<p><strong>ನವದೆಹಲಿ: </strong>ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ತೋರಿದ 20 ಮಕ್ಕಳಿಗೆ ಇಂದು ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ (ಪಿಎಂಆರ್ಬಿಪಿ) ನೀಡಿ ಗೌರವಿಸಲಾಗಿದೆ.</p><p>ಶೌರ್ಯ, ಸಮಾಜ ಸೇವೆ, ಪರಿಸರ, ಕ್ರೀಡೆ, ಕಲೆ, ಸಂಸ್ಕೃತಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಾಧನೆ ಮಾಡುವ 5ರಿಂದ 18 ವರ್ಷದೊಳಗಿನ ಮಕ್ಕಳಿಗೆ ಪ್ರತಿವರ್ಷ 'ವೀರ ಬಾಲ ದಿವಸ'ದಂದು (ಡಿ.26) ಈ ಪುರಸ್ಕಾರ ನೀಡಲಾಗುತ್ತದೆ.</p><p>ಕ್ರೀಡಾ ಕ್ಷೇತ್ರದಲ್ಲಿ ಭರವಸೆ ಮೂಡಿಸಿರುವ 9 ಮಂದಿ, ಶೌರ್ಯ ಸಾಧನೆ ತೋರಿದ ನಾಲ್ವರು, ಕಲೆ – ಸಂಸ್ಕೃತಿ, ವಿಜ್ಞಾನ – ತಂತ್ರಜ್ಞಾನ ಹಾಗೂ ಸಮಾಜ ಸೇವೆ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ತಲಾ ಇಬ್ಬರು, ಪರಿಸರಕ್ಕೆ ಕೊಡುಗೆ ನೀಡಿದ ಒಬ್ಬರಿಗೆ ಈ ವರ್ಷ ಪುರಸ್ಕಾರ ನೀಡಲಾಗಿದೆ. ಈ ಪೈಕಿ ಇಬ್ಬರಿಗೆ ಮರಣೋತ್ತರವಾಗಿ ಈ ಗೌರವ ಸಮರ್ಪಿಸಲಾಗಿದೆ.</p><p>ಪುರಸ್ಕಾರವು ಪದಕ, ಪ್ರಮಾಣಪತ್ರ ಹಾಗೂ ₹ 1 ಲಕ್ಷ ನಗದನ್ನು ಒಳಗೊಂಡಿದೆ.</p>.ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿಗೆ ಪಿಎಂ ಬಾಲ ಪುರಸ್ಕಾರ.ಅಸಾಧಾರಣ ಸಾಧನೆ ಮಾಡಿದ 20 ಮಕ್ಕಳಿಗೆ ರಾಷ್ಟ್ರೀಯ ಬಾಲ ಪುರಸ್ಕಾರ: ಇಲ್ಲಿದೆ ಪಟ್ಟಿ.<p><strong>ಮರಣೋತ್ತರ ಪುರಸ್ಕಾರ<br></strong>ತಮಿಳುನಾಡಿನ <strong>ವ್ಯೋಮಾ ಪ್ರಿಯಾ</strong> ಹಾಗೂ ಬಿಹಾರದ <strong>ಕಮಲೇಶ್ ಕುಮಾರ್</strong> ಅವರಿಗೆ ಮರಣೋತ್ತರವಾಗಿ ಈ ಪುರಸ್ಕಾರ ನೀಡಲಾಗಿದೆ.</p><p>ಕೊಯಮತ್ತೂರಿನವರಾದ ವ್ಯೋಮಾ, ವಿದ್ಯುತ್ ಪ್ರವಹಿಸಿ ಪ್ರಾಣಾಪಾಯದಲ್ಲಿದ್ದ ಆರು ವರ್ಷದ ಮಗುವನ್ನು ಕಾಪಾಡಲು ಯತ್ನಿಸಿದ್ದ ವೇಳೆ ಮೃತಪಟ್ಟಿದ್ದರು. ಆಗ ಅವರ ವಯಸ್ಸು ಕೇವಲ 9 ವರ್ಷ.