<p><strong>ನವದೆಹಲಿ</strong>: ಕಾಶ್ಮೀರದ ಅಮರನಾಥ ಯಾತ್ರೆ ಭದ್ರತೆಗಾಗಿ ತ್ರಿಪುರಾದಿಂದ ಗಡಿ ಭದ್ರತಾ ಪಡೆ (ಬಿಎಸ್ಎಫ್) ಸಿಬ್ಬಂದಿಯನ್ನು ಕರೆದೊಯ್ಯಲು ಶಿಥಿಲಗೊಂಡ ಕೊಳಕು ಬೋಗಿಗಳನ್ನು ಹೊಂದಿರುವ ರೈಲನ್ನು ಒದಗಿಸಿದ ಸಂಬಂಧ ನಾಲ್ವರು ಅಧಿಕಾರಿಗಳನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅಮಾನತು ಮಾಡಿದ್ದು, ತನಿಖೆಗೆ ಆದೇಶಿಸಿದ್ದಾರೆ.</p><p>ಬುಧವಾರ ಬಿಡುಗಡೆಯಾದ ರೈಲ್ವೆ ಸಚಿವಾಲಯದ ಹೇಳಿಕೆಯ ಪ್ರಕಾರ, ಭದ್ರತಾ ಪಡೆಗಳ ಘನತೆ ಅತ್ಯುನ್ನತವಾಗಿದೆ. ಅಂತಹ ನಿರ್ಲಕ್ಷ್ಯವನ್ನು ಸಹಿಸಲಾಗುವುದಿಲ್ಲ ಎಂದು ಸಚಿವರು ಪ್ರತಿಪಾದಿಸಿದ್ದಾರೆ..</p><p>ಶಿಥಿಲಗೊಂಡ ರೈಲಿನಲ್ಲಿ ಬಿಎಸ್ಎಫ್ ಯೋಧರು ಪ್ರಯಾಣಿಸುತ್ತಿರುವ ವಿಡಿಯೊ ಆನ್ಲೈನ್ನಲ್ಲಿ ಕಾಣಿಸಿಕೊಂಡ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಆದರೆ, ಈ ಆರೋಪಗಳನ್ನು ಈಶಾನ್ಯ ಗಡಿನಾಡು ರೈಲ್ವೆ ವಲಯವು ತಳ್ಳಿಹಾಕಿದ ಒಂದು ದಿನದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.</p><p>ತ್ರಿಪುರಾದ ಉದಯಪುರದಿಂದ ಜಮ್ಮು ತಾವಿಗೆ ವಿಶೇಷ ರೈಲು ಹತ್ತಲು ಬಿಎಸ್ಎಫ್ನ 13 ತುಕಡಿಗಳಿಂದ ಸುಮಾರು 1,200 ಬಿಎಸ್ಎಫ್ ಸೈನಿಕರು ಸಿದ್ಧರಾಗಿದ್ದರು. ರೈಲು ತ್ರಿಪುರ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ನಾಲ್ಕು ಸ್ಥಳಗಳಲ್ಲಿ ನಿಲ್ಲಿಸಿ ಸೈನಿಕರನ್ನು ಹತ್ತಿಸಿಕೊಳ್ಳಬೇಕಿತ್ತು. ಆದರೆ, ಜೂನ್ 9 ರಂದು ಬಿಎಸ್ಎಫ್ಗೆ ರೈಲು ಸಿಕ್ಕಿದೆ. ರೈಲಿನ ಅನೈರ್ಮಲ್ಯ ಮತ್ತು ಶಿಥಿಲ ಬೋಗಿಗಳನ್ನು ಕಂಡ ಯೋಧರು ವಿಡಿಯೊಗಳನ್ನು ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p><p>ಬೋಗಿಗಳ ದುರವಸ್ಥೆ ಕಂಡು ಎಲ್ಲೆಡೆಯಿಂದ ಆಕ್ರೋಶ ಎದುರಾದ ಬಳಿಕ ಇದು ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದೆ.</p><p>ಅಲಿಪುರ್ದುವಾರ್ ರೈಲ್ವೆ ವಿಭಾಗದ ಮೂವರು ಹಿರಿಯ ಸೆಕ್ಷನ್ ಎಂಜಿನಿಯರ್ಗಳು ಮತ್ತು ಕೋಚ್ ಡಿಪೊ ಅಧಿಕಾರಿಯನ್ನು ರೈಲ್ವೆ ಸಚಿವರು ಅಮಾನತುಗೊಳಿಸಿದ್ದಾರೆ ಎಂದು ರೈಲ್ವೆ ಸಚಿವಾಲಯದ ಪತ್ರಿಕಾ ಪ್ರಕಟಣೆ ತಿಳಿಸಿದೆ.