಿನ ಸಂಪೂರ್ಣ ಪರಿಶೀಲನೆಗೆ ಒಳಪಡುವವರೆಗೆ ಹಿಂತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. 146 ಸಂಸತ್ ಸದಸ್ಯರನ್ನು ಅಮಾನತು ಮಾಡಿದ್ದ ಸಂದರ್ಭದಲ್ಲಿ ಈ ಕಾಯ್ದೆಗಳಿಗೆ ಸಂಬಂಧಿಸಿದ ಮಸೂದೆಗಳನ್ನು ಅಂಗೀಕರಿಸಲಾಗಿತ್ತು. ಹೀಗಾಗಿ ಅವುಗಳನ್ನು ಪೂರ್ಣವಾಗಿ ಪರಿಶೀಲಿಸುವ ಅಗತ್ಯವಿದೆ ಎಂದು ಅವರು ಒತ್ತಾಯಿಸಿದ್ದಾರೆ.</p>.<p>ವೈದ್ಯಕೀಯ ಪ್ರವೇಶ ಪರೀಕ್ಷೆ ‘ನೀಟ್’ ಕುರಿತು ಪ್ರಸ್ತಾಪಿಸಿರುವ ಅವರು, ‘ಪರೀಕ್ಷಾ ಪೇ ಚರ್ಚಾ’ ಮಾಡುವ ಪ್ರಧಾನಿ ಅವರು ‘ನೀಟ್’ ಅಕ್ರಮಗಳ ಬಗ್ಗೆ ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>