<p><strong>ನವದೆಹಲಿ</strong>: ಪಂಜಾಬ್ನಲ್ಲಿ ಎದುರಾಗಿರುವ ಪ್ರವಾಹ ಪರಿಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪತ್ರ ಬರೆದಿದ್ದು, ಸಂತ್ರಸ್ತರಿಗೆ ತ್ವರಿತವಾಗಿ ಪರಿಹಾರ ಪ್ಯಾಕೇಜ್ ಒದಗಿಸುವಂತೆ ಒತ್ತಾಯಿಸಿದ್ದಾರೆ.</p><p>ಪ್ರವಾಹದ ಪರಿಸ್ಥಿತಿ ನಿರ್ವಹಣೆಗೆ ಕೇಂದ್ರ ಸರ್ಕಾರ ಘೋಷಿಸಿದ ₹1,600 ಕೋಟಿ ಪರಿಹಾರವು ಪಂಜಾಬ್ ಜನರಿಗೆ ಮಾಡಿದ ಅತಿದೊಡ್ಡ ಅನ್ಯಾಯ ಎಂದು ರಾಹುಲ್ ಆರೋಪಿಸಿದ್ದಾರೆ.</p><p>ಭೀಕರ ಪ್ರವಾಹ ಪರಿಸ್ಥಿತಿಯಿಂದಾಗಿ ರಾಜ್ಯವು ಸುಮಾರು ₹20,000 ಕೋಟಿ ನಷ್ಟ ಅನುಭವಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಪಂಜಾಬ್ಗೆ ತ್ವರಿತವಾಗಿ ಹಾಗೂ ಸಮಗ್ರವಾದ ಪರಿಹಾರದ ಪ್ಯಾಕೇಜ್ ಅನ್ನು ಒದಗಿಸಬೇಕು ಎಂದು ರಾಹುಲ್ ತಿಳಿಸಿದ್ದಾರೆ.</p>.ಏಷ್ಯಾ ಕಪ್| ‘ಯುಎಇ’ಯಲ್ಲಿ ವಿಪರೀತ ಉಷ್ಣಾಂಶ: ಅರ್ಧ ಗಂಟೆ ತಡವಾಗಿ ಪಂದ್ಯಗಳು ಆರಂಭ.75ನೇ ಜನ್ಮದಿನ | ಶುಭಾಶಯಗಳ ಮಹಾಪೂರ; ಮೋದಿ ನಾಯಕತ್ವ ಶ್ಲಾಘಿಸಿದ ವಿಶ್ವ ಮುಖಂಡರು . <p>ಪಂಜಾಬ್ನಲ್ಲಿ ಅತ್ಯಂತ ವಿನಾಶಕಾರಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಸ್ವತಃ ನಾವು ಅದನ್ನು ವೀಕ್ಷಿಸಿದ್ದೇವೆ. ಸಂತ್ರಸ್ತರ ಜತೆ ಸಂವಾದ ನಡೆಸಿದ್ದೇವೆ ಎಂದಿದ್ದಾರೆ.</p><p>4 ಲಕ್ಷಕ್ಕೂ ಅಧಿಕ ಎಕರೆಯ ಭತ್ತದ ಬೆಳೆ ನಾಶವಾಗಿದೆ. ಸುಮಾರು 10 ಲಕ್ಷಕ್ಕೂ ಹೆಚ್ಚು ಪ್ರಾಣಿಗಳು ಮೃತಪಟ್ಟಿವೆ. ಲಕ್ಷಾಂತರ ಜನರು ನಿರಾಶಿತ್ರರಾಗಿದ್ದಾರೆ ಎಂದು ಪಂಜಾಬ್ ಭೇಟಿಯ ಸಮಯದಲ್ಲಿ ತಾವು ಕಂಡ ಭೀಕರ ದೃಶ್ಯಗಳ ಬಗ್ಗೆ ರಾಹುಲ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.</p>.ನಟ ದರ್ಶನ್ಗೆ ಹಾಸಿಗೆ, ದಿಂಬು: ಆದೇಶ ಕಾಯ್ದಿರಿಸಿದ ಕೋರ್ಟ್.ಅತ್ಯಾಚಾರ ಆರೋಪ ಪ್ರಕರಣ: ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಪ್ರಕರಣ ವಜಾ. <p>ಪಂಜಾಬ್ ಮತ್ತೆ ಸಹಜ ಸ್ಥಿತಿಗೆ ಮರಳಬೇಕು. ಅವರ ಸಂಕಷ್ಟದ ಸಮಯದಲ್ಲಿ, ಭಾರತವು ನಿಮ್ಮೊಂದಿಗೆ ನಿಂತಿದೆ ಎಂದು ಪಂಜಾಬ್ನ ಪ್ರತಿಯೊಂದು ಕುಟುಂಬಕ್ಕೂ ನಾವು ಭರವಸೆ ನೀಡಬೇಕು. ಅವರ ಭವಿಷ್ಯವನ್ನು ಪುನರ್ನಿರ್ಮಿಸಲು ಒಗ್ಗೂಡಿ ಸಾಧ್ಯವಿರುವ ಎಲ್ಲಾ ಬೆಂಬಲವನ್ನು ಒದಗಿಸಬೇಕು ಎಂದು ರಾಹುಲ್ ತಿಳಿಸಿದ್ದಾರೆ.