‘ಕೃತಿಸಿನ್ಹಾ ಜಡೇಜಾ ಅವರನ್ನು ಕಳೆದ ರಾತ್ರಿ ರಾಜ್ಕೋಟ್ ಸಮೀಪ ನಾವು ಬಂಧಿಸಿದ್ದೇವೆ. ಅಲ್ಲಿಗೆ ಘಟನೆಯಲ್ಲಿ ಬಂಧಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಎಫ್ಐಆರ್ನಲ್ಲಿ ಹೆಸರಿಸಲಾಗಿರುವ 6 ಮಂದಿಯ ಪೈಕಿ, ಪ್ರಕಾಶ್ ಹಿರನ್ ಅವರು ಬೆಂಕಿ ಅವಘಡದಲ್ಲಿ ಸಾವಿಗೀಡಾಗಿದ್ದಾರೆ. ಡಿಎನ್ಎ ಮಾದರಿ ಸಂಬಂಧಿಕರೊಂದಿಗೆ ತಾಳೆಯಾಗಿದ್ದು, ಅವರು ಮೃತಪಟ್ಟಿದ್ದು ನಿಕ್ಕಿಯಾಗಿದೆ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ಹಿಂದೆ ಪ್ರಕರಣ ಸಂಬಂಧ ಯುವರಾಜ್ ಸಿನ್ಹ ಸೋಲಂಕಿ, ರಾಹುಲ್ ರಾಥೋಡ್. ಧವಲ್ ಥಕ್ಕರ್, ನತಿನ್ ಜೈನ್ ಎಂಬವರನ್ನು ಬಂಧಿಸಲಾಗಿತ್ತು.