ಜನವರಿ 26ರ ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ‘ಟ್ರ್ಯಾಕ್ಟರ್ ಪೆರೇಡ್‘ಗೆ ಎಸ್ಕೆಎಂ ಕರೆ ನೀಡಿತ್ತು. ಆ ವೇಳೆ ಪ್ರತಿಭಟನಾಕಾರರ ಒಂದು ಗುಂಪು ಪೊಲೀಸರೊಂದಿಗೆ ಘರ್ಷಣೆಗಿಳಿದು, ವಾಹನಗಳನ್ನು ಧ್ವಂಸಗೊಳಿಸಿ, ಕೆಂಪುಕೋಟೆ ಬಳಿ ಧಾರ್ಮಿಕ ಧ್ವಜನವನ್ನು ಹಾರಿಸಿತ್ತು. ನಂತರ ಎಸ್ಕೆಎಂ ಫೆ.6 ರಂದು ದೇಶದಾದ್ಯಂತ ‘ಚಕ್ಕಾ ಜಾಮ್‘ ಚಳವಳಿಗೆ ಕರೆ ನೀಡಿತ್ತು. ಈಗ ಅದರ ಮುಂದುವರಿದ ಭಾಗವಾಗಿ ‘ರೈಲು ತಡೆ‘ ಚಳವಳಿ ನಡೆಸುತ್ತಿದೆ.