</p><p>ಪಂಜಾಬ್ನಲ್ಲಿ ಸುಮಾರು 3,200 ಶಾಲೆಗಳು ಹಾನಿಗೊಳಗಾಗಿವೆ. 56 ಜನರು ಮೃತಪಟ್ಟಿದ್ದಾರೆ. 1,400 ಚಿಕಿತ್ಸಾಲಯಗಳು, ಸರ್ಕಾರಿ ಕಟ್ಟಡಗಳು ಮತ್ತು 19 ಕಾಲೇಜುಗಳು ತೀವ್ರ ಹಾನಿಗೊಳಗಾಗಿವೆ. 8,500 ಕಿ.ಮೀ ರಸ್ತೆಗಳು ಮತ್ತು 2,500 ಸೇತುವೆಗಳು ನಾಶವಾಗಿವೆ ಎಂದು ರಾಹುಲ್ ಮಾಹಿತಿ ನೀಡಿದ್ದಾರೆ.</p>.ಒಳನುಸುಳುಕೋರರನ್ನು ರಕ್ಷಿಸಲು ಕಾಂಗ್ರೆಸ್ ಮತದಾರರ ಅಧಿಕಾರ ಯಾತ್ರೆ ನಡೆಸಿತು: ಶಾ.ವಿದ್ಯಾರ್ಥಿಗಳಿಗೆ ನೀಡಬೇಕಿದ್ದ 15 ಕ್ವಿಂಟಲ್ ಗೋಧಿ ಮಣ್ಣಲ್ಲಿ ಹಾಕಿದ್ದ ವಾರ್ಡನ್.Gold, Silver Rate | ಚಿನ್ನದ ದರ ₹1,300, ಬೆಳ್ಳಿ ₹1,670 ಇಳಿಕೆ.ಉತ್ತರಾಖಂಡ ಮೇಘಸ್ಫೋಟ: ಸಾವಿನ ಸಂಖ್ಯೆ 21ಕ್ಕೆ ಏರಿಕೆ, 14 ಮಂದಿ ನಾಪತ್ತೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಪಂಜಾಬ್ನಲ್ಲಿ ಎದುರಾಗಿರುವ ಪ್ರವಾಹ ಪರಿಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪತ್ರ ಬರೆದಿದ್ದು, ಸಂತ್ರಸ್ತರಿಗೆ ತ್ವರಿತವಾಗಿ ಪರಿಹಾರ ಪ್ಯಾಕೇಜ್ ಒದಗಿಸುವಂತೆ ಒತ್ತಾಯಿಸಿದ್ದಾರೆ.</p><p>ಪ್ರವಾಹದ ಪರಿಸ್ಥಿತಿ ನಿರ್ವಹಣೆಗೆ ಕೇಂದ್ರ ಸರ್ಕಾರ ಘೋಷಿಸಿದ ₹1,600 ಕೋಟಿ ಪರಿಹಾರವು ಪಂಜಾಬ್ ಜನರಿಗೆ ಮಾಡಿದ ಅತಿದೊಡ್ಡ ಅನ್ಯಾಯ ಎಂದು ರಾಹುಲ್ ಆರೋಪಿಸಿದ್ದಾರೆ.</p><p>ಭೀಕರ ಪ್ರವಾಹ ಪರಿಸ್ಥಿತಿಯಿಂದಾಗಿ ರಾಜ್ಯವು ಸುಮಾರು ₹20,000 ಕೋಟಿ ನಷ್ಟ ಅನುಭವಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಪಂಜಾಬ್ಗೆ ತ್ವರಿತವಾಗಿ ಹಾಗೂ ಸಮಗ್ರವಾದ ಪರಿಹಾರದ ಪ್ಯಾಕೇಜ್ ಅನ್ನು ಒದಗಿಸಬೇಕು ಎಂದು ರಾಹುಲ್ ತಿಳಿಸಿದ್ದಾರೆ.</p>.