<p><strong>ನವದೆಹಲಿ:</strong> ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ನರೇಗಾ) ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಯು–ಟರ್ನ್ ಹೊಡೆದಿದ್ದಾರೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.</p>.<p>ಈ ಕುರಿತು #ModiUturnOnMNREGA ಹ್ಯಾಷ್ಟ್ಯಾಗ್ನೊಂದಿಗೆ ಟ್ವೀಟ್ ಮಾಡಿರುವ ಅವರು, ‘ನರೇಗಾ ದೂರದೃಷ್ಟಿಯನ್ನು ಅರ್ಥ ಮಾಡಿಕೊಂಡು ಹೆಚ್ಚುವರಿ ₹40 ಸಾವಿರ ಕೋಟಿ ಅನುದಾನ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ’ ಎಂದು ಕುಹುಕವಾಡಿದ್ದಾರೆ. </p>.<p>ಟ್ವೀಟ್ನೊಂದಿಗೆ 2014ರಲ್ಲಿ ಸಂಸತ್ನಲ್ಲಿ ಮೋದಿ ಮಾಡಿದ್ದ ಭಾಷಣದ ತುಣುಕೊಂದನ್ನು ಅಪ್ಲೋಡ್ ಮಾಡಿದ್ದಾರೆ. ಈ ಭಾಷಣದಲ್ಲಿ ನರೇಗಾ ಯೋಜನೆಯನ್ನು ಹೀಯಾಳಿಸಿದ್ದ ಮೋದಿ ಅವರು, ‘ಈ ಯೋಜನೆ ಕಾಂಗ್ರೆಸ್ನ ವೈಫಲ್ಯದ ಸ್ಮಾರಕ. ಸ್ವಾತಂತ್ರ್ಯ ದೊರಕಿ 60 ವರ್ಷ ಕಳೆದರೂ ಜನರನ್ನು ಗುಂಡಿ ತೋಡಲು ಕಾಂಗ್ರೆಸ್ ಕಳುಹಿಸುತ್ತಿದೆ’ ಎಂದಿದ್ದರು.</p>.<p><strong>ಇದನ್ನೂ ಓದಿ:</strong><a href="https://www.prajavani.net/op-ed/market-analysis/national-rural-employment-guarantee-act-is-life-saver-728599.html" target="_blank">ನರೇಗಾ ಎಂಬ ಆಪದ್ಬಾಂಧವ: ಗ್ರಾಮೀಣ ಉದ್ಯೋಗ ಸೃಷ್ಟಿಯಿಂದ ಬಡತನ ನಿವಾರಣೆ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ನರೇಗಾ) ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಯು–ಟರ್ನ್ ಹೊಡೆದಿದ್ದಾರೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.</p>.<p>ಈ ಕುರಿತು #ModiUturnOnMNREGA ಹ್ಯಾಷ್ಟ್ಯಾಗ್ನೊಂದಿಗೆ ಟ್ವೀಟ್ ಮಾಡಿರುವ ಅವರು, ‘ನರೇಗಾ ದೂರದೃಷ್ಟಿಯನ್ನು ಅರ್ಥ ಮಾಡಿಕೊಂಡು ಹೆಚ್ಚುವರಿ ₹40 ಸಾವಿರ ಕೋಟಿ ಅನುದಾನ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ’ ಎಂದು ಕುಹುಕವಾಡಿದ್ದಾರೆ. </p>.<p>ಟ್ವೀಟ್ನೊಂದಿಗೆ 2014ರಲ್ಲಿ ಸಂಸತ್ನಲ್ಲಿ ಮೋದಿ ಮಾಡಿದ್ದ ಭಾಷಣದ ತುಣುಕೊಂದನ್ನು ಅಪ್ಲೋಡ್ ಮಾಡಿದ್ದಾರೆ. ಈ ಭಾಷಣದಲ್ಲಿ ನರೇಗಾ ಯೋಜನೆಯನ್ನು ಹೀಯಾಳಿಸಿದ್ದ ಮೋದಿ ಅವರು, ‘ಈ ಯೋಜನೆ ಕಾಂಗ್ರೆಸ್ನ ವೈಫಲ್ಯದ ಸ್ಮಾರಕ. ಸ್ವಾತಂತ್ರ್ಯ ದೊರಕಿ 60 ವರ್ಷ ಕಳೆದರೂ ಜನರನ್ನು ಗುಂಡಿ ತೋಡಲು ಕಾಂಗ್ರೆಸ್ ಕಳುಹಿಸುತ್ತಿದೆ’ ಎಂದಿದ್ದರು.</p>.<p><strong>ಇದನ್ನೂ ಓದಿ:</strong><a href="https://www.prajavani.net/op-ed/market-analysis/national-rural-employment-guarantee-act-is-life-saver-728599.html" target="_blank">ನರೇಗಾ ಎಂಬ ಆಪದ್ಬಾಂಧವ: ಗ್ರಾಮೀಣ ಉದ್ಯೋಗ ಸೃಷ್ಟಿಯಿಂದ ಬಡತನ ನಿವಾರಣೆ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>