<p><strong>ಡೆಹ್ರಾಡೂನ್</strong>: ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ಹೊರ ತರುವಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ್ದಕ್ಕೆ ಪ್ರತಿಯಾಗಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ನೀಡಿದ್ದ ತಲಾ ₹50 ಸಾವಿರದ ಚೆಕ್ ಅನ್ನು ನಗದೀಕರಿಸಿಕೊಳ್ಳಲು ರ್ಯಾಟ್–ಹೋಲ್ ಮೈನರ್ಗಳು ನಿರಾಕರಿಸಿದ್ದಾರೆ. </p>.<p>ಸರ್ಕಾರದಿಂದ ಗೌರವಕ್ಕೆ ಪಾತ್ರವಾಗಿದ್ದ 12 ಮಂದಿ ರ್ಯಾಟ್– ಹೋಲ್ ಮೈನರ್ಗಳೂ ಚೆಕ್ ಅನ್ನು ಹಿಂದಿರುಗಿಸಲು ನಿರ್ಧರಿಸಿದ್ದಾರೆ. </p>.<p>‘ನಾವು ನಿರ್ವಹಿಸಿದ ಕೆಲಸಕ್ಕೆ ತಕ್ಕ ಬಹುಮಾನ ಮುಖ್ಯಮಂತ್ರಿಗಳಿಂದ ಸಿಕ್ಕಿಲ್ಲ’ ಎಂದು ಅವರು ದೂರಿದ್ದಾರೆ. </p>.<p>‘ಅತ್ಯಂತ ಕಠಿಣ ಸ್ಥಿತಿಯಲ್ಲಿ ನಾವು ಕೆಲಸ ಮಾಡಿದ್ದೇವೆ. ಯಂತ್ರಗಳ ಸಹಾಯದಿಂದ ರಕ್ಷಣಾ ಕಾರ್ಯ ನಡೆಸಿದರೂ ಕಾರ್ಮಿಕರ ಬಳಿಗೆ ಹೋಗಲು ಸಾಧ್ಯವಾಗದ ಸಂದರ್ಭದಲ್ಲಿ ನಾವು ಕೈಯಲ್ಲಿ ಈ ಕೆಲಸ ಮಾಡಿ ಸಾಧಿಸಿದ್ದೆವು. ನಮ್ಮ ಪ್ರಾಣವನ್ನು ಪಣವಾಗಿಟ್ಟು, ಪ್ರತಿಫಲಾಪೇಕ್ಷೆ ಇಲ್ಲದೇ ಸುರಂಗ ಕೊರೆದೆವು. ನಮ್ಮ ಈ ಕೆಲಸಕ್ಕೆ ಬಹುಮಾನ ನೀಡಿದ ಮುಖ್ಯಮಂತ್ರಿಯವರ ನಡೆಯನ್ನು ಗೌರವಿಸುತ್ತೇವೆ. ಆದರೆ, ಅವರು ಘೋಷಿಸಿದ ಬಹುಮಾನದ ಮೊತ್ತ ನಮಗೆ ತೃಪ್ತಿ ನೀಡಿಲ್ಲ’ ಎಂದು ರ್ಯಾಟ್–ಹೋಲ್ ಮೈನರ್ಗಳ ತಂಡವನ್ನು ಮುನ್ನಡೆಸಿದ್ದ ವಕೀಲ್ ಹಸನ್ ತಿಳಿಸಿದ್ದಾರೆ. </p>.<p>‘ನಮಗೆ ಚೆಕ್ ಕೊಟ್ಟ ದಿನವೇ ನಾವು ನಮ್ಮ ಅತೃಪ್ತಿಯನ್ನು ಸಿ.ಎಂಗೆ ತಿಳಿಸಿದ್ದೆವು. ಕೆಲವೇ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಅಧಿಕಾರಿಗಳು ಹೇಳಿದ್ದರು. ಆದರೆ ನಮಗೆ ನೀಡಲಾದ ವಾಗ್ದಾನ ಈವರೆಗೆ ಈಡೇರಿಲ್ಲ. ಹೀಗಾಗಿ ಚೆಕ್ಗಳನ್ನು ಮರಳಿಸುತ್ತಿದ್ದೇವೆ’ ಎಂದು ಹಸನ್ ತಿಳಿಸಿದ್ದಾರೆ. </p>.