</p><p>ಕಮಲೇಶ್ ಅವರು ಬಿಹಾರದ ಕೈಮೂರ್ ಜಿಲ್ಲೆಯ ಜೈತ್ಪುರ್ ಭದ್ವಾಲಿಯಾ ಗ್ರಾಮದವರು. ದುರ್ಗಾವತಿ ನದಿಯಲ್ಲಿ ಮುಳುಗುತ್ತಿದ್ದ ಮಗುವನ್ನು ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡಿದ್ದರು. ಆಗ ಅವರಿಗೆ 11 ವರ್ಷ ವಯಸ್ಸಾಗಿತ್ತು.</p><p>ಮೃತರ ಪರವಾಗಿ ಅವರ ಕುಟುಂಬದವರು ಪುರಸ್ಕಾರ ಸ್ವೀಕರಿಸಿದ್ದಾರೆ.</p><p>ವಿದ್ಯುತ್ ಆಘಾತಕ್ಕೆ ಒಳಗಾಗಿದ್ದ ತನ್ನಿಬ್ಬರು ಸ್ನೇಹಿತರನ್ನು ಕಾಪಾಡಿದ್ದ ಕೇರಳದ ಪಾಲಕ್ಕಾಡ್ ಬಾಲಕ <strong>ಮುಹಮ್ಮದ್ ಸಿದಾನ್</strong> (11) ಹಾಗೂ ನದಿಯಲ್ಲಿ ಮೊಸಳೆ ದಾಳಿಗೊಳಗಾಗಿದ್ದ ತಮ್ಮ ತಂದೆಯನ್ನು ಕಾಪಾಡಿದ್ದ ಉತ್ತರ ಪ್ರದೇಶದ ಆಗ್ರಾದ ಬಾಲಕ <strong>ಅಜಯ್ ರಾಜ್</strong> (9) ಎಂಬವರಿಗೂ 'ಶೌರ್ಯ' ವಿಭಾಗದಲ್ಲಿ ಪುರಸ್ಕಾರ ನೀಡಲಾಗಿದೆ.</p>.Veer Bal Diwas 2025 | ವೀರ ಬಾಲ ದಿವಸ: ಏನಿದರ ಮಹತ್ವ?.<p><strong>ಯೋಧರಿಗೆ ನೆರವಾಗಿದ್ದ ಬಾಲಕ<br></strong>ಆಪರೇಷನ್ ಸಿಂಧೂರ ಸಂದರ್ಭದಲ್ಲಿ ಭಾರತೀಯ ಯೋಧರಿಗೆ ನೆರವಾಗಿದ್ದ ಪಂಜಾಬ್ನ ಫೀರೋಜಪುರ ಬಾಲಕ <strong>ಶ್ರವಣ್ ಸಿಂಗ್</strong> (10) ಅವರಿಗೂ ಬಾಲ ಪುರಸ್ಕಾರ ನೀಡಲಾಗಿದೆ.</p><p>ಅನಂತನಾಗ್ ಜಿಲ್ಲೆಯ ಪಹಲ್ಗಾಮ್ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರು ದಾಳಿ ಮಾಡಿದ್ದರು. ಇದೇ ವರ್ಷ ಏಪ್ರಿಲ್ 22 ನಡೆದ ಈ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು.</p><p>ಬಳಿಕ ಭಾರತೀಯ ಪಡೆಗಳು, ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳನ್ನು ಗುರಿಯಾಗಿಸಿ 'ಆಪರೇಷನ್ ಸಿಂಧೂರ' ನಡೆಸಿದ್ದವು. ಪಾಕ್ ಸೇನೆ ಪ್ರತಿದಾಳಿ ನಡೆಸಿತ್ತು. ಆ ಸಂದರ್ಭದಲ್ಲಿ ಯೋಧರಿಗೆ, ತಮ್ಮ ಮನೆಯಿಂದ ನಿರಂತರವಾಗಿ ನೀರು, ಹಾಲು, ಆಹಾರ ಒದಗಿಸುವ ಮೂಲಕ ಶ್ರವಣ್ ಅವರು ಯೋಧರಿಗೆ ನೆರವಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ತೋರಿದ 20 ಮಕ್ಕಳಿಗೆ ಇಂದು ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ (ಪಿಎಂಆರ್ಬಿಪಿ) ನೀಡಿ ಗೌರವಿಸಲಾಗಿದೆ.