</p><p>ಭದ್ರತಾ ಪಡೆಗಳ ಘನತೆ ಅತ್ಯಂತ ಮುಖ್ಯ ಮತ್ತು ಅಂತಹ ನಿರ್ಲಕ್ಷ್ಯವನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ ಎಂದು ರೈಲ್ವೆ ಸಚಿವರು ಹೇಳಿದ್ದಾರೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತನಿಖೆಗೆ ಆದೇಶಿಸಲಾಗಿದೆ ಎಂದು ಅದು ಹೇಳಿದೆ.</p><p>ಭದ್ರತಾ ಸಿಬ್ಬಂದಿಯ ಸುಗಮ ಮತ್ತು ಆರಾಮದಾಯಕ ಸಂಚಾರಕ್ಕಾಗಿ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ವಿಶೇಷ ರೈಲನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.</p><p>ಸರ್ಕಾರದ ಸಂಪೂರ್ಣ ಗಮನವು ಕೆಲವು ಆಕರ್ಷಕ ರೈಲುಗಳ ಕುರಿತಂತೆ ಪ್ರಚಾರ ತೆಗೆದುಕೊಳ್ಳುವುದರಲ್ಲೇ ಇದ್ದಾಗ ಜನಸಾಮಾನ್ಯರು ಪ್ರಾಣಿಗಳಂತೆ ಪ್ರಯಾಣಿಸಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್ ಟೀಕಿಸಿದ್ದರು.</p><p>ಅಮರನಾಥ ಯಾತ್ರೆಗೆ ತೆರಳುವ ನಮ್ಮ ಬಿಎಸ್ಎಫ್ ಯೋಧರಿಗೆ ಕೊಳಕು, ಜಿರಳೆಗಳು ತುಂಬಿರುವ ಮತ್ತು ಮುರಿದ ಆಸನಗಳಿಂದ ತುಂಬಿದ ಕೊಳಕು ರೈಲನ್ನು ಒದಗಿಸಿರುವುದು ಪ್ರಧಾನಿ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ನಾಚಿಕೆಗೇಡು ಎಂದು ಕುಟುಕಿದ್ದರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಕಾಶ್ಮೀರದ ಅಮರನಾಥ ಯಾತ್ರೆ ಭದ್ರತೆಗಾಗಿ ತ್ರಿಪುರಾದಿಂದ ಗಡಿ ಭದ್ರತಾ ಪಡೆ (ಬಿಎಸ್ಎಫ್) ಸಿಬ್ಬಂದಿಯನ್ನು ಕರೆದೊಯ್ಯಲು ಶಿಥಿಲಗೊಂಡ ಕೊಳಕು ಬೋಗಿಗಳನ್ನು ಹೊಂದಿರುವ ರೈಲನ್ನು ಒದಗಿಸಿದ ಸಂಬಂಧ ನಾಲ್ವರು ಅಧಿಕಾರಿಗಳನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅಮಾನತು ಮಾಡಿದ್ದು, ತನಿಖೆಗೆ ಆದೇಶಿಸಿದ್ದಾರೆ.</p><p>ಬುಧವಾರ ಬಿಡುಗಡೆಯಾದ ರೈಲ್ವೆ ಸಚಿವಾಲಯದ ಹೇಳಿಕೆಯ ಪ್ರಕಾರ, ಭದ್ರತಾ ಪಡೆಗಳ ಘನತೆ ಅತ್ಯುನ್ನತವಾಗಿದೆ. ಅಂತಹ ನಿರ್ಲಕ್ಷ್ಯವನ್ನು ಸಹಿಸಲಾಗುವುದಿಲ್ಲ ಎಂದು ಸಚಿವರು ಪ್ರತಿಪಾದಿಸಿದ್ದಾರೆ..</p><p>ಶಿಥಿಲಗೊಂಡ ರೈಲಿನಲ್ಲಿ ಬಿಎಸ್ಎಫ್ ಯೋಧರು ಪ್ರಯಾಣಿಸುತ್ತಿರುವ ವಿಡಿಯೊ ಆನ್ಲೈನ್ನಲ್ಲಿ ಕಾಣಿಸಿಕೊಂಡ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಆದರೆ, ಈ ಆರೋಪಗಳನ್ನು ಈಶಾನ್ಯ ಗಡಿನಾಡು ರೈಲ್ವೆ ವಲಯವು ತಳ್ಳಿಹಾಕಿದ ಒಂದು ದಿನದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.