<p><strong>ನವದೆಹಲಿ</strong>: ಹಗರಣಗಳನ್ನು ಮಾಡುವುದು, ಸರ್ಕಾರದ ಕಾಮಗಾರಿಗಳ ಗುತ್ತಿಗೆ ನೀಡುವಲ್ಲಿ ಅಕ್ರಮ ಎಸಗುವುದು ಹಾಗೂ ಜನರಿಗೆ ಉದ್ಯೋಗದ ಭರವಸೆ ನೀಡಿ ಅವರ ಜಮೀನನ್ನು ಕಬಳಿಸುವುದು ಆರ್ಜೆಡಿ ಆಡಳಿತದ ಮಾದರಿಯಾಗಿದೆ ಎಂದು ಬಿಜೆಪಿ ಸೋಮವಾರ ಕಿಡಿಕಾರಿದೆ.</p>.<p>ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್, ‘ಮೇವು ತಿನ್ನುವುದು (ಮೇವು ಹಗರಣ), ಡಾಂಬರು ಕುಡಿಯುವುದು ಮತ್ತು ಬಡವರ ಭೂಮಿಯನ್ನು ಕಬಳಿಸುವುದು ಆರ್ಜೆಡಿ ಸರ್ಕಾರದ ಮಾದರಿಯಾಗಿದೆ’ ಎಂದು ಆರೋಪಿಸಿದರು. </p>.<p class="title">‘ತೇಜಸ್ವಿಯ ಉದ್ಯೋಗ ಭರವಸೆಯನ್ನು ನಂಬಬೇಡಿ, ನಂಬಿದರೆ ನಿಮ್ಮ ಭೂಮಿ ಕಳೆದುಕೊಳ್ಳುತ್ತೀರಿ’ ಎಂದು ಜನರಿಗೆ ಮನವಿ ಮಾಡಿದರು. </p>.<p>ಐಆರ್ಸಿಟಿಸಿ ಹಗರಣದಲ್ಲಿ, ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್, ಪತ್ನಿ ರಾಬ್ಡಿ ದೇವಿ ಮತ್ತು ಇವರ ಪುತ್ರ, ತೇಜಸ್ವಿ ಯಾದವ್ ಅವರ ಮೇಲೆ ಇಲ್ಲಿನ ವಿಶೇಷ ನ್ಯಾಯಾಲಯವು ದೋಷಾರೋಪ ಹೊರಿಸಿತು. ಅದರ ಬೆನ್ನಲ್ಲೇ ರವಿಶಂಕರ್ ಪ್ರಸಾದ್ ಈ ಪ್ರತಿಕ್ರಿಯೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಹಗರಣಗಳನ್ನು ಮಾಡುವುದು, ಸರ್ಕಾರದ ಕಾಮಗಾರಿಗಳ ಗುತ್ತಿಗೆ ನೀಡುವಲ್ಲಿ ಅಕ್ರಮ ಎಸಗುವುದು ಹಾಗೂ ಜನರಿಗೆ ಉದ್ಯೋಗದ ಭರವಸೆ ನೀಡಿ ಅವರ ಜಮೀನನ್ನು ಕಬಳಿಸುವುದು ಆರ್ಜೆಡಿ ಆಡಳಿತದ ಮಾದರಿಯಾಗಿದೆ ಎಂದು ಬಿಜೆಪಿ ಸೋಮವಾರ ಕಿಡಿಕಾರಿದೆ.</p>.<p>ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್, ‘ಮೇವು ತಿನ್ನುವುದು (ಮೇವು ಹಗರಣ), ಡಾಂಬರು ಕುಡಿಯುವುದು ಮತ್ತು ಬಡವರ ಭೂಮಿಯನ್ನು ಕಬಳಿಸುವುದು ಆರ್ಜೆಡಿ ಸರ್ಕಾರದ ಮಾದರಿಯಾಗಿದೆ’ ಎಂದು ಆರೋಪಿಸಿದರು. </p>.<p class="title">‘ತೇಜಸ್ವಿಯ ಉದ್ಯೋಗ ಭರವಸೆಯನ್ನು ನಂಬಬೇಡಿ, ನಂಬಿದರೆ ನಿಮ್ಮ ಭೂಮಿ ಕಳೆದುಕೊಳ್ಳುತ್ತೀರಿ’ ಎಂದು ಜನರಿಗೆ ಮನವಿ ಮಾಡಿದರು. </p>.<p>ಐಆರ್ಸಿಟಿಸಿ ಹಗರಣದಲ್ಲಿ, ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್, ಪತ್ನಿ ರಾಬ್ಡಿ ದೇವಿ ಮತ್ತು ಇವರ ಪುತ್ರ, ತೇಜಸ್ವಿ ಯಾದವ್ ಅವರ ಮೇಲೆ ಇಲ್ಲಿನ ವಿಶೇಷ ನ್ಯಾಯಾಲಯವು ದೋಷಾರೋಪ ಹೊರಿಸಿತು. ಅದರ ಬೆನ್ನಲ್ಲೇ ರವಿಶಂಕರ್ ಪ್ರಸಾದ್ ಈ ಪ್ರತಿಕ್ರಿಯೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>