ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ಅವರ ಬೆಂಬಲಿಗರ ಮೇಲೆ ಸಿಧು ಅವರ ಸಲಹೆಗಾರರಾದ ಮಾಲ್ವಿಂದರ್ ಸಿಂಗ್ ಮಾಲಿ ಮತ್ತು ಪ್ಯಾರೆ ಲಾಲ್ ಗರ್ಗ್ ಟೀಕಾ ಪ್ರಹಾರ ಮುಂದುವರಿಸಿದ್ದರು. ವಿವಾದಗಳಿಗೆ ದಾರಿ ಮಾಡಿಕೊಡುತ್ತಿರುವ ಸಲಹೆಗಾರರ ಪೈಕಿ ಮಲ್ವಿಂದರ್ ಮತ್ತು ಪ್ಯಾರೆ ಲಾಲ್ ಅವರನ್ನು ಸ್ಥಾನದಿಂದ ಕೈಬಿಡುವಂತೆ ಕಾಂಗ್ರೆಸ್ ಹೈಕಮಾಂಡ್ ಶುಕ್ರವಾರ ಸಿಧು ಅವರಿಗೆ ಸೂಚಿಸಿತ್ತು.