<p>‘ನಾವು ನಿರ್ವಹಿಸಿದ ಕಾರ್ಯಕ್ಕೆ ಪ್ರತಿಯಾಗಿ ನಮಗೆ ನೌಕರಿ ಅಥವಾ ಸ್ವಂತ ಮನೆ ಒದಗಿಸಿಕೊಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಡೆಹ್ರಾಡೂನ್</strong>: ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ಹೊರ ತರುವಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ್ದಕ್ಕೆ ಪ್ರತಿಯಾಗಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ನೀಡಿದ್ದ ತಲಾ ₹50 ಸಾವಿರದ ಚೆಕ್ ಅನ್ನು ನಗದೀಕರಿಸಿಕೊಳ್ಳಲು ರ್ಯಾಟ್–ಹೋಲ್ ಮೈನರ್ಗಳು ನಿರಾಕರಿಸಿದ್ದಾರೆ. </p>.<p>ಸರ್ಕಾರದಿಂದ ಗೌರವಕ್ಕೆ ಪಾತ್ರವಾಗಿದ್ದ 12 ಮಂದಿ ರ್ಯಾಟ್– ಹೋಲ್ ಮೈನರ್ಗಳೂ ಚೆಕ್ ಅನ್ನು ಹಿಂದಿರುಗಿಸಲು ನಿರ್ಧರಿಸಿದ್ದಾರೆ. </p>.<p>‘ನಾವು ನಿರ್ವಹಿಸಿದ ಕೆಲಸಕ್ಕೆ ತಕ್ಕ ಬಹುಮಾನ ಮುಖ್ಯಮಂತ್ರಿಗಳಿಂದ ಸಿಕ್ಕಿಲ್ಲ’ ಎಂದು ಅವರು ದೂರಿದ್ದಾರೆ. </p>.<p>‘ಅತ್ಯಂತ ಕಠಿಣ ಸ್ಥಿತಿಯಲ್ಲಿ ನಾವು ಕೆಲಸ ಮಾಡಿದ್ದೇವೆ. ಯಂತ್ರಗಳ ಸಹಾಯದಿಂದ ರಕ್ಷಣಾ ಕಾರ್ಯ ನಡೆಸಿದರೂ ಕಾರ್ಮಿಕರ ಬಳಿಗೆ ಹೋಗಲು ಸಾಧ್ಯವಾಗದ ಸಂದರ್ಭದಲ್ಲಿ ನಾವು ಕೈಯಲ್ಲಿ ಈ ಕೆಲಸ ಮಾಡಿ ಸಾಧಿಸಿದ್ದೆವು. ನಮ್ಮ ಪ್ರಾಣವನ್ನು ಪಣವಾಗಿಟ್ಟು, ಪ್ರತಿಫಲಾಪೇಕ್ಷೆ ಇಲ್ಲದೇ ಸುರಂಗ ಕೊರೆದೆವು. ನಮ್ಮ ಈ ಕೆಲಸಕ್ಕೆ ಬಹುಮಾನ ನೀಡಿದ ಮುಖ್ಯಮಂತ್ರಿಯವರ ನಡೆಯನ್ನು ಗೌರವಿಸುತ್ತೇವೆ. ಆದರೆ, ಅವರು ಘೋಷಿಸಿದ ಬಹುಮಾನದ ಮೊತ್ತ ನಮಗೆ ತೃಪ್ತಿ ನೀಡಿಲ್ಲ’ ಎಂದು ರ್ಯಾಟ್–ಹೋಲ್ ಮೈನರ್ಗಳ ತಂಡವನ್ನು ಮುನ್ನಡೆಸಿದ್ದ ವಕೀಲ್ ಹಸನ್ ತಿಳಿಸಿದ್ದಾರೆ. </p>.<p>‘ನಮಗೆ ಚೆಕ್ ಕೊಟ್ಟ ದಿನವೇ ನಾವು ನಮ್ಮ ಅತೃಪ್ತಿಯನ್ನು ಸಿ.ಎಂಗೆ ತಿಳಿಸಿದ್ದೆವು. ಕೆಲವೇ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಅಧಿಕಾರಿಗಳು ಹೇಳಿದ್ದರು. ಆದರೆ ನಮಗೆ ನೀಡಲಾದ ವಾಗ್ದಾನ ಈವರೆಗೆ ಈಡೇರಿಲ್ಲ. ಹೀಗಾಗಿ ಚೆಕ್ಗಳನ್ನು ಮರಳಿಸುತ್ತಿದ್ದೇವೆ’ ಎಂದು ಹಸನ್ ತಿಳಿಸಿದ್ದಾರೆ. </p>.<p>‘ನಾವು ನಿರ್ವಹಿಸಿದ ಕಾರ್ಯಕ್ಕೆ ಪ್ರತಿಯಾಗಿ ನಮಗೆ ನೌಕರಿ ಅಥವಾ ಸ್ವಂತ ಮನೆ ಒದಗಿಸಿಕೊಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>