<p><strong>ನವದೆಹಲಿ</strong>: ಬಾಲಿವುಡ್ನಿಂದ ಪಾಕ್ ಕಲಾವಿದರಿಗೆ ನಿಷೇಧ ಹೇರುವ ಮೂಲಕಅಖಿಲ ಭಾರತ ಚಲನಚಿತ್ರ ಕಾರ್ಮಿಕರ ಒಕ್ಕೂಟ (ಎಐಸಿಡಬ್ಲೂಎ) ಉಗ್ರರ ದಾಳಿಯಲ್ಲಿಹುತಾತ್ಮರಾದ ಸಿಆರ್ಪಿಎಫ್ ಸಿಬ್ಬಂದಿಗೆ ಶ್ರದ್ಧಾಂಜಲಿ ಸಲ್ಲಿಸಿದೆ.</p>.<p>ಭಾರತೀಯ ಸಿನಿಮಾದಲ್ಲಿ ತೊಡಗಿಕೊಂಡಿರುವ ಪಾಕಿಸ್ತಾನದ ನಟ–ನಟಿಯರು ಸೇರಿ ಎಲ್ಲಾಕಲಾವಿದರನ್ನು ಬಾಲಿವುಡ್ನಿಂದ ನಿಷೇಧಿಸಲಾಗಿದ್ದು, ಯಾವುದಾದರೂ ನಿರ್ಮಾಣ ಸಂಸ್ಥೆ ಇದನ್ನು ಉಲ್ಲಂಘಿಸಿದ್ದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಒಕ್ಕೂಟ ಪ್ರಕಟಣೆಯಲ್ಲಿ ತಿಳಿಸಿದೆ.</p>.<p>‘ಭಾರತೀಯ ಚಲನಚಿತ್ರ ಉದ್ದಿಮೆಯಿಂದ ಪಾಕ್ ಕಲಾವಿದರಿಗೆ ನಿಷೇಧ’ ಎನ್ನುವ ಶಿರೋನಾಮೆ ಹೊಂದಿರುವ ನೋಟಿಸ್ಗೆ ಒಕ್ಕೂಟ ಪ್ರಧಾನ ಕಾರ್ಯದರ್ಶಿ ರೋನಕ್ ಸುರೇಶ್ ಜೈನ್ ಸಹಿ ಮಾಡಿದ್ದು, ಅದನ್ನು ಎಎನ್ಐ ಸುದ್ದಿ ಸಂಸ್ಥೆ ಟ್ವಿಟ್ಟರ್ನಲ್ಲಿ ಪ್ರಕಟಿಸಿದೆ.</p>.<p>ಉಗ್ರರ ಆತ್ಮಾಹುತಿ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಒಕ್ಕೂಟ, ದಾಳಿಯಲ್ಲಿ ಮಡಿದ ಸಿಆರ್ಪಿಎಫ್ ಸಿಬ್ಬಂದಿ ಕುಟುಂಬದವರಿಗೆ ಸಂತಾಪ ಸೂಚಿಸಿದರು.‘ದೇಶ ಮೊದಲು, ದೇಶದೊಂದಿಗೆ ನಾವು ನಿಲ್ಲುತ್ತೇವೆ’ ಎನ್ನುವ ಧ್ಯೇಯವಾಕ್ಯದ ಮೂಲಕ ಈ ನಿಷೇಧದ ನಿರ್ಧಾರವನ್ನು ಒಕ್ಕೂಟ ಪ್ರಕಟಿಸಿದೆ. ನಿಷೇಧಿತ ಕಲಾವಿದರನ್ನು ಬಳಸಿಕೊಂಡಿದ್ದು ತಿಳಿದು ಬಂದರೆ ಅವರನ್ನು ಒಕ್ಕೂಟದಿಂದ ಹೊರಹಾಕುವುದಾಗಿಯೂ ಪ್ರಕಟಣೆಯಲ್ಲಿ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಬಾಲಿವುಡ್ನಿಂದ ಪಾಕ್ ಕಲಾವಿದರಿಗೆ ನಿಷೇಧ ಹೇರುವ ಮೂಲಕಅಖಿಲ ಭಾರತ ಚಲನಚಿತ್ರ ಕಾರ್ಮಿಕರ ಒಕ್ಕೂಟ (ಎಐಸಿಡಬ್ಲೂಎ) ಉಗ್ರರ ದಾಳಿಯಲ್ಲಿಹುತಾತ್ಮರಾದ ಸಿಆರ್ಪಿಎಫ್ ಸಿಬ್ಬಂದಿಗೆ ಶ್ರದ್ಧಾಂಜಲಿ ಸಲ್ಲಿಸಿದೆ.</p>.<p>ಭಾರತೀಯ ಸಿನಿಮಾದಲ್ಲಿ ತೊಡಗಿಕೊಂಡಿರುವ ಪಾಕಿಸ್ತಾನದ ನಟ–ನಟಿಯರು ಸೇರಿ ಎಲ್ಲಾಕಲಾವಿದರನ್ನು ಬಾಲಿವುಡ್ನಿಂದ ನಿಷೇಧಿಸಲಾಗಿದ್ದು, ಯಾವುದಾದರೂ ನಿರ್ಮಾಣ ಸಂಸ್ಥೆ ಇದನ್ನು ಉಲ್ಲಂಘಿಸಿದ್ದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಒಕ್ಕೂಟ ಪ್ರಕಟಣೆಯಲ್ಲಿ ತಿಳಿಸಿದೆ.</p>.<p>‘ಭಾರತೀಯ ಚಲನಚಿತ್ರ ಉದ್ದಿಮೆಯಿಂದ ಪಾಕ್ ಕಲಾವಿದರಿಗೆ ನಿಷೇಧ’ ಎನ್ನುವ ಶಿರೋನಾಮೆ ಹೊಂದಿರುವ ನೋಟಿಸ್ಗೆ ಒಕ್ಕೂಟ ಪ್ರಧಾನ ಕಾರ್ಯದರ್ಶಿ ರೋನಕ್ ಸುರೇಶ್ ಜೈನ್ ಸಹಿ ಮಾಡಿದ್ದು, ಅದನ್ನು ಎಎನ್ಐ ಸುದ್ದಿ ಸಂಸ್ಥೆ ಟ್ವಿಟ್ಟರ್ನಲ್ಲಿ ಪ್ರಕಟಿಸಿದೆ.</p>.<p>ಉಗ್ರರ ಆತ್ಮಾಹುತಿ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಒಕ್ಕೂಟ, ದಾಳಿಯಲ್ಲಿ ಮಡಿದ ಸಿಆರ್ಪಿಎಫ್ ಸಿಬ್ಬಂದಿ ಕುಟುಂಬದವರಿಗೆ ಸಂತಾಪ ಸೂಚಿಸಿದರು.‘ದೇಶ ಮೊದಲು, ದೇಶದೊಂದಿಗೆ ನಾವು ನಿಲ್ಲುತ್ತೇವೆ’ ಎನ್ನುವ ಧ್ಯೇಯವಾಕ್ಯದ ಮೂಲಕ ಈ ನಿಷೇಧದ ನಿರ್ಧಾರವನ್ನು ಒಕ್ಕೂಟ ಪ್ರಕಟಿಸಿದೆ. ನಿಷೇಧಿತ ಕಲಾವಿದರನ್ನು ಬಳಸಿಕೊಂಡಿದ್ದು ತಿಳಿದು ಬಂದರೆ ಅವರನ್ನು ಒಕ್ಕೂಟದಿಂದ ಹೊರಹಾಕುವುದಾಗಿಯೂ ಪ್ರಕಟಣೆಯಲ್ಲಿ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>