ಏಷ್ಯಾ ಕಪ್| ‘ಯುಎಇ’ಯಲ್ಲಿ ವಿಪರೀತ ಉಷ್ಣಾಂಶ: ಅರ್ಧ ಗಂಟೆ ತಡವಾಗಿ ಪಂದ್ಯಗಳು ಆರಂಭ.75ನೇ ಜನ್ಮದಿನ | ಶುಭಾಶಯಗಳ ಮಹಾಪೂರ; ಮೋದಿ ನಾಯಕತ್ವ ಶ್ಲಾಘಿಸಿದ ವಿಶ್ವ ಮುಖಂಡರು . <p>ಪಂಜಾಬ್ನಲ್ಲಿ ಅತ್ಯಂತ ವಿನಾಶಕಾರಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಸ್ವತಃ ನಾವು ಅದನ್ನು ವೀಕ್ಷಿಸಿದ್ದೇವೆ. ಸಂತ್ರಸ್ತರ ಜತೆ ಸಂವಾದ ನಡೆಸಿದ್ದೇವೆ ಎಂದಿದ್ದಾರೆ.</p><p>4 ಲಕ್ಷಕ್ಕೂ ಅಧಿಕ ಎಕರೆಯ ಭತ್ತದ ಬೆಳೆ ನಾಶವಾಗಿದೆ. ಸುಮಾರು 10 ಲಕ್ಷಕ್ಕೂ ಹೆಚ್ಚು ಪ್ರಾಣಿಗಳು ಮೃತಪಟ್ಟಿವೆ. ಲಕ್ಷಾಂತರ ಜನರು ನಿರಾಶಿತ್ರರಾಗಿದ್ದಾರೆ ಎಂದು ಪಂಜಾಬ್ ಭೇಟಿಯ ಸಮಯದಲ್ಲಿ ತಾವು ಕಂಡ ಭೀಕರ ದೃಶ್ಯಗಳ ಬಗ್ಗೆ ರಾಹುಲ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.</p>.ನಟ ದರ್ಶನ್ಗೆ ಹಾಸಿಗೆ, ದಿಂಬು: ಆದೇಶ ಕಾಯ್ದಿರಿಸಿದ ಕೋರ್ಟ್.ಅತ್ಯಾಚಾರ ಆರೋಪ ಪ್ರಕರಣ: ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಪ್ರಕರಣ ವಜಾ. <p>ಪಂಜಾಬ್ ಮತ್ತೆ ಸಹಜ ಸ್ಥಿತಿಗೆ ಮರಳಬೇಕು. ಅವರ ಸಂಕಷ್ಟದ ಸಮಯದಲ್ಲಿ, ಭಾರತವು ನಿಮ್ಮೊಂದಿಗೆ ನಿಂತಿದೆ ಎಂದು ಪಂಜಾಬ್ನ ಪ್ರತಿಯೊಂದು ಕುಟುಂಬಕ್ಕೂ ನಾವು ಭರವಸೆ ನೀಡಬೇಕು. ಅವರ ಭವಿಷ್ಯವನ್ನು ಪುನರ್ನಿರ್ಮಿಸಲು ಒಗ್ಗೂಡಿ ಸಾಧ್ಯವಿರುವ ಎಲ್ಲಾ ಬೆಂಬಲವನ್ನು ಒದಗಿಸಬೇಕು ಎಂದು ರಾಹುಲ್ ತಿಳಿಸಿದ್ದಾರೆ.</p><p>ಪಂಜಾಬ್ನಲ್ಲಿ ಸುಮಾರು 3,200 ಶಾಲೆಗಳು ಹಾನಿಗೊಳಗಾಗಿವೆ. 56 ಜನರು ಮೃತಪಟ್ಟಿದ್ದಾರೆ. 1,400 ಚಿಕಿತ್ಸಾಲಯಗಳು, ಸರ್ಕಾರಿ ಕಟ್ಟಡಗಳು ಮತ್ತು 19 ಕಾಲೇಜುಗಳು ತೀವ್ರ ಹಾನಿಗೊಳಗಾಗಿವೆ. 8,500 ಕಿ.ಮೀ ರಸ್ತೆಗಳು ಮತ್ತು 2,500 ಸೇತುವೆಗಳು ನಾಶವಾಗಿವೆ ಎಂದು ರಾಹುಲ್ ಮಾಹಿತಿ ನೀಡಿದ್ದಾರೆ.</p>.ಒಳನುಸುಳುಕೋರರನ್ನು ರಕ್ಷಿಸಲು ಕಾಂಗ್ರೆಸ್ ಮತದಾರರ ಅಧಿಕಾರ ಯಾತ್ರೆ ನಡೆಸಿತು: ಶಾ.ವಿದ್ಯಾರ್ಥಿಗಳಿಗೆ ನೀಡಬೇಕಿದ್ದ 15 ಕ್ವಿಂಟಲ್ ಗೋಧಿ ಮಣ್ಣಲ್ಲಿ ಹಾಕಿದ್ದ ವಾರ್ಡನ್.Gold, Silver Rate | ಚಿನ್ನದ ದರ ₹1,300, ಬೆಳ್ಳಿ ₹1,670 ಇಳಿಕೆ.ಉತ್ತರಾಖಂಡ ಮೇಘಸ್ಫೋಟ: ಸಾವಿನ ಸಂಖ್ಯೆ 21ಕ್ಕೆ ಏರಿಕೆ, 14 ಮಂದಿ ನಾಪತ್ತೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>