‘ಅತ್ಯಂತ ಕಠಿಣ ಸ್ಥಿತಿಯಲ್ಲಿ ನಾವು ಕೆಲಸ ಮಾಡಿದ್ದೇವೆ. ಯಂತ್ರಗಳ ಸಹಾಯದಿಂದ ರಕ್ಷಣಾ ಕಾರ್ಯ ನಡೆಸಿದರೂ ಕಾರ್ಮಿಕರ ಬಳಿಗೆ ಹೋಗಲು ಸಾಧ್ಯವಾಗದ ಸಂದರ್ಭದಲ್ಲಿ ನಾವು ಕೈಯಲ್ಲಿ ಈ ಕೆಲಸ ಮಾಡಿ ಸಾಧಿಸಿದ್ದೆವು. ನಮ್ಮ ಪ್ರಾಣವನ್ನು ಪಣವಾಗಿಟ್ಟು, ಪ್ರತಿಫಲಾಪೇಕ್ಷೆ ಇಲ್ಲದೇ ಸುರಂಗ ಕೊರೆದೆವು. ನಮ್ಮ ಈ ಕೆಲಸಕ್ಕೆ ಬಹುಮಾನ ನೀಡಿದ ಮುಖ್ಯಮಂತ್ರಿಯವರ ನಡೆಯನ್ನು ಗೌರವಿಸುತ್ತೇವೆ. ಆದರೆ, ಅವರು ಘೋಷಿಸಿದ ಬಹುಮಾನದ ಮೊತ್ತ ನಮಗೆ ತೃಪ್ತಿ ನೀಡಿಲ್ಲ’ ಎಂದು ರ್ಯಾಟ್–ಹೋಲ್ ಮೈನರ್ಗಳ ತಂಡವನ್ನು ಮುನ್ನಡೆಸಿದ್ದ ವಕೀಲ್ ಹಸನ್ ತಿಳಿಸಿದ್ದಾರೆ.