</p><p>ಶೌರ್ಯ, ಸಮಾಜ ಸೇವೆ, ಪರಿಸರ, ಕ್ರೀಡೆ, ಕಲೆ, ಸಂಸ್ಕೃತಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಾಧನೆ ಮಾಡುವ 5ರಿಂದ 18 ವರ್ಷದೊಳಗಿನ ಮಕ್ಕಳಿಗೆ ಪ್ರತಿವರ್ಷ 'ವೀರ ಬಾಲ ದಿವಸ'ದಂದು (ಡಿ.26) ಈ ಪುರಸ್ಕಾರ ನೀಡಲಾಗುತ್ತದೆ.</p><p>ಕ್ರೀಡಾ ಕ್ಷೇತ್ರದಲ್ಲಿ ಭರವಸೆ ಮೂಡಿಸಿರುವ 9 ಮಂದಿ, ಶೌರ್ಯ ಸಾಧನೆ ತೋರಿದ ನಾಲ್ವರು, ಕಲೆ – ಸಂಸ್ಕೃತಿ, ವಿಜ್ಞಾನ – ತಂತ್ರಜ್ಞಾನ ಹಾಗೂ ಸಮಾಜ ಸೇವೆ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ತಲಾ ಇಬ್ಬರು, ಪರಿಸರಕ್ಕೆ ಕೊಡುಗೆ ನೀಡಿದ ಒಬ್ಬರಿಗೆ ಈ ವರ್ಷ ಪುರಸ್ಕಾರ ನೀಡಲಾಗಿದೆ. ಈ ಪೈಕಿ ಇಬ್ಬರಿಗೆ ಮರಣೋತ್ತರವಾಗಿ ಈ ಗೌರವ ಸಮರ್ಪಿಸಲಾಗಿದೆ.</p><p>ಪುರಸ್ಕಾರವು ಪದಕ, ಪ್ರಮಾಣಪತ್ರ ಹಾಗೂ ₹ 1 ಲಕ್ಷ ನಗದನ್ನು ಒಳಗೊಂಡಿದೆ.</p>.ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿಗೆ ಪಿಎಂ ಬಾಲ ಪುರಸ್ಕಾರ.ಅಸಾಧಾರಣ ಸಾಧನೆ ಮಾಡಿದ 20 ಮಕ್ಕಳಿಗೆ ರಾಷ್ಟ್ರೀಯ ಬಾಲ ಪುರಸ್ಕಾರ: ಇಲ್ಲಿದೆ ಪಟ್ಟಿ.<p><strong>ಮರಣೋತ್ತರ ಪುರಸ್ಕಾರ<br></strong>ತಮಿಳುನಾಡಿನ <strong>ವ್ಯೋಮಾ ಪ್ರಿಯಾ</strong> ಹಾಗೂ ಬಿಹಾರದ <strong>ಕಮಲೇಶ್ ಕುಮಾರ್</strong> ಅವರಿಗೆ ಮರಣೋತ್ತರವಾಗಿ ಈ ಪುರಸ್ಕಾರ ನೀಡಲಾಗಿದೆ.</p><p>ಕೊಯಮತ್ತೂರಿನವರಾದ ವ್ಯೋಮಾ, ವಿದ್ಯುತ್ ಪ್ರವಹಿಸಿ ಪ್ರಾಣಾಪಾಯದಲ್ಲಿದ್ದ ಆರು ವರ್ಷದ ಮಗುವನ್ನು ಕಾಪಾಡಲು ಯತ್ನಿಸಿದ್ದ ವೇಳೆ ಮೃತಪಟ್ಟಿದ್ದರು. ಆಗ ಅವರ ವಯಸ್ಸು ಕೇವಲ 9 ವರ್ಷ.