</p><p>ತ್ರಿಪುರಾದ ಉದಯಪುರದಿಂದ ಜಮ್ಮು ತಾವಿಗೆ ವಿಶೇಷ ರೈಲು ಹತ್ತಲು ಬಿಎಸ್ಎಫ್ನ 13 ತುಕಡಿಗಳಿಂದ ಸುಮಾರು 1,200 ಬಿಎಸ್ಎಫ್ ಸೈನಿಕರು ಸಿದ್ಧರಾಗಿದ್ದರು. ರೈಲು ತ್ರಿಪುರ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ನಾಲ್ಕು ಸ್ಥಳಗಳಲ್ಲಿ ನಿಲ್ಲಿಸಿ ಸೈನಿಕರನ್ನು ಹತ್ತಿಸಿಕೊಳ್ಳಬೇಕಿತ್ತು. ಆದರೆ, ಜೂನ್ 9 ರಂದು ಬಿಎಸ್ಎಫ್ಗೆ ರೈಲು ಸಿಕ್ಕಿದೆ. ರೈಲಿನ ಅನೈರ್ಮಲ್ಯ ಮತ್ತು ಶಿಥಿಲ ಬೋಗಿಗಳನ್ನು ಕಂಡ ಯೋಧರು ವಿಡಿಯೊಗಳನ್ನು ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p><p>ಬೋಗಿಗಳ ದುರವಸ್ಥೆ ಕಂಡು ಎಲ್ಲೆಡೆಯಿಂದ ಆಕ್ರೋಶ ಎದುರಾದ ಬಳಿಕ ಇದು ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದೆ.</p><p>ಅಲಿಪುರ್ದುವಾರ್ ರೈಲ್ವೆ ವಿಭಾಗದ ಮೂವರು ಹಿರಿಯ ಸೆಕ್ಷನ್ ಎಂಜಿನಿಯರ್ಗಳು ಮತ್ತು ಕೋಚ್ ಡಿಪೊ ಅಧಿಕಾರಿಯನ್ನು ರೈಲ್ವೆ ಸಚಿವರು ಅಮಾನತುಗೊಳಿಸಿದ್ದಾರೆ ಎಂದು ರೈಲ್ವೆ ಸಚಿವಾಲಯದ ಪತ್ರಿಕಾ ಪ್ರಕಟಣೆ ತಿಳಿಸಿದೆ.</p><p>ಭದ್ರತಾ ಪಡೆಗಳ ಘನತೆ ಅತ್ಯಂತ ಮುಖ್ಯ ಮತ್ತು ಅಂತಹ ನಿರ್ಲಕ್ಷ್ಯವನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ ಎಂದು ರೈಲ್ವೆ ಸಚಿವರು ಹೇಳಿದ್ದಾರೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತನಿಖೆಗೆ ಆದೇಶಿಸಲಾಗಿದೆ ಎಂದು ಅದು ಹೇಳಿದೆ.</p><p>ಭದ್ರತಾ ಸಿಬ್ಬಂದಿಯ ಸುಗಮ ಮತ್ತು ಆರಾಮದಾಯಕ ಸಂಚಾರಕ್ಕಾಗಿ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ವಿಶೇಷ ರೈಲನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.</p><p>ಸರ್ಕಾರದ ಸಂಪೂರ್ಣ ಗಮನವು ಕೆಲವು ಆಕರ್ಷಕ ರೈಲುಗಳ ಕುರಿತಂತೆ ಪ್ರಚಾರ ತೆಗೆದುಕೊಳ್ಳುವುದರಲ್ಲೇ ಇದ್ದಾಗ ಜನಸಾಮಾನ್ಯರು ಪ್ರಾಣಿಗಳಂತೆ ಪ್ರಯಾಣಿಸಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್ ಟೀಕಿಸಿದ್ದರು.</p><p>ಅಮರನಾಥ ಯಾತ್ರೆಗೆ ತೆರಳುವ ನಮ್ಮ ಬಿಎಸ್ಎಫ್ ಯೋಧರಿಗೆ ಕೊಳಕು, ಜಿರಳೆಗಳು ತುಂಬಿರುವ ಮತ್ತು ಮುರಿದ ಆಸನಗಳಿಂದ ತುಂಬಿದ ಕೊಳಕು ರೈಲನ್ನು ಒದಗಿಸಿರುವುದು ಪ್ರಧಾನಿ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ನಾಚಿಕೆಗೇಡು ಎಂದು ಕುಟುಕಿದ್ದರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>