<p><strong>ತಿರುಪತಿ:</strong> ಆಂಧ್ರಪ್ರದೇಶದ ತಿರುಮಲಕ್ಕೆ ಶುಕ್ರವಾರ ಭೇಟಿ ನೀಡಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವೆಂಕಟೇಶ್ವರ ಸ್ವಾಮಿಯ (ತಿಮ್ಮಪ್ಪ) ದರ್ಶನ ಪಡೆದು, ಪೂಜೆ ಸಲ್ಲಿಸಿದರು.</p>.<p>ತಿರುಮಲ ದೇಗುಲದ ಮಹಾದ್ವಾರ ಪ್ರವೇಶಕ್ಕೂ ಮುನ್ನ ಮುರ್ಮು ಅವರು, ವರಾಹ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿದ್ದರು. ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್ನ (ಟಿಟಿಡಿ) ಮುಖ್ಯಸ್ಥ ಬಿ.ಆರ್.ನಾಯ್ಡು ಅವರು ರಾಷ್ಟ್ರಪತಿಯವರನ್ನು ಸ್ವಾಗತಿಸಿದರು.</p>.<p>‘ಕುಟುಂಬ ಸಮೇತ ಆಗಮಿಸಿದ್ದ ರಾಷ್ಟ್ರಪತಿಯವರು ವೆಂಕಟೇಶ್ವರ ಸ್ವಾಮಿ ಸೇರಿದಂತೆ ಬೆಟ್ಟದಲ್ಲಿರುವ ಎಲ್ಲ ದೇಗುಲಗಳಿಗೂ ತೆರಳಿ ದರ್ಶನ ಪಡೆದರು. ಆಂಧ್ರಪ್ರದೇಶ ಧಾರ್ಮಿಕ ದತ್ತಿ ಸಚಿವ ಎ.ರಾಮನಾರಾಯಣ ರೆಡ್ಡಿ ಜೊತೆಯಲ್ಲಿದ್ದರು’ ಎಂದು ಟಿಟಿಡಿ ಪ್ರಕಟಣೆಯಲ್ಲಿ ತಿಳಿಸಿದೆ. </p>.<p>ತಿಮ್ಮಪ್ಪನಿಗೆ ಶೇಷ ವಸ್ತ್ರ ಅರ್ಪಿಸಿದ ರಾಷ್ಟ್ರಪತಿಗೆ ರಂಗನಾಯಕಲು ಮಂಟಪದಲ್ಲಿ ವೇದಾಶೀರ್ವಚನ ನೀಡಲಾಯಿತು. ಆನಂತರ ಅವರು ತೀರ್ಥ ಪ್ರಸಾದ ಸ್ವೀಕರಿಸಿದರು. ಇದೇ ವೇಳೆ, ಟಿಟಿಡಿ ಹೊರತಂದಿರುವ 2026ನೇ ಸಾಲಿನ ಡೈರಿಗಳು (ದಿನಚರಿ) ಮತ್ತು ಕ್ಯಾಲೆಂಡರ್ (ದಿನದರ್ಶಿಕೆ)ಗಳನ್ನು ಮುರ್ಮು ಅವರಿಗೆ ನೀಡಿ ಗೌರವಿಸಲಾಯಿತು.</p>.<p>ಗುರುವಾರ ಸಂಜೆ ತಿರುಪತಿ ಜಿಲ್ಲೆಯ ತಿರುಚನೂರಿನಲ್ಲಿರುವ ಪದ್ಮಾವತಿ ದೇಗುಲಕ್ಕೆ ಭೇಟಿ ನೀಡಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆನಂತರ ತಿರುಮಲಕ್ಕೆ ಶುಕ್ರವಾರ ಆಗಮಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುಪತಿ:</strong> ಆಂಧ್ರಪ್ರದೇಶದ ತಿರುಮಲಕ್ಕೆ ಶುಕ್ರವಾರ ಭೇಟಿ ನೀಡಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವೆಂಕಟೇಶ್ವರ ಸ್ವಾಮಿಯ (ತಿಮ್ಮಪ್ಪ) ದರ್ಶನ ಪಡೆದು, ಪೂಜೆ ಸಲ್ಲಿಸಿದರು.</p>.<p>ತಿರುಮಲ ದೇಗುಲದ ಮಹಾದ್ವಾರ ಪ್ರವೇಶಕ್ಕೂ ಮುನ್ನ ಮುರ್ಮು ಅವರು, ವರಾಹ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿದ್ದರು. ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್ನ (ಟಿಟಿಡಿ) ಮುಖ್ಯಸ್ಥ ಬಿ.ಆರ್.ನಾಯ್ಡು ಅವರು ರಾಷ್ಟ್ರಪತಿಯವರನ್ನು ಸ್ವಾಗತಿಸಿದರು.</p>.<p>‘ಕುಟುಂಬ ಸಮೇತ ಆಗಮಿಸಿದ್ದ ರಾಷ್ಟ್ರಪತಿಯವರು ವೆಂಕಟೇಶ್ವರ ಸ್ವಾಮಿ ಸೇರಿದಂತೆ ಬೆಟ್ಟದಲ್ಲಿರುವ ಎಲ್ಲ ದೇಗುಲಗಳಿಗೂ ತೆರಳಿ ದರ್ಶನ ಪಡೆದರು. ಆಂಧ್ರಪ್ರದೇಶ ಧಾರ್ಮಿಕ ದತ್ತಿ ಸಚಿವ ಎ.ರಾಮನಾರಾಯಣ ರೆಡ್ಡಿ ಜೊತೆಯಲ್ಲಿದ್ದರು’ ಎಂದು ಟಿಟಿಡಿ ಪ್ರಕಟಣೆಯಲ್ಲಿ ತಿಳಿಸಿದೆ. </p>.<p>ತಿಮ್ಮಪ್ಪನಿಗೆ ಶೇಷ ವಸ್ತ್ರ ಅರ್ಪಿಸಿದ ರಾಷ್ಟ್ರಪತಿಗೆ ರಂಗನಾಯಕಲು ಮಂಟಪದಲ್ಲಿ ವೇದಾಶೀರ್ವಚನ ನೀಡಲಾಯಿತು. ಆನಂತರ ಅವರು ತೀರ್ಥ ಪ್ರಸಾದ ಸ್ವೀಕರಿಸಿದರು. ಇದೇ ವೇಳೆ, ಟಿಟಿಡಿ ಹೊರತಂದಿರುವ 2026ನೇ ಸಾಲಿನ ಡೈರಿಗಳು (ದಿನಚರಿ) ಮತ್ತು ಕ್ಯಾಲೆಂಡರ್ (ದಿನದರ್ಶಿಕೆ)ಗಳನ್ನು ಮುರ್ಮು ಅವರಿಗೆ ನೀಡಿ ಗೌರವಿಸಲಾಯಿತು.</p>.<p>ಗುರುವಾರ ಸಂಜೆ ತಿರುಪತಿ ಜಿಲ್ಲೆಯ ತಿರುಚನೂರಿನಲ್ಲಿರುವ ಪದ್ಮಾವತಿ ದೇಗುಲಕ್ಕೆ ಭೇಟಿ ನೀಡಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆನಂತರ ತಿರುಮಲಕ್ಕೆ ಶುಕ್ರವಾರ ಆಗಮಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>