</p><p>ಕಮಲೇಶ್ ಅವರು ಬಿಹಾರದ ಕೈಮೂರ್ ಜಿಲ್ಲೆಯ ಜೈತ್ಪುರ್ ಭದ್ವಾಲಿಯಾ ಗ್ರಾಮದವರು. ದುರ್ಗಾವತಿ ನದಿಯಲ್ಲಿ ಮುಳುಗುತ್ತಿದ್ದ ಮಗುವನ್ನು ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡಿದ್ದರು. ಆಗ ಅವರಿಗೆ 11 ವರ್ಷ ವಯಸ್ಸಾಗಿತ್ತು.</p><p>ಮೃತರ ಪರವಾಗಿ ಅವರ ಕುಟುಂಬದವರು ಪುರಸ್ಕಾರ ಸ್ವೀಕರಿಸಿದ್ದಾರೆ.</p><p>ವಿದ್ಯುತ್ ಆಘಾತಕ್ಕೆ ಒಳಗಾಗಿದ್ದ ತನ್ನಿಬ್ಬರು ಸ್ನೇಹಿತರನ್ನು ಕಾಪಾಡಿದ್ದ ಕೇರಳದ ಪಾಲಕ್ಕಾಡ್ ಬಾಲಕ <strong>ಮುಹಮ್ಮದ್ ಸಿದಾನ್</strong> (11) ಹಾಗೂ ನದಿಯಲ್ಲಿ ಮೊಸಳೆ ದಾಳಿಗೊಳಗಾಗಿದ್ದ ತಮ್ಮ ತಂದೆಯನ್ನು ಕಾಪಾಡಿದ್ದ ಉತ್ತರ ಪ್ರದೇಶದ ಆಗ್ರಾದ ಬಾಲಕ <strong>ಅಜಯ್ ರಾಜ್</strong> (9) ಎಂಬವರಿಗೂ 'ಶೌರ್ಯ' ವಿಭಾಗದಲ್ಲಿ ಪುರಸ್ಕಾರ ನೀಡಲಾಗಿದೆ.</p>.Veer Bal Diwas 2025 | ವೀರ ಬಾಲ ದಿವಸ: ಏನಿದರ ಮಹತ್ವ?.<p><strong>ಯೋಧರಿಗೆ ನೆರವಾಗಿದ್ದ ಬಾಲಕ<br></strong>ಆಪರೇಷನ್ ಸಿಂಧೂರ ಸಂದರ್ಭದಲ್ಲಿ ಭಾರತೀಯ ಯೋಧರಿಗೆ ನೆರವಾಗಿದ್ದ ಪಂಜಾಬ್ನ ಫೀರೋಜಪುರ ಬಾಲಕ <strong>ಶ್ರವಣ್ ಸಿಂಗ್</strong> (10) ಅವರಿಗೂ ಬಾಲ ಪುರಸ್ಕಾರ ನೀಡಲಾಗಿದೆ.</p><p>ಅನಂತನಾಗ್ ಜಿಲ್ಲೆಯ ಪಹಲ್ಗಾಮ್ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರು ದಾಳಿ ಮಾಡಿದ್ದರು. ಇದೇ ವರ್ಷ ಏಪ್ರಿಲ್ 22 ನಡೆದ ಈ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು.</p><p>ಬಳಿಕ ಭಾರತೀಯ ಪಡೆಗಳು, ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳನ್ನು ಗುರಿಯಾಗಿಸಿ 'ಆಪರೇಷನ್ ಸಿಂಧೂರ' ನಡೆಸಿದ್ದವು. ಪಾಕ್ ಸೇನೆ ಪ್ರತಿದಾಳಿ ನಡೆಸಿತ್ತು. ಆ ಸಂದರ್ಭದಲ್ಲಿ ಯೋಧರಿಗೆ, ತಮ್ಮ ಮನೆಯಿಂದ ನಿರಂತರವಾಗಿ ನೀರು, ಹಾಲು, ಆಹಾರ ಒದಗಿಸುವ ಮೂಲಕ ಶ್ರವಣ್ ಅವರು ಯೋಧರಿಗೆ ನೆರವಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>